Homepageರಾಜ್ಯಕಾಶ್ಮೀರ್ ಫೈಲ್ಸ್: ಹಿಂಸಾಚಾರದಲ್ಲಿ ಸತ್ತ ಸಾವಿರಾರು ದಲಿತರ, ಮುಸ್ಲಿಮರ ಇತಿಹಾಸ ಬಚ್ಚಿಟ್ಟು ಕೇವಲ 89ಕಾಶ್ಮೀರಿ ಪಂಡಿತರ ವೈಭವೀಕರಣ ಮಾಡಲಾಗಿದೆ: ಡಾ. ಎಚ್.ಸಿ ಮಹಾದೇವಪ್ಪ ಕಾಶ್ಮೀರ್ ಫೈಲ್ಸ್: ಹಿಂಸಾಚಾರದಲ್ಲಿ ಸತ್ತ ಸಾವಿರಾರು ದಲಿತರ, ಮುಸ್ಲಿಮರ ಇತಿಹಾಸ ಬಚ್ಚಿಟ್ಟು ಕೇವಲ 89ಕಾಶ್ಮೀರಿ ಪಂಡಿತರ ವೈಭವೀಕರಣ ಮಾಡಲಾಗಿದೆ: ಡಾ. ಎಚ್.ಸಿ ಮಹಾದೇವಪ್ಪ Advertisement ಕಾಶ್ಮೀರದಲ್ಲಿ ಧಾರ್ಮಿಕ ಮೂಲಭೂತವಾದಿಗಳಿಂದ ಉಂಟಾದ ದಾಳಿಗೆ ಕಾಶ್ಮೀರದ ಜನ ಸಾಮಾನ್ಯರು ತತ್ತರಿಸಿ ಹೋದರು. ಆದರೆ ಇದೀಗ ಬಿಜೆಪಿ ಪಕ್ಷದವರು ಪ್ರಧಾನಿಯಿಂದ ಹಿಡಿದು ಶಾಸಕರು, ಸ್ಪೀಕರ್ ತನಕ ಕಾಶ್ಮೀರಿ ಪಂಡಿತರಿಗೆ ಹಾನಿ ಉಂಟಾಗಿದ್ದಕ್ಕೆ ಸಂಬಂಧಿಸಿದ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ನೋಡಲೇಬೇಕು ಎಂದಿದ್ದು ಈ ಪೈಕಿ ಬಿಜೆಪಿಯ ಕೆಲ ಅರೆ ಕಾಲಿಕ ಹುಚ್ಚರು, ಈ ಸಿನಿಮಾ ನೋಡದವರು ದೇಶದ್ರೋಹಿಗಳು ಎಂದು ಹೇಳಿರುವುದು ಅತ್ಯಂತ ಬೇಸರದ ಸಂಗತಿ ಎಂದು ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಾ. ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.ಕಾಶ್ಮೀರದಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ 89 ಮಂದಿ ಕಾಶ್ಮೀರಿ ಪಂಡಿತರಿಗಾಗಿ ಬಿಜೆಪಿಗರು ಮರುಗುತ್ತಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ಆ ಹಿಂಸಾಚಾರದಲ್ಲಿ ಸಾವಿರಾರು ಮಂದಿ ದಲಿತರು ಮತ್ತು ಮುಸ್ಲಿಂ ಸಮುದಾಯದ ಜನರು ಸಾವನ್ನಪ್ಪಿದ್ದಾರೆ. ಅರೆ!.. ಕಾಶ್ಮೀರಿ ಪಂಡಿತರ ಸಾವಿಗೆ ಇರುವ ಬೆಲೆ ಅವರ ಜೊತೆಯಲ್ಲೇ ಬದುಕಿದ್ದು ಅವರಂತೆಯೇ ಅಲ್ಲಿ ಸತ್ತ ದಲಿತರು ಮತ್ತು ಮುಸಲ್ಮಾನರಿಗೆ ಇಲ್ಲ ಎಂದರೆ ಇವರೇನು ಮನುಷ್ಯರೋ ಅಥವಾ ರಾಕ್ಷಸರೋ ಎಂದು ಅರ್ಥವಾಗುತ್ತಿಲ್ಲ ಎಂದವರು ಖೇದ ವ್ಯಕ್ತಪಡಿಸಿದ್ದಾರೆ.ಮಕ್ಕಳು ಶಿಕ್ಷಣ ಪಡೆಯಲು ಸಹಾಯ ಮಾಡಿ ಎಂದರೆ ಹಿಜಾಬ್ ಗಲಾಟೆ ಎಬ್ಬಿಸಿ ಶಾಲಾ ವಾತಾವರಣ ಹಾಳು ಮಾಡುತ್ತಾರೆ, ಈಗ ಕಾಶ್ಮೀರಿ ಪಂಡಿತರಿಗೆ ಮಾತ್ರ ನೋವಾಯಿತು ಎಂಬಂತೆ ಮಾತನಾಡುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರ ಬದುಕಿಗೆ ಒಂದಷ್ಟು ಸಹಾಯ ಮಾಡ್ರಯ್ಯ ಅಂದರೆ, ಆ ಸಿನಿಮಾ ನೋಡಿ ಈ ಸಿನಿಮಾ ನೋಡಿ ಎನ್ನುವ ಇವರಿಗೆ ಮನುಷ್ಯರಾಗುವ ಯಾವುದೇ ಅರ್ಹತೆ ಇಲ್ಲ! ಎಂದವರು ಕಿಡಿ ಕಾರಿದ್ದಾರೆ. Show Full Article Advertisement Next Read: ಬೆಳ್ತಂಗಡಿ; ಭಜರಂಗದಳ ಮುಖಂಡನಿಂದ ಹತ್ಯೆಯಾದ ದಲಿತ ಯುವಕನ ಕುಟುಂಬಕ್ಕೆ1ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದ ಸಿದ್ದರಾಮಯ್ಯ. » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