Advertisement

ನೆಹರೂ- ಗಾಂಧಿ ಕುಟುಂಬದ ತ್ಯಾಗ ಬಲಿದಾನಗಳೆ, ಬಿಜೆಪಿ ಮತ್ತದರ ಪರಿವಾರದ ಅಸಹನೆಯ ಮೂಲ: ಡಾ. ಎಚ್.ಸಿ ಮಹಾದೇವಪ್ಪ

Advertisement
ಬಿಜೆಪಿಗರು ತೀರಾ ಅನಗತ್ಯವಾಗಿ ಗಾಂಧಿ ಕುಟುಂಬ ಮತ್ತದರ ನಾಯಕತ್ವದ ಮೇಲೆ ಬಹಳಷ್ಟು ಕಾಲದಿಂದ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬಹುಶಃ ಅವರ ಕುಟುಂಬದ ಸದಸ್ಯರ ತ್ಯಾಗದ ಘಟನೆಗಳು ಮತ್ತದಕ್ಕೆ ಗಾಂಧಿ ಕುಟುಂಬದ ಸದಸ್ಯರು ಈಗಲೂ ನೇರ ಸಾಕ್ಷಿಯಾಗಿದ್ದು ಇವರ ಸಂಸ್ಕೃತಿ ಮತ್ತು ಸಂಸ್ಕಾರದ ಸೂತ್ರಗಳನ್ನು ಮೌನವಾಗಿಯೇ ಅಣಕಿಸುತ್ತಿರುವುದು ಇದಕ್ಕೆ ಕಾರಣ ಇರಬಹುದು ಎಂಬುದು ನನ್ನ ಭಾವನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಾ. ಎಚ್.ಸಿ ಮಹಾದೇವಪ್ಪ ಹೇಳಿದ್ದಾರೆ.

ಇನ್ನು ಭಾರತದ ಸೊಸೆಯಾಗಿ ಬಂದು ದೇಶದ ಸಾಮಾನ್ಯ ಜನರ ಹಿತಕ್ಕಾಗಿ ಅಧಿಕಾರದ ಲಾಲಸೆಯಿಲ್ಲದೇ ಕೆಲಸ ಮಾಡಿದ ಸೋನಿಯಾ ಗಾಂಧಿಯವರನ್ನು ಅತೀವವಾಗಿ ಹೀಯಾಳಿಸಿದ ಕ್ರಮದಲ್ಲೇ ಬಿಜೆಪಿಗರು ಪ್ರತಿಪಾದಿಸುವ ಹಿಂದೂ ಮತ್ತು ಸನಾತನ ಸಂಸ್ಕೃತಿಯ ದಯನೀಯ ವೈಫಲ್ಯ ಅಡಗಿದೆ. ತಮ್ಮ ಈ ವೈಫಲ್ಯವು ಸನಾನತ ಸಂಸ್ಕೃತಿ ಆರಾಧಕರಿಗೆ ತಿಳಿದಿಲ್ಲವೇ ಅಥವಾ ಹಾಗೆ ನಟಿಸುತ್ತಿದ್ದಾರೋ? ಇದಕ್ಕೆ ಆದಷ್ಟು ಬೇಗ ಇವರು ಉತ್ತರ ಕಂಡುಕೊಂಡರೆ ಇವರ ಬದುಕಿಗೆ ಏನಾದರೂ ಅರ್ಥ ಬಂದರೂ ಬರಬಹುದು ಎಂದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
Advertisement
Recent Posts
Advertisement