Advertisement

ಇಂದು ಕರ್ನಾಟಕಕ್ಕೆ ಆಗಮಿಸುತ್ತಿರುವ ಪ್ರದಾನಿ ಮೋದಿ ಪತ್ರಿಕಾಗೋಷ್ಠಿ ನಡೆಸಿ "ಅಗ್ನಿಪಥ್ ಯೋಜನೆ" ದೇಶದ ಭದ್ರತೆಗೆ ಹೇಗೆ ಸೂಕ್ತ ಎಂದು ವಿವರಿಸಲಿ: ಪ್ರಿಯಾಂಕ್ ಖರ್ಗೆ ಆಗ್ರಹ

Advertisement

"ಪ್ರಧಾನಿ ನರೇಂದ್ರ ಅವರ ಮೋದಿ ಅವರ ಆಡಳಿತದ ಎಂಟು ವರ್ಷದ ಸಾಧನೆಗಳ ಬಗ್ಗೆ ಬಹಳ ವಿಜೃಂಭಣೆಯಿಂದ ಉತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಅವರು ಸಂವಿಧಾನದ ಎಲ್ಲಾ ಆಶಯಗಳನ್ನ ಈಡೇರಿಸಿದ್ದೇವೆ ಎಂಬ ಹುಸಿ ಭ್ರಮೆಯಲ್ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮೋದಿಯವರ ಮಾಸ್ಟರ್ ಸ್ಟ್ರೋಕ್ ಗಳನ್ನು ಕೂಡಾ ಪರಿಶೀಲನೆ ಮಾಡಿಕೊಳ್ಳಬೇಕು" ಎಂದು ಶಾಸಕ, ಮಾಜಿ ಸಚಿವ, ಕೆಪಿಸಿಸಿ ಐಟಿ ಸೆಲ್ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಅವರು ಆದಿತ್ಯವಾರ ಕಲಬುರ್ಗಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದರು.

"ಮೋದಿಯವರ ಯಾವ ಯೋಜನೆಗಳೂ ಉದ್ದೇಶಿತ ಗುರಿ ಮುಟ್ಟಲಿಲ್ಲ. ಡಿಮಾನಿಟೈಸೆಜನ್, ಸಿಎಎ, ರೈತರ ಪರ ಕಾಯ್ದೆಗಳ ಯಾವುವೂ ಜಾರಿಯಾಗಲಿಲ್ಲ. ರೈತರೇ ಹೋರಾಟ ಮಾಡಿ ಕಾಯಿದೆಗಳನ್ನು ವಾಪಸ್ ಪಡೆಯುವಂತೆ ಮಾಡಿದರು.
ಬಿಜೆಪಿ ಶಾಸಕರು, ಸಂಸದರು ವಕ್ತಾರರ ಸ್ಥಿತಿ ನೋಡಿದ್ರೆ ಅಯ್ಯೊ ಅನಿಸುತ್ತೆ ಕಾರಣ‌ ರಾತ್ರಿ ಮೋದಿ ಕನಸಿನಲ್ಲಿ ಕಂಡಿದ್ದನ್ನ ಇವರು ಮಾಧ್ಯಮದಲ್ಲಿ ಸಮರ್ಥನೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ" ಎಂದವರು ವ್ಯಂಗ್ಯವಾಡಿದ್ದಾರೆ.

"ಇದೀಗ, ಮೋದಿಯವರ ಹೊಸ ಕಾರ್ಯಕ್ರಮ ಅಗ್ನಿಪಥ್ ಯೋಜನೆಯಿಂದಾಗಿ ದೇಶ ಹೊತ್ತಿ‌ಉರಿಯುತ್ತಿದೆ. 200 ರೈಲುಗಳು ಬಂದ್ ಆಗಿವೆ.‌ ಹಲವಾರು ರೈಲ್ವೆ ಗಳು ಬೆಂಕಿಗೆ ಆಹುತಿಯಾಗಿವೆ. (ಈ ದುರ್ಘಟನೆಯ ಪರಿಣಾಮವಾಗಿ ದೇಶದ ಬೊಕ್ಕಸಕ್ಕೆ ಸುಮಾರು 700 ಕೋಟಿ ರೂಪಾಯಿ ನಷ್ಟವಾಗಿರುವ ಕುರಿತು ವರದಿಯಾಗಿದೆ. -ಸಂ) ರಾಜ್ಯದಲ್ಲಿಯೂ ಕೂಡಾ ಪ್ರತಿಭಟನೆ‌ ನಡೆಯುತ್ತಿದೆ. ಯುವಕರು ರಸ್ತೆಗಿಳಿದು‌ ಹೋರಾಟ ನಡೆಸುತ್ತಿದ್ದಾರೆ" ಎಂದು ಪ್ರಿಯಾಂಕ್ ರವರು ವಿಷಾದ ವ್ಯಕ್ತಪಡಿಸಿದರು.

