Homepageಉಡುಪಿಗ್ರಹಸಚಿವರ ಉಚ್ಚಾಟನೆ ಮತ್ತು ತನಿಖೆಯಿಂದ ಮಾತ್ರವೇ ರಾಜ್ಯದಲ್ಲಿನ ಭ್ರಷ್ಟಾಚಾರಗಳ ಕಡಿವಾಣ ಸಾಧ್ಯ: ಉಡುಪಿ ಜಿಲ್ಲಾ ಕಾಂಗ್ರೆಸ್ ಗ್ರಹಸಚಿವರ ಉಚ್ಚಾಟನೆ ಮತ್ತು ತನಿಖೆಯಿಂದ ಮಾತ್ರವೇ ರಾಜ್ಯದಲ್ಲಿನ ಭ್ರಷ್ಟಾಚಾರಗಳ ಕಡಿವಾಣ ಸಾಧ್ಯ: ಉಡುಪಿ ಜಿಲ್ಲಾ ಕಾಂಗ್ರೆಸ್ Advertisement ಅಕ್ರಮ ಬಯಲಿಗೆಳೆದ ಪ್ರಿಯಾಂಕ ಖರ್ಗೆಯನ್ನು ಬಂಧಿಸುವ ಮೊದಲು, ಪಿಎಸ್ಐ ನೇಮಕಾತಿ ಬಹುಕೋಟಿ ಲಂಚ ಪ್ರಕರಣ, ಅರ್ಡಿಪಿಆರ್ ಭ್ರಷ್ಟಾಚಾರ, 40 ಪರ್ಸೆಂಟ್ ಕಮಿಷನ್ ಹಗರಣ, ಹಸಿರು ಮೇವು ಹಗರಣ, ಕೋಮು ಸಂಘರ್ಷ ಹುನ್ನಾರವೇ ಮೊದಲಾದ ತಮ್ಮವರ ಸಂವಿಧಾನ ವಿರೋಧಿ ನಡೆಯನ್ನು ಖಂಡಿಸದೆ ಪ್ರತಿಪಾದಿಸುತ್ತಲೇ ಬಂದ ರಾಜ್ಯದ ಗೃಹ ಮಂತ್ರಿಯನ್ನು ಮೊದಲು ಉಚ್ಛಾಟಿಸಿ ವಿಚಾರಣೆಗೊಳಪಡಿಸಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.ಮುಖ್ಯಮಂತ್ರಿ ಬೊಮ್ಮಾಯಿ ಸರಕಾರ, ತಲೆಮರೆಸಿ ಕೊಂಡಿರುವ ಪಿಎಸ್ಐ ನೇಮಕಾತಿಯ ಬಹುಕೋಟಿ ಹಗರಣದ ರುವಾರಿ ತಮ್ಮದೇ ಪಕ್ಷದ ನಾಯಕಿ ದಿವ್ಯಾಹಾಗರಗಿಯನ್ನು ಬಂಧಿಸದೆ ಹಗರಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಎಳೆದು ತರುವ ವ್ಯರ್ಥನಾಟಕ ಮಾಡುತ್ತಿದೆ. ಆಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಹಗರಣದ ಕಿಂಗ್ ಪಿನ್ ಎನ್ನಲಾದವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿ ವಾಸ್ತವ ಸತ್ಯ ಬಾಯಿ ಬಿಡದಂತೆ ನೋಡಿಕೊಳ್ಳುತ್ತಿದೆ. ಆದರೆ ಭ್ರಷ್ಟಾಚಾರವನ್ನೆ ರಾಜಕೀಯ ವಾಗಿಸಿಕೊಂಡ ಬಿಜೆಪಿಯ ಕೆಲವೊಂದು ತಥಾಕಥಿತ ನಾಯಕ ರೆನಿಸಿಕೊಂಡವರಿಗೆ ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಇಲ್ಲ. ತಮ್ಮ ಅಪ್ರಬುದ್ಧ ಮನಸ್ಥಿತಿಯ ಅಪಸವ್ಯದ ಹೇಳಿಕೆಗಳ ಮೂಲಕ ತಮ್ಮ ಪಕ್ಷದ ಶವ ಪೆಟ್ಟಿಗೆಗೆ ತಾವೇ ಅಂತಿಮ ಮೊಳೆ ಹೊಡೆಯುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ. Show Full Article Advertisement Next Read: ಹಿಜಾಬ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್- ಜಟ್ಕಾದಂತಹ ಕುತಂತ್ರಗಳನ್ನೂ ಮೀರಿ ಭ್ರಷ್ಟಾಚಾರದ ಭಾರದಿಂದ ತತ್ತರಿಸಿದ 40% ಸರ್ಕಾರ! » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