Advertisement

ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ?

Advertisement

ಬರಹ: ಡಾ. ಜೆ. ಎಸ್ ಪಾಟೀಲ (ಲೇಖಕರು ಜನಪರ ಚಿಂತಕರು) ವಿ.ಡಿ ಸಾವರ್ಕರ್: ಪ್ರಕ್ಷುಬ್ಧ ವ್ಯಕ್ತಿತ್ವದ ಅನಾವರಣ! ಸಾವರ್ಕರ್ ಅವರ ಜನ್ಮ ದಿನದ ನಿಮಿತ್ತ ಮೇ 28ˌ 2017 ಮತ್ತು 2019 ರ ಅದೇ ದಿನ ಖ್ಯಾತ ಸ್ವತಂತ್ರ ಪತ್ರಕರ್ತ ಪವನ್ ಕುಲಕರ್ಣಿ ಅವರು 'ದಿ ವೈರ್' ವೆಬ್ ಜರ್ನಲ್ಲಿಗೆ ಬರೆದ ಲೇಖನವನ್ನಾಧರಿಸಿ ನಾನು ಇಲ್ಲಿ ವಿ ಡಿ ಸಾವರಕರ್ ಅವರ ಭಿನ್ನ ವ್ಯಕ್ತಿತ್ವದ ಕುರಿತು ಅನೇಕ ಸಂಗತಿಗಳನ್ನು ಪ್ರಾಸ್ತಾಪಿಸಿದ್ದೇನೆ. ಸಾವರಕರ್ ಅವರು ಒಬ್ಬ ಉಗ್ರ ಬಲಪಂಥೀಯ ಹಿಂದುತ್ವವಾದಿಯಾಗಿದ್ದು ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ಅವರ ಅನೇಕ ವಿವಾದಾತ್ಮಕ ನಡೆಗಳ ಮೇಲೆ ಈ ಲೇಖನ ಬೆಳಕು ಚೆಲ್ಲುತ್ತದೆ. ವಿನಾಯಕ್ ದಾಮೋದರ್ ಸಾವರ್ಕರ್ (1883-1966) ಪೌರಾಣಿಕ ಶೈಲಿಯಲ್ಲಿ 'ವೀರ ಸಾವರ್ಕರ್' ಎಂಬ ಜನಪ್ರಿಯ ಕಾಲ್ಪನಿಕ ಸ್ವಯಂ ಬಿರುದಾಂಕಿತ ವ್ಯಕ್ತಿ. ಸಾವರಕರ್ ಅವರು ಮಹಾರಾಷ್ಟ್ರದ ಆರ್ಥೊಡಾಕ್ಸ್ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು. ದಲಿತˌ ಶೂದ್ರ ಮತ್ತು ಅನ್ಯಧರ್ಮ ದ್ವೇಷ ಕ್ಕೆ ಹೆಸರಾದ ಚಿತ್ಪಾವನ ಬ್ರಾಹ್ಮಣ ಸಮುದಾಯದ ಪ್ರಮುಖ ವ್ಯಕ್ತಿಗಳೆಂದರೆ ಬಾಲಗಂಗಾಧರನಾಥ್ ಟೀಳಕ್ˌ ಕೇಶವ್ ಬಳಿರಾಮ್ ಹೆಡ್ಗೆವಾರ್ˌ ಗೋಳ್ವಾಲ್ಕರ್ˌ ಗಾಂಧಿ ಹಂತಕ ಗೋಡ್ಸೆ ಮುಂತಾದವರನ್ನು ಹೆಸರಿಸಬಹುದು. ಸಾವರ್ಕರ್ ಅವರು ಆರಂಭದಲ್ಲಿ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರರಾಗಿದ್ದು ಆಮೇಲೆ ಬ್ರಿಟಿಷರಿಗೆ ಪಟ್ಟುಬಿಡದೆ ಸತತ ನಾಲ್ಕಾರು ಬಾರಿ ದಯಾ ಮನವಿ ಸಲ್ಲಿಸುವ ಮೂಲಕ ಜೈಲಿನಿಂದ ಬಿಡುಗಡೆಗೊಂಡು ಬ್ರೀಟೀಷ್ ಆಡಳಿತಕ್ಕೆ ಶರಣಾಗಿ ಸಹಕರಿಸಿದ ಹಾಗೂ ಇಂಗ್ಲಿಷ್ ಆಡಳಿತಗಾರರಿಗೆ ತನ್ನ ನಿಷ್ಠೆಯನ್ನು ಘೋಷಿಸಿದ ವರ್ಣರಂಜಿತ ವ್ಯಕ್ತಿ. ಬ್ರಿಟಿಷರ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಭಾರತೀಯ ರಾಷ್ಟ್ರೀಯ ಸೇನೆ ಕಟ್ಟುತ್ತಿದ್ದ ಸಂದರ್ಭದಲ್ಲಿ, ಸಾವರಕರ್ ಅವರು ಲಕ್ಷಾಂತರ ಭಾರತೀಯರನ್ನು ಬ್ರಿಟೀಷ್ ಸಶಸ್ತ್ರ ಪಡೆಗಳಲ್ಲಿ ಸೇರಿಸಲು ಸಹಾಯ ಮಾಡಿದವರು. ಮುಂದೆ ಅವರು ತಮ್ಮ ಹಿಂದುತ್ವ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಸ್ವಾತಂತ್ರ್ಯ ಚಳುವಳಿಯನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರು. ಇದು ಅಂದು ಬ್ರಿಟೀಷರ ವಿರುದ್ಧ ಅಗತ್ಯವಿದ್ದ ಒಗ್ಗಟ್ಟನ್ನು ಕೋಮು ಆಧಾರದಲ್ಲಿ ಭಾರತೀಯರ ವಿಭಜನೆಗೆ ನಾಂದಿಯಾಯಿತು. ಸ್ವಾತಂತ್ರ್ಯಾ ನಂತರ, ಸಾವರಕರ್ ಮಹಾತ್ಮ ಗಾಂಧಿಯವರ ಹತ್ಯೆಯ ಆರೋಪಕ್ಕೆ ಸಿಲುಕಿ ಅಗತ್ಯ ಸಾಕ್ಷಗಳ ಕೊರತೆಯಿಂದ ಶಿಕ್ಷೆಯಿಂದ ಪಾರಾಗಿದ್ದನ್ನು ನಾವು ಬಲ್ಲೆವು. ಸಾವರಕರ್ ಅವರನ್ನು ಗಾಂಧಿ ಹತ್ಯೆ ಮಾಸ್ಟರ್ ಮೈಂಡ್ ಎಂದೇ ಅಂದು ಗುರುತಿಸಲಾಗುತ್ತಿತ್ತು. ೨೦೧೫ ರಲ್ಲಿ ಸಾವರಕರ್ ಅವರ ೧೩೨ ನೇ ಜನ್ಮ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟರ್ ನಲ್ಲಿ ಸಾವರಕರ್ "ಭಾರತ ಮಾತೆಯ ನೈಜ ಸುಪುತ್ರ ಎಂದು ಸ್ಮರಿಸಿದ್ದರು. ಅಂದಿನ ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಕೂಡ "ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಾಮಾಜೊ-ರಾಜಕೀಯ ತತ್ವಜ್ಞಾನಿಯನ್ನು ಸ್ಮರಿಸೋಣ ಮತ್ತು ಗೌರವಿಸೋಣ" ಎಂದು ಟ್ವೀಟ್ ಮಾಡಿದ್ದರು. ಸಾವರಕರ್ ಆರಂಭದಲ್ಲಿ ಖಂಡಿತವಾಗಿಯೂ ಸ್ವಾತಂತ್ರ್ಯ ಹೋರಾಟಗಾರರಾಗಿದ್ದದ್ದು ನಿಜ. ಅವರು ಹಿಂದುತ್ವದ ಪರಿಕಲ್ಪನೆಗೆ ಗಂಟು ಬೀಳುವ ಮೊದಲು ಒಬ್ಬ ನಾಸ್ತಿಕವಾದಿ ಮತ್ತು ವಿಚಾರವಾದಿಯೂ ಆಗಿದ್ದರು. ಭಾರತವನ್ನು ಬ್ರಿಟೀಷ್ ವಸಾಹತುಶಾಹಿ ಆಡಳಿತದಿಂದ ಮುಕ್ತಗೊಳಿಸಲು ಕ್ರಾಂತಿಕಾರಿ ಹಾದಿಯೇ ಪರ್ಯಾಯವೆಂದು ವಾದಿಸುತ್ತಿದ್ದರು. ಕ್ರಾಂತಿಯು ಸತ್ಯಮಾರ್ಗದಲ್ಲಿ ನಮ್ಮ ಹಕ್ಕನ್ನು ಮರು ಸ್ಥಾಪಿಸುವ ಏಕೈಕ ಪರಿಣಾಮಕಾರಿ ಸಾಧನ ಎಂದು ಪ್ರತಿಪಾದಿಸಿದ್ದರು. 