Advertisement

ಎಡಬಿಡಂಗಿ ವರ್ತನೆಯ ಗೃಹ ಮಂತ್ರಿ ಹಾಗೂ ಕೋಲೆ ಬಸವಣ್ಣ ರೂಪದ ಮುಖ್ಯಮಂತ್ರಿಯಿಂದಾಗಿ ರಾಜ್ಯ ಅರಾಜಕತೆಯ ಗೂಡಾಗಿದೆ: ದಿನೇಶ್ ಗುಂಡೂರಾವ್

Advertisement
ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ‌ಮೇಲಿನ ದಾಳಿ ಹಾಗೂ ಗಲಭೆ ಖಂಡನೀಯ. ಗಲಭೆ ಎಬ್ಬಿಸುವ ಪುಂಡರು ಯಾವ ಧರ್ಮದವರೇ ಆಗಿರಲಿ ಅವರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿ. ಕರ್ನಾಟಕ ಪುಂಡರ ಆಟದ ಮೈದಾನವಲ್ಲ. ಹುಬ್ಬಳಿ ಗಲಭೆಗೆ ಕಾರಣರಾದವರ ವಿರುದ್ಧ ಸರ್ಕಾರ ತೀವ್ರ ಕ್ರಮ ತೆಗೆದುಕೊಳ್ಳಲಿ.ಈ ವಿಚಾರದಲ್ಲಿ ಯಾರೂ ಸರ್ಕಾರದ ಕೈ ಕಟ್ಟಿ ಹಾಕಿಲ್ಲ ಎಂದು ಕಾಂಗ್ರೆಸ್ ನಾಯಕ, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಕ್ರೋಶ ಭರಿತರಾಗಿ ಹೇಳಿದ್ದಾರೆ.

'ಭಯದ ಮಗಳೇ ಭಕ್ತಿ'. ಪುಂಡರಿಗೆ ಕಾನೂನಿನ ಭಯ ಇಲ್ಲದಿದ್ದಾಗ ಮಾತ್ರ ಹುಬ್ಬಳಿಯಂತಹ ಘಟನೆ ನಡೆಯುತ್ತವೆ.‌ ಹುಬ್ಬಳಿ ಘಟನೆ ಸರ್ಕಾರದ ವೈಫಲ್ಯ ಎತ್ತಿ ತೋರಿಸುತ್ತಿದೆ. ಕಾನೂನು ಸುವ್ಯವಸ್ಥೆ ಮೇಲೆ ಈ ಸರ್ಕಾರಕ್ಕೆ ಹಿಡಿತವೇ ಇಲ್ಲ. ಎಡಬಿಡಂಗಿ ವರ್ತನೆಯ ಗೃಹ ಮಂತ್ರಿ ಹಾಗೂ ಕೋಲೆ ಬಸವಣ್ಣ ರೂಪದ ಮುಖ್ಯಮಂತ್ರಿಯಿಂದಾಗಿ ರಾಜ್ಯ ಅರಾಜಕತೆಯ ಗೂಡಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.

ರಾಜ್ಯದ ಶಾಂತಿ ಮತ್ತು ಸಾಮರಸ್ಯ ಕದಡಲು ಕೆಲ ಪಟ್ಟಭದ್ರಾ ಹಿತಾಸಕ್ತಿಗಳು ಹೊಂಚು ಹಾಕುತ್ತಿವೆ. ರಾಜಕೀಯ ಲಾಭಕ್ಕಾಗಿ ಈ ಸರ್ಕಾರ ಕೂಡ ಪಟ್ಟಭದ್ರ ಹಿತಾಸಕ್ತಿಗಳ ಜೊತೆ ಕೈ ಜೋಡಿಸಿ‌ ಗಲಭೆಯನ್ನು‌‌ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿದೆ.. ಈ ಸತ್ಯವನ್ನು ಎಲ್ಲಾ ಕೋಮಿನ ಯುವಕರು ಅರಿಯಬೇಕು. ಯುವಕರು ತಾಳ್ಮೆ ಹಾಗೂ ಸಹನೆಯಿಂದ ವರ್ತಿಸಲಿ ಎಂದವರು ಕರೆನೀಡಿದ್ದಾರೆ.
Advertisement
Advertisement
Recent Posts
Advertisement