Homepageಉಡುಪಿಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರ ನಿಷೇಧ: ಹಿಂದೂಧರ್ಮ ಪ್ರತಿಪಾದಿಸುವ 'ವಿಶ್ವಕುಟುಂಬ ಚಿಂತನೆ'ಗೆ ಮಾರಕ: ನಕ್ರೆ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರ ನಿಷೇಧ: ಹಿಂದೂಧರ್ಮ ಪ್ರತಿಪಾದಿಸುವ 'ವಿಶ್ವಕುಟುಂಬ ಚಿಂತನೆ'ಗೆ ಮಾರಕ: ನಕ್ರೆ Advertisement (ಸಾಂದರ್ಭಿಕ ಚಿತ್ರ)ಹಿಂದೂ ದೇವಸ್ಥಾನಗಳ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರ ಬೀದಿಬದಿ ವ್ಯಾಪಾರವನ್ನು ಕೆಲವೊಂದು ಸಂಘಟನೆಗಳು ಬಲತ್ಕಾರವಾಗಿ ನಿಷೇಧಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಇದು ಹಿಂದೂಧರ್ಮ ಪ್ರತಿಪಾದನೆ ಮಾಡಿಕೊಂಡು ಬಂದಿರುವ 'ವಿಶ್ವಕುಟುಂಬ ಚಿಂತನೆ'ಗೆ ಮಾರಕವಾಗಿದ್ದು ಈ ಬಗ್ಗೆ ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕೆ ಬಂದ ಆಳುವ ಸರಕಾರದ ಮೌನ ರಾಜ್ಯದಲ್ಲಿ ತಾಂಡವವಾಡುತ್ತಿರುವ ಸಾಮಾಜಿಕ ರಾಜಕೀಯ ಅರಾಜಕತೆಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಿಕ ಧತ್ತಿ ಇಲಾಖೆಯ 2002ರ ನಿಯಮಾವಳಿಗಳು ಹಿಂದೂ ದೇವಾಲಯಗಳ ಆಸ್ತಿಯನ್ನು ಅನ್ಯ ಮತೀಯರಿಗೆ ಗುತ್ತಿಗೆ ನೀಡುವುದನ್ನು ನಿಷೇದಿಸುತ್ತದೆಯೇ ಹೊರತು ದೇವಸ್ಥಾನಗಳ ಜಾತ್ರಾ ಸಂದರ್ಭದಲ್ಲಿ ಅನ್ಯಮತೀಯರು ಮಾಡುವ ಬೀದಿಬದಿ ವ್ಯಾಪಾರವನ್ನು ನಿಷೇದಿಸುವುದಿಲ್ಲ. ಬೀದಿಬದಿ ವ್ಯಾಪಾರ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ- 2014ರ ಕಾಯ್ದೆ ಹಾಗೂ ಕರ್ನಾಟಕ ಸರಕಾರ ಬೀದಿಬದಿ ವ್ಯಾಪಾರ ಅಧಿನಿಯಮ 2019- 2020 ರಡಿಯಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಕಾನೂನಾತ್ಮಕ ಭದ್ರತೆಯಿದ್ದು, ಧರ್ಮದ ಹೆಸರಲ್ಲಿ ಅವರ ಹೊಟ್ಟೆಗೆ ಹೊಡೆಯುವುದು ಕಾನೂನು ಬಾಹಿರವಾಗಿದ್ದು ಇವರಿಗೆ ಭದ್ರತೆ ಒದಗಿಸುವಲ್ಲಿ ಸರಕಾರ ಎಡವಿದೆ ಎಂದು ಅವರು ಹೇಳಿದ್ದಾರೆ.ಪರಸ್ಪರ ದೋಷಾರೋಪ ಗಳನ್ನು ಇತ್ಯರ್ಥ ಪಡಿಸಿ ಸೌಹಾರ್ಧಯುತವಾಗಿ ಬಗೆಹರಿಸಬಹುದಾಗಿದ್ದ ಸಮಸ್ಯೆಯೊಂದು ದೇಶದ ಸಂವಿಧಾನದತ್ತ ಜಾತ್ಯತೀತತೆಯ ಸಿದ್ದಾಂತವನ್ನೆ ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದಿರುವ ವಿಷಾದನೀಯ. ಈ ಪ್ರಜಾತಂತ್ರ ವಿರೋಧಿ ಬೆಳವಣಿಗೆಗೆ ಕೇಂದ್ರ ರಾಜ್ಯ ಮತ್ತು ಸ್ಥಳೀಯಾಡಳಿತಗಳೆ ನೇರ ಹೊಣೆ ಎಂದು ತಿಳಿಸಿದ್ದಾರೆ. • ಬಿಪಿನ್ ಚಂದ್ರಪಾಲ್ ನಕ್ರೆ., ವಕ್ತಾರರು., ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ. Show Full Article Advertisement Next Read: ಸಂವಿಧಾನದ ಆಶಯಗಳನ್ನು ತಿಳಿಸದ ಮತ್ತು ತಿಳಿದುಕೊಳ್ಳದ ಮಾಧ್ಯಮಗಳು ಇದ್ದರೆಷ್ಟು ಹೋದರೆಷ್ಟು? :ಡಾ. ಎಚ್.ಸಿ ಮಹಾದೇವಪ್ಪ » Advertisement Recent Posts ಜೆ.ಪಿ ಹೆಗ್ಡೆ ಸಂಸದರಾಗಲಿ. ಕೋಟ ಪರಿಷತ್ ವಿಪಕ್ಷ ನಾಯಕರಾಗಿ ಮುಂದುವರಿಯಲಿ! "ದೇಶದ ಸಂಪತ್ತು ಸಮಾನ ಹಂಚಿಕೆ"ಯ ರಾಹುಲ್ ಗಾಂಧಿ ಯೋಜನೆಗಳು ತಪ್ಪೇ? ಜಯಪ್ರಕಾಶ ಹೆಗ್ಡೆ ಮತಯಾಚನೆ: ಫೋಟೋ ಸುದ್ದಿ ಈ ಬಾರಿಯ ಜೋಡುಕರೆ ಕಂಬಳದಲ್ಲಿ ಐಎಂಎ (ರಿ) ಮಂಗಳೂರು ನೇತೃತ್ವದ ತಂಡ! ಡಾ. ಅಂಬೇಡ್ಕರ್ ಜಯಂತಿ ದಿನ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ವಿಶೇಷ ಪ್ರಚಾರ ಅಭಿಯಾನ! ಕುಚ್ಚಲಕ್ಕಿ ನೀಡುವ ಕುರಿತು ಸುಳ್ಳು ಹೇಳಿದ್ದ ಕೋಟ v/s ನುಡಿದಂತೆ ನಡೆವ ಜೆ.ಪಿ ಹೆಗ್ಡೆ ಜಯಪ್ರಕಾಶ ಹೆಗ್ಡೆಯವರೇ ಸಂಸದರಾಗಬೇಕು! ಏಕೆಂದರೆ... ಕಾಂಗ್ರೆಸ್ ನಾಯಕ ಹೇರಿಕುದ್ರು ಗಂಗಾಧರ ಶೆಟ್ಟಿ ಇನ್ನಿಲ್ಲ. ಮಾರ್ಚ್ 12: ಜಯಪ್ರಕಾಶ್ ಹೆಗ್ಡೆ ಕಾಂಗ್ರೆಸ್ ಸೇರ್ಪಡೆ! ಕಾಲಜ್ಞಾನ ಭವಿಷ್ಯದ ಪ್ರಕಾರ ಪ್ರಿಯಾಂಕಾ ಗಾಂಧಿ ಪ್ರಧಾನಿ: ನೊಣವಿನಕೆರೆ ಗುರೂಜಿ! ಚುನಾವಣಾ ಬಾಂಡ್ ನಿಷೇಧ- ಸುಪ್ರಿಂ ಕೋರ್ಟ್ ತೀರ್ಪು ಶ್ಲಾಘನೀಯ: ಸಿದ್ದರಾಮಯ್ಯ ಮಂಗಳೂರು: ಸೈಂಟ್ ಜೆರೋಜಾ ಶಾಲೆಯಲ್ಲಿ ನಿಜಕ್ಕೂ ನಡೆದದ್ದು ಏನು? ಕಾಂಗ್ರೆಸ್ ಪುನಶ್ಚೇತನ ಯಾವಾಗ? ಉತ್ತರದ ವೈಫಲ್ಯಕ್ಕೆ ದಕ್ಷಿಣಕ್ಕೆ ಶಿಕ್ಷೆ? - ಮಟ್ಟು "ಇದು ವಿನಾಶಕಾರಿ ಬಜೆಟ್" ಸಿದ್ದರಾಮಯ್ಯ ವಿಶ್ಲೇಷಣೆ