Advertisement

ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಪಕ್ಷಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಲಿ.

Advertisement
ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ವಕ್ತಾರ, ಕರ್ನಾಟಕ ಸರ್ಕಾರದ (ಸಿದ್ದರಾಮಯ್ಯ ಅವಧಿ) ಕಾನೂನು ಸಲಹೆಗಾರ (ಸಚಿವ ಸ್ಥಾನಮಾನದೊಂದಿಗೆ) ಮತ್ತಿತರ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದ ಹಾಗೂ ಕಳೆದ 9 ವರ್ಷಗಳಿಂದ ಇಂಗ್ಲೀಷ್, ಹಿಂದಿ, ಕನ್ನಡ ಟಿವಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಸಮರ್ಥವಾಗಿ ಪ್ರತಿಪಾದಿಸುತ್ತಿದ್ದ ಪ್ರಖರ ವಾಗ್ಮಿ ಮತ್ತು ವೃತ್ತಿಯಲ್ಲಿ ಸುಪ್ರೀಂ ಕೋರ್ಟ್‌ ನ್ಯಾಯವಾದಿಯಾಗಿರುವ ಬ್ರಿಜೇಶ್‌ ಕಾಳಪ್ಪರವರು ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಬ್ರಿಜೇಶ್​ ಕಾಳಪ್ಪ ಅವರು "1997ರಲ್ಲಿ ಆರಂಭವಾದ ಕಾಂಗ್ರೆಸ್​​ನೊಂದಿಗಿನ ತನ್ನ ಒಡನಾಟಕ್ಕೆ ಫುಲ್​​​ಸ್ಟಾಪ್​ ಹಾಕುತ್ತಿರುವುದಾಗಿ" ಹೇಳಿಕೊಂಡಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು '' 2014 ಮತ್ತು 2019ರ ಸೋಲಿನ ಬಳಿಕ ಪಕ್ಷಕ್ಕೆ ಕೆಟ್ಟ ಸಮಯ ಬಂದರೂ ನಾನು ಉತ್ಸಾಹವನ್ನು ಕಳೆದುಕೊಂಡಿರಲಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಉತ್ಸಾಹ ಕಳೆದುಕೊಂಡಿದ್ದೇನೆ" ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ "ಚಿಂತನ ಶಿಬಿರ"ದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕತ್ವ, ಆರೆಸ್ಸೆಸ್ ನ ಗುಪ್ತ ಕಾರ್ಯಸೂಚಿಯ ವಿರುದ್ಧವಾಗಿ ಹೋರಾಡುವ, ಜನಸಾಮಾನ್ಯರಿಗೆ ಅದರ ಅಪಾಯದ ಕುರಿತು ಅರಿವು ಮೂಡಿಸುವ ಪ್ರಾಮಾಣಿಕ ಕಾರ್ಯಕರ್ತರಿಗೆ ಅಥವಾ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವ ಕುರಿತು ನಿರ್ಣಯ ಕೈಗೊಂಡಿತ್ತಾದರೂ ಕಾಂಗ್ರೆಸ್ ನಂತಹ 137ವರ್ಷಗಳ ಇತಿಹಾಸ ಹೊಂದಿರುವ ಪಕ್ಷವೊಂದರಲ್ಲಿ ಎಲ್ಲರಿಗೂ ಅವಕಾಶ ಒದಗಿಸಿಕೊಡುವುದು ಕಷ್ಟದ ವಿಚಾರವೇ ಆಗಿದೆ.

