Homepageಸುದ್ದಿ ವಿಶ್ಲೇಷಣೆಸಿಖ್ ಹತ್ಯಾಕಾಂಡದ ಫೈಲ್ ಯಾವಾಗ? ಎಂದು ಪ್ರಶ್ನಿಸುವವರು ಓದಲೇಬೇಕಾದ ವಿವರಗಳು ಸಿಖ್ ಹತ್ಯಾಕಾಂಡದ ಫೈಲ್ ಯಾವಾಗ? ಎಂದು ಪ್ರಶ್ನಿಸುವವರು ಓದಲೇಬೇಕಾದ ವಿವರಗಳು Advertisement 70-80ರ ದಶಕದಲ್ಲಿ "ಖಾಲಿಸ್ಥಾನ್ ಪ್ರತ್ಯೇಕತಾವಾದಿ ಭಯೋತ್ಪಾದಕರು" ಈ ದೇಶಾದ್ಯಂತ ನಡೆಸಿದ ಭಯೋತ್ಪಾದನೆ, ಆ ಭಯೋತ್ಪಾದನೆಯ ಪರಿಣಾಮವಾಗಿ ದೇಶಾದ್ಯಂತ ಪ್ರತಿದಿನವೂ ಅಮಾಯಕ ಜನತೆ ಹತ್ಯೆಯಾಗುತ್ತಿದ್ದುದು, ಆ ಭಯೋತ್ಪಾದಕರು ಪಂಜಾಬ್ನ ಅಮೃತಸರ ಗೋಲ್ಡನ್ ಟೆಂಪಲ್ನಲ್ಲಿ ಅಡಗಿ ಕುಳಿತದ್ದು, ಅಂದಿನ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂದಿಯವರು ತಗೆದುಕೊಂಡ ಖಡಕ್ ನಿರ್ಧಾರದ ಪರಿಣಾಮವಾಗಿ ಭಾರತೀಯ ಸೇನೆ ನಡೆಸಿದ ಬ್ಲೂಸ್ಟಾರ್ ಕಾರ್ಯಾಚರಣೆಯ ನಂತರ ಈ ದೇಶದಲ್ಲಿ ಸಿಖ್ ಭಯೋತ್ಪಾದನೆ ಕೊನೆಗೊಂಡದ್ದು, ಆ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಬಲ ಕಳೆದುಕೊಂಡ ಭಯೋತ್ಪಾದಕರು ಆ ನಂತರ ಇಂದಿರಾ ಗಾಂದಿಯವರನ್ನು ಸಂಚುಮಾಡಿ ಆಕೆಯ ಅಂಗರಕ್ಷಕರ ಮೂಲಕವೇ ಕೊಂದದ್ದು… ಅದರ ಪರಿಣಾಮವಾಗಿ ದಶಮಾನಗಳ ಕಾಲದ ಸಿಖ್ ಭಯೋತ್ಪಾದನೆ ಮತ್ತು ಆ ನಂತರದ ದೇಶದ ಪ್ರಧಾನಿಯ ಹತ್ಯೆಯಿಂದ ರೋಸಿಹೋಗಿದ್ದ ದೇಶದ ಜನತೆ ಸಿಖ್ರನ್ನು ಕಂಡಕಂಡಲೆಲ್ಲಾ ಕೊಂದು ಹಾಕಿದ್ದು ಇದೀಗ ಇತಿಹಾಸ. ನೆನಪಿಡಿ ಯಾವುದೇ ತಿರುಚುವಿಕೆಯಿಂದ ಇತಿಹಾಸ ಬದಲಾಯಿಸಲು ಸಾಧ್ಯವಿಲ್ಲ.ಹಾಗೆಯೇ, ಸಿಖ್ ಹತ್ಯಾಕಾಂಡ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ.. ಸಿಖ್ ಹತ್ಯಾಕಾಂಡವು ದೇಶದ ಪ್ರಧಾನಿಯೊಬ್ಬರ ಹತ್ಯೆಯಾದಾಗ ದೇಶದ ಜನರ ತತ್ಕ್ಷಣದ ಪ್ರತಿಕ್ರಿಯೆ ಆಗಿತ್ತು ಅಷ್ಟೇ. ಅದು ಪೂರ್ವನಿರ್ಧರಿತ ಷಢ್ಯಂತ್ರ ಅಲ್ಲ. ಅಥವಾ ಯಾವುದೇ ಸಂಘಟಿತ ಶಕ್ತಿ ಅದರ ಹಿಂದಿರಲಿಲ್ಲ. ದೇಶದ ಕಾನೂನು, ಪೋಲಿಸ್ ಇಲಾಖೆ, ಮಿಲಿಟರಿ ಎಲ್ಲವೂ ವಿಫಲವಾದ ಸಂಧರ್ಭದಲ್ಲಿ ನಡೆದದ್ದೆ ಇಂದಿರಾ ಹತ್ಯೆ ಮತ್ತು ಆ ಹತ್ಯಾಕಾಂಡ. (ಬಿಜೆಪಿಗರ ಬಾಷೆಯಲ್ಲಿ ಹೇಳುವುದಾದರೆ ಅದು ಕ್ರಿಯೆಗೆ ಪ್ರತಿಕ್ರಿಯೆ ಆಗಿತ್ತು. ಈ ಉದಾಹರಣೆ ಬಳಸಿದ್ದಕ್ಕೆ ಕ್ಷಮೆ ಇರಲಿ) ಆದರೆ ಆ ಘಟನೆಯ ನಂತರ ಸಿಖ್ ಭಯೋತ್ಪಾದನೆ ಕೊನೆಗೊಂಡದ್ದು, ಖಲಿಸ್ಥಾನ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಧ್ವನಿ ಅಡಗಿದ್ದು ಯಾವುದೂ ಸುಳ್ಳಲ್ಲ. ನನ್ನ ಪ್ರಕಾರ 'ಪ್ರಕೃತಿ ತನ್ನ ಸಮತೋಲನವನ್ನು ಸದಾ ಕಾಪಾಡಿಕೊಳ್ಳುತ್ತದೆ' ಎಂಬ ಮಾತಿಗೆ ಆ ಘಟನೆ ಒಂದೊಳ್ಳೆಯ ಉದಾಹರಣೆಯೂ ಆಗಿದೆ. ಹಾಗೆಯೇ ನಾನು ಮೊದಲೇ ಹೇಳಿದಂತೆ ಆ 'ಸಿಖ್ ಹತ್ಯಾಕಾಂಡ' ಘಟನೆ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ. Show Full Article Advertisement Next Read: 'ಕಾಶ್ಮೀರ್ ಫೈಲ್ಸ್' ಸಿನೇಮಾ ಕುರಿತು ಮೊಸಳೆಗಣ್ಣೀರು ಸುರಿಸುತ್ತಿರುವ ಬಿಜೆಪಿ ಅಧಿಕಾರದಲ್ಲಿದ್ದೂ, ಅಂದೇ ಏಕೆ ಕಾಶ್ಮೀರ ಪಂಡಿತರ ರಕ್ಷಣೆಗೆ ಮುಂದಾಗಿರಲಿಲ್ಲ? » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