Advertisement

ಕಾಶ್ಮೀರ್ ಫೈಲ್ಸ್: ಹಿಂಸಾಚಾರದಲ್ಲಿ ಸತ್ತ ಸಾವಿರಾರು ದಲಿತರ, ಮುಸ್ಲಿಮರ ಇತಿಹಾಸ ಬಚ್ಚಿಟ್ಟು ಕೇವಲ 89ಕಾಶ್ಮೀರಿ ಪಂಡಿತರ ವೈಭವೀಕರಣ ಮಾಡಲಾಗಿದೆ: ಡಾ. ಎಚ್.ಸಿ ಮಹಾದೇವಪ್ಪ

Advertisement
ಕಾಶ್ಮೀರದಲ್ಲಿ ಧಾರ್ಮಿಕ ಮೂಲಭೂತವಾದಿಗಳಿಂದ ಉಂಟಾದ ದಾಳಿಗೆ ಕಾಶ್ಮೀರದ ಜನ ಸಾಮಾನ್ಯರು ತತ್ತರಿಸಿ ಹೋದರು. ಆದರೆ ಇದೀಗ ಬಿಜೆಪಿ ಪಕ್ಷದವರು ಪ್ರಧಾನಿಯಿಂದ ಹಿಡಿದು ಶಾಸಕರು, ಸ್ಪೀಕರ್ ತನಕ ಕಾಶ್ಮೀರಿ ಪಂಡಿತರಿಗೆ ಹಾನಿ ಉಂಟಾಗಿದ್ದಕ್ಕೆ ಸಂಬಂಧಿಸಿದ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ನೋಡಲೇಬೇಕು ಎಂದಿದ್ದು ಈ ಪೈಕಿ ಬಿಜೆಪಿಯ ಕೆಲ ಅರೆ ಕಾಲಿಕ ಹುಚ್ಚರು, ಈ ಸಿನಿಮಾ ನೋಡದವರು ದೇಶದ್ರೋಹಿಗಳು ಎಂದು ಹೇಳಿರುವುದು ಅತ್ಯಂತ ಬೇಸರದ ಸಂಗತಿ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.

ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ 89 ಮಂದಿ ಕಾಶ್ಮೀರಿ ಪಂಡಿತರಿಗಾಗಿ ಬಿಜೆಪಿಗರು ಮರುಗುತ್ತಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಆ ಹಿಂಸಾಚಾರದಲ್ಲಿ ಸಾವಿರಾರು ಮಂದಿ ದಲಿತರು ಮತ್ತು ಮುಸ್ಲಿಂ ಸಮುದಾಯದ ಜನರು ಸಾವನ್ನಪ್ಪಿದ್ದಾರೆ. ಅರೆ!.. ಕಾಶ್ಮೀರಿ ಪಂಡಿತರ ಸಾವಿಗೆ ಇರುವ ಬೆಲೆ ಅವರ ಜೊತೆಯಲ್ಲೇ ಬದುಕಿದ್ದು ಅವರಂತೆಯೇ ಅಲ್ಲಿ ಸತ್ತ ದಲಿತರು ಮತ್ತು ಮುಸಲ್ಮಾನರಿಗೆ ಇಲ್ಲ ಎಂದರೆ ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ಎಂದು ಅರ್ಥವಾಗುತ್ತಿಲ್ಲ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.

ಮಕ್ಕಳು ಶಿಕ್ಷಣ ಪಡೆಯಲು ಸಹಾಯ ಮಾಡಿ ಎಂದರೆ ಹಿಜಾಬ್ ಗಲಾಟೆ ಎಬ್ಬಿಸಿ ಶಾಲಾ ವಾತಾವರಣ ಹಾಳು ಮಾಡುತ್ತಾರೆ, ಈಗ ಕಾಶ್ಮೀರಿ ಪಂಡಿತರಿಗೆ ಮಾತ್ರ ನೋವಾಯಿತು ಎಂಬಂತೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಬದುಕಿಗೆ ಒಂದಷ್ಟು ಸಹಾಯ ಮಾಡ್ರಯ್ಯ ಅಂದರೆ, ಆ ಸಿನಿಮಾ ನೋಡಿ ಈ ಸಿನಿಮಾ ನೋಡಿ ಎನ್ನುವ ಇವರಿಗೆ ಮನುಷ್ಯರಾಗುವ ಯಾವುದೇ ಅರ್ಹತೆ ಇಲ್ಲ! ಎಂದವರು ಕಿಡಿ ಕಾರಿದ್ದಾರೆ.
Advertisement
Advertisement
Recent Posts
Advertisement