Advertisement

ಸಿಂಧೂರ, ಹಿಜಾಬ್ ಎರಡೂ ಆಯಾಯ ಧರ್ಮಗಳ ಸಂಸ್ಕೃತಿ ಮತ್ತು ನಂಬಿಕೆ. ಅವುಗಳನ್ನು ಧರಿಸುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ: ಸಿದ್ದರಾಮಯ್ಯ ಅಭಿಮತ

Advertisement

ಸಿಂಧೂರ, ಹಿಜಾಬ್ ಎರಡೂ ನಮ್ಮ "ಸಂಸ್ಕೃತಿ ಮತ್ತು ನಂಬಿಕೆ". ಕುಂಕುಮ ಇಡುವುದರಿಂದ - ಹಿಜಾಬ್ ಧರಿಸುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾರದೋ ಷಡ್ಯಂತ್ರಕ್ಕೆ ನಮ್ಮ ಸಂಸ್ಕೃತಿ ಮತ್ತು ನಂಬಿಕೆಗಳು ಬಲಿಯಾಗಬಾರದು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ರಾಜ್ಯಾದ್ಯಂತ ಹಿಂದೂ ಮುಸಲ್ಮಾನರ ನಡುವೆ ಅನಗತ್ಯವಾಗಿ ವೈಷಮ್ಯದ ಕಿಚ್ಚು ಹೊತ್ತಿಸಿರುವ ಮತ್ತು ಜೊತೆಯಲ್ಲಿ ಓದುವ ವಿಧ್ಯಾರ್ಥಿಗಳ ನಡುವಿನ ಸೌಹಾರ್ಧತೆಯನ್ನು ಕೆಡಿಸಿರುವ 'ಶಾಲಾ ವಿದ್ಯಾರ್ಥಿನಿಯರು ಹಾಕುವ ಹಿಜಾಬ್ ವಿರುದ್ದ ಕೆಲವು ಸ್ಥಾಪಿತ ಹಿತಾಸಕ್ತ ದುಷ್ಕರ್ಮಿಗಳು ಕೇಸರಿ ಶಾಲು ವಿತರಿಸಿದ ಮತ್ತು ವಿಧ್ಯಾರ್ಥಿಗಳು ಧರಿಸಿ ಪ್ರತಿಭಟಿಸಿದ ಘಟನೆ'ಯನ್ನು ಖಂಡಿಸಿ ಅವರು ಸರಣಿ ಟ್ವೀಟ್ ಮೂಲಕ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.

ಕೇಸರಿ ಶಾಲನ್ನು ಅಮಾನವೀಯ, ದ್ವೇಷ ಹರಡುವ ಕಾರಣಗಳಿಗೆ ಬಳಸಬಾರದು. ಕೇಸರಿ "ತ್ಯಾಗದ ಸಂಕೇತ", ಅದನ್ನು ದ್ವೇಷ ಸಾಧನೆಗೆ ಬಳಸುವುದೇ "ಧರ್ಮ ದ್ರೋಹ".
ಎಳೆಯ ಮಕ್ಕಳಲ್ಲಿ ದ್ವೇಷ ತುಂಬುವವರು "ಜೀವ ವಿರೋಧಿಗಳು" ಎಂದವರು ಹೇಳಿದ್ದಾರೆ.

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ರಾಷ್ಟ್ರ ಧ್ವಜವನ್ನು ಹಿಡಿದು ಬ್ರಿಟಿಷರ ವಿರುದ್ಧ ಹೋರಾಡಿದ್ದರೆ ಅವರಿಗೆ ರಾಷ್ಟ್ರ ಧ್ವಜ ಮತ್ತು ರಾಷ್ಟ್ರೀಯ ಲಾಂಛನಗಳ ಬಗ್ಗೆ ನಿಜವಾದ ಗೌರವ - ಭಕ್ತಿ ಇರುತ್ತಿತ್ತು.
ಅಂದೂ ಬಿಜೆಪಿ ದೇಶದ ಪರ ಇರಲಿಲ್ಲ, ಇಂದೂ ಇಲ್ಲ ಎಂದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಪ್ರೇಮದ ನಾಟಕವಾಡುವ ಬಿಜೆಪಿಯವರಿಗೆ ರಾಷ್ಟ್ರಧ್ವಜ ಮತ್ತು ಈಶ್ವರಪ್ಪ ಅವರ ಸಚಿವ ಸ್ಥಾನ ಇವೆರಡರಲ್ಲಿ ಯಾವುದು ನಿಮ್ಮ ಆಯ್ಕೆ ಎಂಬ ಪ್ರಶ್ನೆಯನ್ನು ಇಟ್ಟಿದ್ದೆವು. "ಬಿಜೆಪಿಗೆ ರಾಷ್ಟ್ರ ಧ್ವಜಕ್ಕಿಂತ ಸಚಿವ ಸ್ಥಾನವೇ ಮುಖ್ಯವಾದಂತಿದೆ". ಈ ಘಟನೆಯಿಂದ ಬಿಜೆಪಿಯ ದೇಶಪ್ರೇಮದ ಹಿಂದಿರುವ ಸ್ವಾರ್ಥದ ಮುಖವಾಡ ಬಯಲಾಗಿದೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡುವುದು ಬಿಜೆಪಿಯವರಿಗೆ ಸಣ್ಣ ವಿಷಯ ಇರಬಹುದು. ಆದರೆ ನಮಗೆ ಇದು ಬಹಳ ಗಂಭೀರವಾದ ಸಂಗತಿ. ರಾಷ್ಟ್ರಧ್ವಜ ಹಿಡಿದು ಲಕ್ಷಾಂತರ ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ. "ಹುತಾತ್ಮರ ತ್ಯಾಗ ವ್ಯರ್ಥವಾಗಲು ನಾವು ಬಿಡಲ್ಲ". ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನಸ್ಸಲ್ಲಿ ದೇಶ ಪ್ರೇಮ, ದೇಶದ ಬಗ್ಗೆ ಗೌರವವಿದ್ದರೆ ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ತಕ್ಷಣ ವಜಾಗೊಳಿಸಿ, ಅಧಿಕಾರಕ್ಕಿಂತ ದೇಶ ಮೊದಲು ಎಂದು ಸಾಬೀತು ಮಾಡಲಿ ಎಂದವರು ಹೇಳಿದ್ದಾರೆ.

Advertisement
Advertisement
Recent Posts
Advertisement