Advertisement

ಕಾಂಗ್ರೆಸ್ ಪಕ್ಷವು ತನ್ನ ಆಡಳಿತದಲ್ಲಿ 'ಬುಲ್ಡೋಜರ್ ಸಂಸ್ಕೃತಿ'ಯನ್ನು ಅಳವಡಿಸಿಕೊಂಡಿದ್ದರೆ ಇಂದು ಬಿಜೆಪಿಗರೆಲ್ಲರೂ ನಿರಾಶ್ರಿತರಾಗಿರುತ್ತಿದ್ದರು.

Advertisement
ಕಾಂಗ್ರೆಸ್ ಪಕ್ಷವು ತನ್ನ ಆಡಳಿತದಲ್ಲಿ 'ಬುಲ್ಡೋಜರ್ ವಿಕೃತಿ'ಯನ್ನು ಅಳವಡಿಸಿಕೊಂಡಿದ್ದರೆ ಇಂದು ಬಿಜೆಪಿಗರೆಲ್ಲರೂ ನಿರಾಶ್ರಿತರಾಗಿರುತ್ತಿದ್ದರು. ದೊಂಬಿ, ಗಲಭೆಗಳಿಂದಲೇ ರಾಜಕೀಯ ಅಸ್ತಿತ್ವ ಕಂಡುಕೊಂಡ ಬಿಜೆಪಿ ಇಂದು ಸಂವಿಧಾನ ವಿರೋಧಿಯಾದ ಬುಲ್ಡೋಜರ್ ವಿಕೃತಿಯ ಬಗ್ಗೆ ಮಾತಾಡುತ್ತಿರುವುದು ಹಾಸ್ಯಾಸ್ಪದ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ಆರೋಪಿಗಳಾದವರ ಮನೆಯ ಮೇಲೆ ಬುಲ್ಡೋಜರ್ ಹತ್ತಿಸುವುದಾದರೆ ಕೆ.ಎಸ್ ಈಶ್ವರಪ್ಪ, ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹ, ಸಿಟಿ ರವಿ ಅವರುಗಳಂತಹ ಬಿಜೆಪಿಗರ ಮನೆಗಳ ಮೇಲೆ ಹತ್ತಿಸಬೇಕು. ಅವರುಗಳು ಕಟ್ಟಿಕೊಂಡ ಅಕ್ರಮ ಸಾಮ್ರಾಜ್ಯ ಉರುಳಿಸಲು ಸಾವಿರಾರು ಬುಲ್ಡೋಜರ್ ಬೇಕಾಗಬಹುದು! ಸಮಾಜದ ಸ್ವಾಸ್ಥ್ಯ ಹಾಳುಮಾಡುವಲ್ಲಿ ಬಿಜೆಪಿಗರದ್ದೇ ಪ್ರಮುಖ ಪಾತ್ರವಿದೆ ಎಂದು ವಿವರಿಸಿದೆ.
Advertisement
Advertisement
Recent Posts
Advertisement