ಈ ನಡುವೆ ಇಂದಿರಾ, ರಾಜೀವ್, ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ಪಕ್ಷ ಪದೇಪದೇ ಅಧಿಕಾರಕ್ಕೆ ಬಂದಾಗ ಪ್ರತಿಬಾರಿಯೂ ಅಧಿಕಾರದ ಹುದ್ದೆಗಳನ್ನು ಪಡೆದು ಇದೀಗ ಕಾಂಗ್ರೆಸ್ ಹೈಕಮಾಂಡ್ ಕುರಿತು ಪದೇಪದೇ ಅಪಸ್ವರ ಎತ್ತುತ್ತಿರುವ ಜಿ23 ಗುಂಪು ‌ಮತ್ತು ಬಿಜೆಪಿಯ ಅಮಿಷ ಅಥವಾ ಬ್ಲ್ಯಾಕ್‌ಮೈಲ್ ಗೊಳಗಾಗಿ ಕಾಂಗ್ರೆಸ್ ಪಕ್ಷವನ್ನು ತೊರೆಯುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಹಲವು ನಾಯಕರಿಗೆ ಹೋಲಿಸುವಾಗ ಬ್ರಿಜೇಶ್ ಕಾಳಪ್ಪ ಹೊರತಾಗಿಯೇ ಉಳಿಯುತ್ತಾರೆ. ಏಕೆಂದರೆ, ಸುಪ್ರೀಂ ಕೋರ್ಟ್‌ನಲ್ಲಿ ಪ್ರಖ್ಯಾತ ನ್ಯಾಯವಾದಿಯಾಗಿರುವ ಬ್ರಿಜೇಶ್ ರವರು ತನ್ನ ಅತ್ಯಂತ ಬ್ಯೂಸಿ ಶೆಡ್ಯೂಲ್‌ನಲ್ಲಿಯೂ ಕೂಡ 2013ರಿಂದ ಈ ತನಕ 9 ವರ್ಷಗಳ ಕಾಲದಲ್ಲಿ ಸುಮಾರು 6,497 ಟಿವಿ ಚರ್ಚೆಗಳಲ್ಲಿ ಸಂಪೂರ್ಣ ಪೂರ್ವತಯಾರಿಯೊಂದಿಗೆ ಭಾಗವಹಿಸುವ ಮೂಲಕ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸ್ವಾತಂತ್ರ್ಯ ದ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಅದೆಷ್ಟು ಅನಿವಾರ್ಯ ಮತ್ತು ಆರೆಸ್ಸೆಸ್, ಬಿಜೆಪಿಗಳ ಸಿದ್ದಾಂತಗಳು ಈ ದೇಶಕ್ಕೆ ಅದೆಷ್ಟು ಮಾರಕ ಎಂಬ ಕುರಿತು ಪ್ರತಿಪಾದಿಸಿದ್ದವರು ಮತ್ತವರು ಎಐಸಿಸಿ ಘಟಾನುಘಟಿ ನಾಯಕರುಗಳಿಂದ ಹಿಡಿದು ದೇಶದ ಮೂಲೆಮೂಲೆಗಳಲ್ಲಿರುವ ಸಾಮಾನ್ಯ ಕಾರ್ಯಕರ್ತರ ತನಕವೂ ಸೋಶಿಯಲ್ ಮೀಡಿಯಾ ಮೂಲಕ ನೇರ ಸಂಪರ್ಕವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ.

ಇಂತಹ ಕ್ಲಿಷ್ಟಕರ ಸಂಧರ್ಭದಲ್ಲಿ ದೇಶದ ಆಗುಹೋಗುಗಳ ಕುರಿತು ಸ್ಪಷ್ಟ ಅರಿವು ಹೊಂದಿರುವ ಬ್ರಿಜೇಶ್ ಕಾಳಪ್ಪನವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಷ್ಕರಿಸುವುದು ಸೂಕ್ತ, ಈ ಕುರಿತು ಪಕ್ಷದ ಹೈಕಮಾಂಡ್ ಬ್ರಿಜೇಶ್ ರವರ ಮನ ಒಲಿಸುವ ಕೆಲಸ ಮಾಡಬೇಕು ಎಂಬುದು ಅವರ ಅಭಿಮಾನಿಗಳ ಒತ್ತಾಯವಾಗಿದೆ.
Advertisement
Advertisement
Recent Posts
Advertisement