Advertisement

ಮಾರ್ಚ್19ರಂದು ಕುಂದಾಪುರದಲ್ಲಿ ಉದ್ಘಾಟನೆಗೊಳ್ಳಲಿದೆ 'ಕೇಕ್‍ವಾಲ, ಈಶಾನ್ಯ'

Advertisement

ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸುಚಿ ರುಚಿಯಾದ ಆಹಾರ ಪದಾರ್ಥಗಳಿಂದಾಗಿ ಅಪಾರವಾದ ಜನಪ್ರಿಯತೆಗಳಿಸಿರುವ 'ಮಯೂರ ಸಮೂಹ ಸಂಸ್ಥೆ'ಯ ನೇತೃತ್ವದಲ್ಲಿ ಇದೀಗ ಕುಂದಾಪುರದ ಹೃದಯ ಭಾಗವಾದ ಪಾರಿಜಾತ ಸರ್ಕಲ್‌ನಲ್ಲಿ ಆಹಾರೋದ್ಯಮ ಸಂಸ್ಥೆಯನ್ನು ಇದೀಗ ಆರಂಭಿಸುತ್ತಿದ್ದು, ವಿನಯಾ ನರ್ಸಿಂಗ್ ಹೋಮ್ ಪಕ್ಕದ ಜಿ.ಎಸ್.ಆರ್ ಸ್ಕ್ವೇರ್‍ ಕಟ್ಟಡದ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಕೇಕ್‍ವಾಲ ಮತ್ತು ಈಶಾನ್ಯ ಆಹಾರೋದ್ಯಮ ಸಂಸ್ಥೆಗಳು ಮಾರ್ಚ್ 19ರಂದು ಬೆಳಿಗ್ಗೆ 10-30ಕ್ಕೆ ಶುಭಾರಂಭ ಗೊಳ್ಳಲಿವೆ ಎಂದು ಮಯೂರ ಗ್ರೂಫ್‍ನ ಅಧ್ಯಕ್ಷರು ಮತ್ತು ಆಡಳಿತ ನಿರ್ದೇಶಕರಾದ ಗೋಪಾಡಿ ಶ್ರೀನಿವಾಸ್ ರಾವ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆಹಾರೋತ್ಪಾದನೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ, ಸ್ವಚ್ಛತೆ ಮತ್ತು ಪರಿಶುದ್ದತೆಗೆ ಮೊದಲ ಆದ್ಯತೆ, ಕೈಗೆಟಕುವ ದರ, ತೆರೆದಿಟ್ಟ ಪಾಕಶಾಲೆ, ಕಣ್ಣೆದುರೆ ಮಾಡಿಕೊಡುವ ಕೇಕ್‍ಗಳು ಮುಂತಾದ ವಿಶಿಷ್ಟತೆಗಳನ್ನು ಹೊಂದಿರುವ ಕೇಕ್‍ವಾಲ ಮತ್ತು ಈಶಾನ್ಯ ಸ್ಟ್ರೀಟ್ ಫುಡ್ ಕೆಫೆ ವಿಶೇಷತೆಯಾಗಿದೆ ಎಂದು ಶ್ರೀನಿವಾಸ ರಾವ್ ರವರು ಹೇಳಿದ್ದಾರೆ. ಗ್ರಾಹಕರುಗಳ ಆಯ್ಕೆ ಮತ್ತವರನ್ನು ಹಿತಾಸಕ್ತಿ ಕಾಯುವ ಕುರಿತು ಹೆಚ್ಚು ಕಾಳಜಿ ವಹಿಸುವ ಮಯೂರ ಗ್ರೂಫ್ಸ್ ಶುಚಿತ್ವಕ್ಕೆ ಮೊದಲ ಆದ್ಯತೆ ನೀಡುತ್ತದೆ. ಆಹಾರೋದ್ಯಮವು ಗ್ರಾಹಕರ ಕೈಗೆಟುಕುವ ದರಕ್ಕೆ ಸಿಗಬೇಕು. ಗುಣಮಟ್ಟವನ್ನು ಪಡೆದಿರಬೇಕು, ಗ್ರಾಹಕರು ರುಚಿಯ ಸ್ವಾದವನ್ನು ಅನುಭವಿಸಬೇಕು ಎಂಬ ನಿಟ್ಟಿನಲ್ಲಿ ಹೋಟೆಲ್ ಉದ್ಯಮವನ್ನು ಸದಾ ಕ್ರಿಯಶೀಲವನ್ನಾಗಿಸಲಾಗಿದೆ. ಆಹಾರೋತ್ಪನ್ನದಲ್ಲಿ ಹೊಸತನ, ಆಹಾರ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆ, ಇದಕ್ಕಾಗಿ ಹಲವಾರು ಬಾರಿ ವಿದೇಶಗಳ ಪ್ರವಾಸವನ್ನು ಕೈಗೊಂಡು ಅಧ್ಯಯನವನ್ನು ನೆಡೆಸಿ, ಅಲ್ಲಿನ ತಂತ್ರಜ್ಞಾನವನ್ನು ಅವಶ್ಯಕತೆಗನುಗುಣವಾಗಿ ಇಲ್ಲಿ ಅಳವಡಿಕೆ ಮಾಡಲಾಗಿದೆ ಎಂದವರು ಹೇಳಿದರು. ಆಹಾರ ಪದಾರ್ಥಗಳನ್ನು ಆಳತೆ ಮತ್ತು ತೂಕದಲ್ಲಿ ವಿತರಿಸುವ ವಿಧಾನವನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ಪರಿಚಯಿಸಿದ ಹೆಗ್ಗಳಿಕೆ ಮಯೂರ ಸಂಸ್ಥೆಯದ್ದು. ಈಗಾಗಲೇ ಆಂಧ್ರ ಪ್ರದೇಶ, ಬೆಂಗಳೂರಿನಲ್ಲಿ ಮಯೂರ ಬೇಕರಿ, ಕೇನ್ ಓ ಲಾ, ಕೆಫೆ ಕಡಪ, ಮಯೂರ ಫುಡ್ ಪ್ರಾಡೆಕ್ಟ್ ಸೆಂಟರ್ ಕಿಚನ್, ಕೂಲ್ ಜಾಯಿಂಟ್, ನೇಚರ್ ಫ್ರೆಶ್ ಜ್ಯೂಸ್ ಸೆಂಟರ್, ತಾಜಾ ಮಿಠಾಯಿ, ಗುಡ್‍ಬ್ರೆಡ್, ನಮ್ಮೂರ ಹೋಟೆಲ್, ಪುಡ್ ಗ್ರೇಡ್ ಐಸ್ ಬ್ಯಾಂಕ್, ಕೇಕ್ ವಾಲ, ಈಶಾನ್ಯ, ಕೇಕ್ ಶಾಪ್, ರೂಫ್ ಟಾಪ್, ಪಿಜ್ಜೇರಿಯಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿವೆ. ಬೆಂಗಳೂರಿನಲ್ಲಿ ದಿನವೊಂದಕ್ಕೆ ಐವತ್ತು ಸಾವಿರ ಗ್ರಾಹಕರಿಗೆ ಸೇವೆ ನೀಡಲಾಗುತ್ತಿದೆ. ಮಾ.19ರಂದು ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಹಾಲಾಡಿ ಶ್ರೀನಿವಾಸ ಶೆಟ್ಟಿ, ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷರಾದ ಶ್ರೀ ಎ.ಜಿ ಕೊಡ್ಗಿ, ಕುಂದಾಪುರ ಪುರಸಭೆ ಅಧ್ಯಕ್ಷರಾದ ಶ್ರೀಮತಿ ವೀಣಾ ಭಾಸ್ಕರ ಮೆಂಡನ್, ಕುಂದಾಪುರ ಪುರಸಭೆ ಸದಸ್ಯರಾದ ಶ್ರೀಮತಿ ದೇವಕಿ ಸಣ್ಣಯ್ಯ, ಕುಂದಾಪುರ ವಿನಯ ಆಸ್ಪತ್ರೆಯ ಡಾ|ಎಸ್.ವಿಶ್ವನಾಥ ಶೆಟ್ಟಿ ಉಪಸ್ಥಿತರಿರಲಿದ್ದಾರೆ ಎಂದವರು ಹೇಳಿದರು. ಸುದ್ಧಿಗೋಷ್ಠಿಯಲ್ಲಿ ಕೇಕ್‍ವಾಲ ಸಂಸ್ಥೆಯ ಸಿಇಓ ಕೆ.ಎಸ್.ಸುಹಾಸ್ ಉಪಧ್ಯಾಯ ಉಪಸ್ಥಿತರಿದ್ದರು. __________________________________ ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; +919916377454 ( ರೋಷನ್ ಶೆಟ್ಟಿ ಆರ್‌.ಜಿ-) ಹಾಗೂ ನಿಮ್ಮ ಭಾಗದ ಸುದ್ದಿಗಳ ಪ್ರಸಾರಕ್ಕಾಗಿ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement