Advertisement

ಹಿಜಾಬ್, ಹಲಾಲ್, ಅಝಾನ್ ಗಳಿಂದಾಗಿ ಹಿಂದೂ ಧರ್ಮ ಅಪಾಯದಲ್ಲಿದೆಯೇ? ಯುವಕರನ್ನು ರೊಚ್ಚಿಗೆಬ್ಬಿಸುತ್ತಿರುವುದರ ಹಿಂದಿನ ರಹಸ್ಯವೇನು?

Advertisement

ಚಿತ್ರ ಕೃಪೆ: ಗೂಗಲ್

ಹಿಜಾಬ್, ಹಲಾಲ್, ಅಝಾನ್ ಗಳಿಂದಾಗಿ ಹಿಂದೂ ಧರ್ಮ ಅಪಾಯದಲ್ಲಿದೆಯೇ? ಯುವಕರನ್ನು ರೊಚ್ಚಿಗೆಬ್ಬಿಸುತ್ತಿರುವುದರ ಹಿಂದಿನ ರಹಸ್ಯವೇನು? ಹೌದು, ನಾನು ಸದಾ ಈ ವಿಚಾರವನ್ನು ನನ್ನ ಸಮಾನ ಮನಸ್ಕ ಸ್ನೇಹಿತರ ಜೊತೆ ಚರ್ಚಿಸುತ್ತಲೇ ಇರುತ್ತೇನೆ.

(ಸಾಂದರ್ಭಿಕ ಚಿತ್ರ)

ಈ ಪ್ರಪಂಚqದಲ್ಲಿ ಮಾನವ ಜೀವಿಯ ಸೃಷ್ಟಿಯಾಗಿ ಯುಗಯುಗಗಳು ಕಳೆದು ಹೋಗಿವೆ, ಮನುಷ್ಯ ನಾಗರಿಕತೆ(?) ಕಲಿತೇ ಶತಶತಮಾನಗಳು ಸರಿದು ಹೋಗಿವೆ. ಆದರೆ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇವಲ 74 ವರ್ಷ ಮಾತ್ರವೇ ಆಗಿದೆ. "ಹಿಂದೂ ಧರ್ಮಕ್ಕೆ ಆಪತ್ತು ಬಂದಿದೆ, ಹಿಂದೂಗಳೆಲ್ಲ ಒಗ್ಗಟ್ಟಾಗಬೇಕು" ಎಂದು ಈಗ ದೇಶದಾದ್ಯಂತ ಬೊಬ್ಬೆ ಹಾಕುತ್ತಿರುವ ಇದೇ ಈ ಬಿಜೆಪಿ, ಸಂಘಪರಿವಾರದೊಳಗೆ ಅವಿತು ಕುಳಿತು ದೇಶದ ಪ್ರಜೆಗಳ ಒಗ್ಗಟ್ಟು ಒಡೆಯುತ್ತಿರುವ, ದೇಶದ ಜನತೆಯ ಶಾಂತಿ, ನೆಮ್ಮದಿಯನ್ನು ಕೆಡಿಸುತ್ತಿರುವ ಈ ಪುರೋಹಿತಶಾಹಿ ವರ್ಗ ತಲೆತಲಾಂತರದಿಂದ ಈ ದೇಶದಲ್ಲಿ ಕೆಳಜಾತಿಯ ಜನರನ್ನು ತನ್ನ ಪರಾಂಪರಾನುಗತ ಗುಲಾಮರಂತೆ ಕೇವಲ ತನ್ನ ಬಿಟ್ಟಿ ಚಾಕರಿ ಮಾಡಿಸಿಕೊಳ್ಳಲು ಮಾತ್ರವೇ ಬಳಸಿಕೊಂಡಿತ್ತು. ವಿದ್ಯೆ ಕಲಿಯಲು ಈ ವರ್ಗಕ್ಕೆ ಅವಕಾಶ ನೀಡಿದರೆ ಇವರು ಬುದ್ಧಿವಂತರಾಗುತ್ತಾರೆ, ಇವರು ನಮಗೆ ಸರಿಸಮಾನರಾಗಿ ನಿಲ್ಲುತ್ತಾರೆ ಆಗ ನಮ್ಮ ಮುಂದಿನ ಪೀಳಿಗೆಯ ಜೀತಕ್ಕೆ ಜನ ದೊರಕದಂತಾಗುತ್ತದೆ ಎಂಬ ದುರಾಲೋಚನೆಯಿಂದ ಈ ವರ್ಗ ಕೆಳಜಾತಿಗರಿಗೆ ಶಿಕ್ಷಣವನ್ನು ನಿರಾಕರಿಸಿತ್ತು, ಇವರ ಮನೆಯಲ್ಲಿ ವಿವಿಧ ಕೆಲಸಗಳಿಗೆ ಉಪಯೋಗವಾಗುವ ನಾಯಿ, ಬೆಕ್ಕು, ದನ, ಹೋರಿ, ಎಮ್ಮೆ ಮುಂತಾದ ಸಾಕು ಪ್ರಾಣಿಗಳ ರೀತಿಯಲ್ಲಿಯೇ ಈ ಕೆಳ ಜಾತಿಯ ಜನರನ್ನು ಬಳಸಿಕೊಂಡಿತ್ತೆ ಹೊರತು ಮನುಷ್ಯರಂತೆ ಅವರನ್ನು ಎಂದೂ ನಡೆಸಿಕೊಂಡಿರಲಿಲ್ಲ ಎನ್ನುವುದಕ್ಕೆ ಇತಿಹಾಸದುದ್ದಕ್ಕೂ ಸಾವಿರಾರು, ಲಕ್ಷಾಂತರ, ಕೋಟ್ಯಾಂತರ ಪುರಾವೆಗಳು ನಮಗೆ ಲಭಿಸುತ್ತವೆ.

