Advertisement

Video : ಸ್ವತಃ ಕೊರೊನಾ ನಿಯಮ ಉಲ್ಲಂಘನೆ ಮಾಡಿಕೊಂಡೆ ಜನರಿಗೆ ಕೊರೊನಾ ಪಾಠ ಹೇಳಿದ ಸಚಿವ ಈಶ್ವರಪ್ಪ.

Advertisement

ಸಚಿವ ಈಶ್ವರಪ್ಪನವರು ಜನಜಂಗುಳಿಯ ನಡುವೆ ಟಿವಿ ಕ್ಯಾಮರಾದೆದುರು ನಿಂತು ರಾಜ್ಯದ ಜನರಿಗೆ ಕೊರೊನಾ ನಿಯಮ ಪಾಲನೆಯ ಕುರಿತು ಪಾಠ ಹೇಳುವ ವಿಡಿಯೋ ಒಂದು ಇದೀಗ ವೈರಲ್ ಆಗಿದೆ. ದೆಹಲಿ ಮತ್ತಿತರೆಡೆ ಈಗಾಗಲೇ ಲಾಕ್‌ಡೌನ್ ಘೋಷಿಸಲ್ಪಟ್ಟಿದ್ದರೂ ನಾವು ಅದರ ಪರವಾಗಿಲ್ಲ. ಆದರೂ ಸರ್ಕಾರದ ವಾರಾಂತ್ಯದ ಲಾಕ್‌ಡೌನ್ ಮತ್ತು ರಾತ್ರಿ ಕರ್ಪ್ಯೂಗಳನ್ನು ಪಾಲಿಸುವಂತೆ. ಆ ಮೂಲಕ ಜೀವ ಉಳಿಸಿಕೊಳ್ಳುವಂತೆ ಅಂಗಡಿ ಮಾಲಕರಿಗೆ ಕಿವಿಮಾತು ಹೇಳುವ ಆ ವಿಡಿಯೋದಲ್ಲಿ ಸಚಿವರ ಸುತ್ತ ಕಿಕ್ಕಿರಿದು ಜನರು ಸೇರಿರುವುದು ಇದೀಗ ಅಪಹಾಸ್ಯಕ್ಕೆ ಈಡಾಗಿದೆ. ಹೇಳುವುದೊಂದು ಮಾಡುವುದೊಂದು ಮಾತಿಗೆ ಈಶ್ವರಪ್ಪನವರು ಈ ಮೂಲಕ ಸಾಕ್ಷಿಯಾಗಿದ್ದಾರೆ. ವಿಡಿಯೋ ನೋಡಿ.... ಸುದ್ದಿಯ ಹಿನ್ನೆಲೆ: ರಾಜ್ಯದಲ್ಲಿ ಕೊರೊನಾ ಪ್ರಕರಣ ಕೈಮೀರಿದ ಬೆನ್ನಲ್ಲೇ ರಾಜ್ಯ ಸರಕಾರ ಹೊಸ ಕೋವಿಡ್‌ ಮಾರ್ಗಸೂಚಿ ಬಿಡುಗಡೆ ಮಾಡಿತ್ತು ಮತ್ತು ವಾರಾಂತ್ಯ ಕರ್ಫ್ಯೂ ಜಾರಿ ಮಾಡಿತ್ತು. ಅಲ್ಲದೇ ಮೇ 4ರವರೆಗೆ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಕೂಡಾ ಜಾರಿಗೊಳಿಸಿತ್ತು. ಶುಕ್ರವಾರ ರಾತ್ರಿ 9ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ವೀಕೆಂಡ್‌ ಕರ್ಪ್ಯೂ ಘೋಷಿಸಲ್ಪಟ್ಟಿದ್ದರೆ, ಉಳಿದಂತೆ ವಾರದ ಇತರ ದಿನಗಳಲ್ಲಿ ರಾತ್ರಿ ಕರ್ಪ್ಯೂ (ರಾತ್ರಿ 9ರಿಂದ ಬೆಳಗ್ಗೆ 6 ಗಂಟೆವರೆಗೆ) ಜಾರಿಯಲ್ಲಿರುತ್ತದೆ . __________________________________

Advertisement
Advertisement
Recent Posts
Advertisement