Advertisement

'ನರಮೇಧ ನಾಗರೀಕತೆ'ಯ ಫೋಟೋಗಳು ಮತ್ತು ಫೋಟೊಗ್ರಾಫರುಗಳು

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಕಾಯಬೇಕಾದ ಸರ್ಕಾರವೇ ಬಂದೂಕು ಹಿಡಿದು ಜನರ ಬೇಟೆಗೆ ಹೊರಟರೆ, ಒಲೆ ಉರಿಯುವ ಬದಲು ಧರೆ ಹತ್ತಿ ಉರಿವ ತೊಡಗಿದರೆ, ಅಸಹಾಯಕರ ಕೊಲೆಗೆ ಕಣ್ಣೀರಿಡುವ ಬದಲು ಹೆಣಗಳ ಮೇಲೆ ವಿಕೃತ ನರ್ತನ ಮಾಡತೊಡಗಿದರೆ, ನಿಷ್ಪಕ್ಷಪತಿಯಾಗಿರಬೇಕಾದ ಮಾಧ್ಯಮ ಕೊಲೆಗಾರರ ವಕ್ತಾರರಾದರೆ.. ಆ ದೇಶದ ಆತ್ಮ ಸತ್ತಿದೆ ಎಂದರ್ಥ. ಸಮಾಜ ಕೊಳೆಯತೊಡಗಿದೆ ಎಂದರ್ಥ. ಹಾಗೂ ಆ ದೇಶ ನರಮೇಧದ ಹೊಸ್ತಿಲಲ್ಲಿದೆ ಎಂದರ್ಥ.. ಮುಸ್ಲಿಂ ದ್ವೇಷದ ಬೆಂಕಿಯನ್ನು ಹಚ್ಚುತ್ತಲೇ ಅಸ್ಸಾಮಿನಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ಹಿಮಂತ್ ಬಿಸ್ವಾಸ್ ಶರ್ಮನ ಬಿಜೆಪಿ ಸರ್ಕಾರ ಕಳೆದ ಎರಡು ವಾರಗಳಿಂದ ಅಸ್ಸಾಮಿನಲ್ಲಿ ಹತ್ತಾರು ವರ್ಷಗಳಿಂದ ವಾಸಮಾಡುತ್ತಿರುವ ರೈತಾಪಿಗಳನ್ನು ಬಾಂಗ್ಲಾದೇಶದಿಂದ ಅಕ್ರಮ ಮುಸ್ಲಿಂ ವಲಸೆಕೋರರು ಎಂದು ಆರೋಪಿಸಿ ಪೊಲೀಸ್ ದಮನ ಬಳಸಿ ಎತ್ತಂಗಡಿ ಮಾಡುತ್ತಿದೆ. ಆ ಜಮೀನುಗಳನ್ನು ಹಿಂದೂಗಳಿಗೆ ಕೊಡಲಾಗುವುದು ಎಂದು ಘೋಷಿಸಿದೆ. ಆ ಮೂಲಕ ಬಡ ಹಿಂದೂಗಳ ಅಸಹಾಯಕತೆಯನ್ನು ಕೋಮುವಾದದ ಪಾಶವೀತನಕ್ಕೆ ಗೊಬ್ಬರವಾಗಿ ಬಳಸಿಕೊಳ್ಳುತ್ತಿದೆ. ಮತ್ತೊಂದು ಕಡೆ ಪೊಲೀಸರಲ್ಲೂ ಕೂಡ ಕೇವಲ ಸರ್ಕಾರೀ ಆದೇಶದ ಪಾಲನೆಯ ಉದ್ದೇಶ ಮಾತ್ರವಲ್ಲದೇ ಅಪಾರವಾದ ಮುಸ್ಲಿಂ ದ್ವೇಷದ ಸಿದ್ಧಾಂತವೂ ತುಂಬಿಕೊಂಡಿದೆ. ಹೀಗಾಗಿ ಪೊಲೀಸರ ವರ್ತನೆಯಲ್ಲಿ ಸರ್ಕಾರೀ ಜಮೀನನ್ನು ವಶಮಾಡಿಕೊಳ್ಳುವ ಕರ್ತವ್ಯಪಾಲನೆಯ ಜೊತೆಗೆ ಮುಸ್ಲಿಮರ ವಿರುದ್ಧ ಯುದ್ಧ ಮಾಡಿ ದೇಶವನ್ನು ರಕ್ಷಿಸಿಕೊಳ್ಳುತ್ತಿರುವ ಉಮೇದೂ ಸೇರಿಕೊಂಡಿದೆ. ಈ ದ್ವೇಶದ ಕಣ್ಣಿಗೆ ಅಸಹಾಯಕ, ನಿರ್ಗತಿಕ, ಇತರರಂತೆ ಈ ದೇಶದಲ್ಲಿ ಹಲವು ತಲೆಮಾರುಗಳಿಂದ ವಾಸ ಮಾಡಿಕೊಂಡು ಬಂದಿರುವ ಮೊಯಿನುಲ್ ಹಖ್ ಕೇವಲ ಮುಸ್ಲಿಂ ಎಂಬ ಕಾರಣಕ್ಕೆ ಉಗ್ರಗಾಮಿಯಾಗಿ ಕಾಣುತ್ತಾನೆ. ಶೇಕ್ ಫರೀದ್ ಎಂಬ ೧೪ ವರ್ಷದ ಬಾಲಕನ ಜೋಬಲ್ಲಿ ಭಾರತದ ನಾಗರಿಕ ಎಂಬ ಪುರಾವೆ ನೀಡುವ ಆಧಾರ್ ಕಾರ್ಡ್ ಇದ್ದರೂ ಕಾಣುವುದಿಲ್ಲ. ಹಿಂದೂರಾಷ್ಟ್ರದ ಸೈದ್ಧಾಂತಿಕ ಅಮಲನ್ನು ತುಂಬಿಕೊಂಡಿರುವ ಅಸ್ಸಾಮಿನ ಪೊಲೀಸರು ಇಬ್ಬರನ್ನೂ ಸುಟ್ಟುಕೊಲ್ಲುತ್ತಾರೆ. ಈ ಕಾರ್ಯಾಚರಣೆಯನ್ನು ದಾಖಲಿಸಲು ಹೋಗಿದ್ದ ಬಿನಯ್ ಶಂಕರ್ ಬನಿಯಾ ಎಂಬ ಫೋಟೊಗ್ರಾಫರ್ ಕ್ಯಾಮೆರಾ ಹಿಂದೆ ಇದ್ದು ನಡೆದದ್ದನ್ನು ದಾಖಲಿಸುವ ಫೋಟೋಗ್ರಾಫರ್ ಕ್ಯಾಮಾರಾ ಮುಂದೆಯೂ ಕಾರ್ಯಾಚರಣೆ ಮಾಡುತ್ತಾನೆ. ಮುಸ್ಲಿಂ ದ್ವೇಶದಲ್ಲಿ ಉಮ್ಮಳಿಸುತ್ತಾ ಮೊಯಿನುಲ್ ಖಾನ್ ಹೆಣದ ಮೇಲೆ ಕುಪ್ಪಳಿಸಿ ಅಬ್ಬರಿಸುತ್ತಾನೆ. ಈ ಪಾಶವೀತನವನ್ನು ಖಂಡಿಸಬೇಕಾದ ಮುಖ್ಯಮಂತ್ರಿ ಬಲಿಯಾದ ಅಮಾಯಕರ ಮೇಲೆ ಇಸ್ಲಾಮಿಕ್ ಉಗ್ರಗಾಮಿತನದ ಆರೋಪವನ್ನು ಹೊರಿಸುತ್ತಾನೆ. ಹೀಗೆ ಮಾಡದೆ ಈ ದೇಶವನ್ನು ಉಳಿಸಲು ಸಾಧ್ಯವಿಲ್ಲವೆಂದು ಸಮರ್ಥಿಸಿಕೊಳ್ಳುತ್ತಾ ಕೋಮುವಾದಿ ಕ್ರೌರ್ಯಕ್ಕೆ ರಾಷ್ಟ್ರರಕ್ಷಣೆಯ ಕವಚ ತೊಡಿಸುತ್ತನೆ. ಹಾಗೂ ಒಂದು ದೊಡ್ಡ ಅಲ್ಪಸಂಕ್ಯಾತ ಸಮುದಾಯವನ್ನೇ ರಾಷ್ಟ್ರದ ಪರಿಕಲ್ಪನೆಯಿಂದ ಅನ್ಯೀಕರಿಸುತ್ತಾನೆ. ಮುಂದೆಯೂ ನಡೆಯಲಿರುವ ಇಂಥಾ ಕಾನೂನುಬಾಹಿರ ನರಹತ್ಯೆಗಳನ್ನು ಸರ್ವೇಸಾಮಾನ್ಯವಾಗಬೇಕದ ಅತ್ಯಗತ್ಯವಾದ ನಡೆಗಳೆಂಬ ಮುನ್ಸೂಚನೆ ನೀಡುತ್ತನೆ. ೧೯೮೩ರಲ್ಲಿ ನೆಲ್ಲಿ, ೮೪ರಲ್ಲಿ ಸಿಖ್ ಹತ್ಯಾಕಾಂಡ, ೯೨ ರ ಮುಂಬೈಹಾಗೂ ೨೦೦೨ರ ಗುಜರಾತ್ ನರಮೇಧಗಳಲ್ಲಿ ಅಪವಾದವೆಂಬಂತೆ ಕಾಣಿಸಿಕೊಂಡ ಸ್ವಾತಂತ್ರ್ಯೋತ್ತರ ಭಾರತದ ನರಮೇಧದ ಚಹರೆಗಳು ೨೦೧೪ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ನಿತ್ಯವಿದ್ಯಮಾನವಾಗಿಬಿಟ್ಟಿದೆ. ಇಂಥ ಆಮಾನವೀಯ ನರಮೇಧಗಳನ್ನು ಸಮಾಜ ಒಪ್ಪಿಕೊಳ್ಳತೊಡಗುತ್ತಿದ್ದಂತೆ ಅಂಥಾ ಸಮಾಜ ಒಂದು ದೊಡ್ಡ ನರಮೇಧಕ್ಕೆ ಸಜ್ಜಾಗುತ್ತಿದೆಯೆಂದೇ ಆರ್ಥ ಎಂದು ಹಿಟ್ಲರನ ಜರ್ಮನಿ ಹಾಗೂ ೯೪ರ ರವಾಂಡಾ ಸಾಬೀತು ಮಾಡಿದೆ. ಹಿಟ್ಲರನ ಜರ್ಮನಿ, ಹುಟುಗಳ ರವಾಂಡಾ ಮತ್ತು ಭಾರತ ?! ಹಿಟ್ಲರನ ಜರ್ಮನಿಯಲ್ಲಿ ೧೯೪೩-೪೫ರ ನಡುವಿನ ಕೇವಲ ಮೂರು ವರ್ಷಗಳಲ್ಲಿ ೬೦ ಲಕ್ಷ ಯೆಹೂದಿಗಳನ್ನು ನಾಜಿಗಳು ಕೊಂದುಹಾಕಿದರು. ಬಹುಸಂಖ್ಯಾತ ಜರ್ಮನ್ ಸಮಾಜದ ಸಮ್ಮತಿ ಮತ್ತು ಪಾಲುದಾರಿಕೆಯೊಂದಿಗೆ.. ಹಾಗೆಯೇ, ಆಫ್ರಿಕಾದ ರವಾಂಡಾ ದೇಶದಲ್ಲಿ ೧೯೯೪ರಲ್ಲಿ ಕೇವಲ ಮೂರು ತಿಂಗಳಲ್ಲಿ ಬಹುಸಂಖ್ಯಾತ ಹುಟು ಜನಾಂಗೀಯರು ೧೦ ಲಕ್ಷ ಅಲ್ಪಸಂಖ್ಯಾತ ಟುಟ್ಸಿ ಗಳನ್ನು ಹಾಗೂ ೬೦,೦೦೦ ಕ್ಕೂ ಹೆಚ್ಚು ಉದಾರವಾದಿ ಹುಟುಗಳನ್ನು ಕೊಂದುಹಾಕಿದರು. ಇವೆಲ್ಲವನ್ನೂ ನರಮೇಧ- ಜಿನೋಸೈಡ್ ಎಂದು ಈಗ ಇತಿಹಾಸಕಾರರೂ ಮತ್ತು ವಿಶ್ವಸಂಸ್ಥೆಯೂ ವರ್ಗೀಕರಿಸುತ್ತದೆ. ಆದರೆ ಇದು ಇತಿಹಾಸಕ್ಕೆ ಸಂದುಹೋದ ಸಂಗತಿಯಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತವನ್ನೂ ಒಳಗೊಂಡಂತೆ ಜಗತ್ತಿನ ಹಲವಾರು ಪ್ರಜಾತಂತ್ರ ದೇಶಗಳಲ್ಲಿ ಬಹುಸಂಖ್ಯಾತ ದುರಭಿಮಾನಿ ಸರ್ಕಾರಗಳು ಆಳ್ವಿಕೆಗೆ ಬಂದಿರುವುದರಿಂದ ಜಗತ್ತಿನಲ್ಲಿ ಮತ್ತೆ ನರಮೇಧಗಳ ಸಂಭವನೀಯತೆ ಹೆಚ್ಚಿದೆಯೆಂದು ಸ್ವತಂತ್ರ ಸಂಸ್ಥೆಗಳು ಆತಂಕ ವ್ಯಕ್ತಪಡಿಸುತ್ತಿವೆ. ಹಾಗೂ ಆಧುನಿಕ ಸಮಾಜದಲ್ಲಿ ಅಂಥ ಚಹರೆಗಳನ್ನು ಅಧ್ಯಯನ ಮಾಡಿ ಜಗತ್ತಿಗೆ ಅದರ ಬಗ್ಗೆ ಮುನ್ಸೂಚನೆ ಕೊಡುವ ಪ್ರಯತ್ನಗಳನ್ನೂ ಕೂಡ ಪ್ರಾರಂಭಿಸಲಾಗಿದೆ. ಜಿನೋಸೈಡ್ ಜಗತ್ತು: ಪ್ರಪಂಚ ಮಟ್ಟದಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮತ್ತು ಜಿನೋಸೈಡ್ ವಾಚ್ ಎಂಬ ಸಂಸ್ಥೆ ಜಿನೋಸೈಡ್ ಸಂದರ್ಭವನ್ನು ಮೂರು ವರ್ಗಗಳಾಗಿ ವಿಂಗಡಿಸಿವೆ. ಅದರಲ್ಲಿ ಅತ್ಯಂತ ಗಂಭೀರವಾದ ಘಟ್ಟ ಜಿನೋಸೈಡ್ ಎಮರ್ಜೆನ್ಸಿ ಹಂತ. ಈ ಹಂತದಲ್ಲಿ ಹಾಲಿ ಟರ್ಕಿ, ಸಿರಿಯಾ, ಸೆಂಟರ್ಲ್ ಆಫ್ರಿಕನ್ ರಿಪಬ್ಲಿಕ್, ಮಯನ್ಮಾರ್ ದೇಶಗಳಿವೆ. ಇದಕ್ಕೆ ಮುಂಚಿನ ಹಂತ ಜಿನೋಸೈಡ್ ವಾರ್ನಿಂಗ್ ಹಂತ. ಸದ್ಯ ಇಥಿಯೋಪಿಯಾ ದೇಶದಲ್ಲಿ ಅಂಥಾ ಸಂದರ್ಭವಿದೆ. ಅದಕ್ಕೆ ಪೂರ್ವಭಾವಿಯಾದ ಹಂತ ಜಿನೋಸೈಡ್ ವಾಚ್ ಘಟ್ಟ. ಭಾರತದ ಕಾಶ್ಮೀರ ಹಾಗೂ ಅಸಾಮಿನಲ್ಲಿ ಕಳೆದ ಒಂದೆರಡು ವರ್ಷಗಳಲ್ಲಿ ಈ ಬಗೆಯ ಪರಿಸ್ಥಿತಿ ಉದ್ಭವವಾಗಿದೆಯೆಂದು ಈ ವರದಿ ಹೇಳುತ್ತಿದೆ. ಹಾಗಿದ್ದಲ್ಲಿ ಜಿನೋಸೈಡ್ ಎಮರ್ಜೆನ್ಸಿ ಹಾಗೂ ವಾರ್ನಿಂಗ್ ಹಂತಗಳಲ್ಲಿರುವ ದೇಶಗಳಿಗೆ ಹೋಲಿಸಿಕೊಂಡಲ್ಲಿ ಭಾರತದ ಪರಿಸ್ಥಿತಿ ಸದ್ಯಕ್ಕೆ ಅಪಾಯಕಾರಿ ಹಂತಕ್ಕೆ ಮುಟ್ಟಿಲ್ಲವೆಂದು ಸಮಾಧಾನಿಸಿಕೊಳ್ಳಬಹುದೇ? ನರಮೇಧಿಗಳ ಚಹರೆಗಳು: