Advertisement

ಸಾವರ್ಕರ್ ‌ರನ್ನು ಅಂಡಮಾನ್ ಜೈಲಿನಲ್ಲಿ ಕರಿನೀರ ಶಿಕ್ಷೆಗೆ ಒಳಪಡಿಸಿದ್ದು ಏಕೆ ಗೊತ್ತೇ?

Advertisement

'ವಿ.ಡಿ ಸಾವರ್ಕರ್ ರವರು 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು' ಎಂಬ ಸಾರ್ವತ್ರಿಕ ಅಭಿಪ್ರಾಯಕ್ಕೆ ವಿರುದ್ಧವಾಗಿ 'ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ ಅವರಿಗೆ ಕರಿ ನೀರಿನ ಶಿಕ್ಷೆ ಆದುದು ಯಾಕೆ?' ಎಂದು ಸಾವರ್ಕರ್ ಬೆಂಬಲಿಗರು ಸದಾ ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಅವರುಗಳು ಸಾವರ್ಕರ್ ನಡೆಸಿದ ಸ್ವಾತಂತ್ರ್ಯ ಹೋರಾಟದ ವಿವರಗಳನ್ನು ಒದಗಿಸುವುದಿಲ್ಲ.

ಆದರೆ... ಸಾವರ್ಕರ್ ನಿಜಕ್ಕೂ ಅಂಡಮಾನ್ ಶಿಕ್ಷೆಗೆ ಒಳಗಾಗಲು ಕಾರಣ ಒಂದು ಹತ್ಯಾ ಪ್ರಕರಣವಾಗಿದೆ ಮತ್ತು ಅದರ ವಿವರಗಳನ್ನು ಇಲ್ಲಿ ಚುಟುಕಾಗಿ ವಿವರಿಸಲಾಗಿದೆ. ಯಾವುದು ಆ ಹತ್ಯಾ ಪ್ರಕರಣ ಗೊತ್ತೇ? ಆ ಕುರಿತು ತಿಳಿಯಲು ಅಗತ್ಯವಾಗಿ ಮುಂದೆ ಓದಿ:

ಸಾವರ್ಕರ್ 1911 ರ ಪೂರ್ವದಲ್ಲಿ ಲಂಡನ್ನಿನಲ್ಲಿದ್ದಾಗ ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ "ಇಂಡಿಯಾ ಹೌಸ್" ನ ಖಾಯಂ ಸದಸ್ಯರಾಗಿದ್ದರು. ಮುಸ್ಲಿಮರ ಬಗ್ಗೆ ಮೊದಲಿಂದಲೂ ಅಸಹನೆಯನ್ನು ಬೆಳೆಸಿಕೊಂಡಿದ್ದರೂ, ಲಂಡನ್ನಿನಲ್ಲಿದ್ದಾಗ ಹಿಂದೂ- ಮುಸ್ಲಿಮರಿಬ್ಬರೂ ಭಾರತ ಮಾತೆಯ ಎರಡು ಕಣ್ಣುಗಳು ಎಂದು ಬಣ್ಣಿಸಿ 1857 ರ ಬಂಡಾಯದ ಬಗ್ಗೆ "ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ" ಎಂಬ ಪುಸ್ತಕವನ್ನೂ ಬರೆದಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದುಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು.

ಲಂಡನ್ನಿನಿಂದಲೇ ಮಹಾರಾಷ್ಟ್ರದಲ್ಲಿದ್ದ ತಮ್ಮ "ಅಭಿನವ ಭಾರತ್" ನ ಕ್ರಾಂತಿಕಾರಿ ಗೆಳೆಯರಿಗೆ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಲು ಬೇಕಾದ ಪಿಸ್ತೂಲನ್ನು ಸರಬರಾಜು ಮಾಡುತ್ತಿದ್ದರು.

