Advertisement

ಹಿಂದುತ್ವವನ್ನು ಬೆಂಬಲಿಸೋಣ. ಹಿಂದುತ್ವ ವಿರೋಧಿ ಕಾಂಗ್ರೆಸ್ ಅನ್ನು ನಾಶಗೊಳಿಸೋಣ.

Advertisement

ಭಾರತ ಎಂದರೆ ಹಿಂದುತ್ವ. ಹಿಂದುತ್ವ ಎಂದರೆ 3% ಮೇಲ್ಜಾತಿಯ ಜನರ ಆಜ್ಞೆಯನ್ನು 97% ಕೆಳಜಾತಿಗಳ ಜನರು ಪಾಲಿಸುವುದಾಗಿದೆ ಮತ್ತು ಹಿಂದುತ್ವವನ್ನು ಬೆಂಬಲಿಸುವುದು ಎಂದರೆ 97% ಇರುವ ವಿವಿಧ ಕೆಳಜಾತಿಗಳ ಬಡವರು ಕೇವಲ 3% ಇರುವ ಮೇಲ್ಜಾತಿ ಜನರ ಗುಲಾಮಗಿರಿ ಮಾಡುವುದಾಗಿದೆ.

ಹಾಗೆ ಅವರ ಆಜ್ಞೆಯನ್ನು ಪಾಲಿಸದಿದ್ದರೆ, ಬೆಂಬಲಿಸದಿದ್ದರೆ ಮುಂದಿನ ಜನ್ಮದಲ್ಲಿ ಹೀನಯೋನಿಯಲ್ಲಿ ಜನಿಸುತ್ತಾರೆ ಎಂದು ಮನುಸ್ಮೃತಿ ಹೇಳಿದೆ. ಮನುಸ್ಮೃತಿ ಯನ್ನು ಧರ್ಮಶಾಸ್ತ್ರ ಎಂದು ನಾವು ಪರಿಗಣಿಸಿದ್ದೇವೆ. ಶಾಸ್ತ್ರ ಎಂದರೆ ಅದು ಹಿಂದುತ್ವದ ರಕ್ಷಣೆಗಾಗಿ ಇರುವ ಧರ್ಮಗ್ರಂಥ. ಆ ಧರ್ಮಗ್ರಂಥವನ್ನು ಸ್ವತಃ ಆ ಭಗವಂತನೇ ಹೇಳಿ ಮೇಲ್ಜಾತಿಯ ಪಂಡಿತರಾದ ಮನುವಿನ ಕೈಯಿಂದ ಬರೆಸಿದ್ದಾನೆ.

ಮನುಸ್ಮೃತಿ ಯಲ್ಲಿನ ಪ್ರಮುಖ ಅಂಶಗಳು:

* 97% ಕೆಳಜಾತಿಯ ಶೂದ್ರ ವರ್ಗಕ್ಕೆ (ಹಿಂದುಳಿದ ಮತ್ತು ದಲಿತ ವರ್ಗ) ಶಿಕ್ಷಣದ ಹಕ್ಕಿಲ್ಲ. 3% ಮೇಲ್ಜಾತಿಯ ಬ್ರಾಹ್ಮಣರ ಸೇವೆ ಮಾಡುವುದೆ ಅವನ ಕರ್ತವ್ಯವಾಗಿದೆ.

* ಬ್ರಾಹ್ಮಣರು ಭೂಮಿಯ ಒಡೆಯರು ಹಾಗೂ ಸಕಲ ಜೀವಿಗಳಿಗೂ ಒಡೆಯರು. ಇತರರು ಅಂದರೆ 97% ಕೆಳಜಾತಿಗಳ ಶೂದ್ರ ಜನರು ಭೂಮಿಯ ಹಕ್ಕನ್ನು ಹೊಂದುವಂತಿಲ್ಲ. ಬ್ರಾಹ್ಮಣರ ಸರಿಸಮವಾಗಿ ಕುಳಿತು ಕೊಳ್ಳುವಂತಿಲ್ಲ. ಅಧಿಕಾರದ ಸ್ಥಾನಮಾನ ಪಡೆಯುವಂತಿಲ್ಲ.

