Advertisement

ಮೂಡುಬಿದಿರೆ ಪತ್ರಕರ್ತರ ಸಂಘಕ್ಕೆ "ಬೇರೆಯೇ ಮಾತು" ಪುಸ್ತಕ ಹಸ್ತಾಂತರಿಸಿದ ಪದ್ಮಪ್ರಸಾದ್ ಜೈನ್

Advertisement
ಮುಂಗಾರು ಪತ್ರಿಕೆ ಸಂಪಾದಕರಾಗಿದ್ದ ವಡ್ಡರ್ಸೆ ರಘರಾಮ ಶೆಟ್ಟಿಯವರ ಸಂಪಾದಕೀಯ ಮತ್ತಿತರ ಬರಹಗಳ "ಬೇರೆಯೇ ಮಾತು" ಪುಸ್ತಕವನ್ನು ಇಂದು ಕೆಪಿಸಿಸಿ ಮೀಡಿಯಾ ಪ್ಯಾನಲಿಸ್ಟ್ ಪದ್ಮಪ್ರಸಾದ್ ಜೈನ್ ರವರು ಮೂಡಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ವೇಣುಗೋಪಾಲ ರವರಿಗೆ ಹಸ್ತಾಂತರಿಸಿದರು.

ಕನ್ನಡ ಮೀಡಿಯಾ ಡಾಟ್ ಕಾಂ ಸುದ್ದಿ ಜಾಲತಾಣ ಇದರ ಪ್ರಥಮ ವರ್ಷದ ವರ್ಷಾಚರಣೆಯ ಅಂಗವಾಗಿ ಮೇ 15, ಆದಿತ್ಯವಾರದಂದು ಕುಂದಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ "ಬೇರೆಯೇ ಮಾತು" ಪುಸ್ತಕ ಬಿಡುಗಡೆಗೊಂಡಿತ್ತು.

ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ದಿನೇಶ್ ಅಮಿನ್ ಮಟ್ಟು ಸಂಪಾದಿಸಿರುವ "ಬೇರೆಯೇ ಮಾತು" ಪುಸ್ತಕವನ್ನು ವಿಧಾನಪರಿಷತ್ ಮಾಜಿ ಸಭಾಪತಿ ಕೆ‌. ಪ್ರತಾಪ್‌ಚಂದ್ರ ಶೆಟ್ಟಿಯವರು ಬಿಡುಗಡೆಗೊಳಿಸಿದ್ದರು.

ಈ ಸಂಧರ್ಭದಲ್ಲಿ ಪುಸ್ತಕ ಪರಿಚಯವನ್ನು ದಿನೇಶ್ ಅಮಿನ್ ಮಟ್ಟುರವರು ನೇರವೇರಿಸಿದ್ದರೆ, ಖ್ಯಾತ ವಕೀಲ, ಜನಪರ ಹೋರಾಟಗಾರ ಸುಧೀರ್ ಕುಮಾರ್ ಮುರೊಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ, ವಡ್ಡರ್ಸೆ ನವೀನ್ ಶೆಟ್ಟಿ ಮತ್ತು ಕನ್ನಡ ಮೀಡಿಯಾ ಡಾಟ್ ಕಾಂ ಸಂಪಾದಕ ಚಂದ್ರಶೇಖರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Advertisement
Advertisement
Recent Posts
Advertisement