(ಸಾಂದರ್ಭಿಕ ಚಿತ್ರ)

ಆದರೆ ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ಚಾಚಾ ನೆಹರೂ ನೇತೃತ್ವದ ಕಾಂಗ್ರೆಸ್ ಸರಕಾರ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡಿದ್ದರಿಂದಾಗಿ ಅಂದು ಶೋಷಣೆ ಮಾಡಿದ ಮೇಲ್ಜಾತಿಯ ಆ ಪುರೋಹಿತಶಾಹಿ ವರ್ಗಕ್ಕೆ ಸರಿಸಮಾನವಾಗಿ ಅಂದರೆ ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಇಂದು ಈ ಹಿಂದುಳಿದ ಮತ್ತು ದಲಿತ ವರ್ಗದ ಜನರು ತಲೆಯೆತ್ತಿ ನಿಲ್ಲುವಂತಾಗಿದೆ.ಇದು ಕಳೆದ ಅರವತ್ತು ವರ್ಷ ಆಳ್ವಿಕೆ ಮಾಡಿದ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುವ ಅದೇ ಆ ವರ್ಗಕ್ಕೆ ಪ್ರತ್ಯುತ್ತರವೂ ಕೂಡಾ ಹೌದು.

(ಸಾಂದರ್ಭಿಕ ಚಿತ್ರ)

