Advertisement

ಪ್ರಧಾನಿ ಮೋದಿಯವರು ಯಾವತ್ತೂ ಬಡವರ ಪರವಲ್ಲ, ಬದಲಿಗೆ ಕಳ್ಳೋದ್ಯಮಿಗಳ ಹಿತಾಸಕ್ತಿ ಕಾಯುವ ಚೌಕಿದಾರ!

Advertisement

ಯುರೋಪಿನಲ್ಲಿ ಅತ್ಯುತ್ತಮ ಪ್ರಗತಿಪರ ರಾಜ್ಯ ಯಾವುದು ಎಂಬ ಪ್ರಶ್ನೆಗೆ ಫ್ರಾನ್ಸ್ ಎಂಬ ಸಿದ್ಧ ಉತ್ತರ ಸಿಗುತ್ತದೆ. ಅಲ್ಲಿ ಅತಿ ಹೆಚ್ಚು ರಾಷ್ಟ್ರೀಕರಣದ ಕಾರ್ಯಗಳಾಗಿವೆ. ಅಲ್ಲಿನ ನಿರೋದ್ಯೋಗಿ ಯುವ ಸಮೂಹಕ್ಕೆ ನಿರುದ್ಯೋಗ ಭತ್ಯೆಯನ್ನು ಪರಿಣಾಮಕಾರಿಯಾಗಿ ನೀಡಲಾಗುತ್ತದೆ. ಆರೋಗ್ಯ ಸೇವೆ ಮತ್ತು ಉತ್ತಮ ಶಿಕ್ಷಣ ಬಹಳ ಅಗ್ಗದ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ. ಫ್ರಾನ್ಸ್ ನಲ್ಲಿ ಶ್ರೀಮಂತರ ಮೇಲೆ ಅಧಿಕ ತೆರಿಗೆ ಹೇರಲಾಗುತ್ತದೆ ಮತ್ತು ಬಡವರಿಗೆ ಹಲವಾರು ತೆರಿಗೆಗಳಿಂದ ವಿನಾಯತಿ ನೀಡಲಾಗಿದೆ. (ಲೇಖಕರು ಜನಪರ ಚಿಂತಕರು ಹಾಗೂ ಸಮಾಜವಾದಿ ) ಹಲವು ವರ್ಷಗಳಿಂದ ಫ್ರಾನ್ಸನ್ನು ಖಾಸಗೀಕರಣಗೊಳಿಸಲು ಐಎಂಎಫ್-ವಿಶ್ವ ಬ್ಯಾಂಕ್-ಅಮೇರಿಕನ್-ಬ್ರಿಟಿಷ್ ಈ ಒಕ್ಕೂಟದ ಶಕ್ತಿಶಾಲಿ ಲಾಬಿ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆರೋಗ್ಯ ಸೇವೆ ಮತ್ತು ಆರೋಗ್ಯ ವಿಜ್ಞಾನ ಶಿಕ್ಷಣವನ್ನು ದುಬಾರಿ ಮಾಡಬೇಕು ಎನ್ನುವ ಉದ್ದೇಶದಿಂದ ಈ ಲಾಬಿಯ ಹಿಂದಿರುವ ಶಕ್ತಿಗಳು ಪ್ರಖರ ಬಲಪಂಥೀಯ ಸಿದ್ಧಾಂತದ ಲೀ ಪೆನ್ ರನ್ನು ಬೆಳೆಸುತ್ತಿವೆ. ಇಸ್ಲಾಮೋಫೋಬಿಯಾವನ್ನು ಫ್ರಾನ್ಸ್‌ನ ನಾಗರಿಕರಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಭಾರತದಲ್ಲಿ ಬಲಪಂಥಿಯ ಸಂಘಟನೆಗಳು ದೇಶದ ಜನರಲ್ಲಿ ಹೇಗೆ ಅಲ್ಪಸಂಖ್ಯಾತರುˌ ಅದರಲ್ಲೂ ಮುಸ್ಲಿಮರ ಬಗ್ಗೆ ದ್ವೇಷ ಭಾವನೆ ಬಿತ್ತಲಾಗಿದೆಯೊ ಹಾಗೆಯೇ ಫ್ರಾನ್ಸ್ ನಲ್ಲೂ ಮಾಡಲಾಗುತ್ತಿದೆ. ಬಲಪಂಥಿಯ ಶಕ್ತಿಗಳು ಭಾರತದಲ್ಲಿ ಮುಸ್ಲಿಂರ ಬಗ್ಗೆ ಜನರಲ್ಲಿ ದ್ವೇಷ ಬಿತ್ತುವ ಮೂಲಕ ಮೋದಿಯಂತ ಪ್ರಖರ ಮೂಲಭೂತವಾದಿಯನ್ನು ಪ್ರತಿಷ್ಠಾಪಿಸಿದವು. ಮೋದಿ ಆಡಳಿತದ ಆರು ವರ್ಷಗಳಲ್ಲಿ ಬ್ರಹತ್ ಪ್ರಮಾಣದ ಭಯಾನಕ ಖಾಸಗೀಕರಣ ಕಾರ್ಯವನ್ನು ಮಾಡಿಸಲಾಗಿದೆ. ಮೊದಲಿನ ಅನೇಕ ಜನಕಲ್ಯಾಣ ನೀತಿಗಳನ್ನು ಟೊಳ್ಳುಗೊಳಿಸಲಾಗಿದೆ. ಅಂಬಾನಿ-ಅದಾನಿಯಂತ ಬಲಪಂಥಿಯ ಉದ್ಯಮಿಗಳ ವ್ಯವಹಾರಗಳಿಂದ ಬರುವ ಆದಾಯವು ಮೊದಲಿಗಿಂತ ಅನೇಕ ಪಟ್ಟು ಹೆಚ್ಚಾಗಿದೆ. ಬಡವರು ಇನ್ನಷ್ಟು ಬಡವರಾಗಿದ್ದಾರೆ. ಭಾರತದ ಬೆಳವಣಿಗೆಯ ವೇಗದ ಗತಿಯು ಮೈನಸ್ ಗೆ ಹೋಗಿದೆ. ಕೋವಿಡ್ ಸಾಂಕ್ರಮಿಕ ಸಮಯದಲ್ಲಿ ದೇಶದ ಜನರು ಕಾಲ್ನಡಿಗೆಯ ಮೊರೆ ಹೋಗಬೇಕಾಯಿತು. ಫ್ರಾನ್ಸ್ ನಲ್ಲೂ ಕೂಡ ಇದೇ ರೀತಿಯ ಬೆಳವಣಿಗೆಗಳು ನಡೆಯುತ್ತಿವೆ. ಆದರೆ ಫ್ರಾನ್ಸ್ ಮತ್ತು ಭಾರತದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿ ಹಿಂಸಾತ್ಮಕ ಊಳಿಗಮಾನ್ಯ ವಿರೋಧಿ ಕ್ರಾಂತಿಯ ಬಲದ ಮೇಲೆ ಆಧುನಿಕ ಫ್ರಾನ್ಸ್ ಅನ್ನು ಕಟ್ಟಲಾಗಿದೆ. ಭಾರತವು ಇನ್ನೂ ಗುಲಾಮರ ದೇಶವಾಗಿದ್ದ ಸಮಯದಲ್ಲಿ ಫ್ರಾನ್ಸ್ ನಲ್ಲಿ ಕೈಗಾರಿಕಾ ಕ್ರಾಂತಿ ನಡೆದುಹೋಗಿತ್ತು. ಆದ್ದರಿಂದ, ಫ್ರಾನ್ಸ್‌ ಆಡಳಿತದ ಮೇಲೆ ಎಡಪಂಥೀಯ-ಪ್ರಗತಿಪರ ಚಿಂತನೆಯ ಪ್ರಭಾವ ಹೆಚ್ಚಿದೆ. ಈಗ ಐಎಂಎಫ್-ವಿಶ್ವಬ್ಯಾಂಕ್ ಒಕ್ಕೂಟಕ್ಕೆ ಫ್ರಾನ್ಸ್‌ನ ಪ್ರಗತಿಪರ-ಎಡಪಂಥೀಯ ಸಂಪ್ರದಾಯವನ್ನು ಬಲಪಂಥೀಯ ಹಿತಾಸಕ್ತಿಗಳಿಗಾಗಿ ಬಳಸಲು ಇಂತ ತಿರುವುಗಳ ಅಗತ್ಯವಿತ್ತು. ಈಗ ಫ್ರಾನ್ಸ್ ನಲ್ಲಿ ಪ್ರಗತಿಶೀಲತೆಯ ಹೊಸ ನಕಲಿ 'ಶತ್ರು' ಹುಟ್ಟಿಕೊಂಡಿದೆ. ಅದಕ್ಕೆ ಈ ಕ್ಯಾಪಿಟಲಿಸ್ಟ್ ಲಾಭಿಗಳು ಈಗ ನೀರೆರೆದು ಪೋಷಿಸುಸುವ ಎಲ್ಲ ಪ್ರಯತ್ನಗಳು ಮಾಡುತ್ತಿವೆ. ಇದರಿಂದ ಜಗತ್ತಿನ ಕ್ಯಾಪಿಕಲಿಸ್ಟ್ ಲಾಭಿಗಳು ಮತ್ತು ಅಲ್ಲಿನ ಬಲಪಂಥೀಯ ಶಕ್ತಿಗಳ ಒಕ್ಕೂಟವು ಫ್ರಾನ್ಸ್ ನಲ್ಲಿ ಭಯೋತ್ಪಾದನೆˌ ಅದರಲ್ಲೂ ವಿಶೇಷವಾಗಿ ಇಸ್ಲಾಮಿಕ್ ಭಯೋತ್ಪಾದನೆ ಹೆಚ್ಚುವಂತೆ ಮಾಡಲಿವೆ. ಆ ಮೂಲಕ ಫ್ರಾನ್ಸ್‌ನ ಪ್ರಗತಿಪರ ಮೌಲ್ಯಗಳ ಮೇಲೆ ಮುಸ್ಲಿಮರ ಕೈಯಲ್ಲಿ ದಾಳಿ ಮಾಡಿಸುವ ಎಲ್ಲ ಪ್ರಯತ್ನಗಳು ನಡೆಯಲಿವೆ. ಇಸ್ರೇಲ್-ಪ್ಯಾಲೆಸ್ತೈನ್ ವಿವಾದದಲ್ಲಿ ಫ್ರಾನ್ಸ್ ಪ್ಯಾಲೆಸ್ತೈನ್ ಜೊತೆ ಕೈಜೋಡಿಸಿದಾಗ ಚಾರ್ಲಿ ಹೆಬ್ಡೊ ಹಗರಣ ಸಂಭವಿಸಿತು. ಆ ಘಟನೆಯ ನಂತರ ಬಲಪಂಥೀಯ ಲೀ ಪೆನ್‌ನ ಜನಪ್ರಿಯತೆ ಹೆಚ್ಚಲಾರಂಭಿಸಿತು. ಈಗ ನಡೆಯುತ್ತಿರುವ ಘಟನೆಗಳು ಕೂಡ ಲೀ ಪೆನ್ ಅನ್ನು ಜನಪ್ರೀಯತೆಯ ಶಿಖರಕ್ಕೆ ಕರೆದೊಯ್ಯುತ್ತಿವೆ. ಬಲಪಂಥೀಯ ಸಿದ್ಧಾಂತದ ಲೀ ಪೆನ್ ಮೂಲಕ, ಫ್ರಾನ್ಸ್ ನ ಪ್ರಗತಿಶೀಲ ಮತ್ತು ಜನಕಲ್ಯಾಣದ ನೀತಿಗಳನ್ನು ಕೊನೆಗಾಣಿಸಿˌ ಐಎಂಎಫ್-ವಿಶ್ವ ಬ್ಯಾಂಕ್- ಅಮೇರಿಕನ್-ಬ್ರಿಟಿಷ್ ಲಾಬಿಗಳು ಫ್ರಾನ್ಸ್ ಅನ್ನು ಖಾಸಗೀಕರಣಗೊಳಿಬಿಡಲಿವೆ. ಆನಂತರ ಅಲ್ಲಿ ಬಂಡವಾಳಶಾಹಿಗಳದ್ದೇ ಕಾರಬಾರು ಆರಂಭಗೊಳ್ಳುತ್ತದೆ. ತಮಾಷೆಯ ಸಂಗತಿಯೆಂದರೆ, ಮೋದಿ ಅಧಿಕಾರಕ್ಕೆ ಬರುವ ಮೊದಲು ಭಾರತದಲ್ಲಿ ಬಲಪಂಥೀಯ ಶಕ್ತಿಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಬಹುದೊಡ್ಡ ಕಂದಕವನ್ನೇ ನಿರ್ಮಿಸಿದ್ದವು. ಅದೊಂದು ಸುದೀರ್ಘ ಗೇಮ್ ಪ್ಲ್ಯಾನ್ ಬಲಪಂಥೀಯ ಶಕ್ತಿಗಳು ಮಾಡಿದ್ದವು. ಈಗ ಫ್ರಾನ್ಸ್ ನಲ್ಲಿ ನಡೆಯುತ್ತಿರುವ ಆಟವೂ ಕೂಡ ಒಂದು ಧಾರ್ಮಿಕ ಯುದ್ಧ ಅಥವಾ ಪ್ರಗತಿ ಹಾಗು ಮೂಲಭೂತವಾದದ ಹೋರಾಟವಾಗಿ ಪರಿವರ್ತಿಸಲಾಗುತ್ತಿದೆ. ಅನೇಕ ಅವಕಾಶವಾದಿ ಮುಸ್ಲಿಂ ನಾಯಕರು ಭಾರತದಲ್ಲಿ ಮಾಡಿದಂತೆ ಸುಳ್ಳು ಧ್ರುವೀಕರಣದ ರಾಜಕೀಯ ಮುಂದುವರಿಯಬೇಕೆಂದು ಬಯಸುತ್ತಿದ್ದಾರೆ. ಅದಕ್ಕಾಗಿ ಅವರು ವಿದ್ಯಾವಂತ ಮತ್ತು ಸುಶಿಕ್ಷಿತ ಮುಸ್ಲಿಮರಿಗೆ ಅದರ ಹಿಂದಿನ ನಿಜವಾದ ಆಟವನ್ನು ತಿಳಿಸಿ ಹೇಳುತ್ತಿಲ್ಲ. ಆದರೆ ಪ್ರತಿಯೊಂದು ದೇಶದ ಸಂವೇದನಾಶೀಲ ಪ್ರಜೆಗಳಿಗೆ ತನ್ನದೇ ಆದ ಅನುಭವ ಮತ್ತು ಗ್ರಹಿಕೆ ಇರುತ್ತದೆ. ಮೋದಿ ಯಾವತ್ತೂ ಹಿಂದೂ ರಾಷ್ಟ್ರದ ಪರ ವಕಾಲತ್ತು ವಹಿಸುವ ವಕೀಲರಲ್ಲ, ಅವರು ಬಂಡವಾಳಶಾಹಿಗಳ ಹಿತಾಸಕ್ತಿ ಕಾಯುವ ಆ ಕಳ್ಳೋದ್ಯಮಿಗಳ ಆಪ್ತ ಸ್ನೇಹಿತ ಎಂದು ಜನರು ಅರಿತುಕೊಂಡಿದ್ದಾರೆ. ಅದೇ ರೀತಿ, ಫ್ರಾನ್ಸ್‌ನಲ್ಲಿ ಅಲ್ಲಿನ ಪ್ರಜೆಗಳು ಈ ಆಟವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಬಲಪಂಥೀಯ ಶಕ್ತಿಗಳ 'ಮನ್ ಕಿ ಬಾತ್' ಮಾಧ್ಯಮಗಳು ಜನರ ವರೆಗೆ ಸತ್ಯವನ್ನು ತಲುಪದಂತೆ ತಡೆಯುವ ಮತ್ತು ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಬಿತ್ತುವ ಕೆಲಸ ನಿರಂತರವಾಗಿ ಮಾಡುತ್ತಿವೆ. ___________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement