Advertisement

ಜನವರಿ 30: ತ್ರಾಸಿಯಿಂದ ಕುಂಭಾಶಿ ತನಕ ಮಾನವ ಸರಪಳಿ

Advertisement

ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಹುತಾತ್ಮರಾದ ದಿನವಾದ ಜನವರಿ 30ರಂದು ಸಂಜೆ 4 ಗಂಟೆಗೆ ಕುಂದಾಪುರದ ವಿವಿಧ ಸಮಾನ ಮನಸ್ಕ ಸಂಘಟನೆಗಳಿಂದ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಾದ್ಯಂತ ನಡೆಯಲಿರುವ ಈ ಕಾರ್ಯಕ್ರಮ ಕುಂದಾಪುರ ವಲಯ ವ್ಯಾಪ್ತಿಯಲ್ಲಿ ತ್ರಾಸಿ, ಹೆಮ್ಮಾಡಿ, ತಲ್ಲೂರು, ಸಂಗಂ ವಠಾರ, ಶಾಸ್ತ್ರಿ ಸರ್ಕಲ್, ಬಸ್ರೂರು ಮೂರ್ಕೈ, ಕೋಟೇಶ್ವರ ಮತ್ತು ಕುಂಬಾಶಿಯಲ್ಲಿ ನಡೆಯಲಿದೆ.

ಮಾನವ ಸರಪಳಿ ಕಾರ್ಯಕ್ರಮದ ನಂತರ ಸಂಜೆ 4.30ಕ್ಕೆ ಶಾಸ್ತ್ರಿಸರ್ಕಲ್ ಬಳಿ ಬಹಿರಂಗ ಸಭೆ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸಹಬಾಳ್ವೆ ಕುಂದಾಪುರ, ಸೌಹಾರ್ದ ಕರ್ನಾಟಕ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ. ಕುಂದಾಪುರ ತಾಲೂಕು ಘಟಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮ ಘರ್ಜನೆ) ಕುಂದಾಪುರ, ಸಮುದಾಯ ಕುಂದಾಪುರ, ಕ್ಯಾಥೋಲಿಕ್ ಸಭಾ, ಕುಂದಾಪುರ ವಲಯ. ಸಿಐಟಿಯು ಕುಂದಾಪುರ. ಜನವಾದಿ ಮಹಿಳಾ ಸಂಘಟನೆ ಕುಂದಾಪುರ, ಡಿವೈಎಫ್‌ಐ ಕುಂದಾಪುರ, ಮಾನವ ಭಂದುತ್ವ ವೇದಿಕೆ, ಕುಂದಾಪುರ. ಕರ್ನಾಟಕ ಮುಸ್ಲಿಂ ಜಮಾತೆ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ‌ ಕುಂದಾಪುರ, ದಲಿತ ಹಕ್ಕುಗಳ ಸಮಿತಿ ಕುಂದಾಪುರ ಇವರುಗಳ ಒಗ್ಗೂಡುವಿಕೆಯಿಂದ ನಡೆಯಲಿದೆ ಎಂದು ತಿಳಿಸಲಾಗಿದೆ.

Advertisement
Advertisement
Recent Posts
Advertisement