ಅದರೆ ಈ ಪುರೋಹಿತಶಾಹಿ ಮನು ಸಿದ್ದಾಂತವನ್ನು ಹಿಡನ್ ಅಜೆಂಡವಾಗಿ ಹೊಂದಿರುವ ಇತ್ತೀಚೆಗೆ ಹುಟ್ಟಿಕೊಂಡ ಇವರ ಬಿಜೆಪಿ ಎಂಬ ಪಕ್ಷವು ತನ್ನ ಸಂಪರ್ಕಕ್ಕೆ ಬಂದ ಯುವಕರ ಕೈಯಲ್ಲಿ ತಲವಾರು ಕೊಡುತ್ತಿದ್ದಾರೆ, ಮಚ್ಚುಗಳನ್ನು ಕೊಡುತ್ತಿದ್ದಾರೆ, ಪಿಸ್ತೂಲುಗಳನ್ನು ಇಡುತ್ತಿದ್ದಾರೆ, ಕೇವಲ ಧ್ವೇಷ ಬಿತ್ತುವುದಕ್ಕಾಗಿ ದೇಶದ ಜನರ ಶಾಂತಿ ನೆಮ್ಮದಿಯನ್ನು ಕೆಡಿಸುವುದಕ್ಕಾಗಿ ಬೇರೆ ಬೇರೆ ಹೆಸರಿನ ಸಂವಿಧಾನ ವಿರೋದಿಯಾದ ಸಂಘಟನೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ತಮ್ಮ ಗುಪ್ತಕಾರ್ಯಸೂಚಿಯ ಈಡೇರಿಕೆಗಾಗಿ ಸಂವಿಧಾನ ವಿರೋಧಿ ವದಂತಿಗಳನ್ನು ಹುಟ್ಟುಹಾಕುತ್ತಿದ್ದಾರೆ. ಅದರ ಮುಂದುರಿದ ಭಾಗವೇ ಇದೀಗ ಮುನ್ನಲೆಗೆ ಬಂದಿರುವ ಹಿಜಾಬ್ ವಿವಾದ, ಹಲಾಲ್ ಪ್ರತಿಭಟನೆ, ಅಝಾನ್ ಕುರಿತಾದ ಸಂಘರ್ಷಗಳಾಗಿವೆ. ಮುಸ್ಲಿಂ ಧರ್ಮದ ಆಚರಣೆಗಳಿಗೂ ಹಿಂದೂ ಧರ್ಮಕ್ಕೂ ಇರುವ ಸಂಬಂಧವಾದರೂ ಏನು? ಅಥವಾ ಇಂತಹ ಕಾರ್ಯಕ್ಕೆ ಬಾರದ ವಿವಾದಗಳನ್ನು ಹುಟ್ಟುಹಾಕುತ್ತಿರುವುದರ ಒಳಮರ್ಮವೇನು? ಇದರಿಂದ ಹಿಂದೂ- ಮುಸಲ್ಮಾನರ ನಡುವಿನ ಸಾಮರಸ್ಯ ಕೆಡುತ್ತದೆಯೇ ಹೊರತು ಹಿಂದೂ ಧರ್ಮಕ್ಕೆ ಚಿಕ್ಕಾಸಿನ ಲಾಭವಾಗದು ಎಂದರಿಯದ ಹಿಂದುಳಿದ ಹಾಗು ದಲಿತ ವರ್ಗದ ನಮ್ಮ ಅಮಾಯಕ ಯುವಕರು ಇವರುಗಳ ಈ ಕುತಂತ್ರಕ್ಕೆ ಬಲಿಯಾಗುತ್ತಿದ್ದಾರೆ, ಶಿವಮೊಗ್ಗದ ಹರ್ಷನಂತಹ ಎಳೆ ಪ್ರಾಯದ ಹುಡುಗರು ಗಲಾಟೆ ದೊಂಬಿಗಳಲ್ಲಿ ಭಾಗಿಯಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಮತ್ತೆ ಕೆಲವರು ಕೈಕಾಲು ಕಳೆದುಕೊಂಡು ಆಸ್ಪತ್ರೆ ಸೇರುತ್ತಿದ್ದಾರೆ, ಇನ್ನು ಕೆಲವರು ಶಿಕ್ಷೆಯಾಗಿ ಜೈಲು ಸೇರುತ್ತಿದ್ದಾರೆ ಅವರ ಹೆಂಡತಿ ಮಕ್ಕಳು ಅಥವಾ ವೃದ್ಧ ತಂದೆತಾಯಂದಿರು ಮನೆಯಲ್ಲಿ ದುಡಿಮೆ ಮಾಡುವ ವ್ಯಕ್ತಿಗಳನ್ನು ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ ಅರ್ಥಾತ್ ಬಿಕ್ಷೆ ಬೇಡುವ ಸ್ಥಿತಿ ತಲುಪಿದ್ದಾರೆ.

