Advertisement

ಮಾರ್ಚ್ 14: ಕುಂದಾಪುರದಲ್ಲಿ 'ಕನ್ನಡ ಮೀಡಿಯಾ ಡಾಟ್ ಕಾಮ್' ಉದ್ಘಾಟನಾ ಕಾರ್ಯಕ್ರಮ

Advertisement

ಕೊರೊನಾ ಲಾಕ್‌ಡೌನ್‌ನ ವೇಳೆಗೆ ಆರಂಭಗೊಂಡು ಈ ತನಕ ಪ್ರಾಯೋಗಿಕವಾಗಿ ಪ್ರಕಟಗೊಳ್ಳುತ್ತಿದ್ದ 'ಕನ್ನಡ ಮೀಡಿಯಾ ಡಾಟ್ ಕಾಮ್ ' ಅಂತರ್ಜಾಲ ಸುದ್ದಿ ತಾಣದ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 14 ಆದಿತ್ಯವಾರ ಸಂಜೆ 4 ಗಂಟೆಗೆ ಕುಂದಾಪುರದ ಕಲಾಮಂದಿರದಲ್ಲಿ ನಡೆಯಲಿದೆ. ವಿಶೇಷವಾಗಿ ಈ ಸುದ್ದಿತಾಣವು ಸುದ್ದಿ ವಿಶ್ಲೇಷಣೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಕಡಿಮೆ ಅವಧಿಯಲ್ಲಿ ಹೆಚ್ಚಿನ ಓದುಗರನ್ನು ಗಳಿಸಿಕೊಂಡು ಜನಪ್ರಿಯಗೊಂಡಿದೆ. ಕನ್ನಡದ ಹಿರಿಯ ಪತ್ರಕರ್ತ ಹಾಗೂ ಸಮಾಜಮುಖಿ ಚಿಂತಕ ದಿನೇಶ್ ಅಮಿನ್ ಮಟ್ಟುರವರು ಈ ಅಂತರ್ಜಾಲ ಸುದ್ದಿತಾಣವನ್ನು ಉದ್ಘಾಟಿಸಲಿದ್ದಾರೆ ಮತ್ತು ಈ ಕಾರ್ಯಕ್ರಮಕ್ಕೆ ಖ್ಯಾತ ನ್ಯಾಯವಾದಿ, ಜನಪರ ಹೋರಾಟಗಾರ ಸುದೀರ್ ಕುಮಾರ್ ಮುರೊಳ್ಳಿ ಹಾಗೂ ಜನಪರ ಚಿಂತಕ ಹಾಗೂ ವಾಗ್ಮಿ ನಿಕೇತ್ ರಾಜ್ ಮೌರ್ಯ ರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಈ ಸಂಧರ್ಭದಲ್ಲಿ ಕನ್ನಡ ಮೀಡಿಯಾ ಡಾಟ್ ಕಾಮ್ ನ ಓದುಗರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಶುಭ ಹಾರೈಸುವಂತೆ ಸುದ್ದಿ ಜಾಲತಾಣದ ಪ್ರಧಾನ ಸಂಪಾದಕರು ಮತ್ತು ವ್ಯಂಗ್ಯಚಿತ್ರಕಾರರಾದ ಚಂದ್ರಶೇಖರ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ. __________________________________

Advertisement
Advertisement
Recent Posts
Advertisement