Advertisement

ಆರೆಸ್ಸೆಸ್ ಸಂವಿಧಾನ ವಿರೋಧಿ! ಇದಕ್ಕೆ ಮೋದಿ, ಕಟೀಲ್, ಸಿಟಿ ರವಿ ಉತ್ತಮ ಉದಾಹರಣೆ: ಡಾ.ಎಚ್.ಸಿ ಮಹಾದೇವಪ್ಪ

Advertisement

"ಸಂವಿಧಾನ ವಿರೋಧಿ ನಡವಳಿಕೆಗಳಿಗೆ ಕುಖ್ಯಾತಿ ಹೊಂದಿರುವ ಮಾನಸಿಕ ಭ್ರಷ್ಟರಾದ ಆರೆಸ್ಸೆಸ್ ನಲ್ಲಿ ಎಂತಹ ಸಂಸ್ಕೃತಿ ಕಲಿಸುತ್ತಾರೆ ಎಂಬುದಕ್ಕೆ,
ಸ್ಥಿಮಿತ ಕಳೆದುಕೊಂಡು ಮಾತನಾಡುವ ಸಿ.ಟಿ ರವಿ, ನಳೀನ್ ಕುಮಾರ್ ಕಟೀಲ್ ಉತ್ತಮ ಉದಾಹರಣೆ" ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ.ಹೆಚ್.ಸಿ ಮಹಾದೇವಪ್ಪ ಹೇಳಿದ್ದಾರೆ.

"ಇನ್ನು ಸಂವಿಧಾನ ವಿರೋಧಿಯಾದ ಆರೆಸ್ಸೆಸ್ ನಿಂದ ಸಂವಿಧಾನಾತ್ಮಕ ಆಡಳಿತ ವ್ಯವಸ್ಥೆಗೆ ಬರುವವರು ಎಂತಹ ವಂಚಕರು, ಲಂಪಟರು ಎನ್ನುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಪರಮ ಉದಾಹರಣೆ" ಎಂದವರು ಹೇಳಿದರು.

"ಅವೈಜ್ಞಾನಿಕ ನೋಟ್ ಬ್ಯಾನ್, ಪೂರ್ವತಯಾರಿ ಇಲ್ಲದ ಕರೋನಾ ಲಾಕ್‌ಡೌನ್ ನಿಂದ ಹಿಡಿದು ಈಗಿನ ಜನವಿರೋಧಿ ತೈಲ ಬೆಲೆ ಏರಿಕೆಯವರೆಗೆ ನರೇಂದ್ರ ಮೋದಿಯವರ ಆಡಳಿತಾತ್ಮಕ ನಿರ್ಧಾರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸಾಕು, ಅವರ ಮಾತೃಸಂಸ್ಥೆಯಾದ ಆರೆಸ್ಸೆಸ್ ಎಂತಹ ದಡ್ಡ ಶಿಖಾಮಣಿಗಳ ಸಂಸ್ಥೆ ಎಂಬ ಸಂಗತಿಯು ನಮಗೆ ಸುಲಭವಾಗಿ ತಿಳಿಯುತ್ತದೆ" ಎಂದು ಮಹಾದೇವಪ್ಪ ಹೇಳಿದ್ದಾರೆ.

ಆರೆಸ್ಸೆಸ್ ಪ್ರಕಾರ "ನಮಸ್ತೆ ಸದಾ ವತ್ಸಲೇ ಮಾತೃಭೂಮಿ" ಎಂದರೆ ಸುಳ್ಳು ಹೇಳಿ, ಮಾತೃಭೂಮಿಗೆ ವಂಚನೆ ಮಾಡುವುದು, ವಿಪರೀತ ಬೆಲೆ ಏರಿಕೆಯ ಮೂಲಕ ತನ್ನನ್ನು ನಂಬುವ ಜನರ ಬೆನ್ನಿಗೆ ಚೂರಿ ಹಾಕುವುದು ಎಂದರ್ಥ ಎಂದವರು ಆಕ್ರೋಶ ಭರಿತರಾಗಿ ಹೇಳಿದ್ದಾರೆ.

Advertisement
Advertisement
Recent Posts
Advertisement