ಅಂಥಾ ಒಂದು ಹತ್ಯಾ ಪ್ರಯತ್ನದ ಭಾಗವಾಗಿ ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎಎಮ್ ಟಿ ಜಾಕ್ಸನ್ (1866-1909) ಅನ್ನು ಕೊಲೆ ಮಾಡಲಾಗುತ್ತದೆ. ಜಾಕ್ಸನ್ ತುಂಬಾ ಓದಿಕೊಂಡ ಓರ್ವ ಇಂಡಾಲಜಿಸ್ಟ್ ಮತ್ತು ಇತಿಹಾಸಕಾರ. ಪಂಡಿತ್ ಜಾಕ್ಸನ್ ಎಂಬ ಹೆಸರನ್ನೂ ಗಳಿಸಿದ್ದ ಈ ಅಧಿಕಾರಿ ಭಾರತದ ಇತಿಹಾಸದ ಬಗ್ಗೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪ್ರಬಂಧ ಬರೆದ ವಿದ್ವಾಂಸ.

ಜಾಕ್ಸನ್ ನ ಹತ್ಯೆಗೆ ಸಾವರ್ಕರ್ ಅವರು ಬ್ರಿಟನ್ನಿನಿಂದ ಕಳಿಸಿದ ಪಿಸ್ತೂಲನ್ನು ಬಳಸಿದ್ದರೆಂದು ಗೊತ್ತಾಗುತ್ತದೆ. ಹೀಗಾಗಿ ಸಾವರ್ಕರ್ ಅವರನ್ನು ಬಂಧಿಸಿ, ಭಾರತದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸುತ್ತಾರೆ.

1909 ರಲ್ಲಿ ಲಂಡನ್ನಿನಲ್ಲಿ ಕರ್ಜನ್ ಅವರನ್ನು ಕೊಂದ ಮದನ್ ಲಾಲ್ ಧಿಂಗ್ರಾ ಕೂಡ ಗಾಂಧಿಯನ್ನು ಕೊಂದ ಗೋಡ್ಸೆಯಂತೆ ಸಾವರ್ಕರ್ ಅವರನ್ನು ತನ್ನ ಗುರು ಎಂದು ಭಾವಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಾವರ್ಕರ್ ತನ್ನ ಶಿಷ್ಯರನ್ನು ಮುಂದೆ ಬಿಟ್ಟು ತಾವು ಹಿಂದೆ ಉಳಿದಿದ್ದರು. ಅವರ ಪಾತ್ರ ಸಾಬೀತಾಗಿ ಶಿಕ್ಷೆಯಾಗಿದ್ದು ಜಾಕ್ಸನ್ ಕೊಲೆ ಪ್ರಕರಣದಲ್ಲಿ ಮಾತ್ರ.

ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟಮೊದಲಬಾರಿಗೆ ಜೈಲುಶಿಕ್ಷೆ ಎದುರಿಸಬೇಕಾಗಿ ಬಂದರೂ ಅದನ್ನು ವೀರೋಚಿತವಾಗಿ ಎದುರಿಸದೇ ಅಂಡಮಾನ್ ಗೆ ಹೋದ ಮರುತಿಂಗಳಿನಿಂದಲೇ ಬ್ರಿಟಿಷರಿಗೆ ಶರಣಾಗತಿ ಹಾಗೂ ಕ್ಷಮಾದಾನ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹಾಗೂ ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ತಾವು ಬಿಡುಗಡೆಯಾದ ನಂತರ ಸದಾ ಬ್ರಿಟಿಷರ ಜೊತೆ ಕೈಗೂಡಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆಯುತ್ತಾ ಹೋದರು.

ಹೀಗೆ ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು.

ಬರಹ ಕೃಪೆ: ಜನಪರ ಚಿಂತಕ Shrinivas Karkala ರವರ ಫೇಸ್‌ಬುಕ್‌ ವಾಲ್‌ ನಿಂದ ಆಯ್ದುಕೊಳ್ಳಲಾಗಿದೆ.

Advertisement
Advertisement
Recent Posts
Advertisement