1906 ರಲ್ಲಿ ಕಾನೂನುಶಾಸ್ತ್ರ ಓದಲು ಇಂಗ್ಲೆಂಡಿಗೆ ಹೋದ ನಂತರ, ಸಾವರಕರ್ ಅವರು ಸ್ವತಂತ್ರ ಭಾರತ ಸೊಸೈಟಿ ಯನ್ನು ಸ್ಥಾಪಿಸಿ, ಸ್ವಾತಂತ್ರ್ಯಕ್ಕಾಗಿ ಹೋರಾಡಲು ಇಂಗ್ಲೆಂಡಿನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಸಂಘಟಿಸಿದರು. ಬ್ರಿಟಿಷರ ಬಗ್ಗೆ ಮತ್ತು ಅವರ ಕಾನೂನಿನ ಬಗ್ಗೆ ದೂರುವುದು ನಿಲ್ಲಿಸಿ ನಾವೇ ನಮ್ಮ ಕಾನೂನುಗಳನ್ನು ಸ್ವತಃ ರೂಪಿಸುವ ಅಧಿಕಾರವನ್ನು ಪಡೆದುಕೊಳ್ಳಬೇಕು ಎಂದು ಕರೆಕೊಟ್ಟಿದ್ದರು. ಮುಂದೆ ಅದೇ ಸಾವರಕರ್ ದಬ್ಬಾಳಿಕೆಯ ವಸಾಹತುಶಾಹಿ ಸರಕಾರಕ್ಕೆ ನಿಷ್ಠಾವಂತ ಸಮರ್ಥಕರಾಗಿ ಬದಲಾದರು. 1909 ರಲ್ಲಿ ಅಭಿನವ್ ಭಾರತ್ ಸೊಸೈಟಿಯ ಸದಸ್ಯನೊಬ್ಬನಿಗೆ ಆಗಿನ ನಾಸಿಕ್ ಕಲೆಕ್ಟರ್ ಆಗಿದ್ದ ಎಎಮ್‌ಟಿ ಜಾಕ್ಸನ್ ಹತ್ಯೆಗೆ ಬಳಸಿದ ಪಿಸ್ತೂಲ್ ಪೂರೈಸಿದ ಆರೋಪದಲ್ಲಿ ಸಾವರಕರ್ ಅವರು 50 ವರ್ಷಗಳ ಕಠಿಣ ಶಿಕ್ಷೆಗೊಳಗಾಗಿ ಅಂಡಮಾನ್ ದ್ವೀಪದ ಕುಖ್ಯಾತ ಸೆಲ್ಯುಲಾರ್ ಜೈಲು ಸೇರಿದರು. ಜೈಲು ಶಿಕ್ಷೆಗೆ ಹೆದರಿ ಕೇವಲ ಒಂದೇ ತಿಂಗಳಲ್ಲಿ 'ವೀರ್' ಸಾವರ್ಕರ್ ಅವರು ತನ್ನ ಮೊದಲ ಕ್ಷಮಾದಾನ ಮತ್ತು ದಯಾ ಅರ್ಜಿಯನ್ನು ಬರೆದರು. ಅವರ ಅರ್ಜಿ 1911 ರಲ್ಲಿ ಬ್ರಿಟೀಷ್ ಸರಕಾರ ತಿರಸ್ಕರಿಸಿತ್ತು. 1913 ರಲ್ಲಿ ಅವರು ತಮ್ಮ ಎರಡನೇ ಕ್ಷಮಾದಾನ ಅರ್ಜಿಯಲ್ಲಿ ಇತರ ಜೈಲುವಾಸಿಗಳ ಬಗ್ಗೆ ದೂರುತ್ತ ತನಗಿಂತ ಇತರರಿಗೆ ಜೈಲಿನಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿದೆ ಎಂದಿದ್ದರು. "ನನಗೆ ಮಾತ್ರ "ಡಿ" ಅಂದರೆ ಅಪಾಯಕಾರಿ ಖೈದಿ ಎಂದು ವರ್ಗೀಕರಿಸಲಾಗಿದೆ; ಇದರಿಂದ ನಾನು ಸಂಪೂರ್ಣವಾಗಿ 6 ​​ತಿಂಗಳು ಏಕಾಂತದಲ್ಲಿ ಇರಬೇಕಾಯಿತು" ಎಂದು ಅವಲತ್ತುಕೊಂಡಿದ್ದರು. ೧೯೨೦ ರಲ್ಲಿ ಸಾವರಕರ್ ತಮ್ಮ ನಾಲ್ಕನೇ ದಯಾ ಅರ್ಜಿ ಸಲ್ಲಿಸಿದ ನಂತರ ೧೯೨೧ ರಲ್ಲಿ ಅವರನ್ನು ಮತ್ತು ಅವರ ಸಹೋದರನನ್ನ ಬ್ರಿಟೀಷ್ ಸರಕಾರ ರತ್ನಗಿರಿ ಜೈಲಿಗೆ ಸ್ಥಳಾಂತರಿಸಿತು. ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲˌ ˌ ಬ್ರೀಟೀಷ್ ಸರಕಾರದ ವಿರುದ್ಧ ಹೋರಾಡುವವರ ಮಾಹಿತಿ ಕೊಡುತ್ತೇನೆ ಮತ್ತು ಸಾಯುವವರೆಗೆ ಬ್ರಿಟೀಷ್ ಸರಕಾರಕ್ಕೆ ವಿಧೇಯನಾಗಿರುತ್ತೇನೆಂದು ಮುಚ್ಚಳಿಕೆ ಬರೆದುಕೊಟ್ಟು ಬ್ರಿಟೀಷರಿಂದ ಪಿಂಚಣಿ ಹಣ ಪಡೆದು ೧೯೨೪ ರಲ್ಲಿ ಬಿಡುಗಡೆ ಹೊಂದಿದರು. ಅವರ ಮೇಲೆ ವಿಧಿಸಿದ್ದ ನಿರ್ಬಂಧಗಳನ್ನು ಬ್ರಿಟೀಷ್ ಸರಕಾರ ೧೯೩೭ ರಲ್ಲಿ ತೆಗೆದು ಹಾಕಿತು. ಹೀಗೆ ಆರಂಭದಲ್ಲಿ ಬ್ರಿಟೀಷರ ವಿರುದ್ಧ ಆರ್ಭಟಿಸಿ ಆನಂತರ ಕಠಿಣವಾದ ಜೈಲು ಶಿಕ್ಷೆಗೆ ಹೆದರಿ ಬ್ರಿಟೀಷರಿಗೆ ಶರಣಾಗಿದ್ದ ಸಾವರಕರ್ ಅವರು 'ವೀರ' ಎಂಬ ಬಿರುದಾಂಕಿತರಾಗಿದ್ದು ಸೋಜಿಗದ ಸಂಗತಿಯಾಗಿದೆ. 