* 97% ಕೆಳಜಾತಿ ಶೂದ್ರರು ಯೂವುದೇ ಹಣ, ಐಶ್ವರ್ಯ ಹೊಂದುವಂತಿಲ್ಲ ಮತ್ತು ಆಸ್ತಿ ಪಾಸ್ತಿ ಹೊಂದುವಂತಿಲ್ಲ. ಎಂತಹ ಸಮಯದಲ್ಲಾದರೂ 3% ಮೇಲ್ಜಾತಿಯ ಜನರು, 97% ಕೆಳಜಾತಿಗಳ ಜನರ ಹಣವನ್ನ ಆಸ್ತಿಯನ್ನ ವಶಪಡಿಸಿ ಕೊಳ್ಳಬಹುದು ಮತ್ತು ಇದು 3% ಮೇಲ್ಜಾತಿಯ ಜನರ ಅಧಿಕಾರವಾಗಿದೆ.

* ಶೂದ್ರ ತಾನು ಮದುವೆಯಾದ ಹೆಣ್ಣನ್ನು ಸಂಭೋಗಮಾಡುವಂತಿಲ್ಲ ಪ್ರಥಮ ಮೂರು ದಿನಗಳ ಕಾಲ ಬ್ರಾಹ್ಮಣನ ಮನೆಯಲ್ಲಿ ಆ ಹೆಣ್ಣು ವಾಸ ಮಾಡಬೇಕು ಮತ್ತು ಆ ಹೆಣ್ಣು ಬ್ರಾಹ್ಮಣನಿಗೆ ಅವಳ ದೇಹಸೇವೆ ಕೊಡಬೇಕು ಅದೂ ಬ್ರಾಹ್ಮಣನಿಗೆ ಸಂತೃಪ್ತಿ ಯಾಗುವ ತನಕ.ಒಂದು ವೇಳೆ ಬ್ರಾಹ್ಮಣನಿಗೆ ಮೂರು ದಿನದಲ್ಲಿ ಸಂತೃಪ್ತಿ ಯಾಗದೇ ಇದ್ದರೆ ಬ್ರಾಹ್ಮಣ ಆ ಹೆಣ್ಣನ್ನು ತನಗೆ ತೃಪ್ತಿ ಆಗುವ ತನಕ ಇಟ್ಟುಕೊಳ್ಳಬಹುದು.ಕಾರಣ ಬ್ರಾಹ್ಮಣನಿಂದ ಸಂಭೋಗಿಸಿಕೊಂಡ ಶೂದ್ರನ ಹೆಣ್ಣು ಪಾವನಳಾಗುತ್ತಾಳೆ ಮುಂದಿನ ಜನ್ಮದಲ್ಲಿ ಆ ಶೂದ್ರ ಬ್ರಾಹ್ಮಣರಾಗಿ ಹುಟ್ಟುವರು.

* ಲೋಕೊಧ್ಧಾರಕ್ಕಾಗಿ ಬ್ರಹ್ಮ ತನ್ನ ಮುಖದಿಂದ ಬ್ರಾಹ್ಮಣನನ್ನು ಭುಜದಿಂದ ಕ್ಷತ್ರೀಯನನ್ನು ತೊಡೆಯಿಂದ ವೈಶ್ಶನನ್ನು ಮತ್ತು ಪಾದದಿಂದ ಶೂದ್ರನನ್ನು ಸೃಷ್ಟಿಸಿದ್ದಾನೆ.

* ಶೂದ್ರನಿಗೆ ಅಸಹ್ಯ ಸೂಚಕವಾದ ಹೆಸರಿಡಬೇಕು.ಬ್ರಾಹ್ಮಣ ಶುಭ ಕ್ಷತ್ರಿಯ ಶಕ್ತಿ ವೈಶ್ಯ ಧನ ಸೂಚಕ ಹೆಸರಿಟ್ಟುಕೊಳ್ಳಬೇಕು.

* ಶೂದ್ರನಿಗೆ ಧರ್ಮೋಪದೇಶ ಮಾಡಬಾರದು ಅವನು ಪಾಪಿ. ಅವನಿಗೆ ಶಿಕ್ಷಣದ ಹಕ್ಕಿಲ್ಲ. ಅವನು ಸೇವಕ ಮಾತ್ರ.

* ಬ್ರಾಹ್ಮಣನು ತನಗೆ ಇಷ್ಟ ಬಂದ ಶೂದ್ರ ಹೆಣ್ಣನು ಸಂಭೋಗಿಸಬಹುದು ಮತ್ತು ಇದು ಧರ್ಮಕೂಡ .ಕಾರಣ ಶೂದ್ರ ಹುಟ್ಟಿರುವುದೇ ಬ್ರಾಹ್ಮಣನ ಸೇವೆಗಾಗಿ.

