Advertisement

ಗ್ರಹಸಚಿವರ ಉಚ್ಚಾಟನೆ ಮತ್ತು ತನಿಖೆಯಿಂದ ಮಾತ್ರವೇ ರಾಜ್ಯದಲ್ಲಿನ ಭ್ರಷ್ಟಾಚಾರಗಳ ಕಡಿವಾಣ ಸಾಧ್ಯ: ಉಡುಪಿ ಜಿಲ್ಲಾ ಕಾಂಗ್ರೆಸ್

Advertisement
ಅಕ್ರಮ ಬಯಲಿಗೆಳೆದ ಪ್ರಿಯಾಂಕ ಖರ್ಗೆಯನ್ನು ಬಂಧಿಸುವ ಮೊದಲು, ಪಿಎಸ್ಐ ನೇಮಕಾತಿ ಬಹುಕೋಟಿ ಲಂಚ ಪ್ರಕರಣ, ಅರ್‌ಡಿಪಿಆರ್ ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಹಗರಣ, ಹಸಿರು ಮೇವು ಹಗರಣ, ಕೋಮು ಸಂಘರ್ಷ ಹುನ್ನಾರವೇ ಮೊದಲಾದ ತಮ್ಮವರ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸದೆ ಪ್ರತಿಪಾದಿಸುತ್ತಲೇ ಬಂದ ರಾಜ್ಯದ ಗೃಹ ಮಂತ್ರಿಯನ್ನು ಮೊದಲು ಉಚ್ಛಾಟಿಸಿ ವಿಚಾರಣೆಗೊಳಪಡಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ, ತಲೆಮರೆಸಿ ಕೊಂಡಿರುವ ಪಿಎಸ್ಐ ನೇಮಕಾತಿಯ ಬಹುಕೋಟಿ ಹಗರಣದ ರುವಾರಿ ತಮ್ಮದೇ ಪಕ್ಷದ ನಾಯಕಿ ದಿವ್ಯಾಹಾಗರಗಿಯನ್ನು ಬಂಧಿಸದೆ ಹಗರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಎಳೆದು ತರುವ ವ್ಯರ್ಥನಾಟಕ ಮಾಡುತ್ತಿದೆ. ಆಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಹಗರಣದ ಕಿಂಗ್ ಪಿನ್ ಎನ್ನಲಾದವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿ ವಾಸ್ತವ ಸತ್ಯ ಬಾಯಿ ಬಿಡದಂತೆ ನೋಡಿಕೊಳ್ಳುತ್ತಿದೆ.

ಆದರೆ ಭ್ರಷ್ಟಾಚಾರವನ್ನೆ ರಾಜಕೀಯ ವಾಗಿಸಿಕೊಂಡ ಬಿಜೆಪಿಯ ಕೆಲವೊಂದು ತಥಾಕಥಿತ ನಾಯಕ ರೆನಿಸಿಕೊಂಡವರಿಗೆ ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಇಲ್ಲ. ತಮ್ಮ ಅಪ್ರಬುದ್ಧ ಮನಸ್ಥಿತಿಯ ಅಪಸವ್ಯದ ಹೇಳಿಕೆಗಳ ಮೂಲಕ ತಮ್ಮ ಪಕ್ಷದ ಶವ ಪೆಟ್ಟಿಗೆಗೆ ತಾವೇ ಅಂತಿಮ ಮೊಳೆ ಹೊಡೆಯುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Advertisement
Advertisement
Recent Posts
Advertisement