"ಈ‌ ಉದ್ದೇಶಿತ ಯೋಜನೆಯ ಪ್ರಕಾರ ಹೊಸ ಸೈನಿಕರನ್ನ ಆರು‌ ತಿಂಗಳ‌ ತರಬೇತಿ‌ ನೀಡಿ ಅಗ್ನಿವೀರರ ಹೆಸರಿನಲ್ಲಿ ‌ಅವರನ್ನು‌ ನೌಕಾದಳ, ಭೂದಳ ಹಾಗೂ‌ ವಾಯುದಳದ ಸೈನಿಕರನ್ನಾಗಿ‌ 64,000 ಸೈನಿಕರನ್ನ ನೇಮಕ ಮಾಡಿ‌ ನಾಲ್ಕು ವರ್ಷದ ನಂತರ ಅವರನ್ನು ಸೇವೆಯಿಂದ‌ ಬಿಡುಗಡೆ ಮಾಡುತ್ತಾರೆ. ಆಗ 75% ಸೇವಾ ಕಮಿಷನ್ ನೀಡುತ್ತಾರೆ. ಇದಕ್ಕೆ ಮಾಜಿ ಸೈನಿಕರು‌ ವಿರೋಧಿಸಿದ್ದಾರೆ. ಈ ಯೋಜನೆ ತರುವ ಮುನ್ನ ಪೈಲೆಟ್ ಪ್ರೋಜೆಕ್ಟ್ ಮಾಡಬೇಕಿತ್ತು. ಪಾಕಿಸ್ಥಾನ ಹಾಗೂ‌ ಚೀನಾ ಹಾಗೂ ನೇಪಾಳದಂತ ದೇಶಗಳ ಗಡಿ ಭಾರತ ಹಂಚಿಕೊಂಡಿದೆ. ಚೀನಾ ಈಗಾಗಲೇ ಭಾರದದ ಗಡಿ ಒಳಗೆ ಬಂದು ಗ್ರಾಮಗಳನ್ನೇ ನಿರ್ಮಿಸಿಕೊಂಡಿದ್ದಾರೆ. ಹೀಗಿರುವಾಗ ಒಪ್ಪಂದ‌ದ ಮೇಲೆ ಸೈನಿಕರನ್ನು ನೇಮಿಸುವುದು ಹೇಗೆ ಸೂಕ್ತ ಎನ್ನುವ ಪ್ರಶ್ನೆ ಎದ್ದಿದೆ" ಎಂದವರು ದೇಶದ ಭದ್ರತೆಯ ಕುರಿತು ಕಾಳಜಿ ವ್ಯಕ್ತಪಡಿಸಿದರು.

"ಜೊತೆಗೆ ಕೇವಲ ಆರು ತಿಂಗಳು ತರಬೇತಿ ಸಾಕಾಗುತ್ತದೆಯೇ? ತಜ್ಞರ ಪ್ರಕಾರ 6-7 ವರ್ಷದ ತರಬೇತಿ ನಂತರ ಒಬ್ಬ ಸೈನಿಕ‌ ಯುದ್ದ‌ಭೂಮಿಗೆ ಹೋಗಲು ಯೋಗ್ಯ ನಾಗುತ್ತಾನೆ. ಹೀಗಿರುವಾಗ ಕೇವಲ ಅರು ತಿಂಗಳ ತರಬೇತಿ‌ ಹೊಂದಿ ಕೇವಲ ನಾಲ್ಕು ವರ್ಷ ಮಾತ್ರ ಸೈನ್ಯದಲ್ಲಿ‌ ಇರಬೇಕಾದರೆ ಸೈನಿಕ‌ ಹೋರಾಟದ ಮನೋಭಾವನೆಯಿಂದ‌ ಕೆಲಸ ಮಾಡಲು ಆಗುತ್ತದೆಯೇ? ಇಂತವರು ಯುದ್ದದಲ್ಲಿ ನಾಯಕತ್ವದ ಗುಣ ತೋರಿಸುವುದು ಅಸಾಧ್ಯ.‌ ಇಂತಹ ಸೈನಿಕರು ಟೂರಿಸ್ಟ್ ಸೈನಿಕರಾಗಿಬಿಡುತ್ತಾರೆ ಎಂದು ತಜ್ಞರು ಹೇಳಿದ್ದಾರೆ" ಎಂದವರು ವಿಶ್ಲೇಷಿಸಿದ್ದಾರೆ.

