Advertisement

"ಸಮಾಜ ಸೇವಕ ಗಣೇಶ ಕಿಣಿ ನಿಧನ"

Advertisement

ಕುಂದಾಪುರದ ಚರ್ಚ್ ರಸ್ತೆಯ ನಿವಾಸಿ, ಹರಿಕೃಪಾ ಏಜೆನ್ಸೀಸ್ ಇದರ ಮಾಲಕ, ಸಮಾಜ ಸೇವಕ ಗಣೇಶ್ ಕಿಣಿ ನ.15ರಂದು ಮಂಗಳವಾರ ಹೃದಯಾಘಾತದಿಂದ ನಿಧನರಾದರು.

ಮೃತರು ತಮ್ಮ ಸ್ನೇಹಭರಿತ ಹಾಗೂ ಆತ್ಮೀಯವಾದ ನಡೆ ನುಡಿ, ಸೇವಾ ಗುಣಗಳಿಂದ ಊರಿನ ನಾಗರಿಕರ ಜೊತೆ ಉತ್ತಮ ಭಾಂದವ್ಯ ಹೊಂದಿದ್ದರು. ತಮ್ಮ ಮಾಲಕತ್ವದ "ಹರಿಕೃಪಾ ಏಜೆನ್ಸೀಸ್" ಮೂಲಕ "ಕೃಷ್ಣ ತುಪ್ಪ" ಸೇರಿದಂತೆ ಪ್ರಸಿದ್ದ ಕಂಪೆನಿಗಳ ಸಿದ್ಧ ಆಹಾರ ವಸ್ತುಗಳ ವಿತರಣೆ ನಡೆಸುತ್ತಿದ್ದರು ಹಾಗೆಯೇ ಶ್ರೀಯುತರು ವ್ಯಾಪಾರಿ ವಲಯದಲ್ಲಿ ಜನಾನುರಾಗಿಯಾಗಿದ್ದರು.

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವರ ಅನನ್ಯ ಭಕ್ತರಾದ ಇವರು ಪ್ರತೀದಿನ ಪ್ರಾತಃಕಾಲದ ಪೂಜೆಗೂ ಮುನ್ನವೇ ಉಪಸ್ಥಿತರಿದ್ದು, ಪೂಜೆಯ ನಂತರವಷ್ಟೇ ತನ್ನ ವ್ಯವಹಾರ, ಸೇವಾ ಕಾರ್ಯಗಳಿಗೆ ತೆರಳುತ್ತಿದ್ದರು. ದೇವಾಲಯದ ಎಲ್ಲಾ ಕಾರ್ಯಗಳಲ್ಲೂ ಸ್ವಯಂಸೇವಕರಾಗಿ ಶ್ರಮಿಸುತ್ತಿದ್ದರು. ಸಮಾಜದ ಯಾವುದೇ ಸಮಾರಂಭಗಳಿಗೆ ಆಹ್ವಾನವಿದ್ದಲ್ಲಿ ಕ್ರೀಯಾಶೀಲರಾಗಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುತ್ತಿದ್ದರು. ಇವರ ಪತ್ನಿ ಕಳೆದ ವರ್ಷವಷ್ಟೇ ಅಲ್ಪಕಾಲದ ಅಸೌಖ್ಯದಿಂದ ಮೃತಪಟ್ಟಿದ್ದರು ಮತ್ತು ಇವರು ಇದೀಗ ಏಕೈಕ ಪುತ್ರಿ ಮೇಘನಾ ಕಿಣಿ ಹಾಗೂ ಅಪಾರ ಬಂಧು ಭಾಂದವರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ನ.16ರಂದು ಬುಧವಾರ ಬೆಳಿಗ್ಗೆ 9.30ಕ್ಕೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Advertisement
Advertisement
Recent Posts
Advertisement