Advertisement

ಸಾವಿಗೆ ಕಾರಣವಾಗುತ್ತಿರುವ 'ಪ್ರಾಯೋಗಿಕ ಹಂತದಲ್ಲಿರುವ ಕರೋನಾ ಲಸಿಕೆ' : ಡಾ| ಎಚ್.ಸಿ ಮಹದೇವಪ್ಪಆಕ್ರೋಶ

Advertisement

'ಕರೋನಾ ಲಸಿಕೆ ಪಡೆದ ನಂತರದಲ್ಲಿ ಸಾವನ್ನಪ್ಪಿದ್ದಾರೆ' ಎಂಬ ವರದಿಗಳು ಅಲ್ಲಲ್ಲಿ ಪ್ರಕಟವಾಗುತ್ತಿದ್ದು ಮಧ್ಯ ಪ್ರದೇಶ ಸರ್ಕಾರ ಲಸಿಕೆ ಪಡೆದು ಸಾವನ್ನಪ್ಪಿದ ವ್ಯಕ್ತಿಯೊಬ್ಬರ ಪ್ರಕರಣದ ತನಿಖೆಗೆ ಆದೇಶಿಸಿದೆ. ನಿಜಕ್ಕೂ ಇದೊಂದು ಕೇಂದ್ರ ಸರ್ಕಾರದ ಅತಿದೊಡ್ಡ ಬೇಜವಾಬ್ದಾರಿ ನಡೆಯೇ ಆಗಿದ್ದು ಪ್ರಾಯೋಗಿಕ ಹಂತದಲ್ಲಿರುವ ಲಸಿಕೆಯನ್ನು ಜನರ ಮೇಲೆ ಪ್ರಯೋಗಿಸಲು ಹೊರಟಿದ್ದು ಜನ ಸಾಮಾನ್ಯರಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಹೇಳಿದ್ದಾರೆ. ಕರೋನಾ ನಿಯಂತ್ರಣದಲ್ಲಿ ಸಂಪೂರ್ಣ ವಿಫಲವಾಗಿರುವ ಸರ್ಕಾರವು ಕರೋನಾ ಸೋಂಕು ಸರ್ಕಾರದ ಫಲಪ್ರದವಾದ ಪ್ರಯತ್ನಗಳಿಲ್ಲದೇ ತಾನಾಗಿ ತಾನೇ ನಿಯಂತ್ರಣಕ್ಕೆ ಬರುತ್ತಿರುವ ಹೊತ್ತಿನಲ್ಲಿ ಇವರ ಹೊಲಸು ಪ್ರಚಾರಕ್ಕಾಗಿ ಪ್ರಾಯೋಗಿಕ ಹಂತದ ಲಸಿಕೆಯನ್ನು ಜನರಿಗೆ ನೀಡಲು ಹೊರಟಿದ್ದಾರಲ್ಲಾ ... ಇಂತಹ ಅವಿವೇಕಿಗಳಿಗೆ ಏನೆಂದು ಹೇಳಬೇಕು? ದಯಮಾಡಿ ಮಾಧ್ಯಮಗಳು ಒಂದು ಕ್ಷಣ "ಮೋದಿ ಬಾಹುಬಲಿ" "ಆ ಬಲಿ" "ಈ ಬಲಿ" ಎಂಬ ತಲೆಯಿಲ್ಲದ ಕಾರ್ಯಕ್ರಮಗಳನ್ನು ಬದಿಗೊತ್ತಿ ಪ್ರಾಯೋಗಿಕ ಲಸಿಕೆಯ ಬಳಕೆಯ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಲ್ಲವಾದರೆ ಆ ಲಸಿಕೆಯನ್ನು ಬಳಸಿ ಆಗುವ ಅನಾಹುತಕ್ಕೆ ಕ್ಷಮೆ ಇರುವುದಿಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. __________________________________ ►►ನಿಮಗೆ ಈ ಬರಹ / ಸುದ್ದಿ ಇಷ್ಟವಾಗಿದ್ದರೆ ಅಗತ್ಯವಾಗಿ Like ಮಾಡಿ ಹಾಗೂ Share ಮಾಡಿ. ►►ನಿಮ್ಮ ಭಾಗದ ಸುದ್ದಿಗಳು ಹಾಗೂ ಜಾಹೀರಾತು ಪ್ರಸಾರಕ್ಕಾಗಿ ಮೊಬೈಲ್ ಸಂಖ್ಯೆ; 9844002593 ( ಜಾಹೀರಾತು ವಿಭಾಗ) ಹಾಗೂ E-mail ID: kannadamedia1947@gmail.com (ಸುದ್ದಿ ವಿಭಾಗ) ಕ್ಕೆ ಸಂಪರ್ಕಿಸಿ. ►►ಸಾಮಾಜಿಕ ಕಾಳಜಿಯ, ಜನಪರ ಸುದ್ದಿಗಳಿಗಾಗಿ ಸದಾ ಓದಿರಿ: www.kannadamedia.com

Advertisement
Advertisement
Recent Posts
Advertisement