Advertisement

ಕಾಂಗ್ರೆಸ್- ಡಿಜಿಟಲ್ ಮೆಂಬರ್‌ಶಿಪ್ ಡ್ರೈವ್‌: ಕೆಪಿಸಿಸಿಯ ರಾಜ್ಯ ಮುಖ್ಯ ಸಂಯೋಜಕರಾಗಿ ರಘುನಂದನ್ ರಾಮಣ್ಣ ನೇಮಕ

Advertisement

'ಎಐಸಿಸಿ- ಡಿಜಿಟಲ್ ಮೆಂಬರ್‌ಶಿಪ್ ಡ್ರೈವ್‌' ಅಭಿಯಾನದ ಅಂಗವಾಗಿ ಕೆಪಿಸಿಸಿಯ ರಾಜ್ಯ ಮುಖ್ಯ ಸಂಯೋಜಕರಾಗಿ ರಘುನಂದನ್ ರಾಮಣ್ಣ ಅವರನ್ನು ನೇಮಿಸಿ ಆದೇಶಿಸಲಾಗಿದೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜೊತೆಗೆ ಚರ್ಚಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಎಐಸಿಸಿ ಡಾಟಾ ಎನಾಲಿಸ್ಟಿಕ್ಸ್ ಡಿಪಾರ್ಟ್ಮೆಂಟ್ ನ ಚಯರ್‌ಪರ್ಸನ್ ಪ್ರವೀಣ್ ಚಕ್ರವರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎನ್‌ಎಸ್‌ಯುಐ ಮೂಲಕ ತನ್ನ ರಾಜಕೀಯ ಜೀವನ ಆರಂಬಿಸಿದ್ದ ಅತ್ಯಂತ ಸರಳ ವ್ಯಕ್ತಿತ್ವದ ಸಂಘಟನಾ ಚತುರ ರಘುನಂದನ್ ರಾಮಣ್ಣರವರು ಕಾಂಗ್ರೆಸ್ ವಲಯದಲ್ಲಿ ರಾಜ್ಯಾದ್ಯಂತ ತಳಮಟ್ಟದ ಕಾರ್ಯಕರ್ತರುಗಳ ಜೊತೆ ಉತ್ತಮವಾದ ಸಂಪರ್ಕ ಹೊಂದಿದ್ದಾರೆ ಮತ್ತು ಎಐಸಿಸಿ ವಲಯದಲ್ಲಿ ರಾಹುಲ್ ಗಾಂಧಿ ಮತ್ತತರ ಹಿರಿಯ ನಾಯಕರುಗಳ ಆದಿಯಾಗಿ, ಕೆಪಿಸಿಸಿ ವಲಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ಮುಂತಾದ ಎಲ್ಲಾ ನಾಯಕರುಗಳ ಜೊತೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ 'ಕ್ಯೂ.ಆರ್ ಕೋಡ್' ಸ್ಕ್ಯಾನ್ ಮಾಡಿ:

Advertisement
Advertisement
Recent Posts
Advertisement