ಆ ಕಾರಣಕ್ಕಾಗಿ ಬನ್ನಿ ಹಿಂದುತ್ವವನ್ನು ಬೆಂಬಲಿಸೋಣ, ರಕ್ಷಿಸಿ ಉಳಿಸೋಣ. ಆ ಮೂಲಕ ನಮ್ಮ ಸನಾತನ ಹಿಂದೂ ಧರ್ಮವನ್ನು ಶತಮಾನಗಳ ಹಿಂದಿನ ವೈಭವಕ್ಕೆ ಮರಳಿ ತರೋಣ. 97% ಕೆಳಜಾತಿಯ ಭೂಮಿಯ ಹಕ್ಕನ್ನು ಯಾವುದೇ ಪ್ರತಿಭಟನೆ ಮಾಡದೇ ವಾಪಾಸು ಬಿಟ್ಟುಕೊಡೋಣ. ನಮ್ಮಜ್ಜ, ಪಿಜ್ಜರಂತೆ ಒಡೆಯರುಗಳ ಮನೆಯ ಒಕ್ಕಲಾಗಿ ಅವರುಗಳ ಗುಲಾಮಗಿರಿಯನ್ನು ಮಾಡಿಕೊಂಡಿರೋಣ. ನಮ್ಮ ಮನೆಯ ಮಕ್ಕಳನ್ನು ಶಾಲೆಗೆ ಕಳುಹಿಸದೆ ಒಡೆಯರುಗಳ ಮನೆಗಳ ದನ ಮೇಯಿಸಲು, ಸೆಗಣಿ ಬಾಚಲು ಕಳುಹಿಸೋಣ. ನಮ್ಮ ತಾಯಂದಿರನ್ನು, ಅಕ್ಕ ತಂಗಿಯರನ್ನು ಒಡೆಯರ ಮನೆಯ ಪಾತ್ರೆಗಳನ್ನು ತೊಳೆಯಲು, ಬಟ್ಟೆ ಒಗೆಯಲು, ನೆಲಗುಡಿಸಲು ಕಳಿಸೋಣ. ಹಿಂದೆ ಇದ್ದಂತೆ ಒಡೆಯರುಗಳು ನಮ್ಮ ಮನೆಯ ಬೆಡ್ ರೂಮಿಗೆ ಬಂದಾಗ ನಾವು ಪಾವನರಾದೆವು ಎಂಬ ಧನ್ಯತಾ ಭಾವದಿಂದ ಕೈ ಮುಗಿದು ಹೊರಹೋಗೋಣ.

ಹಿಂದೆ ಸಾವಿರಾರು ವರ್ಷಗಳ ಕಾಲ ಇದೇ ವೈಭವದಲ್ಲಿದ್ದ ನಮ್ಮ ಧರ್ಮದ 97% ಮನೆಯ ಬಡವರ ಮಕ್ಕಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಈ ಮಿಷನರಿಗಳು, ಸ್ವಾತಂತ್ರ್ಯ ನಂತರ ಈ ಕಾಂಗ್ರೆಸಿಗರು ಶಾಲೆಗಳನ್ನು ನಿರ್ಮಿಸಿ, ವಿದ್ಯೆ ಕೊಡಿಸಿ, ಸರ್ಕಾರಿ ಉದ್ಯೋಗ ಕೊಟ್ಟು ಕೆಡಿಸಿ ಬಿಟ್ಟಿದ್ದಾರೆ. ಅವರುಗಳಿಗೆ ಈ ಕಾಂಗಿಗಳು ಭೂಮಿಯ ಹಕ್ಕನ್ನು ನೀಡುವ ಮೂಲಕ ಅವರುಗಳ ಪೂರ್ವಜರಿಗಿದ್ದ ಹಿಂದುತ್ವದ ಕುರಿತಾದ ಅಂದರೆ ಮೇಲ್ಜಾತಿಗಳ ಕುರಿತಾಗಿದ್ದ ಗೌರವವನ್ನು ನಾಶಗೊಳಿಸಿದ್ದಾರೆ. ಅವರುಗಳಿಗೆ ಅಧಿಕಾರದ ಸ್ಥಾನಗಳನ್ನು ನೀಡುವ ಮೂಲಕ, ಅವರುಗಳು ಮೇಲ್ಜಾತಿಗರ ಸರಿಸಮಕ್ಕೆ ಕುಳಿತುಕೊಳ್ಳುವಂತೆ, ಅಧಿಕಾರ ಚಲಾಯಿಸುವಂತೆ ಮಾಡಿ ಹಿಂದುತ್ವದ ಮೂಲ ತತ್ವಕ್ಕೆ ಅಪಾಚಾರ ಮಾಡಿದ್ದಾರೆ. ಈ ಮೇಲಿನ ಮೂರು ಘಟನೆಗಳೇ ಸಾಕು ಕಾಂಗ್ರೆಸ್ ಅದೆಂತಹ ಹಿಂದೂ ವಿರೋಧಿ ಎಂದು ನಿರೂಪಿಸಲು. ಸ್ವಾತಂತ್ರ್ಯ ಸಿಗುವ ವೇಳೆಗೆ ಈ ಗಾಂಧಿ, ನೆಹರೂ, ಅಂಬೇಡ್ಕರ್ ಮುಂತಾದ ನಾಯಕರುಗಳು ಅಥವಾ ಈ ಕಾಂಗ್ರೆಸ್ ಇಲ್ಲದಿರುತ್ತಿದ್ದರೆ ಭಾರತವಿನ್ನೂ (ಭಾರತ ಎಂದರೆ 3% ಮೇಲ್ಜಾತಿ) ಅದೇ ವೈಭವದಿಂದ ಮೆರೆದಾಡುತ್ತಿರುತ್ತಿತ್ತು.

