Homepageರಾಜ್ಯಗೃಹಸಚಿವರ ಪರ ವಕಾಲತ್ತು ವಹಿಸುವ ಕುಮಾರಸ್ವಾಮಿಯವರು ಮೊದಲು ದಿವ್ಯಾ ಹಾಗರಗಿ ಮನೆಗೆ ಜ್ಞಾನೆಂದ್ರ ಏಕೆ ಹೋಗಿದ್ದರು ಎಂದು ಹೇಳಲಿ: ದಿನೇಶ್ ಗುಂಡೂರಾವ್ ಗೃಹಸಚಿವರ ಪರ ವಕಾಲತ್ತು ವಹಿಸುವ ಕುಮಾರಸ್ವಾಮಿಯವರು ಮೊದಲು ದಿವ್ಯಾ ಹಾಗರಗಿ ಮನೆಗೆ ಜ್ಞಾನೆಂದ್ರ ಏಕೆ ಹೋಗಿದ್ದರು ಎಂದು ಹೇಳಲಿ: ದಿನೇಶ್ ಗುಂಡೂರಾವ್ Advertisement ಪಿಎಸ್ಐ ನೇಮಕಾತಿ ಅಕ್ರಮ ಹಗರಣದಲ್ಲಿ ಗೃಹ ಸಚಿವರ ಕೈವಾಡದ ಬಗ್ಗೆ ನಾನು ಮಾಡಿದ ಆರೋಪಕ್ಕೆ ದಾಖಲೆ ಕೊಡಿ ಎಂದು ಹೆಚ್ಡಿ ಕುಮಾರಸ್ವಾಮಿ ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಲು ಈ ಕುಮಾರ ಸ್ವಾಮಿ ಯಾರು? ಕುಮಾರಸ್ವಾಮಿಯವರೇನು ಈ ಪ್ರಕರಣದ ತನಿಖಾಧಿಕಾರಿಯೇ? ಕುಮಾರಸ್ವಾಮಿ ಯವರು ನನ್ನ ಬಳಿ ದಾಖಲೆ ಕೇಳುವ ಬದಲು ಕಿಂಗ್ಪಿನ್ ದಿವ್ಯಾ ಹಾಗರಗಿ ಮನೆಗೆ ಗೃಹ ಸಚಿವ ಜ್ಞಾನೇಂದ್ರ ಹೋಗಿದ್ಯಾಕೆ ಎಂದು ಕೇಳಲಿ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.ಪಿಎಸ್ಐ ಹಗರಣದಲ್ಲಿ ಜ್ಞಾನೇಂದ್ರ ಪರ ಈಗ ವಕಾಲತ್ತು ವಹಿಸಿಕೊಂಡು ಬಂದಿರುವ ಕುಮಾರ ಸ್ವಾಮಿ ರಾಜಕೀಯ ಕ್ಷೇತ್ರದ 'ದ್ವಿಮುಖ ನೀತಿಯ ಅಪ್ರತಿಮ ಸಂಚುಗಾರ'. ಪಿಎಸ್ಐ ನೇಮಕಾತಿ ಪಟ್ಟಿಯನ್ನು ರದ್ದು ಪಡಿಸಿ ಎಂದು ಮೊದಲು ಊಳಿಟ್ಟ ಕುಮಾರ ಸ್ವಾಮಿ, ಈಗ ಮರು ಪರೀಕ್ಷೆಗೆ ವಿರೋಧಿಸುತ್ತಿದ್ದಾರೆ. ಊಸರವಳ್ಳಿ ರೀತಿ ಬಣ್ಣ ಬದಲಾಯಿಸುವ ಕುಮಾರ ಸ್ವಾಮಿ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ.ಗಳಿಗೆಗೊಂದು ಮಾತನಾಡುತ್ತಾ..ತಮ್ಮ ನಿಲುವಿಗೆ ತಾವೇ ಬದ್ಧರಾಗದ, ಒಮ್ಮೊಮ್ಮೆ ಕ್ಷಣ ಚಿತ್ತ-ಕ್ಷಣ ಪಿತ್ತ ಎಂಬಂತೆ ವರ್ತಿಸುವ ಕುಮಾರ ಸ್ವಾಮಿ ಕನ್ಫ್ಯೂಷನ್ ಗಿರಾಕಿ. ದಿಢೀರ್ ಮೊಸಳೆ ಕಣ್ಣೀರಿನ ಸೃಷ್ಟಿಕರ್ತ ಕುಮಾರ ಸ್ವಾಮಿಯವರು ಪಿಎಸ್ಐ ನೇಮಕಾತಿ ಹಗರಣದಲ್ಲಿ ಗೃಹ ಸಚಿವರ ಪರ ಬ್ಯಾಟಿಂಗ್ ಮಾಡುತ್ತಿರುವ ಉದ್ದೇಶ ತಿಳಿಸಲಿ. ಅಂಗೈ ಹುಣ್ಣಿಗೆ ನಾನ್ಯಾಕೆ ದಾಖಲೆ ಕೊಡಲಿ ಎಂದವರು ಆಕ್ರೋಶ ವ್ಯಕ್ತಪಡಿಸಿದರು. Show Full Article Advertisement Next Read: ಪಿಎಸ್ಐ ನೇಮಕಾತಿಯನ್ನು ರದ್ದು ಪಡಿಸಿ ಮರು ಪರೀಕ್ಷೆಗೆ ಆದೇಶಿಸಿರುವುದರ ಹಿಂದೆ ಆರೋಪಿಗಳ ರಕ್ಷಣೆಯ ಪಿತೂರಿ ಅಡಗಿದೆ: ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