Advertisement

ದಲಿತ ಯುವಕನ ಹತ್ಯೆ: ಹೆಣದ ರಾಜಕೀಯದಲ್ಲಿ ಪಿಎಚ್‌ಡಿ ಮಾಡಿರುವ ಈಶ್ವರಪ್ಪ, ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ಈಗೆಲ್ಲಿದ್ದಾರೆ: ದಿನೇಶ್ ಗುಂಡೂರಾವ್

Advertisement

ಭಜರಂಗದಳದ ಮುಖಂಡನೊಬ್ಬನ ಸಹೋದರನಿಂದ ಧರ್ಮಸ್ಥಳದಲ್ಲಿ ದಲಿತ ಯುವಕ ದಿನೇಶ್ ಎಂಬುವವನ ಬರ್ಬರ ಹತ್ಯೆಯಾಗಿದೆ‌. ದಲಿತ ದಿನೇಶ್ ಸಾವಿನ ವಿಚಾರದಲ್ಲಿ ಎಲ್ಲಿ ಹೋಯಿತು ಬಿಜೆಪಿ ನಾಯಕರ ಪೌರುಷ,ವೀರಾವೇಶ ಮತ್ತು ಅಟ್ಟಹಾಸ? ಈಗ್ಯಾಕೆ ಒಬ್ಬರೇ ಒಬ್ಬ ಬಿಜೆಪಿ ನಾಯಕರು ದಲಿತ ದಿನೇಶ್ ಸಾವಿನ ಬಗ್ಗೆ ಧ್ವನಿಯೆತ್ತುತ್ತಿಲ್ಲ? ದಲಿತ ದಿನೇಶ್ ಹಿಂದೂ ಅಲ್ಲವೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಕೊಲೆಯಾದ ದಲಿತ ಯುವಕ ದಿನೇಶ್ ಒಂದು ವೇಳೆ ಅನ್ಯಧರ್ಮಿಯರಿಂದ ಕೊಲೆಯಾಗಿದ್ದರೆ BJP ಯವರು ಸುಮ್ಮನಿರುತ್ತಿದ್ದರೆ? ಹೆಣದ ರಾಜಕೀಯದಲ್ಲಿ PHD ಮಾಡಿರುವ ಈಶ್ವರಪ್ಪ,ಶೋಭಾ ಕರಂದ್ಲಾಜೆ,ಪ್ರತಾಪ್ ಸಿಂಹರ ಧ್ವನಿ ಈಗ ಎಲ್ಲಿ ಅಡಗಿ ಹೋಯಿತು? ಕೊಂದವನು ತಮ್ಮವ, ಸತ್ತವನು ದಲಿತ ಎಂಬುದು ಬಿಜೆಪಿ ನಾಯಕರ ಈ ಮೌನಕ್ಕೆ ಕಾರಣವೆ? ಎಂದವರು ಪ್ರಶ್ನಿಸಿದ್ದಾರೆ. ದಲಿತ ಯುವಕನ ಕೊಲೆ ಆರೋಪಿ ಸ್ಥಳೀಯ BJPಮುಖಂಡ ಕೃಷ್ಣ ಎಂಬಾತನಿಗೆ ಶಾಸಕ ಹರೀಶ್ ಪೂಂಜಾರ ರಕ್ಷಣೆಯಿದೆ. ಧರ್ಮದ ಹೆಸರಲ್ಲಿ ಸಮಾಜದಲ್ಲಿ ಕೊಳ್ಳಿ ಇಡುವ BJPಯವರು ಕೊಲೆಗಡುಕರ ರಕ್ಷಕರು ಎಂಬುದಕ್ಕೆ ಇದು ಸಾಕ್ಷಿ. ದಿನೇಶ್ ಹತ್ಯೆಯನ್ನು ಈ ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೊಲೆಗಡುಕರ ವಿರುದ್ಧ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಿ ಎಂದವರು ಆಗ್ರಹಿಸಿದ್ದಾರೆ.

Advertisement
Advertisement
Recent Posts
Advertisement