ಮೊದಲೇ ಇದೆಲ್ಲದರ ಅರಿವಿದ್ದ ಕಾರಣಗಳಿಂದಾಗಿಯೇ ಹಿಂದುತ್ವದ ಪ್ರತಿಪಾದಕರುಗಳಾದ ನಮ್ಮ ಗುರೂಜಿಗಳು ಸಂಘ ವನ್ನು ಕಟ್ಟಿದ್ದರು. ‌ಆ ಮೂಲಕ ಬ್ರಿಟಿಷ್ ಸಾಮ್ರಾಜ್ಯದ ಉಳಿವಿಗಾಗಿಯೇ ಸ್ವಾತಂತ್ರ್ಯ ಹೋರಾಟಗಾರರ ವಿರುದ್ದ ಕೆಳಜಾತಿಯ ಭಾರತೀಯ ಯುವಕರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರ್ಪಡೆಗೊಳಿಸಿದ್ದರು. ಇದೆಲ್ಲವನ್ನೂ ವಿರೋಧಿಸಿ ಕೆಳಜಾತಿಯ 97% ಜನರನ್ನು ಜಾಗೃತಿಗೊಳಿಸುತ್ತಿದ್ದ ಅಂಬೇಡ್ಕರ್ ಮುಂತಾದ ನಾಯಕರನ್ನು ಬೆಂಬಲಿಸುತ್ತಿದ್ದ ಮಹಾತ್ಮಾ ಗಾಂಧಿಯವರನ್ನು ಆ ಕಾರಣಕ್ಕಾಗಿಯೇ ಹಿಂದೂವಿರೋಧಿಯೆಂದು ಬಿಂಬಿಸಿ ಹತ್ಯೆಗೈಯಲಾಗಿತ್ತು. "ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು" ಸಿದ್ದಾಂತ ಹೊಂದಿದ್ದ ಕಾರಣಕ್ಕಾಗಿಯೇ ಅಂಬೇಡ್ಕರ್ ಸಂವಿಧಾನವನ್ನು ವಿರೋಧಿಸಲಾಗಿತ್ತು. ಕಾಶ್ಮೀರಿ ಪಂಡಿತ ಚಾಚಾ ನೆಹರೂರವರು 3% ಮೇಲ್ಜಾತಿಯ ಸಮುದಾಯವರು ಎಂಬ ಕಾರಣದಿಂದಾಗಿ ಹಿಂದುತ್ವದ ಪರ ಅವರು ನಿಲ್ಲಬಹುದೆಂದು ನಂಬಲಾಗಿತ್ತು. ಆದರೆ ಅವರು ನಮ್ಮ ಬಲವಾದ ನಂಬಿಕೆಯನ್ನು ಹುಸಿಗೊಳಿಸಿ ಗಾಂಧಿಯವರ ಪರ, ಅಂಬೇಡ್ಕರ್ ಪರ ಎಲ್ಲಕ್ಕಿಂತ ಹೆಚ್ಚಾಗಿ 97% ಕೆಳಜಾತಿಗಳ ಪರ ನಿಂತು ಶತಶತಮಾನಗಳ ಕಾಲ ಈ ನೆಲದಲ್ಲಿ ನಾವು ವೈಭವದಿಂದ ಮೆರೆದಾಡುತ್ತಿದ್ದ ಹಿಂದುತ್ವವನ್ನು ನಾಶಗೊಳಿಸಿದರು. ಆ ಕಾರಣಕ್ಕಾಗಿ ನಾವು ನೆಹರೂರವರನ್ನು ನಖಶಿಖಾಂತ ವಿರೋಧಿಸುತ್ತಿದ್ದೇವೆ. ಆ ಕಾರಣಕ್ಕಾಗಿಯೇ ನಮ್ಮ ಪರವಾಗಿರುವ ಮೋದಿಯವರು ಹೋದಲ್ಲಿ ಬಂದಲ್ಲೆಲ್ಲಾ ಈ ದೇಶದ ಮೊದಲ ಪ್ರಧಾನಿ ನೆಹರೂರವರನ್ನು ದೂರುತ್ತಿರುದಾಗಿದೆ.