ವಿಶ್ವಸಂಸ್ಥೆಯ ಪ್ರಕಾರ ಜಿನೋಸೈಡ್-ನರಮೇಧ ಎಂದರೆ : " ಒಂದು ರಾಷ್ಟ್ರೀಯ, ಜನಾಂಗಿಯ, ಧಾರ್ಮಿಕ ಅಥವಾ ವರ್ಣೀಯ ಗುಂಪನ್ನು, ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶಮಾಡುವ ಉದ್ದೇಶದಿಂದ ಈ ಕೆಳಗಿನ ಯಾವುದೇ ಕ್ರಮಗಳನ್ನು ಎಸಗುವುದನ್ನು ನರಮೇಧದ ಕ್ರಮ- ಜಿನೋಸೈಡಲ್ " ಎಂದು ಪರಿಗಣಿಸಲಾಗುವುದು: ಒಂದು ನಿರ್ದಿಷ್ಟ ಗುಂಪಿನ ಸದಸ್ಯರನ್ನು ಕೊಲ್ಲುವುದು; ಆ ಗುಂಪಿನ ಸದಸ್ಯರಿಗೆ ಗಂಭೀರವಾದ ಮಾನಸಿಕ ಅಥವಾ ದೈಹಿಕ ಹಾನಿಗಳನ್ನು ಉಂಟುಮಾಡುವುದು; ಆ ನಿರ್ದಿಷ್ಟ ಗುಂಪಿನ ಭೌತಿಕ ಅಸ್ಥಿತ್ವವು ಸಂಪೂರ್ಣವಾಗಿ ಅಥವಾ ಪಾಕ್ಷಿಕವಾಗಿ ನಾಶವಾಮಾಡಬೇಕೆಂಬ ಉದ್ದೇಶದಿಂದಲೇ ದುರ್ಭರ ಜೀವನಸ್ಥಿತಿಗತಿಗಳನ್ನು ಸೃಷ್ಟಿಸುವುದು; ಆ ನಿರ್ದಿಷ್ಟ ಗುಂಪಿನ ಸದಸ್ಯರ ಸಂತಾನ ವೃಧಿಯಾಗದಂತಹ ಕ್ರಮಗಳನ್ನು ಜಾರಿ ಮಾಡುವುದು ಅಥವಾಅ ಗುಂಪಿನ ಮಕ್ಕಳನ್ನು ಮತ್ತೊಂದು ಗುಂಪಿಗೆ ಹಸ್ತಾಂತರಿಸುವುದು. ಆದರೆ ಇಂಥಾ ಪರಿಸ್ಥಿತಿಯು ರಾತ್ರೋರಾತ್ರಿ ಸೃಷ್ಟಿಯಾಗುವುದಿಲ್ಲ. ಮತ್ತು ಇಂಥಾ ನರಮೇಧಗಳು ಆಯಾ ದೇಶಗಳ ದುರ್ಬಲ ಮತ್ತು ಅಲ್ಪಸಂಖ್ಯಾತ ವರ್ಗಗಳ ಮೇಲೆ ಬಹುಸಂಖ್ಯಾತ ಸಮುದಾಯಕ್ಕೆ ಸೇರಿದ ಹಂತಕ ಪಡೆಗಳು ಬಹುಪಾಲು ಜನರ ಸಮ್ಮತಿಯೊಂದಿಗೆ ಹಾಗೂ ಪ್ರಭುತ್ವದ ಸಕ್ರಿಯ ಅಥವಾ ಪರೋಕ್ಷ ಭಾಗೀದಾರಿಕೆಯೊಂದಿಗೆ ನಡೆಸುತ್ತಾರೆ. ಉದಾಹರಣೆಗೆ, ರವಂಡಾ ದೇಶದಲ್ಲಿ ೧೯೯೪ರಲ್ಲಿ ನಡೆದ ಟುಟ್ಸಿ ಜನಾಂಗದ ನರಮೇಧವನ್ನು ವರದಿ ಮಾಡಿದ ಬಿಬಿಸಿ ವರದಿಗಾರ ಫರ್ಗಲ್ ಕೇನ್ ಅವರು ನಂತರ ಅದರ ಬಗ್ಗೆಯೇ - Season Of Blod- A Rwandan Journey ಎಂಬ ಪುಸ್ತಕ ಬರೆದರು. ಅದರಲ್ಲಿ ಅವರು ಆ ದೇಶದಲ್ಲಿ ನೂರು ದಿನಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಜನ ಹತ್ಯೆಯಾಗುವ ಮುಂಚೆ ನಡೆದ ಪ್ರಕ್ರಿಯೆಗಳನ್ನು ಹೀಗೆ ವಿವರಿಸುತ್ತಾರೆ: "... ಈ ರಕ್ತಸಿಕ್ತ ದೇಶದಲ್ಲಿ ಕೆಲ ವ್ಯಕ್ತಿಗಳಂತೂ ನಿಜಕ್ಕೂ ವಿಕೃತ ಮನಸ್ಸುಳ್ಳವರು. ಚಿಂದಿಯುಟ್ಟ ಬಡ ಜನರನ್ನೂ ಹಾಗೂ ಅನಕ್ಷರಸ್ಥ ರೈತಾಪಿ ಜನರನ್ನು ಟುಟ್ಸಿಗಳ ವಿರುದ್ಧ ದ್ವೇಶದಿಂದ ಕುದಿಯುವಂತೆ ಮಾಡುವುದು ಸುಲಭವೇ ಆಗಿತ್ತು. ಆದರೆ ನಾನು ಆ ದೇಶದಲ್ಲಿ ಭೇಟಿಯಾದ ಅತ್ಯಂತ ಕುತಂತ್ರೀ ಹಾಗೂ ಕ್ರೂರ ಜನರೆಂದರೆ ಆ ದೇಶದ ಸುಶಿಕ್ಷಿತ-ಪ್ರತಿಷ್ಠಿತ ವರ್ಗದ ಗಂಡಸರು ಮತ್ತು ಹೆಂಗಸರು . ಅವರುಗಳು ಅತ್ಯಂತ ನಾಜೂಕಿನ ಸಂಸ್ಕಾರವಂತರು. ಸಾಸಿವೆಯಷ್ಟು ಲೋಪವಿಲ್ಲದ ಶುದ್ಧ ಫ್ರೆಂಚಿನಲ್ಲಿ ಸಂಭಾಷಣೆ ಮಾಡ ಬಲ್ಲವರು. ಯುದ್ಧದ ಸ್ವರೂಪ ಮತ್ತು ಪ್ರಜಾತಂತ್ರದ ಬಗ್ಗೆ ಕೊನೆಯಿಲ್ಲದ ತಾತ್ವಿಕ ಚರ್ಚೆಗಳನ್ನು ನಡೆಸಬಲ್ಲವರು. ಆದರೆ ಅವರೆಲ್ಲರೂ ತಮ್ಮ ದೇಶದ ಸೈನಿಕರು ಮತ್ತು ರೈತಾಪಿಗಳಂತೆ ತಮ್ಮ ಸಹೋದರ ದೇಶವಾಸಿಗಳ ರಕ್ತಕೂಪದಲ್ಲಿ ಮಿಂದೇಳುತ್ತಿದ್ದರು." ಆದರೆ ಇಂಥಾ ಅನಾಗರೀಕ, ಆಮಾನುಷ ನರಮೇಧಗಳಿಗೆ ಬಹುಸಂಖ್ಯಾತರ ಜನಸಮ್ಮತಿ ದೊರೆಯುವುದಾದರೂ ಹೇಗೆ? ಜಗತ್ತಿನಾದ್ಯಂತ ನಡೆಯುತ್ತಿರುವ ಇಂಥ ನರಮೇಧಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿರುವ ಪ್ರೊಫೆಸರ್ ಹೆಲೆ ಫೇನ್ ಅವರು ಇದಕ್ಕೆ ಕಂಡುಕೊಂಡಿರುವ ಉತ್ತರವಿದು: " ನರಮೇಧಗಳು ಅಥವಾ ಇನ್ನಿತರ ಸಾಮೂಹಿಕ ಹಿಂಸಾಚಾರಗಳು ಇದ್ದಕ್ಕಿದ್ದಹಾಗೆಯೋ ಅಯೋಜಿತವಾಗಿಯೋ ಸಂಭವಿಸುವುದಿಲ್ಲ. ಅವು ದ್ವೇಷ ಹಾಗೂ ಭೀತಿಗಳ ಸಾಮಾಜಿಕ ಸಂದರ್ಭವನ್ನು ಹುಟ್ಟಿಸುವ ಪ್ರಕ್ರಿಯೆಯನ್ನು ಅನುಸರಿಸುತ್ತವೆ. ಇದು ಜನಮಾನಸದಲ್ಲಿ ಇತರ ಮನುಷ್ಯರನ್ನು ತಮ್ಮ ನೈತಿಕ ಹೊಣೆಗಾರಿಕೆಯ ಲೋಕದಿಂದ ಹೊರಗಿರಿಸುವ ತನಕ ನಡೆಯುತ್ತಲೇ ಇರುತ್ತದೆ". ನಮ್ಮವರ ಬಗ್ಗೆ ನಾವು ಸಹಜವಾಗಿ ಹೊಂದಿರುವ ನೈತಿಕ ಹೊಣೆಗಾರಿಕೆಯನ್ನು ಅನ್ಯರಿಗೆ ನಿರಾಕರಿಸಲು ಬೇಕಾದ ಮನಸ್ಥಿತಿ ಹಾಗು ಸಮರ್ಥನೆಗಳನ್ನು ಈ ಕಲ್ಪಿತ ದ್ವೇಷ, ಭೀತಿ ಮತ್ತು ಸಾಮಾಜಿಕ ಪೂರ್ವಗ್ರಹಗಳು ಬಿತ್ತುತ್ತವೆ. ಮನುಷ್ಯರು ಮೃಗವಾಗುವ ಹತ್ತು ಹಂತಗಳು: ಸಹವಾಸಿಗಳ ಈ ಅನ್ಯೀಕರಣ ಮತ್ತು ಪರಾಯೀಕರಣ ವು ಕೂಡಾ ಏಕಾಏಕಿ ಸಂಭವಿಸುವುದಿಲ್ಲ. ನರಮೇಧಗಳ ಬಗ್ಗೆ ನಿರಂತರವಾದ ಅಧ್ಯಯನ ನಡೆಸುತ್ತಿರುವ ಅಮೆರಿಕದ ಪ್ರೊಫೆಸರ್. ಗ್ರೆಗೋರೊ ಸ್ಟಾನ್ಟನ್ ಅವರು ನರಮೇಧದ ಕ್ಲೈಮಾಕ್ಸ್ ತಲುಪುವ ಮುನ್ನ ಸಮಾಜ ಹಾದು ಹೋಗುವ ಹತ್ತು ಹಂತಗಳನ್ನು ಹೀಗೆ ಗುರುತಿಸುತ್ತಾರೆ: 1.Classification-ಅನ್ಯ ಗುಂಪು ಯಾವುದು ಮತ್ತು ಏಕೆ ಎಂಬ ವರ್ಗೀಕರಣ 2. Symbolisation: ಆ ಗುಂಪಿನ ಚಹರೆಗಳ ಪಟ್ಟಿಕರಣ 3. Discrimination- ಆ ಗುಂಪಿನ ಸದಸ್ಯರ ಬಗ್ಗೆ ತಾರತಮ್ಯ ಅನುಸರಿಸುವುದು 4. Dehumanisation- ಆ ಗುಂಪನ್ನು ಅಪಮಾನಿಸುತ್ತಾ ಮಾನವೀಯ ಘನತೆಗಳನ್ನು ನಿರಾಕರಿಸುತ್ತಾ ಅಮಾನವೀಯಗೊಳಿಸುವುದು 5. Organisation- ಈ ತಾರತಮ್ಯ, ಧೋರಣೆಗಳನ್ನು ವ್ಯವಸ್ಥಿತವಾಗಿ ಸಂಘಟಿಸುವುದು 6.Polarisation- ಇವುಗಳ ಆಧಾರದ ಮೇಲೆ ನಾವೂ - ಅವರು ಎಂದು ಸಮಾಜವನ್ನು ಧುವೀಕರಿಸುವುದು 7. Preparation: ನರಮೇಧಕ್ಕೆ ಬೇಕಿರುವ ವ್ಯವಸ್ಥಿತ ಸಿದ್ಧತೆಗಳನ್ನು ಮಾಡಿಕೊಳ್ಳುವುದು 8. Parsecution: ಆ ಗುಂಪುಗಳನ್ನು ಶಾಸನಾತ್ಮಕವಾಗಿ ಬೇರ್ಪಡಿಸಿ ನಾಗರಿಕ ಹಕ್ಕುಗಳನ್ನು ನಿರಾಕರಿಸುತ್ತಾ ದಮನವನ್ನು ಪ್ರಾರಂಭಿಸುವುದು. 9. Extermination- ಸಾಮೂಹಿಕ ಕಗ್ಗೊಲೆ 10. Denial - ಹತ್ಯಾಕಾಂಡದ ನಿರಾಕರಣೆ, ಸಾಕ್ಷಿ ನಾಶ, ಸಾಕ್ಷಿ ಬೆದರಿಕೆ, ಇವೆಲ್ಲವೂ ಮುಂದಿನ ನರಮೇಧಕ್ಕೆ ತಯಾರಿಯೇ ಆಗಿರುತ್ತದೆ. ಇವೆಲ್ಲವೂ ಅನುಕ್ರಮ ಹಂತಗಳಾಗಿಯೂ ಕಾಣಿಸಿಕೊಳ್ಳಬಹುದು ಅಥವಾ ಒಂದೇ ಸಮಯದಲ್ಲಿ ಹಲವು ಹಂತಗಳ ಪ್ರಕ್ರಿಯೆಗಳೂ ಕಾಣಿಸಬಹುದು. ಈ ವೈಜಾನಿಕ ಹಂತೀಕರಣಗಳ ಹಾಗೂ ಅನ್ಯೀಕರಣದ ಹಿನ್ನೆಲೆಯಲ್ಲಿ ಭಾರತದ ಇತಿಹಾಸವನ್ನು ಮತ್ತು ವರ್ತಮಾನವನ್ನೂ ಅವಲೋಕಿಸಿದರೆ ಭಾರತವು ಒಂದು ಶಾಶ್ವತ ನರಮೇಧದ ಸಾಮಾಜಿಕ ಪರಿಸ್ಥಿತಿಯಲ್ಲೇ ಇದೆಯೆಂಬುದು ಗಾಬರಿಯುಂಟು ಮಾಡುತ್ತದೆ. ಮನುಸ್ಮೃತಿ- ನರಮೇಧದ ಸನಾತನ ಕೈಪಿಡಿ ವಾಸ್ತವದಲ್ಲಿ ಡಾ. ಸ್ಟಾನ್ಸನ್ ಅವರ ಜಿನೋಸೈಡ್ ನ ಮೊದಲ ಐದು ವರ್ಗೀಕರಣವು ಭಾರತದ ವೈದಿಕ ನಾಗರಿಕತೆಯ ಸಾಮಾಜಿಕ ವ್ಯವಸ್ಥೆಯ ಮಾರ್ಗದರ್ಶಿ ಸೂತ್ರವಾದ ಮನುಸ್ಮೃತಿಯ ಐದು ಅಧ್ಯಾಯಗಳಂತೆಯೇ ಭಾಸವಾಗುತ್ತದೆ. ಇದರ ಆಧಾರದಲ್ಲೇ ಭಾರತದ ದಲಿತ- ಅತಿ ಶೂದ್ರ ಸಮುದಾಯವನ್ನು ಹಾಗೂ ಮಹಿಳೆಯರನ್ನು ಸವರ್ಣೀಯ ಸಮಾಜ ಅನ್ಯೀ ಕರಿಸಿ, ಅವರ ಯಾವ ಬಟ್ಟೆ ಹಾಗೂ ವರ್ತನೆಗಳನ್ನು ಅನುಸರಿಸಬೇಕೆಂಬ ಚಹರೆಗಳನ್ನು ನಿರ್ದಿಷ್ಟೀ ಕರಿಸಿ, ಅವರ ಬಗ್ಗೆ ಬಹಿರಂಗ ಹಾಗೂ ದೇವಮಾನ್ಯ ತಾರತಮ್ಯಗಳನ್ನು ಅನುಸರಿಸುತ್ತಲೇ ಬಂದಿದ್ದಾರೆ. ಹಾಗೆಯೇ ಆ ಸಮುದಾಯಗಳನ್ನು ಅಮಾನವೀಕರಿಸುವ ಪದ್ಧತಿಗಳನ್ನು, ಜಾತಿ ವ್ಯವಸ್ಥೆಯ ರೂಪದಲ್ಲಿ ಸಂಘಟಿಸುತ್ತಲೇ ಬರಲಾಗಿದೆ. ಹೀಗೆ ಈ ದೇಶದಲ್ಲಿ ದಲಿತ ಮತ್ತು ಅತಿ ಶೂದ್ರ ಹಾಗೂ ಮಹಿಳೆಯರು ಜಾತಿ ವ್ಯವಸ್ಥೆಯ ಲಕ್ಷಣ ರೇಖೆಯನ್ನು ದಾಟಿದಲ್ಲಿ ಅವರ ನರಮೇಧ ನಡೆಸುವ ಶಾಶ್ವತ ಸಿದ್ಧತೆ ಬ್ರಾಹ್ಮಣಶಾಹಿ ಸವರ್ಣೀಯ ವ್ಯವಸ್ಥೆಯಲ್ಲಿ ಅಂತರ್ಗತವಾಗಿಯೇ ಇದ್ದಿದೆ. ಹೀಗಾಗಿಯೇ ಇತಿಹಾಸದಲ್ಲೂ, ಪುರಾಣದಲ್ಲೂ ದಲಿತರ ಮೇಲೆ ಹಾಗೂ ಆದಿವಾಸಿಗಳ ಮೇಲೆ ನಡೆದ ನರಮೇಧಗಳು ಭಾರತೀಯ ಸಮಾಜದಲ್ಲಿ ಪುಣ್ಯ ಸಂಕಥನಗಳಾಗಿ ಬಹುಸಂಖ್ಯಾತರ ಸಮ್ಮತಿಯನ್ನು ಗಿಟ್ಟಿಸಿಕೊಂಡಿವೆ. ಈ ದೇಶದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಬಹುಸಂಖ್ಯಾತ ಕೆಳಸ್ಥರದವರು ಬ್ರಾಹ್ಮಣಿಯ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಿದ ಶೂದ್ರ ಹಾಗೂ ದಲಿತರೇ ಆಗಿರುವುದರಿಂದ ಅವರ ಕಗ್ಗೊಲೆಗಳ ಬಗ್ಗೆ ಸವರ್ಣೀಯ ಸಮಾಜದಲ್ಲಿ ಸಕ್ರಿಯ ಸಮ್ಮತಿ ದೊರಕುತ್ತಿದೆ. ಇಲ್ಲದಿದ್ದರೆ ಸ್ವತಂತ್ರ ಭಾರತದಲ್ಲಿ ಪಾರ್ಟಿಷನ್ ಹಿಂಸಾಚಾರಗಳನಂತರ ೧೯೬೯ರಲ್ಲಿ ಗುಜರಾತಿನಲ್ಲಿ ಮುಸ್ಲಿಮರ ಮೇಲೆ ನಡೆದ ಹಿಂಸಾಚಾರಗಳಿಂದ ಮೊದಲುಗೊಂಡು ನೆಲ್ಲಿ, ಭಾಗಲ್ಪುರ್, ಮೊರಾದಾಬದ್, ಮುಂಬೈ, ಗುಜರಾತ್, ಮುಜಫ್ಫರ್ನಗರ್ ಹಾಗೂ ಇತ್ತೀಚೆಗೆ ದೆಹಲಿಯಲ್ಲಿ ನಡೆದ ಮುಸ್ಲಿಮರ ಏಕಪಕ್ಷೀಯ ಕಗ್ಗೊಲೆಗಳನ್ನೂ, ೧೯೬೭ರಲ್ಲಿ ಕೀಲ್ವೇನ್ಮಣಿಯಲ್ಲಿ ನಡೆದ ದಲಿತ ಹತ್ಯಾಕಾಂಡಗಳಿಂದ ಹಿಡಿದು, ಬೆಲ್ಚಿ, ಪಿಪ್ರಾ, ಲಕ್ಷಣ್‌ಪುರ್ ಬಾತೆ, ಕರಂಚೇಡು, ಕಂಬಾಲಪಲ್ಲಿ ಹಾಗೂ ಇತ್ತೀಚಿನ ಭೀಮಾ ಕೊರೆಗಾಂವ್ ಪ್ರಕರಣದವರೆಗೆ ನಡೆಯುತ್ತಲೇ ಇರುವ ನರಮೇಧಗಳನ್ನೂ, ಧುಲೆಯಿಂದ ಹಿಡಿಸು ಕಂಧಮಾಲ್ ವರೆಗೆ ನಡೆದ ಆದಿವಾಸಿ ಕ್ರಿಶ್ಚಿಯನ್ನರ ನರಮೇಧಗಳು, ೮೪ರಲ್ಲಿ ನಡೆದ ಸಿಖ್ ನರಮೇಧ, ಹಿಂದೂ ರಾಷ್ಟ್ರೀಯತೆಯನ್ನು ಒಪ್ಪದ ಕಾಶ್ಮೀರಿ, ನಾಗಾ, ಅಸಾಮೀ,ಗಳ ನಿರಂತರ ಹತ್ಯಾಕಾಂಡಗಳನ್ನೂ, ರೂಪಾ ಕನ್ವರ್ ಗಳಿಂದ ಹಿಡಿದು ಕುಟುಂಬದೊಳಗೆ ಹಾಗೂ ಬೀದಿಯಲ್ಲಿ ದಿನನಿತ್ಯ ಬಲಿಯಾಗುತ್ತಿರುವ ಲೆಕ್ಕಕ್ಕೂ ಸಿಕ್ಕದ ಮಹಿಳೆಯರ ನರಬಲಿಗಳನ್ನೂ... ...