"ಮೋದಿ‌ಯವರು ಗುಜರಾತ್ ಸಿಎಂ ಆಗಿದ್ದಾಗ ಒನ್ ರ‌್ಯಾಂಕ್ ಒನ್ ಪೆನ್ಶನ್ ಜಾರಿಗೆ ತರುವುದಾಗಿ ಹೇಳಿದ್ದರು ಈಗ ಪಿಎಂ ಆಗಿದ್ದಾಗ ಅದನ್ನೆಲ್ಲ ಮರೆತಿದ್ದಾರೆ. ಈಗ ನೋ ರ‌್ಯಾಂಕ್ ನೋ ಪೆನ್ಶನ್. ಅಗ್ನಿವೀರರು ನಾಲ್ಕು ವರ್ಷದ ನಂತರ ಬಿಡುಗಡೆಯಾಗುವ 75% ಸೈನಿಕರಿಗೆ ಸೇವಾನಿಧಿಯಾಗಿ ರೂ 7.71 ಲಕ್ಷ ಕೊಡುತ್ತಾರೆ. ಅದೂ ಕೂಡಾ ಸೈನಿಕರ ಸಂಬಳದಲ್ಲಿ ಶೇ 50 ಕಡಿತಗೊಳಿಸಲಾಗುತ್ತದೆ" ಪ್ರಿಯಾಂಕ್ ಖರ್ಗೆ ಹೇಳಿದರು.

"ಕೊರೋನಾ‌ ನೆಪದಿಂದ ಈ ಸರ್ಕಾರ ಸೈನಿಕರ‌ ಹುದ್ದೆಗೆ ನೇಮಕ‌ಮಾಡಿಕೊಂಡಿಲ್ಲ. ದೇಶದಲ್ಲಿ ಖಾಲಿ‌ ಇರುವ ಒಟ್ಟು 8.72 ಲಕ್ಷ ಹುದ್ದೆಗಳಲ್ಲಿ 2.50 ಲಕ್ಷ ಹುದ್ದೆಗಳು ಸೈನ್ಯದಲ್ಲಿ ಖಾಲಿ ಇವೆ ಇವು ಎಲ್ಲ ಖಾಯಂ ನೇಮಕಾತಿಗಳಾಗುವೆ. ಈ ಹಂತದಲ್ಲಿ ಕಾಂಟ್ಯಾಕ್ಟ್ ಸೈನಿಕರ ನೇಮಕ ಮಾಡಲು ಹೋಗುವಾಗ ಖಾಯಂ ಸೈನಿಕರ ನೇಮಕ ಯಾವಾಗ ಮಾಡುತ್ತಾರೆ? ಕಳೆದ ಎಂಟು ವರ್ಷದಲ್ಲಿ 14 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ 45 ವರ್ಷದಲ್ಲಿ ಕಾಣದಂತ ನಿರುದ್ಯೋಗ ಸಮಸ್ಯೆ ತಲೆದೋರಿದೆ. 45 ಕೋಟಿ ಯುವಕರು ಉದ್ಯೋಗ ಹುಡುಕುವುದನ್ನೇ ಬಿಟ್ಟಿದ್ದಾರೆ ಎಂದು‌ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ವರದಿ ಹೇಳಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಎಲ್ಲಿವೆ ಉದ್ಯೋಗಗಳು. ಇದೇನಾ ಅಚ್ಚೇ ದಿನ್ ? ನೂತನ‌ ಯೋಜನೆ ಅಗ್ನಿಪಥ್ ಬಗ್ಗೆ ನಿಖರವಾದ ಉತ್ತರ ನೀಡಿ. ದೇಶದ ಭದ್ರತೆ ವಿಚಾರದಲ್ಲಿ ನಿಮಗೆ ಇಷ್ಟೊಂದು ಅಸಡ್ಡೆತನವೇ? ಈ ಅಗ್ನಿಪಥ್ ಯುವಕರ ಪಾಲಿನ ಅಗ್ನಿಕುಂಡವಾಗಿ ಪರಿಣಮಿಸಿದೆ. ಅತಿ ಹೆಚ್ಚಿನ ಭದ್ರತೆ ಇರುವ ಜಾಗ ಪುಲ್ವಾಮದಲ್ಲಿ‌ ಆರ್ ಡಿಎಕ್ಸ್ ಹೇಗೆ ಬಂತು? ವರದಿ‌ ಎಲ್ಲಿದೆ?" ಎಂದವರು ಸರ್ಕಾರಕ್ಕೆ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ.

''ಕೇವಲ ನಾಲ್ಕು ರೆಫೆಲ್ ವಿಮಾನ ತಂದಿರುವುದಕ್ಕೆ ಬೀಗುವ ಕೇಂದ್ರ ಸರ್ಕಾರ, ಅಗ್ನಿಪಥ್ ಯೋಜನೆಯ‌ ಸಾಧಕ‌ ಬಾಧಕಗಳ ಬಗ್ಗೆ ಚರ್ಚೆ ನಡೆಯಲಿ ಡಿಫೆನ್ಸ್ ಎಕ್ಸಪರ್ಟ್ ಗಳೇ ಇರುವ ಪ್ಯಾನೆಲ್ ರಚಿಸಿ‌ ಈ‌ ಯೋಜನೆ ಜಾರಿಗೆ ತರಬಹುದೇ ಎಂದು ಸುದೀರ್ಘ ಸಮಾಲೋಚನೆ‌ ನಡೆಸಲಿ ಇಲ್ಲದಿದ್ದರೆ ಸಾರ್ವಜನಿಕರ‌ ನೆಮ್ಮದಿಗೆ ಭಂಗ ಉಂಟಾಗಲಿದೆ" ಎಂದವರು ಸಲಹೆ ನೀಡಿದ್ದಾರೆ.

"ಮೋದಿಯವರ ಮಾಸ್ಟರ್ ಸ್ಟ್ಕ್ರೋಕ್‌ನಿಂದಾಗಿ ಯುವಕರ ಬದುಕು‌ ಬೀದಿಪಾಲಾಗಿದೆ. ಮೋದಿಯವರು ಹೇಗೂ ಕರ್ನಾಟಕಕ್ಕೆ ಬರುತ್ತಿದ್ದಾರೆ ಒಂದು ಪ್ರೆಸ್ ಕಾನ್ಫರೆನ್ಸ್ ಮಾಡಲಿ‌ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಿ. ಪಿಎಂ ಅವರು ಪ್ರೆಸ್ ಕಾನ್ಫರೆನ್ಸ್ ಮಾಡಲು ಸಿಎಂ ಬೊಮ್ಮಾಯಿ ಹಾಗೂ ಅಧ್ಯಕ್ಷ ಕಟೀಲ್ ಅವರು ವ್ಯವಸ್ಥೆ ಮಾಡಲಿ" ಎಂದು ಪ್ರಿಯಾಂಕ್ ಖರ್ಗೆ ವಿನಂತಿ ಮಾಡಿದ್ದಾರೆ.

"ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ವಾಪಸ್ ಪಡೆದುಕೊಳ್ಳಬೇಕು. ರಾಜ್ಯದಲ್ಲಿ ಗಲಭೆಗಳಾದಾಗ ಗೃಹ ಸಚಿವರು ಗಾಯಬ್ ಆಗುತ್ತಾರೆ. ಇಷ್ಟೊಂದು ಗಲಾಟೆಗಳಾದರೂ ಒಂದೇ ಒಂದು ಹೇಳಿಕೆ ಇಲ್ಲ. ಸಚಿವ ರಾಮುಲು ಅವರಿಗೆ ಅಗ್ನಿಪಥ್ ಯೋಜನೆಯ ಬಗ್ಗೆ ಸಮಗ್ರ ಮಾಹಿತಿ ಇದ್ದರೆ ಅವರೇ ಹೇಳಲಿ. ಬೇಕಾದರೆ ನನ್ನೊಂದಿಗೆ ಪ್ರೆಸ್ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲಿ" ಎಂದವರು ಬಹಿರಂಗ ಆಹ್ವಾನ ನೀಡಿದ್ದಾರೆ.

ಈ ಸಂದರ್ಭದಲ್ಲಿ ಮುಖಂಡರಾದ ಜಗದೇವ ಗುತ್ತೇದಾರ, ಭೀಮಣ್ಣ ಸಾಲಿ, ಶಿವಾನಂದ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement
Recent Posts
Advertisement