ಇಷ್ಟಾದ ನಂತರವೂ ಆ ಕಾಂಗ್ರೆಸ್ ನವರು ಪಂಚವಾರ್ಷಿಕ ಯೋಜನೆಗಳು, 20ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿ, ಗ್ರಾಮಗ್ರಾಮಗಳಲ್ಲಿ ಶಾಲೆಗಳನ್ನು ನಿರ್ಮಿಸಿ, ಕೆಳ ಜಾತಿಗಳ ಮಕ್ಕಳಿಗೆ ವಿದ್ಯೆ ಕೊಡಿಸಿ ಆ ಮೂಲಕ 3% ಮೇಲ್ಜಾತಿಯ ಮಕ್ಕಳು ಆ 97% ಕೆಳಜಾತಿಗಳ ಜನರು ಬೆವರು ಸುರಿಸಿ ದುಡಿದು ತಿಂದಂತೆ, ದುಡಿದು ತಿನ್ನುವಂತೆ ಮಾಡಿದರು.

ಆದಕಾರಣ ಹಿಂದೂಗಳೇ ಇನ್ನಾದರೂ ಎಚ್ಚರಗೊಳ್ಳಿ. ಪ್ರಪಂಚದಲ್ಲಿ ಹಿಂದೂಗಳಿಗಿರುವುದು ಇದೊಂದೇ ದೇಶ. ಬೇರೆಲ್ಲಾ ದೇಶಗಳೂ ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ, ಸಾಮಾಜಿಕವಾಗಿ ಮುಂದುವರಿದಿವೆ. ಅಲ್ಲಿ ನಮ್ಮ ಯಾವ ಆಟಗಳೂ ನಡೆಲಾರವು. ಆ ಕಾರಣಕ್ಕಾಗಿ ಈ ದೇಶವನ್ನು ಹಿಂದೂ ದೇಶವನ್ನಾಗಿ ಉಳಿಸಿಕೊಳ್ಳೋಣ. ಹಿಂದುತ್ವದ ಹೆಸರಲ್ಲಿ ಅವರಿಗೇ ತಿಳಿಯದಂತೆ ಅವರುಗಳ ಬ್ರೈನ್ ವಾಷ್ ಮಾಡಿ ನಮ್ಮ ಪರ ಹೋರಾಟಕ್ಕೆ ಬಳಸಿಕೊಳ್ಳೋಣ.

ಈ ಕಾಂಗ್ರೆಸ್ ಇರುವ ತನಕ ಭಾರತದಲ್ಲಿ ನಮಗೆ ಉಳಿಗಾಲವಿಲ್ಲ ಆ ಕಾರಣಕ್ಕಾಗಿ ಬನ್ನಿ.. ಹಿಂದುತ್ವವನ್ನು ಬೆಂಬಲಿಸೋಣ. ಕಾಂಗ್ರೆಸ್ ಅನ್ನು ನಾಶಗೊಳಿಸೋಣ.

Advertisement
Advertisement
Recent Posts
Advertisement