1926 ರಲ್ಲಿ ಪ್ರಕಟವಾದ 'ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್' ಎಂಬ ಪುಸ್ತಕವು ಸಾವರ್ಕರ್ ಅವರ ಮೊದಲ ಜೀವನಚರಿತ್ರೆಯಾಗಿದ್ದು ಅದನ್ನು 'ಚಿತ್ರಗುಪ್ತ' ನೆಂಬ ಅನಾಮಿಕ ಲೇಖಕ ಬರೆದಿದ್ದ ಎನ್ನಲಾಗಿತ್ತು. ಆ ಪುಸ್ತಕದಲ್ಲಿ ಸಾವರಕರ್ ಅವರ ಧೈರ್ಯ ಸಾಹಸಗಳನ್ನು ವೈಭವೀಕರಿಸಲಾಗಿತ್ತು ಮತ್ತು ಅವರನ್ನು ಒಬ್ಬ ಮಹಾ ನಾಯಕನಂತೆ ಬಿಂಬಿಸಲಾಗಿತ್ತು. ಸಾವರಕರ್ ಸಾವಿನ ಎರಡು ದಶಕಗಳ ನಂತರ, ಈ ಪುಸ್ತಕದ ಎರಡನೇ ಆವೃತ್ತಿ ೧೯೮೭ ರಲ್ಲಿ ಸಾವರಕರ್ ಬರಹಗಳ ಅಧಿಕೃತ ಪ್ರಕಾಶನ ಸಂಸ್ಥೆ "ವೀರ ಸಾವರ್ಕರ್ ಪ್ರಕಾಶನ' ಬಿಡುಗಡೆ ಮಾಡಿದಾಗ, ಪ್ರಕಾಶಕ ರವೀಂದ್ರ ರಾಮದಾಸ್ ತನ್ನ ಮುನ್ನುಡಿಯಲ್ಲಿ "ಚಿತ್ರಗುಪ್ತ ಬೇರೆ ಯಾರೂ ಅಲ್ಲ ಸಾವರಕರ್" ಎನ್ನುವ ಗುಟ್ಟು ರಟ್ಟು ಮಾಡಿದ್ದರು. ಈ ಆತ್ಮಚರಿತ್ರೆಯಲ್ಲಿ ಬೇರೊಬ್ಬ ಲೇಖಕರು ಬರೆದಂತೆ ಸಾವರಕರ್ ತಮ್ಮನ್ನು ತಾವು ಸಾಹಸಿˌ ನಾಯಕ ಮುಂತಾಗಿ ವೈಭವಿಕರಿಸಿಕೊಂಡಿದ್ದಾರೆ. ಬಹುಶಃ ಸಭ್ಯ ಸಮಾಜದಲ್ಲಿ ಜೈಲಿನ ಶಿಕ್ಷೆಗೆ ಹೆದರಿ ಶರಣಾಗತನಾದ ಮಾಜಿ ಕ್ರಾಂತಿಕಾರಿಯೊಬ್ಬ ಕ್ಷಮಯಾಚನೆಯ ಮೂಲಕ ಬಿಡುಗಡೆಯಾಗಿ ಬಂದ ಮೇಲೆ ಮತ್ತೊಂದು ಅನಾಮಿಕ ಮುಖವಾಡದಲ್ಲಿ ಸ್ವಯಂ ವೈಭವೀಕರಣದಲ್ಲಿ ತೊಡಗಿದಾಗ ನಾವು ಸದ್ದಿಲ್ಲದೆ ಮುಜುಗರದಿಂದ ನಗಬೇಕು. ಅಂಡಮಾನ್ ಜೈಲಿನ ಕಠಿಣ ಶಿಕ್ಷೆಗೆ ಹೆದರಿ ಕ್ಷಮಯಾಚಿಸಿ ಹೊರಗೆ ಬಂದ ಸಾವರಕರ್ ಅವರನ್ನು ಟೀಕಿಸುವ ಹಕ್ಕು ಯಾರೊಬ್ಬರೂ ಪ್ರತಿಪಾದಿಸುವುದು ಬೇಡ. ಆದರೆ ಸಾವರಕರ್ ಅವರು ಪ್ರತಿಪಾದಿಸಿದ ಹಿಂದುತ್ವ ಸಿದ್ಧಾಂತವು ಭಾರತದ ಸ್ವಾತಂತ್ರ್ಯ ಚಳುವಳಿಯನ್ನು ಅಸ್ಥಿರಗೊಳಿಸಿದ್ದು ಮತ್ತು ದೇಶದ ಜನರನ್ನು ಧರ್ಮಾಧಾರದಲ್ಲಿ ವಿಭಜಿಸಿದ್ದು ಭಾರತೀಯರು ಎಂದಿಗೂ ಮರೆಯುವಂತಿಲ್ಲ ಎನ್ನುತ್ತಾರೆ ಪವನ್ ಕುಲಕರ್ಣಿ. ಅಷ್ಟೇ ಅಲ್ಲದೆ ಸಾವರಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ನೀಡಿದ ಸಕ್ರಿಯ ಬೆಂಬಲವನ್ನು ಕೂಡ ನಾವು ಮರೆಯುವಂತಿಲ್ಲ. ಆ ಕಾರಣಗಳಿಂದ ಸಾವರಕರ್ ಅವರು ದೇಶದ ಜನರ ಕ್ಷಮೆಗೆ ಮತ್ತು ವಿಶೇಷವಾಗಿ 'ದೇಶಪ್ರೇಮಿ' ಹಾಗು 'ರಾಷ್ಟ್ರೀಯವಾದಿ' ಎಂಬ ಕೃತಕ ವಿಶೇಷಣಗಳಿಗೂ ಅರ್ಹರಲ್ಲ ಎನ್ನುವ ಅಭಿಪ್ರಾಯ ಲೇಖಕ ಪವನ್ ಕುಲಕರ್ಣಿ ವ್ಯಕ್ತಪಡಿಸಿದ್ದಾರೆ. ಸಾವರಕರ್ ಅವರು ತಮ್ಮ ಅಪಾಯಕಾರಿ ಮತ್ತು ವಿಘಟನಕಾರಿ ಹಿಂದುತ್ವ ಸಿದ್ಧಾಂತದಿಂದ ಸ್ವಾತಂತ್ರ್ಯ ಚಳುವಳಿಯನ್ನು ಹಾಳುಗೆಡವಲು ಪ್ರಯತ್ನಿಸಿದರು. ಅವರು ಹುಟ್ಟುಹಾಕಿದ ಹಿಂದುತ್ವ ಸಿದ್ಧಾಂತವು ದೇಶದಲ್ಲಿ ಶಾಸ್ವತವಾಗಿ ಜನಾಂಗಭೇದವನ್ನು ಜೀವಂತವಾಗಿರಿಸಿ ದೇಶದ ಬಹುತ್ವ ಮತ್ತು ಸೌಹಾರ್ದತೆಗೆ ಧಕ್ಕೆ ತಂದಿತು. 1894-95ರಲ್ಲಿ ಬಾಂಬೆ ಮತ್ತು ಪುಣೆಯಲ್ಲಿ ನಡೆದ ಹಿಂದೂ-ಮುಸ್ಲಿಂ ಗಲಭೆಗಳ ನಂತರ 12 ವರ್ಷದ ಹುಡುಗ, ಸಾವರ್ಕರ್ ತನ್ನ ಸಹಪಾಠಿಗಳ ಗುಂಪಿನ ನಾಯಕನಾಗಿದ್ದುಕೊಂಡು, ಮಸೀದಿಯೊಂದರ ಮೇಲೆ ದಾಳಿ ಮಾಡಿದ್ದರು. ಹಳ್ಳಿಯ ಮುಸ್ಲಿಂ ಹುಡುಗರನ್ನು ಈ ಬಾಲಕ ಗುಂಪು ಕಟ್ಟಿಕೊಂಡು ಕಾಡುತ್ತಿದ್ದರು. ಸಾವರ್ಕರ್ ಮತ್ತು ಅವನ ಸ್ನೇಹಿತರು ಮಸೀದಿಗಳ ಮೇಲೆ ಕಲ್ಲು ತೂರುವುದು ಅಂದು ಸಾಮಾನ್ಯವಾಗಿತ್ತು. ಬಾಲ್ಯದ ಮತ್ತು ಯೌವನದ ಈ ಘಟನೆಯನ್ನು ನೆನಪಿಸಿಕೊಂಡ ಅವರು: "ನಾವು ಮಸೀದಿಯನ್ನು ನಮ್ಮ ಮನಸ್ಸಿಗೆ ಬಂದಂತೆ ಧ್ವಂಸಗೊಳಿಸಿದ್ದೇವೆ ಮತ್ತು ಅದರ ಮೇಲೆ ನಮ್ಮ ಶೌರ್ಯದ ಧ್ವಜವನ್ನು ಹಾರಿಸಿದ್ದೇವೆ" ಎಂದು ಬರೆದುಕೊಂಡಿದ್ದಾರಂತೆ. ಮತೀಯ ಗಲಭೆಯಲ್ಲಿ ಹಿಂದುಗಳು ಮುಸ್ಲಿಮರನ್ನು ಕೊಲ್ಲುವ ಸುದ್ದಿ ಕೇಳಿದಾಗ, ಪುಟ್ಟ ಸಾವರಕರ್ ಮತ್ತು ಅವರ ಸ್ನೇಹಿತರು ಸಂತೋಷದಿಂದ ನೃತ್ಯ ಮಾಡುತ್ತಿದ್ದರಂತೆ. ಹೀಗೆ ಬಾಲ್ಯದಲ್ಲೇ ಸಾವರಕರ ಅವರ ಮನಸ್ಸು ಕೋಮುವಾದಿ ಸಂಸ್ಕೃತಿಯಿಂದ ತುಂಬಿಗೊಂಡಿತ್ತು ಎನ್ನುತ್ತಾರೆ ಪವನ್ ಕುಲಕರ್ಣಿ. ಸಾವರಕರ್ ಅವರಲ್ಲಿ ಒಂದು ಬಗೆಯ ವಿಭಜಕ ವತ್ತು ವಿಕೃತ ಮನಸ್ಥಿತಿ ನೆಲೆಗೊಂಡ ಬಗ್ಗೆ ಪವನ್ ಕುಲಕರ್ಣಿಯವರು ಆಧಾರಗಳ ಸಮೇತ ವಿವರಿಸುತ್ತಾರೆ. ಸಾವರಕರ್ ಅವರ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯ ವಿಭಜಕ ಮನಸ್ಥಿತಿಯು ಅವರಲ್ಲಿ ಮುಸ್ಲಿಮರ ವಿರುದ್ಧ ಆಳವಾಗಿ ಬೇರೂರಿದ ಅಸಮಾಧಾನವನ್ನು ವೃದ್ಧಿಸಿದ್ದು ಮಾತ್ರವಲ್ಲದೆ ಐತಿಹಾಸಿಕ ಘಟನೆಗಳ ಬಗ್ಗೆ ಅವರ ತಿಳುವಳಿಕೆಯನ್ನು ಮಸುಕಾಗಿಸಿತ್ತು. ಇದು ಮುಂದೆ ಸಾವರಕರ್ ಅವರು 1857 ರ ಭಾರತೀಯ ಸ್ವಾತಂತ್ರ್ಯ ಸಂಗ್ರಾಮವನ್ನು ಹಿಂದೂಗಳು ಮತ್ತು ಮುಸ್ಲಿಮರು ಕ್ರಿಶ್ಚಿಯನ್ ಧರ್ಮದ ವಿರುದ್ಧ ಪ್ರತೀಕಾರದ ಗೃಹಿಕೆಗೆ ಕಾರಣವಾಯಿತು. ಭಾರತವನ್ನು ಕ್ರೈಸ್ತೀಕರಣಗೊಳಿಸುವ ಬ್ರಿಟನ್‌ನ ಪ್ರಯತ್ನಗಳಿಗೆ ಹಿಂಸೆಯೆ ಪ್ರತಿಕ್ರಿಯೆ ಎನ್ನುವುದು ಅವರ ವಾದವಾಗಿತ್ತು. ಸಾವರ್ಕರ್ 1909 ರ ಅವರ ಕ್ರಾಂತಿಯ ದಿನಗಳಲ್ಲಿ "1857 ರ ಸ್ವಾತಂತ್ರ್ಯ ಸಂಗ್ರಾಮ" ಎಂಬ ಪುಸ್ತಕವನ್ನು ಬರೆದ ಕೆಲವೇ ವರ್ಷಗಳಲ್ಲಿ ಬ್ರಿಟಿಷ್ ಸರ್ಕಾರಕ್ಕೆ ತನ್ನ ನಿಷ್ಠೆಯನ್ನು ಘೋಷಿಸಿದರು. ಆ ಪುಸ್ತಕದಲ್ಲಿ ಜಸ್ಟಿನ್ ಮೆಕಾರ್ಥಿಯನ್ನು ಉಲ್ಲೇಖಿಸಿ, "ಮುಸ್ಲಿಮರು ಮತ್ತು ಹಿಂದೂಗಳು ತಮ್ಮ ಹಳೆಯ ಧಾರ್ಮಿಕ ದ್ವೇಷವನ್ನು ಮರೆತು ಕ್ರಿಶ್ಚಿಯನ್ನರ ವಿರುದ್ಧ ಒಂದಾಗಬೇಕು" ಎಂದು ಸಾವರಕರ್ ಪ್ರತಿಪಾದಿಸಿದ್ದಾಗಿ ಪವನ್ ಕುಲಕರ್ಣಿ ಬರೆದಿದ್ದಾರೆ. ಭಾರತದಲ್ಲಿ ಸಂಪ್ರದಾಯಗಳ ಹೆಸರಿನಲ್ಲಿ ಅನೇಕ ಮೌಢ್ಯಾಚರಣೆಗಳು ವಿಕೃತ ಪದ್ದತಿಗಳು ಆಳವಾಗಿ ಬೇರು ಬಿಟ್ಟಿದ್ದವು. ಬ್ರಿಟೀಷರು ಆ ಎಲ್ಲ ವಿಕೃತ ಆಚರಣೆಗಳನ್ನು ಒಂದೊಂದಾಗಿ ಮೂಲೋತ್ಪಾಟಿಸಲು ಹೊಸ ಕಾನೂನುಗಳನ್ನು ಜಾರಿಗೆ ತಂದಿದ್ದರಿಂದ ಸಾಂಪ್ರದಾಯವಾದಿ ಮನಸ್ಥಿತಿಗಳು ಕುದ್ದುಹೋಗಿದ್ದವು. ಸಾವರ್ಕರ್ ಅವರು ಬ್ರಿಟೀಷರ ಜನಪರ ಮತ್ತು ಪ್ರಗತಿಪರ ಕಾನೂನುಗಳನ್ನು ವಿರೋಧಿಸಲು ಮುಸ್ಲಿಮರೊಂದಿಗೆ ಸೇರಿ ಹೋರಾಡುವ ಮಾತನಾಡಿದ್ದರಂತೆ. "ಸತಿ ಪದ್ಧತಿ ನಿಷೇಧಿಸುವ ಕಾನೂನು ಜಾರಿಗೊಳಿಸಿದ ಬ್ರಿಟಿಷ್ ಸರ್ಕಾರವು ಮುಂದೆ ಮೂರ್ತಿಪೂಜೆ ಕೂಡ ನಿಷೇಧಿಸಿ ಹಿಂದೂ ಧಾರ್ಮಿಕ ಆಚರಣೆಗಳಲ್ಲಿ ಮತ್ತಷ್ಟು ಹಸ್ತಕ್ಷೇಪ ಮಾಡಬಹುದು. ನಾವು ಅದನ್ನು ತಡೆಯಬೇಕು" ಎಂದು ಸಾವರ್ಕರ್ ಕೇಳಿದ್ದರಂತೆ. ಅದರ ಮುಂದುವರೆದ ಭಾಗವಾಗಿ ಸಾವರ್ಕರ್ ಹೀಗೂ ಹೇಳಿದ್ದರೆಂದು ಕುಲಕರ್ಣಿಯವರು ವಿವರಿಸಿದ್ದಾರೆ: "ಭಾರತದಲ್ಲಿ ಹಿಂದೂ ಮತ್ತು ಇಸ್ಲಾಮ್ ಧರ್ಮಗಳು ನಾಶಗೊಳಿಸಲು ಬ್ರಿಟೀಷರು ಯತ್ನಿಸುತ್ತಿದ್ದಾರೆ. ಬ್ರಿಟೀಷರು ಈಗಾಗಲೇ ಹಿಂದೂ ಮತ್ತು ಮುಸ್ಲಿಮ್ ಧರ್ಮಗಳ ಅಡಿಪಾಯವನ್ನು ನಾಶಮಾಡಲು ಒಂದರ ನಂತರ ಒಂದರಂತೆ ಕಾನೂನನ್ನು ಜಾರಿಗೆ ತರಲು ಆರಂಭಿಸಿದ್ದಾರೆ. ರೈಲುಗಳನ್ನು ಈಗಾಗಲೇ ನಿರ್ಮಿಸಲಾಗಿದೆ, ಮತ್ತು ಹಿಂದೂಗಳ ಜಾತಿ ಪೂರ್ವಾಗ್ರಹಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಗಾಡಿಗಳನ್ನು ನಿರ್ಮಿಸಲಾಗಿದೆ. ದೊಡ್ಡ ದೊಡ್ಡ ಕ್ರೈಸ್ತ ಮಿಷನರಿ ಶಾಲೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗುತ್ತಿದೆ. ಲಾರ್ಡ್ ಕ್ಯಾನಿಂಗ್ ಸ್ವತಃ ಪ್ರತಿ ಮಿಷನರಿ ಶಾಲೆಗಳಿಗೆ ಸಾವಿರಾರು ರೂಪಾಯಿಗಳನ್ನು ವಿತರಿಸಿದ್ದಾರೆ, ಮತ್ತು ಇದರಿಂದ ಲಾರ್ಡ್ ಕ್ಯಾನಿಂಗ್ ನ ಹೃದಯದಲ್ಲಿ ಭಾರತೀಯರನ್ನು ಕ್ರೈಸ್ತರನ್ನಾಗಿಸುವ ಆಶೆ ಬಲವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ." "ಬ್ರಿಟೀಷರು ಭಾರತದಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಹರಡುವ ಪ್ರಾಥಮಿಕ ಗುರಿ ಹೊಂದಿದ್ದಾರೆˌ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದವರನ್ನು ಗೌರವಯುತವಾಗಿ ನಡೆಸಿಕೊಳ್ಳಲಾಗುತ್ತದೆ ಮತ್ತು ನೌಕರಿಯಲ್ಲಿ ಬಡ್ತಿ ನೀಡಲಾಗುತ್ತದೆ" ಎಂದು ಸಾವರಕರ್ ವಾದಿಸುತ್ತಿದ್ದರಂತೆ. ಸಾವರಕರ್ ಅವರ ಮನಸ್ಸಿನಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೋಮುವಾದದ ಬೀಜಗಳನ್ನು ಬಿತ್ತಲಾಗಿತ್ತಾದರೂ, ಹಿಂದುತ್ವ ಸಿದ್ಧಾಂತದ ವಿಷದ ಫಲವು ಅವರ 20ನೇ ವಯಸ್ಸಿನ ಅಂತ್ಯದಲ್ಲಿ ಅರಳಿದವು ಎನ್ನುವುದು ಕುಲಕರ್ಣಿಯವರ ಅಭಿಮತ. ಸಾವರ್ಕರ್ ಅವರ ಆರಂಭದ ಕ್ರೈಸ್ತರ ಬಗೆಗಿನ ದ್ವೇಷವು ಜೈಲಿನ ಶಿಕ್ಷೆಗೆ ಹೆದರಿ ಮಣ್ಣು ಪಾಲಾಗಿತ್ತು. ಮುಂದೆ ಅವರ ದ್ವೇಷವು ಮುಸ್ಲಿಮರ ಕಡೆಗೆ ತಿರುಗಿತು. ಜೈಲಿನಿಂದ ಬಿಡುಗಡೆಗೊಳ್ಳುವ ಹಿಂದಿನ ವರ್ಷ ಸಾವರಕರ್ ಅವರು ಮೊಟ್ಟ ಮೊದಲು ಹಿಂದುತ್ವದ ಪರಿಕಲ್ಪನೆಯನ್ನು ೧೯೨೩ ರಲ್ಲಿ "ಎಸೆನ್ಷಿಯಲ್ಸ್ ಆಫ್ ಹಿಂದುತ್ವ" ಎಂಬ ಪುಸ್ತಕದಲ್ಲಿ ಪ್ರಕಟಿಸಿದರು. ಮುಂದೆ ೧೯೨೮ ರಲ್ಲಿ ಅದನ್ನು "ಹಿಂದುತ್ವ: ಯಾರು ಹಿಂದೂ?" ಎಂಬ ಹೊಸ ಶಿರ್ಷಿಕೆಯಲ್ಲಿ ಮರು ಮುದ್ರಿಸಿದರು. ಹಿಂದುತ್ವ ಈ ಸಿದ್ಧಾಂತವು ಆಳವಾದ ವಿಭಜನಕಾರಿ ಸಿದ್ಧಾಂತವಾಗಿತ್ತು ಮತ್ತು ಇದು ದೇಶದ ಜನರ ಗಮನವನ್ನು ಬ್ರಿಟಿಷರಿಂದ ಬೇರೆಡೆಗೆ ಸೆಳೆಯುವ ಹಾಗು ಮುಸ್ಲಿಮರ ಮೇಲೆ ದ್ವೇಷ ಬಿತ್ತುವ ಉದ್ದೇಶ ಹೊಂದಿತ್ತು ಎನ್ನುತ್ತಾರೆ ಪವನ್ ಕುಲಕರ್ಣಿ. ಸಾವರ್ಕರ್ ಅವರ ಮುಸ್ಲಿಮ್ ದ್ವೇಷದ ಸಿದ್ಧಾಂತವನ್ನು ಬ್ರಿಟೀಷರು ನೀರೆರೆದು ಪೋಷಿಸಲಾರಂಭಿಸಿದರು. 'ಉಪಖಂಡದಲ್ಲಿ ತಮ್ಮ ಆಳ್ವಿಕೆಯನ್ನು ಖಾಯಂಗೊಳಿಸಲು ಮತ್ತು ಸ್ವಾತಂತ್ರ ಚಳುವಳಿಯನ್ನು ಹತ್ತಿಕ್ಕಲು ಬ್ರಿಟೀಷರು ಸಾವರ್ಕರ್ ಅವರನ್ನು ದಾಳವಾಗಿ ಬಳಸಿಕೊಂಡರು' ಎನ್ನುತ್ತಾರೆ ಕುಲಕರ್ಣಿ. ೧೯೨೦ ರ ದಶಕದಲ್ಲಿ, ಸಾವರ್ಕರ್ ಅವರ ವಿಭಜಕಾರಿ ಸಿದ್ಧಾಂತದಿಂದ ಸ್ವಾತಂತ್ರ್ಯ ಚಳುವಳಿಗೆ ಆಗಬಹುದಾದ ಹಾನಿ ಬ್ರಿಟೀಷ್ ಸರಕಾರ ಚನ್ನಾಗಿ ಗೃಹಿಸಿತ್ತು. ಅಂಡಮಾನ್ ಜೈಲಿನಿಂದ ಸಾವರ್ಕರ್ ಅವರನ್ನು ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಾರದೆಂಬ ಷರತ್ತಿನ ಮೇಲೆ ಬಿಡುಗಡೆ ಮಾಡಲಾಗಿದ್ದರೂ, ಬ್ರಿಟೀಷರು ರತ್ನಗಿರಿ ಮಹಾಸಭಾ ಆಯೋಜಿಸಲು ಅವರನ್ನು ಅನುಮತಿಸಿದ್ದರು. ಇದು ಮುಸ್ಲಿಮರು ಪ್ರಾರ್ಥನೆ ಮಾಡುವಾಗ ಮಸೀದಿಗಳ ಮುಂದೆ ಸಂಗೀತ ನುಡಿಸುವ ಕಾರ್ಯಕ್ರಮವಾಗಿತ್ತು. ಸಾವರ್ಕರ್ ಅವರ ಹಿಂದುತ್ವ ಸಿದ್ಧಾಂತದಿಂದ ಪ್ರೇರಣೆಗೊಂಡಿದ್ದ ಮತ್ತು ಕಾಂಗ್ರೆಸ್ಸಿನಿಂದ ಭ್ರಮನಿರಸನಗೊಂಡಿದ್ದ ಕೇಶವ್ ಬಳಿರಾಮ್ ಹೆಡ್ಗೆವಾರ್ ಅವರನ್ನು ಭೇಟಿಯಾಗಲು ಸಾವರ್ಕರ್ ಅವರಿಗೆ ಬ್ರಿಟೀಷ್ ಸರಕಾರ ಅನುಮತಿ ನೀಡಿತ್ತು. ಉಭಯತರು ಹಿಂದೂ ರಾಷ್ಟ್ರ ಕಟ್ಟುವ ತಮ್ಮ ಉದ್ದೇಶಿತ ಕಾರ್ಯತಂತ್ರವನ್ನು ಚರ್ಚಿಸಲು ಉತ್ಸುಕರಾಗಿದ್ದರು. ಈ ಸಭೆ ಮುಗಿದ ಕೆಲವು ತಿಂಗಳುಗಳ ನಂತರ, ಅಂದರೆ ಸೆಪ್ಟೆಂಬರ್ 1925 ರಲ್ಲಿ, ಹೆಡ್ಗೆವಾರ್ ಅವರು ಆರ್‌ಎಸ್‌ಎಸ್ ಎಂಬ ಮತೀಯವಾದಿ ಸಂಸ್ಥೆಯನ್ನು ಹುಟ್ಚುಹಾಕಿದರು. ಹೆಡ್ಗೆವಾರ್ ಹುಟ್ಟುಹಾಕಿದ ಈ ಸಂಘ ಕೂಡ ಸಾವರ್ಕರ್ ಅವರಂತೆ ಬ್ರಿಟಿಷರಿಗೆ ವಿಧೇಯವಾಗಿ ಕೆಲಸ ಮಾಡುತ್ತಿತ್ತು ಎಂದು ಕುಲಕರ್ಣಿಯವರು ವರ್ಣಿಸಿದ್ದಾರೆ. ಸಾವರ್ಕರ್ ಮೇಲೆ ತಾವೇ ಹೇರಿದ್ದ ರಾಜಕೀಯ ಚಟುವಟಿಕೆಗಳ ಮೇಲಿನ ನಿಷೇಧದ ಹೊರತಾಗಿಯೂ ಬ್ರಿಟಿಷ್ ಆಡಳಿತಗಾರರು ಇದನ್ನು ಬೇಕೆಂತಲೇ ಕಡೆಗಣಿಸಿದರು. ಏಕೆಂದರೆ ಭಾರತದಲ್ಲಿ ಬ್ರಿಟೀಷ್ ಆಳ್ವಿಕೆಯು ಅಲ್ಲಿನ ಕೋಮು ವಿಭಜನೆಯ ಮೇಲೆ ಅವಲಂಬಿತವಾಗಿತ್ತು ಮತ್ತು ಸಾವರ್ಕರ್ ಅವರಿಗೆ ಹಿಂದು-ಮುಸ್ಲಿಂ ಹೆಸರಿನಲ್ಲಿ ಸಮಾಜದಲ್ಲಿ ಆಳವಾದ ಕಂದಕವನ್ನು ನಿರ್ಮಿಸಿ ಪರಿಸ್ಥಿತಿ ಉಲ್ಬಣಗೊಳಿಸುವಲ್ಲಿ ಬ್ರಿಟೀಷ್ ಸರಕಾರ ಯಾವುದೇ ಅಡೆತಡೆ ಮಾಡಲಿಲ್ಲ. ಮುಂದೆ ಸಾವರ್ಕರ್ ಅವರು ಬ್ರಿಟೀಷ್ ವಸಾಹತುಶಾಹಿ ಸರ್ಕಾರದೊಂದಿಗೆ ಸಹಯೋಗ ಸ್ಥಾಪಿಸಿಕೊಂಡರು. ೧೯೩೭ ರಲ್ಲಿ ಹಿಂದೂ ಮಹಾಸಭಾದ ಅಧ್ಯಕ್ಷರಾಗಿ ಸಾವರ್ಕರ್ ಆಯ್ಕೆಯಾದರು. ಆಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾಂತೀಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಹಿಂದೂ ಮಹಾಸಭಾ ಮತ್ತು ಮತ್ತೊಂದು ಕೋಮುವಾದಿ ಪಕ್ಷವಾದ ಮುಸ್ಲಿಂ ಲೀಗ್ ಅನ್ನು ಕಾಂಗ್ರೆಸ್ ಸೋಲಿಸಿ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲೂ ಪ್ರಾಂತೀಯ ಸರಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಕೇವಲ ಎರಡು ವರ್ಷಗಳ ನಂತರ, ಎರಡನೇ ಜಾಗತಿಕ ಯುದ್ಧ ಪ್ರಾರಂಭವಾದಾಗ, ವೈಸ್‌ರಾಯ್ ಲಾರ್ಡ್ ಲಿನ್‌ಲಿತ್‌ಗೋ ಯಾರೊಂದಿಗೂ ಸಮಾಲೋಚಿಸದೆ ಭಾರತವು ಜರ್ಮನಿಯೊಂದಿಗೆ ಯುದ್ಧ ಮಾಡುವುದಾಗಿ ಘೋಷಿಸಿದಾಗ ಕಾಂಗ್ರೆಸ್ ಅದರ ಪ್ರತಿಭಟನಾರ್ಥವಾಗಿ ಪ್ರಾಂತೀಯ ಸರಕಾರಗಳನ್ನು ವಿಸರ್ಜಿಸಿತ್ತು. ಸೆಪ್ಟೆಂಬರ್ 1939 ರಲ್ಲಿ, ಕಾಂಗ್ರೆಸ್‌ನ ಕಾರ್ಯಕಾರಿ ಸಮಿತಿಯು ತನ್ನ ಬಿಕ್ಕಟ್ಟಿನ ಸಮಯದಲ್ಲಿ ಬ್ರಿಟನ್‌ನ ಯುದ್ಧ ಪ್ರಯತ್ನಗಳಿಗೆ ಬೆಂಬಲವನ್ನು ನೀಡುವುದಾಗಿ ಘೋಷಿಸಿತು. ವಸಾಹತುಶಾಹಿ ಸರ್ಕಾರವು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಬೇಕು ಮತ್ತು ಭಾರತವು ಸ್ವಂತ ಸಂವಿಧಾನ ಹೊಂದಲು ಸಂವಿಧಾನ ರಚನಾ ಸಮಿತಿ ರಚಿಸಬೇಕೆಂಬ ಕಾಂಗ್ರೆಸ್ ನಿಬಂಧನೆಗೆ ಲಿನ್ನಲಿತ್‌ಗೋ ಒಪ್ಪಿಕೊಡಿದ್ದರು. ಅಂದು ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದ ಸಾವರ್ಕರ್ ಇದರಿಂದ ಗಲಿಬಿಲಿಗೊಂಡು ಈ ಅವಕಾಶವನ್ನು ತ್ವರಿತವಾಗಿ ಬಳಸಿಕೊಳ್ಳಲು ಯೋಚಿಸಿˌ ತಕ್ಷಣ ಲಿನ್ನಲಿತ್‌ಗೋ ಅವರನ್ನು ಭೇಟಿಯಾದರಂತೆ. ರಾಜ್ಯ ಕಾರ್ಯದರ್ಶಿಗೆ ಕಳುಹಿಸಿದ ಸಾವರ್ಕರ್ ಅವರೊಂದಿಗಿನ ಭೇಟಿಯ ವರದಿಯಲ್ಲಿ ಲಿನ್ನಲಿತ್‌ಗೋ ಹೀಗೆ ಬರೆದಿದ್ದಾರೆಂದು ಕುಲಕರ್ಣಿ ವಿವರಿಸಿದ್ದಾರೆ: "ನಿಮ್ಮ ಸರ್ಕಾರವು ಈಗ ಹಿಂದೂಗಳನ್ನು ಬೆಂಬಲಿಸಬೇಕು. ಏಕೆಂದರೆˌ ಹಿಂದೂಗಳ ಮತ್ತು ನಿಮ್ಮ ಆಸಕ್ತಿಗಳು ಈಗ ಒಂದೇ ಆಗಿವೆ ಮತ್ತು ನಾವು ಒಟ್ಟಾಗಿ ಕೆಲಸ ಮಾಡಬೇಕು. ಹಿಂದೂ ಧರ್ಮ ಮತ್ತು ಗ್ರೇಟ್ ಬ್ರಿಟನ್ ಸ್ನೇಹಿತರಾಗುವುದು ಅತ್ಯಗತ್ಯ ಮತ್ತು ಹಳೆಯ ವೈರತ್ವವು ಇನ್ನು ಮುಂದೆ ಅಗತ್ಯವಿಲ್ಲ. ಹಿಂದೂ ಮಹಾಸಭಾ ಎರಡನೇ ಜಾಗತಿಕ ಯುದ್ಧವನ್ನು ಬೆಂಬಲಿಸುತ್ತದೆ ಎನ್ನುವ ಭರವಸೆ ನೀಡುತ್ತೇನೆ." ಸಾವರ್ಕರ್ ಅವರು ಮೇಲಿನಂತೆ ಹೇಳಿದ್ದಾಗಿ ಲಿನ್ನಲಿತ್ತಗೋ ತಮ್ಮ ವರದಿಯಲ್ಲಿ ನಮೂದಿಸಿದ್ದರು. ಇದಾದ ಎರಡು ತಿಂಗಳುಗಳ ನಂತರ, ಹಿಂದೂ ಮಹಾಸಭಾದ ಕಲ್ಕತ್ತಾ ಅಧಿವೇಶನವನ್ನು ಉದ್ದೇಶಿಸಿ, ಸಾವರ್ಕರ್ ಎಲ್ಲಾ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಶಾಲೆಗಳು ಎಲ್ಲ ರೀತಿಯಲ್ಲಿ ಯುವಕರಿಗೆ ಬ್ರಿಟೀಷ್ ಮಿಲಿಟರಿ ಪಡೆಗಳಲ್ಲಿ ಸೇರಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಒತ್ತಾಯಿಸಿದ್ದರು. ಅದರ ಮುಂದಿನ ವರ್ಷ ಗಾಂಧಿ ಬ್ರಿಟೀಷರ ವಿರುದ್ಧ ಸತ್ಯಾಗ್ರಹವನ್ನು ಆರಂಭಿಸಿದಾಗ, ಸಾವರ್ಕರ್ ಅವರು ಮಥುರಾದಲ್ಲಿ 1940 ರ ಡಿಸೆಂಬರ್‌ನಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ, ಹಿಂದೂಗಳು ಬ್ರಿಟಿಷ್ ಸಶಸ್ತ್ರ ಪಡೆಗಳ ವಿವಿಧ ಶಾಖೆಗಳಲ್ಲಿ ಸೇರಿಕೊಳ್ಳಬೇಕೆಂದು ಕರೆಯಿತ್ತ ಬಗ್ಗೆ ಕುಲಕರ್ಣಿಯವರು ವಿವರವಾಗಿ ವರ್ಣಿಸಿದ್ದಾರೆ. 1941 ರಲ್ಲಿ, ಎರಡನೇ ಜಾಗತಿಕ ಯುದ್ಧದ ಲಾಭವನ್ನು ಪಡೆದುಕೊಂಡು, ನೇತಾಜಿ ಬೋಸ್ ಅವರು ಬ್ರಿಟಿಷರ ವಿರುದ್ಧ ಹೋರಾಡಲೆಂದು ಜಪಾನ್ ನೆರವಿನಿಂದ ತಮ್ಮ ಸೈನ್ಯವನ್ನು ಬೆಳೆಸಲಾರಂಭಿಸಿದರು. 