Advertisement

ಮಂಗಳೂರಿನಲ್ಲಿ ಇಂದು ಬಿಡುಗಡೆಗೊಂಡ ವಡ್ಡರ್ಸೆಯವರ ಪುಸ್ತಕ "ಬೇರೆಯೇ ಮಾತು"

Advertisement
"ಪುಸ್ತಕಗಳನ್ನ ಓದುವ ನನ್ನ ಹುಚ್ಚಿಗೆ ಪ್ರೇರಣೆಯೇ ಪತ್ರಕರ್ತರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಅವರು. ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ ನನ್ನ ಮನೆಯ ಗ್ರಂಥಾಲಯದಲ್ಲಿದೆ. ನನ್ನ ಮಾರ್ಗದರ್ಶಕರಾಗಿದ್ದ ರಘುರಾಮ ಶೆಟ್ಟಿಯವರ ಕುರಿತದ್ದೇ ಪುಸ್ತಕ ಇವತ್ತು ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ. ವಡ್ಡರ್ಸೆಯವರು ನಾನು ಯುವ ಕಾಂಗ್ರೆಸ್ ನಲ್ಲಿ ಕಾರ್ಯಕರ್ತನಾಗಿದ್ದ ಕಾಲದಿಂದಲೂ ನನಗೆ ಮಾರ್ಗದರ್ಶಕರಾಗಿದ್ದವರು" ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಅವರು ಇಂದು ಮಂಗಳೂರಿನ ಬಲ್ಮಠದ ಸಹೋದಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ಸಂಪಾದಿಸಿರುವ ರಘುರಾಮ ಶೆಟ್ಟಿ ಅವರ ಸಂಪಾದಕೀಯ ಬರಹಗಳ "ಬೇರೆಯೇ ಮಾತು" ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಂಧರ್ಭದಲ್ಲಿ ವಾರ್ತಾಭಾರತಿ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ. ಹಿರಿಯ ಪತ್ರಕರ್ತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ (ಸಿದ್ದರಾಮಯ್ಯ ಅವಧಿ) ದಿನೇಶ್ ಅಮೀನ್ ಮಟ್ಟು, ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ನಾಯಕ್, ರಂಗ ಚಾವಡಿ ಸಂಚಾಲಕರಾದ ಜಗನ್ನಾಥ್ ಶೆಟ್ಟಿ ಬಾಳ, ಅಹರ್ನಿಶಿ ಪ್ರಕಾಶನದ ಅಕ್ಷತಾ ಹುಂಚದಕಟ್ಟೆ ಸೇರಿದಂತೆ ಅನೇಕ ಪತ್ರಕರ್ತರು, ವಡ್ಡರ್ಸೆ ರಘುರಾಮ ಶೆಟ್ಟಿಯವರ ಅಭಿಮಾನಿಗಳು ಭಾಗವಹಿಸಿದ್ದರು.
Advertisement
Advertisement
Recent Posts
Advertisement