Advertisement

ಮಾನ್ಯ ನಳಿನ್ ಕಟೀಲ್‌ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ನಿಮ್ಮ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ?: ದಿನೇಶ್ ಗುಂಡೂರಾವ್

Advertisement
ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ದಾಖಲಿಸಿದೆ. ಕೇಂದ್ರ ಸರ್ಕಾರದ ಕಳಪೆ ಆರ್ಥಿಕ ನಿರ್ವಹಣೆಯಿಂದಾದ ಹಣದುಬ್ಬರ ಹಾಗೂ ವಿದೇಶಿ ಹೂಡಿಕೆದಾರರು ಹೂಡಿಕೆ ಹಿಂಪಡೆಯುತ್ತಿರುವುದು ರೂಪಾಯಿ ಮೌಲ್ಯದ ಕುಸಿತಕ್ಕೆ ಕಾರಣ. ಸ್ವಘೋಷಿತ ವಿಶ್ವಗುರು ಮೋದಿ ಭಾರತವನ್ನು‌ ಇನ್ನೊಂದು ಶ್ರೀಲಂಕಾ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಮೋದಿ ಅಧಿಕಾರಕ್ಕೆ ಬಂದರೆ 1 ರೂಪಾಯಿಗೆ 15 ಡಾಲರ್ ಕೊಡುವ ಕಾಲ ಬರುತ್ತದೆ ಎಂದಿದ್ದರು. ಮೋದಿ ಅಧಿಕಾರಕ್ಕೆ ಬಂದು 8 ವರ್ಷವಾಯಿತು. ರೂಪಾಯಿಗೆ 15 ಡಾಲರ್ ಆಗುವುದಿರಲಿ ಈಗ 77 ರೂಪಾಯಿಗೂ 1 ಡಾಲರ್ ಸಿಗದಂತಾಗಿದೆ. ಮಾನ್ಯ ನಳಿನ್ ಕಟೀಲ್‌ರವರೆ ದೇಶವನ್ನು ಗತಿಗೆಟ್ಟ ಸ್ಥಿತಿಗೆ ತಂದ ನಿಮ್ಮ ಮೋದಿಯವರ ಆಡಳಿತ ಎಷ್ಟು ಅದ್ಭುತವಲ್ಲವೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
Recent Posts
Advertisement