1941 ರ ಈ ಅವಧಿಯಲ್ಲಿ ಭಾಗಲ್ಪುರದಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ ಸಾವರ್ಕರ್ ತನ್ನ ಅನುಯಾಯಿಗಳನ್ನು ಉದ್ದೇಶಿಸಿ ಹೀಗೆ ಹೇಳಿದ್ದರಂತೆ: "ಬ್ರಿಟನ್ ವಿರೋಧಿ ಜಪಾನಿ ಶತ್ರುಗಳ ದಾಳಿಗೆ ನಾವು ನೇರವಾಗಿ ತುತ್ತಾಗುತ್ತಿದ್ದೇವೆ. ಆದ್ದರಿಂದ ಹಿಂದೂ ಮಹಾಸಭಾದ ಅನುಯಾಯಿಗಳು ವಿಶೇಷವಾಗಿ ಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯಗಳಲ್ಲಿ ಬ್ರಿಟೀಷ್ ಸೇನೆಗೆ ಸೇರಲು ಹೆಚ್ಚು ಹೆಚ್ಚು ಹಿಂದೂಗಳನ್ನು ಪ್ರಚೋದಿಸಬೇಕು." ಅದಕ್ಕೆ ಪ್ರತಿಯಾಗಿ ಅಂದಿನ ಬ್ರಿಟಿಷ್ ಕಮಾಂಡರ್-ಇನ್-ಚೀಫ್, ಹಿಂದೂ ಮಹಾಸಭಾ ಮತ್ತು ಅದರ ನಾಯಕ ಬ್ಯಾರಿಸ್ಟರ್ ಸಾವರ್ಕರ್ ಹಿಂದೂಗಳು ಬ್ರಿಟೀಷ್ ಸೇನೆಗೆ ಸೇರುವಂತೆ ಉತ್ತೇಜಿಸುವಲ್ಲಿ ವಹಿಸಿದ ಪಾತ್ರಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದ ಬಗ್ಗೆ ಹಿಂದೂ ಮಹಾಸಭಾದ ದಾಖಲೆಗಳಲ್ಲಿ ನಮೂದಾದ ಬಗ್ಗೆ ಶಾಮ್ಯೂಯಲ್ ಇಸ್ಲಾಂ ಅವರ ಲೇಖನವನ್ನು ಕುಲಕರ್ಣಿಯವರು ಉಲ್ಲೇಖಿಸಿದ್ದಾರೆ. ಆಗಸ್ಟ್ 1942 ರಲ್ಲಿ ಆರಂಭವಾದ ಕ್ವಿಟ್ ಇಂಡಿಯಾ ಚಳುವಳಿಗೆ ಪ್ರತಿಕ್ರಿಯೆಯಾಗಿ, ಸಾವರ್ಕರ್ ಅವರು ದೇಶಾದ್ಯಂತ ಹಿಂದೂ ಮಹಾಸಭಾದ ಸ್ಥಳೀಯ ಸಂಸ್ಥೆಗಳ ಸದಸ್ಯರುˌ ಶಾಸಕರು ಮತ್ತು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೆ ತಮ್ಮ ಸ್ಥಾನಗಳಲ್ಲೇ ಮುಂದುವರೆಯುವಂತೆ ಆದೇಶಿಸಿದ್ದರಂತೆ. ಆ ಸಮಯದಲ್ಲಿ ಜಪಾನ್ ಭಾರತಕ್ಕೆ ಹತ್ತಿರದಲ್ಲಿರುವ ಅನೇಕ ಆಗ್ನೇಯ ಏಷ್ಯಾದ ದೇಶಗಳನ್ನು ವಶಪಡಿಸಿಕೊಂಡಾಗ, ಬೋಸ್ ಜರ್ಮನಿಯಿಂದ ಜಪಾನ್‌ಗೆ ಹೋಗಲು ಏರ್ಪಾಡುಗಳನ್ನು ಮಾಡುತ್ತಿದ್ದರು. ಅದರ ಮುಂದಿನ ವರ್ಷ ಅಕ್ಟೋಬರ್‌ನಲ್ಲಿ ನೇತಾಜಿಯವರ ಭಾರತೀಯ ರಾಷ್ಟ್ರೀಯ ಸೇನೆಯು ಬ್ರಿಟಿಷ್ ಪಡೆಗಳ ಮೇಲೆ ದಾಳಿ ಆರಂಭಿಸಿತ್ತು. ಈ ಸನ್ನಿವೇಶದಲ್ಲಿ ಸಾವರ್ಕರ್ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಹಿಂದೂಗಳಿಗೆ ತಮ್ಮ ಹುದ್ದೆಗಳಲ್ಲಿ ಮುಂದುವರೆಯುವಂತೆ ಸೂಚನೆ ನೀಡಿದ್ದಷ್ಟೇ ಅಲ್ಲದೆ, ನೇತಾಜಿಯವರ ಸೈನಿಕರನ್ನು ಹತ್ಯೆ ಮಾಡಲು ಬ್ರಿಟಿಷ್ ಸಶಸ್ತ್ರ ಪಡೆಗಳಿಗೆ ನೇಮಕಾತಿ ಶಿಬಿರಗಳನ್ನು ಈಶಾನ್ಯ ಭಾರತದಲ್ಲಿ ಆಯೋಜಿಸುವಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದರೆಂದು ಕುಲಕರ್ಣಿಯವರು ಬರೆದಿದ್ದಾರೆ. ಕೇವಲ ಒಂದೇ ವರ್ಷದಲ್ಲಿ ಸಾವರ್ಕರ್ ಅವರು ಮಥುರಾದಲ್ಲಿ ಮಹಾಸಭಾದ ಪ್ರಯತ್ನದ ಫಲವಾಗಿ ಒಂದು ಲಕ್ಷ ಹಿಂದೂಗಳನ್ನು ಬ್ರಿಟಿಷ್ ಸಶಸ್ತ್ರ ಪಡೆಗೆ ಸೇರಿಸಿಕೊಳ್ಳಲಾಗಿದೆ ಎಂದು ಹೆಮ್ಮೆಯ ಮಾತನ್ನಾಡಿದ್ದರಂತೆ. ಸಾವರ್ಕರ್ ಅವರ ಹಿಂದೂ ಮಹಾಸಭಾದ ಸಹಯೋಗದಿಂದ ಬ್ರಿಟಿಷ್ ಸೇನೆಯು, ನೇತಾಜಿ ಬೋಸ್‌ ಅವರ 'ಇಂಡಿಯನ್ ನ್ಯಾಷನಲ್ ಆರ್ಮಿ'ಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿತ್ತು. ಆನಂತರ ಕೆಂಪು ಕೋಟೆಯಲ್ಲಿ ಆಯೋಜಿಸಲಾಗಿದ್ದ ನೇತಾಜಿಯವರ ಸೇನಾ ಅಧಿಕಾರಿಗಳ ಸಾರ್ವಜನಿಕ ಸಭೆಯು ಬ್ರಿಟಿಷ್ ಸಶಸ್ತ್ರ ಪಡೆಗಳಲ್ಲಿದ್ದ ಭಾರತೀಯ ಸೈನಿಕರಲ್ಲಿ ರಾಜಕೀಯ ಆತ್ಮಸಾಕ್ಷಿಯನ್ನು ಹುಟ್ಟುಹಾಕಿತು. ಇದು ೧೯೪೬ ರಲ್ಲಿ ರಾಯಲ್ ಇಂಡಿಯನ್ ನೌಕಾ ದಂಗೆಯನ್ನು ಪ್ರಚೋದಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಆನಂತರ ಬ್ರಿಟಿಷರು ಭಾರತವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಂಡರು ಎಂದು ಕುಲಕರ್ಣಿ ವಿವರಿಸಿದ್ದಾರೆ. ಆನಂತರ ಮುಸ್ಲಿಮ್ ಲೀಗ್ ಪಕ್ಷವು ಪಾಕಿಸ್ತಾನ ಸ್ಥಾಪನೆಯ ನಿರ್ಣಯವನ್ನು ಅಂಗೀಕರಿಸಿದಾಗಲೂ ಕೂಡ ಸಾವರ್ಕರ್ ಅವರ ಹಿಂದೂ ಮಹಾಸಭಾˌ ಮುಸ್ಲಿಂ ಲೀಗ್ ಜೊತೆಗಿನ ತನ್ನ ರಾಜಕೀಯ ಸ್ನೇಹ ಮುಂದುವರೆಸಿದ ಬಗ್ಗೆ ಕುಲಕರ್ಣಿಯವರು ವಿವರಿಸಿದ್ದಾರೆ. ಸಾವರ್ಕರ್ ಮತ್ತು ಹಿಂದೂ ಮಹಾಸಭಾಗಳ ಬ್ರಿಟಿಷರೊಂದಿಗಿನ ಸಕ್ರಿಯ ಸಂಬಂಧವನ್ನು ಅರ್ಥಮಾಡಿಕೊಳ್ಳಬಹುದುˌ ಏಕೆಂದರೆ ಹಿಂದುತ್ವ ಪ್ರತಿಪಾದನೆ ಮಾಡುವ ಗುಂಪುಗಳ ಮೊದಲ ಶತ್ರುಗಳು ಮುಸ್ಲಿಮರೇ ಹೊರತು ಬ್ರಿಟಿಷರಾಗಿರಲಿಲ್ಲ. ಆದರೆ ಮುಸ್ಲಿಮ್ ಲೀಗ್ ಕೈಗೊಂಡ ದೇಶ ವಿಭಜನೆಯ ಸಂದಿಗ್ಧ ನಿರ್ಣಯದ ನಂತರವೂ ಹಿಂದೂ ಮಹಾಸಭಾ ಮುಸ್ಲಿಮ್ ಲೀಗ್‌ನೊಂದಿಗೆ ಹೊಂದಿದ್ದ ಅನ್ಯೋನ್ಯ ಸಂಬಂಧವು ಅನೇಕರ ಹುಬ್ಬೇರಿಸುವಂತದ್ದು ಎನ್ನುತ್ತಾರೆ ಕುಲಕರ್ಣಿ. ಇಡೀ ದೇಶ ಗಾಂಧಿ ಕರೆಕೊಟ್ಟ 'ಬ್ರಿಟೀಷರೆ ಭಾರತ ಬಿಟ್ಟು ತೊಲಗಿರಿ' ಚಳುವಳಿಯಲ್ಲಿ ಭಾಗವಹಿಸುತ್ತಿತ್ತು. ಭಾರತ ಬಿಟ್ಟು ತೊಲಗಿ ಚಳುವಳಿಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರನ್ನು ಬ್ರಿಟೀಷ್ ಸರಕಾರ ಬಂಧಿಸುತ್ತಿದ್ದಾಗ ಸಾವರ್ಕರ್ ನೇತೃತ್ವದ ಹಿಂದೂ ಮಹಾಸಭಾˌ ಮುಸ್ಲಿಂ ಲೀಗ್‌ನೊಂದಿಗೆ ಸೇರಿ ಸಿಂಧ್ ಮತ್ತು ಬಂಗಾಳದಲ್ಲಿ ಪ್ರಾಂತೀಯ ಸರ್ಕಾರಗಳನ್ನು ನಡೆಸುತ್ತಿತ್ತು. ತಮ್ಮ ಈ ನಿರ್ಧಾರವವನ್ನು ಸಾವರಕರ್ ಅವರು "ಪ್ರಾಯೋಗಿಕ ರಾಜಕೀಯ" ಎಂದು ಸಮರ್ಥಿಸಿಕೊಂಡಿದ್ದರು ಮತ್ತು ಅದನ್ನು "ಸಮಂಜಸವಾದ ರಾಜಿ ಮೂಲಕ ಮುನ್ನಡೆ" ಸಾಧಿಸುವ ಕ್ರಮವೆಂದು ಹೇಳಿದ್ದಾಗಿ ಪವನ್ ಕುಲಕರ್ಣಿ ವಿವರಿಸಿದ್ದಾರೆ. ಸಾವರಕರ್ ಅವರ ಈ ಹೇಳಿಕೆಯು ಶುದ್ಧ ಅವಕಾಶವಾದಿತನವನ್ನು ಪ್ರದರ್ಶಿಸುತ್ತದೆ. ಸಾವರ್ಕರ್ ಅವರು ತಮ್ಮ ಮುಸ್ಲಿಮ್ ಲೀಗ್ ಜೊತೆಗಿನ ನಂಟು ಹಾಗೂ ಅವರು ಮತ್ತು ಅವರ ಪಕ್ಷದ ಆಳವಾದ ಹಿಂದುತ್ವ ಸಿದ್ಧಾಂತದ ನಂಬಿಕೆಯ ಹೊರತಾಗಿಯೂ ಮುಸ್ಲಿಮರನ್ನು ಭಾರತೀಯ ನಾಗರಿಕರೆಂದು ಎಂದೂ ಪರಿಗಣಿಸಲಿಲ್ಲ. ಆದಾಗ್ಯೂ ಹಿಂದೂ ಮಹಾಸಭಾ ಮತ್ತು ಮುಸ್ಲಿಂ ಲೀಗ್‌ ಎರಡೂ ಅನೇಕ ಸಾಮ್ಯತೆ ಹೊಂದಿದ್ದವು. ಎರಡೂ ಪಕ್ಷಗಳು ಬ್ರಿಟೀಷ್ ವಸಾಹತುಶಾಹಿ ಸರಕಾರದ ವಿರುದ್ದ ಸ್ವಾತಂತ್ರ ಹೋರಾಟಕ್ಕೆ ಯಾವುದೇ ಕೊಡುಗೆಯನ್ನು ನೀಡಲಿಲ್ಲ ಮತ್ತು ಎರಡೂ ಕೋಮುವಾದಿ ಪಕ್ಷಗಳಾಗಿದ್ದು ಸ್ವಾತಂತ್ರ್ಯದ ನಂತರ ಭಾರತವು ಅವಿಭಜಿತವಾಗಿ ಉಳಿಯುವುದನ್ನು ಅವೆರಡೂ ಪಕ್ಷಗಳು ವಿರೋಧಿಸುತ್ತಿದ್ದವು. 1943 ರಲ್ಲಿ ಸಿಂಧ್ ಅಸೆಂಬ್ಲಿಯು ಭಾರತವನ್ನು ವಿಭಜಿಸಿ ಮುಸ್ಲಿಮರಿಗಾಗಿ ಪ್ರತ್ಯೇಕ ಪಾಕಿಸ್ತಾನ ರಾಷ್ಟ್ರ ಸ್ಥಾಪಿಸುವ ನಿರ್ಣಯವನ್ನು ಅಂಗೀಕರಿಸಿದ ಬಗ್ಗೆ ಕುಲಕರ್ಣಿಯವರು ಪ್ರಾಸ್ತಾಪಿಸಿದ್ದಾರೆ. ಆನಂತರವೂ ಹಿಂದೂ ಮಹಾಸಭಾಕ್ಕೆ ಸೇರಿದ ಮಂತ್ರಿಗಳು ಸಮ್ಮಿಶ್ರ ಸರ್ಕಾರದ ತಮ್ಮ ಸ್ಥಾನಗಳಲ್ಲಿ ಗಟ್ಟಿಯಾಗಿ ಮುಂದುವರೆದಿದ್ದು ಆಶ್ಚರ್ಯದ ಸಂಗತಿಯೇನಲ್ಲ. ಏಕೆಂದರೆˌ ಸಾವರಕರ್ ತಮ್ಮ ದ್ವಿರಾಷ್ಟ್ರ ಸಿದ್ಧಾಂತವನ್ನು ಹದಿನಾರು ವರ್ಷಗಳ ಮೊದಲೇ ಪ್ರತಿಪಾದಿಸಿದ್ದರು ಎನ್ನುತ್ತಾರೆ ಕುಲಕರ್ಣಿ. ಆದರೆ ಆಶ್ಚರ್ಯದ ಸಂಗತಿ ಏನೆಂದರೆˌ ಹಿಂದೂಗಳಿಗೆ ಭಾರತ ಮತ್ತು ಮುಸ್ಲಿಮರಿಗೆ ಪಾಕಿಸ್ತಾನವೆಂಬ ದ್ವಿರಾಷ್ಟ್ರ ಸಿದ್ಧಾಂತ ಮೊದಲು ಪ್ರತಿಪಾದಿಸಿದ್ದ ಸಾವರ್ಕರ್ ಅವರು ಅಂತಿಮವಾಗಿ ಭಾರತ ವಿಭಜನೆಗೊಂಡಾಗ ದೇಶ ವಿಭಜನೆಗೆ ಗಾಂಧಿ ಕಾರಣವೆಂದು ಆರೋಪಿಸಿದ್ದು. ಸಾವರ್ಕರ್ ಅವರ ಈ ಮಿತ್ಯಾರೋಪವು ಅವರ ಖಾಸಗಿ ಗೆಳೆಯ ನಾಥೂರಾಮ್ ಗೋಡ್ಸೆ ಸೇರಿದಂತೆ ಅನೇಕ ಹಿಂದೂ ಮೂಲಭೂತವಾದಿಗಳಲ್ಲಿ ಗಾಂಧಿ ವಿರುದ್ಧ ದ್ವೇಷದ ಕಿಡಿ ಹೊತ್ತಿಸಿ ಅಂದು ಗಾಂಧಿಯನ್ನು ಅದು ಬಲಿಪಡೆಯುವಂತಾಯಿತು. ಇಷ್ಟಾದ ಮೇಲೂ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ಸಾವರಕರ್ ಒಬ್ಬ ದೇಶಭಕ್ತ ˌ ರಾಷ್ಟ್ರೀಯವಾದಿ ಮತ್ತು "ವೀರ" ನಾಗಿ ಕಂಡರೆ ಅದು ಬಿಜೆಪಿಯ ದೃಷ್ಟಿ ಅಥವಾ ಬೌದ್ದಿಕ ದೋಷ ಅಥವಾ ಅದು ಅವರ ವಿಕೃತ ಸಿದ್ಧಾಂತವೆಂದೇ ಹೇಳಬೇಕಾಗುವುದು. ►►ಇದನ್ನೂ ಓದಿ: ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement