ಟಿ.ಬಿ ಜಯಚಂದ್ರರ ಸೋಲಿನಿಂದ ನಷ್ಟವಾದದ್ದು ಶಿರಾ ಕ್ಷೇತ್ರಕ್ಕೆ: ಸಿದ್ದರಾಮಯ್ಯನವರ ಭಾಷಣದ ವಿಡಿಯೋ.

ಶಿರಾ ವಿಧಾನಸಭಾ ಕ್ಷೇತ್ರದಾದ್ಯಂತ 121 ಬ್ಯಾರೇಜುಗಳನ್ನು ನಿರ್ಮಿಸಿ ಕೆರೆಗೆ ನೀರು ತುಂಬಿಸಿದ ಪರಿಣಾಮ ಸುತ್ತಮುತ್ತಲಿನ ಅಂತರ್ಜಲ ಮಟ್ಟ ವೃದ್ದಿಯಾಯಿತು. ಅಂತಹ ಕೆಲಸ ಮಾಡಿದ ಓರ್ವ ಆಧುನಿಕ ಭಗಿರಥನನ್ನು ಅಪಪ್ರಚಾರ ಮಾಡಿ, ತೇಜೋವಧೆ ಮಾಡಿ ಸೋಲಿಸಲಾಯಿತು. ಆದರೆ ಆ ಸೋಲಿನಿಂದ ನಷ್ಟವಾದದ್ದು ಇಡೀ ಶಿರಾ ವಿಧಾನಸಭಾ ಕ್ಷೇತ್ರದ ಜನರಿಗೆ ಹೊರತೂ ಜಯಚಂದ್ರರಿಗಲ್ಲ. ಮತ್ತೊಮ್ಮೆ ಶಿರಾ ಕ್ಷೇತ್ರದ ಕೂಗು ವಿಧಾನಸಭೆಯಲ್ಲಿ ಪ್ರತಿಧ್ವನಿಸಬೇಕಿದ್ದರೆ ಜಯಚಂದ್ರ ಗೆಲ್ಲಬೇಕು. ಮುಂದಿನ ಬಾರಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದೇ ಬರುತ್ತೆ. ಶಿರಾ ವಿಧಾನಸಭಾ ಕ್ಷೇತ್ರದ ಜನ ಜಯಚಂದ್ರರವರನ್ನು ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರ ಜನವಿರೋಧಿ ಕೆಲಸ ಮಾಡುತ್ತಿದೆ ಎಂಬ ಸಂದೇಶವನ್ನು ಇಡೀ ರಾಜ್ಯಕ್ಕೆ ನೀಡಬೇಕು. ಜಯಚಂದ್ರರವರು ಮತ್ತೆ ಆಯ್ಕೆಯಾಗುವ ಮೂಲಕ ಶಿರಾ ಕ್ಷೇತ್ರದ ಅಭಿವೃದ್ಧಿ ಮತ್ತೆ ಆರಂಭಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ಶಿರಾ ವಿಧಾನಸಭಾ ವ್ಯಾಪ್ತಿಯ ಚಂಗಾವರದಲ್ಲಿ ನಡೆದ ಮತಯಾಚನಾ ರ‌್ಯಾಲಿಯಲ್ಲಿ ಮಾತನಾಡುತ್ತಿದ್ದರು. ಆ ಕುರಿತಾದ ವಿಡಿಯೋ ನೋಡಲು ಸಿದ್ದರಾಮಯ್ಯನವರ ಈ ಕೆಳಗಿನ ಟ್ವೀಟ್ ಕ್ಲಿಕ್ ಮಾಡಿ. ►► ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►► ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com