Advertisement

ಬೈಂದೂರು: ಅಕ್ಟೋಬರ್ 30- ಬ್ರಹತ್ ಉದ್ಯೋಗ ಮೇಳ

Advertisement

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದ ವರಲಕ್ಷ್ಮಿ ಟ್ರಸ್ಟ್ ಸಂಸ್ಥೆಯ ವತಿಯಿಂದ ಜಿಲ್ಲೆಯ ಹಾಗೂ ತಾಲೂಕಿನ ಪ್ರಪ್ರಥಮ ಉದ್ಯೋಗ ಮೇಳವಾಗಿ "ನಂದನವನ ಹಾಸ್ಪಿಟಾಲಿಟಿ & ಸರ್ವಿಸಸ್, ಹೋಟೆಲ್ ಪ್ರಜ್ಞಾಸಾಗರ್ & ಹಾಲ್ಸ್ ಕೆರ್ಗಾಲ್, ಉಪ್ಪುಂದ" ಇಲ್ಲಿ ನಡೆಯಲಿದೆ.

ಪಿಯುಸಿ., ಬಿ.ಕಾಂ., ಬಿ.ಬಿ.ಎಮ್., ಬಿ.ಸಿ.ಎ., ಡಿಪ್ಲೋಮಾ, ಐಟಿಐ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಅಕ್ಟೋಬರ್ 26ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ವಿವರಗಳಿಗಾಗಿ 9036201409 ಅಥವಾ jobfairoct2022@gmail.com ಗಳ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಮನೆಯಿಲ್ಲದ ಕಡುಬಡವರಿಗೆ ಮನೆ ನಿರ್ಮಿಸಿ ಕೊಡುವ ಮೂಲಕ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಗೋವಿಂದ ಬಾಬು ಪೂಜಾರಿಯವರ ನೇತೃತ್ವದ ಈ ಸಂಸ್ಥೆಯ ಕಾರ್ಯವೈಖರಿ ಶ್ಲಾಘನಾರ್ಹ, ಜಿಲ್ಲೆಯ ಹಾಗೂ ತಾಲೂಕಿನ ನಿರುದ್ಯೋಗಿ ಯುವಕ, ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆಯವರು ಸಾಮಾಜಿಕ ಜಾಲತಾಣದ ಮೂಲಕ ವಿನಂತಿಸಿದ್ದಾರೆ.

Advertisement
Advertisement
Recent Posts
Advertisement