(ಸಾಂದರ್ಭಿಕ ಚಿತ್ರ)

ಆದರೆ ಇಂತಹ ಈ ಕೋಮು ಗಲಬೆಗಳನ್ನು, ಗಲಾಟೆಗಳನ್ನು, ದೊಂಬಿಗಳನ್ನು ಮಹಾನಗರಗಳ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ನಿಯಂತ್ರಿಸುವ ಅಥವಾ ಸಂಘಟಿಸುವ ಈ ಮೇಲ್ಜಾತಿಯ ಅಂದರೆ ಸಂಘಪರಿವಾರದ ಈ ಪುರೋಹಿತಶಾಹಿ ವರ್ಗದ ನಾಯಕರುಗಳ ಮನೆಯ ಒಬ್ಬನೇ ಒಬ್ಬ ಯುವಕನ ಹೆಸರು ಈ ಗಲಭೆಯ ಸಂತ್ರಸ್ತರ ಪಟ್ಟಿಯಲ್ಲಿ ಅಥವಾ ಮೃತಪಟ್ಟವರ ಪಟ್ಟಿಯಲ್ಲಿ ಅಥವಾ ಕೈ ಕಾಲು ಕಳೆದುಕೊಂಡವರ ಪಟ್ಟಿಯಲ್ಲಿ ಅಥವಾ ಜೈಲು ಸೇರಿದವರ ಪಟ್ಟಿಯಲ್ಲಿ ಇರುವುದೇ ಇಲ್ಲ. ಅವರ ಮಕ್ಕಳುಗಳೆಲ್ಲ ಅಮೇರಿಕಾ ಇಂಗ್ಲೆಂಡುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುತ್ತಾರೆ ಅಥವಾ ಡಾಕ್ಟರುಗಳಾಗಿ, ಇಂಜಿನೀಯರುಗಳಾಗಿ, ಐಏಎಸ್ ಗಳಾಗಿ ಅಥವಾ ಐಟಿಬಿಟಿಗಳಲ್ಲಿ ಲಕ್ಷ ಲಕ್ಷ ಸಂಬಳ ಬರುವ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿಕೊಂಡು ಹೆಂಡತಿ ಮಕ್ಕಳೊಂದಿಗೆ ಐಷಾರಾಮಿ ಬದುಕು ಕಟ್ಟಿಕೊಂಡು ಮಜಾವಾಗಿ ಸಂಸಾರ ಮಾಡಿ ಕೊಂಡಿರುತ್ತಾರೆ.

ಇದುವೆ ಗೆಳೆಯರೆ ಅವರಂತಹ 'ಮನುವಾದಿ'ಗಳ ಅಥವಾ ನಮ್ಮ ನಿಮ್ಮಂತಹ 'ಮಾನವತಾವಾದಿ'ಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಪ್ರಮುಖ ಅಂಶ. ಈ ದೇಶಕ್ಕೆ ಮುಂದೆ ಅದೆಂತಹ ಗ್ರಹಚಾರ ಕಾದಿದೆಯೋ ಆ ಭಗವಂತನೆ ಬಲ್ಲ.

ಕಡೆಗೂ ಉಳಿವ ಪ್ರಶ್ನೆ "ಹಿಜಾಬ್, ಹಲಾಲ್, ಅಝಾನ್ ಗಳಿಂದಾಗಿ ಹಿಂದೂ ಧರ್ಮ ಅಪಾಯದಲ್ಲಿದೆಯೇ? ಯುವಕರನ್ನು ರೊಚ್ಚಿಗೆಬ್ಬಿಸುತ್ತಿರುವುದರ ಹಿಂದಿನ ರಹಸ್ಯವೇನು?"

Advertisement
Advertisement
Recent Posts
Advertisement