Advertisement

ಬೈಂದೂರು ವಿಧಾನಸಭಾ ಕ್ಷೇತ್ರದ ನಾವುಂದ ಗ್ರಾಮ ಪಂಚಾಯತ್ ಚುನಾವಣೆಯ ಕಣದಲ್ಲಿ ಸೋಲಿಲ್ಲದ ಸರದಾರ ನರಸಿಂಹ ದೇವಾಡಿಗ.

Advertisement

ಚುನಾವಣೆಗಳಲ್ಲಿ ಪ್ರಾಮಾಣಿಕತೆ ಹಾಗೂ ಜನಪರ ಕಾಳಜಿಯ ನಾಯಕರು ಆಯ್ಕೆಯಾಗಿ ಬಂದಲ್ಲಿ ಮಾತ್ರವೇ ಸರ್ಕಾರಿ ಸವಲತ್ತುಗಳು ಪ್ರಾಮಾಣಿಕವಾಗಿ ಫಲಾನುಭವಿಗಳಿಗೆ ತಲುಪುತ್ತವೆ ಅದುವೇ ಪ್ರಜಾಪ್ರಭುತ್ವದ ಹಾಗೂ ರಾಷ್ಟ್ರಪಿತ ಮಹಾತ್ಮ ಗಾಂದಿಯವರ ಆಶಯವಾಗಿದೆ. (ಪರಿಚಯ ಲೇಖನ: ಕಮಲಾಕರ ಕಾರಣಗಿರಿ) 'ನಾವುಂದ ಗ್ರಾಮ ಪಂಚಾಯತ್' ಎಂದೊಡನೆ ಮೊಟ್ಟ ಮೊದಲಿಗೆ ನೆನಪಿಗೆ ಬರುವುದೇ 'ಸೋಲಿಲ್ಲದ ಸರದಾರ' ಖ್ಯಾತಿಯ ನರಸಿಂಹ ದೇವಾಡಿಗರ ಹೆಸರು. ಏಕೆಂದರೆ ಆ ಭಾಗದಲ್ಲಿ ಕಳೆದ 40ವರ್ಷಗಳಿಂದ ನಿರಂತರ ಗೆಲುವು ಸಾಧಿಸುವ ಮೂಲಕ 5ಬಾರಿ ಗ್ರಾಮ ಪಂಚಾಯತ್ ಸದಸ್ಯರಾಗಿ, 2ಬಾರಿ ಅಧ್ಯಕ್ಷರಾಗುವ ಮೂಲಕ ಜನಸೇವೆ ಮಾಡಿಕೊಂಡು ಬಂದಿರುವ ಅವರೊಬ್ಬ ಅಜಾತ ಶತ್ರು ಎಂದರೆ ಖಂಡೀತವಾಗಿಯೂ ಅದು ಅತಿಶಯೋಕ್ತಿಯಾಗಲಾರದು. ಇದೀಗ ಅವರು ಇದೇ ತಿಂಗಳ 22ನೆ ತಾರೀಕಿನಂದು ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆರನೆಯ ಬಾರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಅಪಾರ ತಿಳುವಳಿಕೆ ಹೊಂದಿರುವ, ಜನಪರ ಕಾಳಜಿಯ ಇವರು ಗ್ರಾಮದ ಯಾರಾದರೂ ಅಶಕ್ತರು ನಡುರಾತ್ರಿಯಲ್ಲಿ ಫೋನ್ ಮೂಲಕ ತಮ್ಮ ಸಮಸ್ಯೆ ಹೇಳಿದರೂ ಸರ್ಕಾರಿ ಸವಲತ್ತನ್ನು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡುವ ಓರ್ವ ನಿಜವಾದ ಜನಸೇವಕ ಅಥವಾ ಜನನಾಯಕ ಎಂಬುವುದು ಪಕ್ಷಾತೀತವಾಗಿ ನರಸಿಂಹ ದೇವಾಡಿಗರ ಕುರಿತು ನಾವುಂದ ಪರಿಸರದ ಜನರ ಒಮ್ಮತದ ಅಭಿಪ್ರಾಯವಾಗಿದೆ. ತನ್ನ ನಗುಮೊಗ, ಸಾಮಾಜಿಕ ಕಳಕಳಿ, ಕಷ್ಟಕ್ಕೆ ಸ್ಪಂದಿಸುವ ಗುಣಗಳಿಂದ ಹಾಗೂ ಸದಾ ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನರಸಿಂಹಣ್ಣನವರ ಅಧ್ಯಕ್ಷ ಅವಧಿಯಲ್ಲಿ ನಾವುಂದ ಪಂಚಾಯತ್‌, ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಕೊಡಮಾಡುವ 'ನಿರ್ಮಲ ಗ್ರಾಮ ಪುರಸ್ಕಾರ' ಪ್ರಶಸ್ತಿ ಪುರಸ್ಕೃತವಾಗಿದೆ. ಈ ಹಿಂದಿನ ಸತತ ಮೂರು ವರ್ಷಗಳಿಂದ ಅವಿಭಜಿತ ಕುಂದಾಪುರ ತಾಲೂಕಿನಲ್ಲೆ ಅಭಿವೃದ್ಧಿಯಲ್ಲಿ ಎರಡನೆಯ ಸ್ಥಾನವನ್ನು ನಾವುಂದ ಪಂಚಾಯತ್ ಉಳಿಸಿಕೊಂಡು ಬಂದಿದ್ದರೆ, ಮೊದಲ ಸ್ಥಾನವನ್ನು ಹೊಂಬಾಡಿ- ಮಂಡಾಡಿ ಪಂಚಾಯತ್ ಪಡೆದಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ 'ಅತ್ಯುತ್ತಮ ಸಾಧನೆ' ಪ್ರದರ್ಶಿಸಿರುವ ನಾವುಂದ ಪಂಚಾಯತ್ ಬೈಂದೂರು ತಾಲೂಕಿನಲ್ಲೆ ಅತ್ಯಂತ ಸುಸಜ್ಜಿತ ಹಾಗೂ ಅತ್ಯಂತ ವಿಶಾಲವಾದ ಸ್ವಂತ ಕಟ್ಟಡ ಹೊಂದಿರುವ ಪಂಚಾಯತ್ ಎಂಬ ಹೆಗ್ಗಳಿಕೆ ಪಡೆದಿದೆ ಹಾಗೂ ತಾಲೂಕಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಹೊಂದಿದ ಬೆರಳೆಣಿಕೆಯ ಪಂಚಾಯತ್ ಗಳಲ್ಲಿ ನಮ್ಮ ಪಂಚಾಯತ್ ಒಂದು ಎಂದು ಪರಿಸರದ ಜನತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ತನ್ನ ನಲವತ್ತು ವರ್ಷಗಳ ರಾಜಕೀಯ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದ 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಸಿದ್ಧಾಂತವನ್ನು ಪ್ರತಿಪಾದಿಸಿಕೊಂಡಿರುವ ಕಾರಣಕ್ಕೆ ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಧರ್ಮಗಳ ಹಾಗೂ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಅಭಿಮಾನಿ ವರ್ಗವನ್ನು ಹೊಂದಿರುವ ನರಸಿಂಹ ದೇವಾಡಿಗರು ಈ ಬಾರಿ ಕುದ್ರುಕೋಡು ವಾರ್ಡಿನಿಂದ 'ಅಟೋರಿಕ್ಷಾ' ಚಿಹ್ನೆಯಡಿ ಸ್ಪರ್ದಿಸುತ್ತಿದ್ದರೆ, ಮಹಿಳಾ ಮೀಸಲಾತಿ ಅಡಿಯಲ್ಲಿ ಸ್ಪರ್ದಿಸುತ್ತಿರುವ ಚಂದ್ರಕಲಾರವರು 'ಗ್ಯಾಸ್ ಸಿಲಿಂಡರ್' ಚಿಹ್ನೆಯಡಿ ಹಾಗೂ ಸಿಂಗಾರಿಯವರು 'ಕುಕ್ಕರ್' ಚಿಹ್ನೆಯಡಿ ಸ್ಪರ್ದಿಸುತ್ತಿದ್ದಾರೆ. ನಿಮ್ಮ ಮತ ಯಾರಿಗೆ ಎಂದು ಪ್ರಶ್ನಿಸಿದರೆ 'ಅಭಿವೃದ್ಧಿ ಪರ ಇರುವ ನಾಯಕನಿಗೆ ನೀಡದೆ ಮತ್ಯಾರಿಗೆ ನೀಡೋದು' ಎಂದು ಮರು ಪ್ರಶ್ನಿಸುತ್ತಾರೆ ನಾವುಂದದ ಮತದಾರರು. ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement