Advertisement

ಇಂದಿನ 'ಕಾರ್ಟೂನ್ ಕಾರ್ನರ್‌'ನಲ್ಲಿ: ಕೋಮು ವೈರಸ್ ಮತ್ತು ಕೊರೊನಾ ವೈರಸ್ ಮುಖಾಮುಖಿ!

Advertisement

ದೇಶದಾದ್ಯಂತ ಸರ್ಕಾರ ವಿಧಿಸಿದ ಕರ್ಪ್ಯೂ, ಲಾಕ್‌ಡೌನ್ ನಿಂದಾಗಿ ಜನ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಕೊರೊನಾ ಪೀಡಿತರು ಆಸ್ಪತ್ರೆಯಲ್ಲಿ ಬೆಡ್ ಸಿಗದೆ, ಆಕ್ಸಿಜನ್ ಸಿಗದೆ, ಸರಿಯಾದ ಚಿಕಿತ್ಸೆ ಸಿಗದೆ ಪರದಾಡುತ್ತಿದ್ದಾರೆ, ಬೀದಿ ಹೆಣವಾಗುತ್ತಿದ್ದಾರೆ. ಆದರೆ ಅವರುಗಳಿಗೆ ರಕ್ಷಣೆ ನೀಡಬೇಕಾದ, ಸವಲತ್ತು ಒದಗಿಸಬೇಕಾದ ಸರ್ಕಾರದ ಮಂತ್ರಿಗಳು, ಶಾಸಕರು, ಸಂಸದರುಗಳೇ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇಡೀ ವಿಶ್ವದ ಬೇರೆಬೇರೆ ರಾಷ್ಟ್ರಗಳು ಕೊರೊನಾ ವಿಪತ್ತು ಪರಿಹಾರಕ್ಕೆ ವೈಮನಸ್ಸು ಮರೆತು ಕೈ ಮಿಲಾಯಿಸಿ ಕೆಲಸ ಮಾಡುತ್ತಿದ್ದರೆ ಕರ್ನಾಟಕದ ಆಡಳಿತ ಪಕ್ಷದ ಶಾಸಕರು, ಸಂಸದರು ಅನಗತ್ಯ ಗೊಂದಲ ಹುಟ್ಟು ಹಾಕುವ ಮೂಲಕ ಕೋಮು ಸಾಮರಸ್ಯ ಕದಡಲು ಮುಂದಾಗಿರುವುದು ಅಕ್ಷಮ್ಯ! ಆ ನಿಟ್ಟಿನಲ್ಲಿ ಇಂದಿನ ಕಾರ್ಟೂನು.

Advertisement
Advertisement
Recent Posts
Advertisement