Advertisement

ಬಿಜೆಪಿಗರೆ ನೀಚ ರಾಜಕಾರಣ ಬಿಡಿ: ತಾಕತ್ತಿದ್ದರೆ ಮೇಕೆದಾಟು ಯೋಜನೆ ಜಾರಿಮಾಡಿ, ನಿಮ್ಮ ಪೌರುಷ ತೋರಿಸಿ: ಡಿ.ಕೆ ಶಿವಕುಮಾರ್

Advertisement

ಮೇಕೆದಾಟು ಯೋಜನೆಯನ್ನು ಕಾರ್ಯಗತಗೊಳಿಸುವಂತೆ ಒತ್ತಾಯಿಸಿ ಆದಿತ್ಯವಾರ (ಜನವರಿ 09) ಬೆಳಿಗ್ಗೆ 9.30ಕ್ಕೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಕೆದಾಟು ಸಂಗಮದಿಂದ ಪಾದಯಾತ್ರೆ ಆರಂಭಗೊಂಡಿತ್ತು. ಈ ಪಾದಯಾತ್ರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಹಿರಿಯ, ಕಿರಿಯ ನಾಯಕರುಗಳು ಭಾಗವಹಿಸಿದ್ದರು. 73ವರ್ಷ ಪ್ರಾಯದ ಸಿದ್ದರಾಮಯ್ಯನವರು ಜ್ವರದಿಂದ ಬಳಲುತ್ತಿದ್ದರೂ ಪಕ್ಷದ ಪೂರ್ವನಿರ್ಧರಿತ ಕಾರ್ಯಕ್ರಮ ಎಂಬ ಕಾರಣದಿಂದಾಗಿ ನಿರಂತರ ನಾಲ್ಕು ಕಿಲೋಮೀಟರ್ ಕ್ರಮಿಸಿದ ನಂತರ ಇನ್ನು ನಡೆಯಲು ಆಗುವುದಿಲ್ಲ‌ ಎಂದು ತಿಳಿದು ಆ ನಂತರ ವೈದ್ಯರ ಸಲಹೆ ಹಾಗೂ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಯವರಂತಹ ಪಕ್ಷದ ನಾಯಕರ ಒತ್ತಾಯದ ಮೇರೆಗೆ ವಿಶ್ರಾಂತಿ ಪಡೆಯಲು ಕಾರು ಹತ್ತಿ ತೆರಳಿದ್ದರು. ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ಪಾದಯಾತ್ರೆಯಲ್ಲಿ ಇತರ ನಾಯಕರುಗಳ ಜೊತೆ ಡಿ.ಕೆ ಶಿವಕುಮಾರ್ ರವರು ಸಂಜೆಯ ತನಕ ಮುಂದಿನ ಸಾಲಿನಲ್ಲಿ ನಡೆದಿದ್ದರು. ಈ ಸಂದರ್ಭದಲ್ಲಿ ಡಿಕೆಶಿಯವರ ಜೊತೆಗಿನ ನಡಿಗೆಯ ವಿಡಿಯೋ ಮಾಡಿಕೊಳ್ಳುವ, ಸೆಲ್ಫಿ ತಗೆದುಕೊಳ್ಳುವ ಹುಮ್ಮಸ್ಸಿನ ಯುವ ಕಾರ್ಯಕರ್ತರ ದೂಡಾಟದಿಂದ ಮತ್ತು ದಿನವಿಡೀ ಬಿಸಿಲಿನಲ್ಲಿ ನಡೆದ ಸುಸ್ತಿನಿಂದ ಡಿಕೆಶಿಯವರು ನಡೆಯುವಾಗ ಆಚೀಚೆಗೆ ಸ್ವಲ್ಪ ಪ್ರಮಾಣದಲ್ಲಿ ವಾಲಿದ್ದರು. ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ಆದರೆ ಆ ನಂತರ ಈ ವಿಡಿಯೋ ಹಿಡಿದುಕೊಂಡು ಬಿಜೆಪಿ ಐಟಿ ಸೆಲ್‌ನವರು ಡಿಕೆಶಿಯವರು ಕುಡಿದು ವಾಲುತ್ತಾ ನಡೆಯುತ್ತಿದ್ದಾರೆ ಎಂಬಂತೆ ಸಿನೇಮಾ ಹಾಡನ್ನು ಸೇರಿಸಿ ಎಡಿಟ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡತೊಡಗಿದ್ದರು. ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ಇದರಿಂದ ಕುಪಿತರಾದ ಡಿಕೆಶಿಯವರು "ಬಿಜೆಪಿಗರೆ, ಮೊದಲು ನಿಮ್ಮ ನೀಚ ರಾಜಕಾರಣ ಬಿಡಿ. ತಾಕತ್ತಿದ್ದರೆ ಮೇಕೆದಾಟು ಯೋಜನೆ ಜಾರಿಮಾಡಿ ಕೇಂದ್ರ ಸರ್ಕಾರದ ಬಳಿ ನಿಮ್ಮ ಪೌರುಷ ತೋರಿಸಿ" ಎಂದು ಪಾದಯಾತ್ರೆಯ ವಿಡಿಯೋ ತುಣುಕು ಬಳಸಿ ಟ್ರೋಲ್ ಮಾಡುತ್ತಿರುವ ಬಿಜೆಪಿಗರಿಗೆ ಡಿಕೆಶಿಯವರು ತಿರುಗೇಟು ನೀಡಿದ್ದಾರೆ. ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ ನಿನ್ನೆ ಆರಂಭಗೊಂಡಿರುವ ಮೇಕೆದಾಟು ಪಾದಯಾತ್ರೆಯು ಐದು ದಿನ ಗ್ರಾಮೀಣ ಭಾಗದಲ್ಲಿ ಹಾಗೂ ಐದು ದಿನ ನಗರ ಪ್ರದೇಶದಲ್ಲಿ ಪಾದಯಾತ್ರೆ ನಡೆಯಲಿದೆ. ಹಾಗೂ ಜನವರಿ 19ರಂದು ಫ್ರೀಡಂ ಪಾರ್ಕ್ (ಬೆಂಗಳೂರು)ನಲ್ಲಿ ಸಮಾರೋಪಗೊಳ್ಳಲಿದೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement