Advertisement

ಸಿಖ್ ಹತ್ಯಾಕಾಂಡದ ಫೈಲ್ ಯಾವಾಗ? ಎಂದು ಪ್ರಶ್ನಿಸುವವರು ಓದಲೇಬೇಕಾದ ವಿವರಗಳು

Advertisement
70-80ರ ದಶಕದಲ್ಲಿ "ಖಾಲಿಸ್ಥಾನ್ ಪ್ರತ್ಯೇಕತಾವಾದಿ ಭಯೋತ್ಪಾದಕರು" ಈ ದೇಶಾದ್ಯಂತ ನಡೆಸಿದ ಭಯೋತ್ಪಾದನೆ, ಆ ಭಯೋತ್ಪಾದನೆಯ ಪರಿಣಾಮವಾಗಿ ದೇಶಾದ್ಯಂತ ಪ್ರತಿದಿನವೂ ಅಮಾಯಕ ಜನತೆ ಹತ್ಯೆಯಾಗುತ್ತಿದ್ದುದು, ಆ ಭಯೋತ್ಪಾದಕರು ಪಂಜಾಬ್‌ನ ಅಮೃತಸರ ಗೋಲ್ಡನ್ ಟೆಂಪಲ್‌ನಲ್ಲಿ ಅಡಗಿ ಕುಳಿತದ್ದು, ಅಂದಿನ ಪ್ರಧಾನಿ ಉಕ್ಕಿನ ಮಹಿಳೆ ಇಂದಿರಾ ಗಾಂದಿಯವರು ತಗೆದುಕೊಂಡ ಖಡಕ್ ನಿರ್ಧಾರದ ಪರಿಣಾಮವಾಗಿ ಭಾರತೀಯ ಸೇನೆ ನಡೆಸಿದ ಬ್ಲೂಸ್ಟಾರ್ ಕಾರ್ಯಾಚರಣೆಯ ನಂತರ ಈ ದೇಶದಲ್ಲಿ ಸಿಖ್ ಭಯೋತ್ಪಾದನೆ ಕೊನೆಗೊಂಡದ್ದು, ಆ ಕಾರ್ಯಾಚರಣೆಯಿಂದ ಸಂಪೂರ್ಣವಾಗಿ ಬಲ ಕಳೆದುಕೊಂಡ ಭಯೋತ್ಪಾದಕರು ಆ ನಂತರ ಇಂದಿರಾ ಗಾಂದಿಯವರನ್ನು ಸಂಚುಮಾಡಿ ಆಕೆಯ ಅಂಗರಕ್ಷಕರ ಮೂಲಕವೇ ಕೊಂದದ್ದು… ಅದರ ಪರಿಣಾಮವಾಗಿ ದಶಮಾನಗಳ ಕಾಲದ ಸಿಖ್ ಭಯೋತ್ಪಾದನೆ ಮತ್ತು ಆ ನಂತರದ ದೇಶದ ಪ್ರಧಾನಿಯ ಹತ್ಯೆಯಿಂದ ರೋಸಿಹೋಗಿದ್ದ ದೇಶದ ಜನತೆ ಸಿಖ್‌ರನ್ನು ಕಂಡಕಂಡಲೆಲ್ಲಾ ಕೊಂದು ಹಾಕಿದ್ದು ಇದೀಗ ಇತಿಹಾಸ. ನೆನಪಿಡಿ ಯಾವುದೇ ತಿರುಚುವಿಕೆಯಿಂದ ಇತಿಹಾಸ ಬದಲಾಯಿಸಲು ಸಾಧ್ಯವಿಲ್ಲ.

ಹಾಗೆಯೇ, ಸಿಖ್ ಹತ್ಯಾಕಾಂಡ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ.. ಸಿಖ್ ಹತ್ಯಾಕಾಂಡವು ದೇಶದ ಪ್ರಧಾನಿಯೊಬ್ಬರ ಹತ್ಯೆಯಾದಾಗ ದೇಶದ ಜನರ ತತ್‌ಕ್ಷಣದ ಪ್ರತಿಕ್ರಿಯೆ ಆಗಿತ್ತು ಅಷ್ಟೇ. ಅದು ಪೂರ್ವನಿರ್ಧರಿತ ಷಢ್ಯಂತ್ರ ಅಲ್ಲ. ಅಥವಾ ಯಾವುದೇ ಸಂಘಟಿತ ಶಕ್ತಿ ಅದರ ಹಿಂದಿರಲಿಲ್ಲ. ದೇಶದ ಕಾನೂನು, ಪೋಲಿಸ್ ಇಲಾಖೆ, ಮಿಲಿಟರಿ ಎಲ್ಲವೂ ವಿಫಲವಾದ ಸಂಧರ್ಭದಲ್ಲಿ ನಡೆದದ್ದೆ ಇಂದಿರಾ ಹತ್ಯೆ ಮತ್ತು ಆ ಹತ್ಯಾಕಾಂಡ. (ಬಿಜೆಪಿಗರ ಬಾಷೆಯಲ್ಲಿ ಹೇಳುವುದಾದರೆ ಅದು ಕ್ರಿಯೆಗೆ ಪ್ರತಿಕ್ರಿಯೆ ಆಗಿತ್ತು. ಈ ಉದಾಹರಣೆ ಬಳಸಿದ್ದಕ್ಕೆ ಕ್ಷಮೆ ಇರಲಿ) ಆದರೆ ಆ ಘಟನೆಯ ನಂತರ ಸಿಖ್ ಭಯೋತ್ಪಾದನೆ ಕೊನೆಗೊಂಡದ್ದು, ಖಲಿಸ್ಥಾನ್ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಧ್ವನಿ ಅಡಗಿದ್ದು ಯಾವುದೂ ಸುಳ್ಳಲ್ಲ. ನನ್ನ ಪ್ರಕಾರ 'ಪ್ರಕೃತಿ ತನ್ನ ಸಮತೋಲನವನ್ನು ಸದಾ ಕಾಪಾಡಿಕೊಳ್ಳುತ್ತದೆ' ಎಂಬ ಮಾತಿಗೆ ಆ ಘಟನೆ ಒಂದೊಳ್ಳೆಯ ಉದಾಹರಣೆಯೂ ಆಗಿದೆ. ಹಾಗೆಯೇ ನಾನು ಮೊದಲೇ ಹೇಳಿದಂತೆ ಆ 'ಸಿಖ್ ಹತ್ಯಾಕಾಂಡ' ಘಟನೆ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ.
Advertisement
Advertisement
Recent Posts
Advertisement