Advertisement

ಮಹಿಳೆಯ ಮೇಲೆ ಹಲ್ಲೆ ನಡೆಸಿದ ಸಚಿವ ವಿ.ಸೋಮಣ್ಣರನ್ನು ಸಂಪುಟದಿಂದ ವಜಾಗೊಳಿಸಿ: ಕಾಂಗ್ರೆಸ್

Advertisement

ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಕತ್ತು ಮತ್ತು ಧಮ್ ಇದ್ದರೆ ಕೂಡಲೇ ಅವರ ರಾಜೀನಾಮೆ ಪಡೆಯಲಿ ಅಥವಾ ವಜಾಗೊಳಿಸಲಿ ಎಂದು ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೊ ಒತ್ತಾಯಿಸಿದ್ದಾರೆ.

ಬಿಜೆಪಿಯ ನಾಯಕರುಗಳಿಗೆ ಮಹಿಳೆಯರು ಎಂದರೆ ತಾತ್ಸಾರದ ವಸ್ತು ಎನ್ನುವುದು ಪದೇ ಪದೇ ಸಾಬೀತಾಗುತ್ತದೆ ಅದರ ಸಾಲಿಗೆ ಈಗ ವಸತಿ ಸಚಿವ ವಿ ಸೋಮಣ್ಣ ಕೂಡ ಸೇರಿದ್ದು ಒಂದು ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆ ತನ್ನ ಸಮಸ್ಯೆಯನ್ನು ಹೇಳಿಕೊಂಡು ಬಂದರೆ ಸಚಿವರು ಆಕೆಯ ಸಮಸ್ಯೆ ಆಲಿಸುವ ವ್ಯವಧಾನವೂ ಇಲ್ಲದೆ ಆಕೆಯ ಕೆನ್ನೆಗೆ ಹೊಡೆಯುತ್ತಿರುವುದು ಮಾಧ್ಯಮಗಳಲ್ಲಿ ಬಿತ್ತರವಾದ ವೀಡಿಯೋದಲ್ಲಿ ಕಾಣುತ್ತಿದೆ. ಈ ಹಿಂದೆ ಇದೇ ಬಿಜೆಪಿ ಸರಕಾರದ ಶಾಸಕ ಅರವಿಂದ ಲಿಂಬಾವಳೀ ಕೂಡ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು. ಸದಾ ಮಹಿಳೆಯನ್ನು ದೇವತೆ ಎನ್ನುವುದನ್ನು ಕೇವಲ ಬಾಯಿ ಮಾತಿಗೆ ಭಾಷಣದಲ್ಲಿ ಹೇಳುವ ಬಿಜೆಪಿಗರು ಪ್ರತಿನಿತ್ಯ ಆಕೆಯ ಮೇಲೆ ಇಂತಹ ಶೋಷಣೆಗಳನ್ನು ಮಾಡುತ್ತಿರುವುದು ಇವರುಗಳ ನೈಜ ಸಂಸ್ಕೃತಿ ಏನು ಎನ್ನುವುದನ್ನು ಬಿಂಬಿಸುತ್ತದೆ.

ಸಚಿವ ಸೋಮಣ್ಣ ಅವರು ಮಹಿಳೆಯೊಂದಿಗೆ ನಡೆದುಕೊಂಡ ರೀತಿ ನಾಚಿಕೇಗೇಡಿನದ್ದು
ಬೇಟಿ ಬಜಾವೋ, ಬೇಟಿ ಪಡಾವೋ ಅನ್ನುವ ಬಿಜೆಪಿಗರು ಹೆಣ‍್ಣು ಮಕ್ಕಳಿಗೆ ಹೊಡೆಯುವುದು ಹಾಗೂ ಇನ್ನಿತರ ರೀತಿಯಲ್ಲಿ ಶೋಷಿಸುವುದು ಪ್ರತಿನಿತ್ಯ ಮಾಧ್ಯಮಗಳಲ್ಲಿ ಕಂಡು ಬರುತ್ತದೆ. ಸೋಮಣ್ಣ ಅವರ ವರ್ತನೆಗೆ ಸರಕಾರ ಕೂಡಲೇ ಕಣ್ಣು ತೆರೆದು ಅವರ ವಿರುದ್ದ ಪ್ರಕರಣ ದಾಖಲಿಸಬೇಕು ಅವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement
Advertisement
Recent Posts
Advertisement