ಈ ಎಲ್ಲಕ್ಕೂ ಸಿಕ್ಕಿರುವ ಸವರ್ಣೀಯ ಸಮಾಜದ ಸಕ್ರಿಯ ಅಥವಾ ಪರೋಕ್ಷ ಸಮ್ಮತಿಯನ್ನೂ, ಈ ನರಮೇಧಗಳಲ್ಲಿ ಯಾವುದೇ ಶಿಕ್ಷಾಭಯವಿಲ್ಲದೆ ಪಾಲುಗೊಂಡ ಪ್ರಭುತ್ವದ ಭಾಗೀದಾರಿಕೆಯನ್ನೂ ಜಿನೋಸೈಡ್- ನರಮೇಧ ಎಂದಲ್ಲದೆ ಬೇರೆ ಹೇಗೆ ಅರ್ಥಮಾಡಿಕೊಳ್ಳುವುದು? ಈ ನರಮೇಧಗಳಿಗೆ ಬೇಕಾದ ಸಾಮಾಜಿಕ ಕಂಡಿಷನಿಂಗ್ ನಮ್ಮ ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯೊಳಗೇ ಇದೆ. ಹೀಗಾಗಿ ಈ ನಾಗರೀಕತೆಯೊಳಗೇ ಒಂದು Genocidal Instinct - ನರಮೇಧ ಸ್ವಭಾವ ಇಲ್ಲವೇ ಎಂಬ ಸಹಜ ಪ್ರಶ್ನೆ ಹುಟ್ಟುತ್ತದೆ. ಮೋದಿಭಾರತ ಮತ್ತು ನರಮೇಧ ನಾಗರಿಕತೆ ಗುಜರಾತ ನರಮೇಧದ ನಂತರವೂ ನರೇಂದ್ರ ಮೋದಿಯನ್ನು ಮೂರು ಬಾರಿ ಮುಖ್ಯಮಂತ್ರಿಯಾಗಿ ಮಾತ್ರವಲ್ಲದೇ ಎರಡೆರಡು ಬಾರಿ ಪ್ರಧಾನ ಮಂತ್ರಿಯನ್ನಾಗಿಯೂ ಆಯ್ಕೆ ಮಾಡಿಕೊಂಡ ಸವರ್ಣೀಯ ಸಮಾಜದೊಳಗೆ ಮತ್ತು ಬ್ರಾಹ್ಮಣೀಕರಣಗೊಳ್ಳುತ್ತಿರುವ ಇತರ ಸಮುದಾಯದೊಳಗೆ ಈ Genocidal Instinct ಗುಪ್ತವಾಗಿ ಹರಿದಿದೆಯೇ? ೨೦೧೫ರಲ್ಲಿ ಪೆಹ್ಲೂ ಖಾನ್ ಇಂದ ಮೊದಲುಗೊಂದು ೨೦೨೧ರ ಮೊಯಿನುಲ್ ಹಖ್ ವರೆಗೆ ಅಲ್ಪಸಂಕ್ಯಾತರ ಮೇಲೆ ದ್ವೇಷರೂಪದ ಪ್ರಭುತ್ವ ದಮನ ಹಾಗೂ ಅದರ ಬಗ್ಗೆ ಸಮಾಜದ ಮೌನ ಸಮ್ಮತಿ ಇತ್ಯಾದಿಗಳು ಏನು ಹೇಳುತ್ತಿವೆ? ಮೋದಿ ಸರ್ಕಾರ ಬಂದಮೇಲೆ ಭಾರತದಲ್ಲಿ ಈ Genocide Instinct ಗೆ ಪ್ರೋತ್ಸಾಹ, ಕಾರ್ಯಕ್ರಮ ಮತ್ತು ಶ್ರೀ ರಕ್ಷೆ ಸಿಕ್ಕುತ್ತಿದೆಯೇ? ಹಾಗಿದ್ದಲ್ಲಿ Genocidal Instinct ಗೆ ಪ್ರತಿಯಾಗಿ ಜನರಲ್ಲಿ ಸಹಜವಾಗಿರುವ Human Instinct- Moral Instinct - Justice Instinct- ಗಳನ್ನು ಗಟ್ಟಿಗೊಳಿಸುವುದು ಹೇಗೆ? ಈ ಬಗೆಯಲ್ಲಿ ಬಹುಸಂಖ್ಯಾತ ಸಮುದಾಯ ಮರುಮಾನವೀಕರಣಗೊಳ್ಳದೆ ನರಮೇಧವನ್ನು ಹಾಗೂ ಮೋದಿ ಮಾಡೆಲ್ಲಿನ ಭಾರತೀಯ ಫ್ಯಾಸಿಸಮ್ಮನ್ನು ಸೋಲಿಸಲು ಸಾಧ್ಯವೇ?.... ಕೃಪೆ: ವಾರ್ತಾಭಾರತಿ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement