Advertisement

ಮೋದಿ ಎಂದರೆ ಏನೆಂದುಕೊಂಡಿದ್ದೀರಿ? ಮಹಾನ್ ಸಾಧಕ ಮೋದಿಯ ಸಾಧನೆಗಳ ಒಂದಷ್ಟು ವಿವರಗಳು

Advertisement

ಮೋದಿ ಎಂದರೆ ಏನೆಂದುಕೊಂಡಿದ್ದೀರಿ? ಮಹಾನ್ ಸಾಧಕ ಮೋದಿಯ ಸಾಧನೆಗಳ ಒಂದಷ್ಟು ವಿವರಗಳು: 1) ಮೋದಿ ಎಂದರೆ: ಸಿಎಜಿ ವ್ಯಾಪ್ತಿಗೆ ಬರುವ ಕೇಂದ್ರ ಸರ್ಕಾರದ 'ಪ್ರಧಾನ ಮಂತ್ರಿ ಪರಿಹಾರ ನಿಧಿ' ಎಂಬ ಅಧಿಕೃತವಾದ ಸಂಸ್ಥೆ ಇದ್ದರೂ ಕೂಡಾ ಕೊರೊನಾ ಲಾಕ್‌ಡೌನ್ ಸಮಯದಲ್ಲಿ 'ಪಿಎಂ ಕೇರ್ಸ್ ಫಂಡ್' ಎಂಬ ಹೆಸರಲ್ಲಿ ಖಾಸಗಿ ಫಂಡ್ ಆರಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಕೋಟಿ ರೂಪಾಯಿ ಹಣ ಸಂಗ್ರಹಿಸಿ, ಸಂತ್ರಸ್ತರಿಗೆ ಚಿಕ್ಕಾಸೂ ಸಹಾಯ ಧನ ಬಿಡುಗಡೆ ಮಾಡದೆ, ದಾನಿಗಳಿಗೆ ಹಾಗೂ ದೇಶದ ಜನರಿಗೆ ಸಂಗ್ರಹವಾದ ಹಣದ ವಿವರ ಮತ್ತು ಖರ್ಚು ವೆಚ್ಚಗಳ ವಿವರ ಕೊಡದೆ 'ಮಾಹಿತಿ ಹಕ್ಕು' ಅರ್ಜಿಯನ್ನು ತಿರಸ್ಕರಿಸುವ ಮೂಲಕ ವಂಚಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! 2) ಮೋದಿ ಎಂದರೆ: ಗುಜರಾತ್ ಮಾದರಿಯ ಅಭಿವೃದ್ಧಿಯ ಭ್ರಮೆ ಮೂಡಿಸಿ ಅಧಿಕಾರಕ್ಕೆ ಬಂದು ದೇಶದಾದ್ಯಂತ ವದಂತಿ ಹರಡುವ ಮೂಲಕ ಕೋಮುಗಲಭೆಗಳಿಗೆ ಪ್ರಚೋದಿಸಿ, ಗೋಮಾಂಸದ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆಗಳು ನಡೆದಾಗ ಕೊಲೆಗಳಾದಾಗ, ಮಹಿಳೆಯರ ಹಾಗೂ ಎಳೆ ಬಾಲಕಿಯರ ಮೇಲೆ ಅತ್ಯಾಚಾರ ನಡೆದಾಗ, ಕೊಲೆಗಳಾದಾಗ ನವಿಲುಗಳಿಗೆ ಕಾಳು ಹಾಕುತ್ತಿದ್ದ, ಗಿಳಿಗಳನ್ನು ಹೆಗಲ ಮೇಲೆ ಕೂರಿಸಿಕೊಂಡು ಫೋಟೋ ಸೆಷನ್ಸ್ ನಡೆಸುತ್ತಿದ್ದ, ಡಿಜೆ ಸೌಂಡ್ ಹಾಗೂ ಲೇಸರ್ ಬೆಳಕಿಗೆ ಕೈ ಬೆರಳು ಕುಣಿಸುತ್ತಿದ್ದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! 3) ಮೋದಿ‌ ಎಂದರೆ; ಕೇವಲ ಐವತ್ತು ದಿನಗಳ ಅವಕಾಶ ಕೊಡಿ, ದೇಶದೊಳಗಿನ ಕಪ್ಪುಹಣವನ್ನು ಸರ್ವನಾಶ ಮಾಡುತ್ತೇನೆ' ಎಂದು ಹೇಳಿ ಯಾವುದೇ ಪೂರ್ವತಯಾರಿ ಇಲ್ಲದೆ ರಾತ್ರೋರಾತ್ರಿ ನೋಟು ಬ್ಯಾನ್ ಮಾಡಿ, ಮಾರುಕಟ್ಟೆಯಲ್ಲಿದ್ದ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳಲು ಅವಕಾಶ ಮಾಡುಕೊಟ್ಟು, ಕಳೆದ ಅರವತ್ತು ವರ್ಷಗಳಲ್ಲಿ ನಿಧಾನವಾಗಿ ಸದೃಢ ವಾಗಿ ಬೆಳೆದು ನಿಂತ ದೇಶದ ಆರ್ಥಿಕತೆಯನ್ನು ಸರ್ವನಾಶ ಮಾಡಿ ಜನಸಾಮಾನ್ಯರು ಒಂದೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? 4) ಮೋದಿ ಎಂದರೆ; ದೇಶವನ್ನು ಗುಜರಾತ್ ಮಾದರಿಯಲ್ಲಿ ಕಟ್ಟುತ್ತೇನೆ ಎಂದು ಹೇಳುತ್ತಾ ನೋಟು ಬ್ಯಾನ್, ಲಾಕ್‌ಡೌನ್ ಗಳ ಮೂಲಕ ದೇಶದ ಲಕ್ಷಾಂತರ ಕಂಪೆನಿಗಳು ಬಾಗಿಲು ಮಚ್ಚುವಂತೆ ಮಾಡಿ ಅಲ್ಲಿನ ಕೋಟ್ಯಾಂತರ ಕಾರ್ಮಿಕರು ಕೆಲಸ ಕಳೆದುಕೊಳ್ಳುವಂತೆ ಮಾಡುವ ಮೂಲಕ ದೇಶದ ನಿರುದ್ಯೋಗ ಮಟ್ಟವನ್ನು ಕಳೆದ 45 ವರ್ಷಗಳ ಹಿಂದಿನ ಮಟ್ಟಕ್ಕೆ ಇಳಿಸಿದ ಹಾಗೂ ಕಾಂಗ್ರೆಸ್ ಕಾಲದಲ್ಲಿದ್ದ 10.8% ಜಿಡಿಪಿಯನ್ನು ಕೇವಲ ಆರು ವರ್ಷಗಳಲ್ಲಿ ಮೈನಸ್ 23.9%ಗೆ ಇಳಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? 5) ಮೋದಿ ಎಂದರೆ; 2020 ರ ಮಾರ್ಚ್ 25ರ ಹೊತ್ತಿಗೆ ದೇಶದೊಳಗಿದ್ದ ಕೇವಲ 497 ಕೊರೊನಾ ಪಾಸಿಟಿವ್ ಪ್ರಕರಣಗಳನ್ನು ನಿಭಾಯಿಸಲಾಗದೆ ದೇಶದ 137ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಯೊಳಗೆ ಕೂರಿಸಿ ದೇಶದ ಆರ್ಥಿಕತೆ ಸರ್ವನಾಶ ಮಾಡಿ ಇದೀಗ ಪಾಸಿಟಿವ್ ಪ್ರಕರಣಗಳು ಒಂದು ಕೋಟಿ ತಲುಪಿದ ಸಮಯದಲ್ಲಿ 'ಕೊರೊನಾದೊಂದಿಗೆ ಬದುಕಲು ಕಲಿಯಿರಿ' ಎಂದು ದೇಶದ ಜನರಿಗೆ ಕರೆ ನೀಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) 6) ಮೋದಿ ಎಂದರೆ; ಕೇವಲ ಅಂತರ್ರಾಷ್ಟ್ರೀಯ ವಿಮಾನಗಳನ್ನು ಬಂದ್ ಮಾಡುವ ಮೂಲಕ ಕೊರೊನಾ ವೈರಸ್ ತಡೆಯಬಹುದಾಗಿದ್ದ ಸರಳ ವಿಧಾನ ಬಿಟ್ಟು, ದೇಶದ 137 ಕೋಟಿ ಜನರನ್ನು ಲಾಕ್‌ಡೌನ್ ಹೆಸರಲ್ಲಿ ಮನೆಯೊಳಗೆ ಕೂರಿಸಿ ಅವರಿಗೆ ಆದಾಯವಿಲ್ಲದೆ ಒಂದೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿ, ವಲಸೆ ಕಾರ್ಮಿಕರಿಗೆ ಅತ್ತ ಕೆಲಸವೂ ಇಲ್ಲದೇ ಇತ್ತ ಊಟ ಹಾಗೂ ಕುಡಿಯುವ ನೀರಿಗೂ ಪರದಾಡುವಂತೆ ಮಾಡಿ ಅವರುಗಳಿಗೆ ಊರು ತಲುಪಲು ಬಸ್‌ಗಳ ವ್ಯವಸ್ಥೆಯೂ ಮಾಡದೆ ಜೀವಂತವಾಗಿ ಕೊಂದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? 7) ಮೋದಿ ಎಂದರೆ; 'ಕಳೆದ ಅರವತ್ತು ವರ್ಷಗಳಲ್ಲಿ ಈ ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು' ಎಂದು ಪ್ರಶ್ನಿಸುತ್ತಾ, ಕಾಂಗ್ರೆಸ್ ಕಾಲದಲ್ಲಿ ಕಟ್ಟಿದ ಹಾಗೂ ಸರ್ಕಾರಕ್ಕೆ ಬಹು ಆದಾಯ ತರುತ್ತಿದ್ದ ದೇಶದ 32ಕ್ಕೂ ಹೆಚ್ಚು ಅಮೂಲ್ಯ ಸರ್ಕಾರಿ ಆಸ್ತಿಗಳನ್ನು ಅಂಬಾನಿ, ಅದಾನಿ ಮತ್ತಿತರ ಉದ್ಯಮಿಗಳಿಗೆ ಮೂರುಕಾಸಿನ ಬೆಲೆಗೆ ಮಾರಾಟ ಮಾಡಿದ ಹಾಗೂ ಕಾಂಗ್ರೆಸ್ ಕಾಲದ 23ಕ್ಕೂ ಹೆಚ್ಚು ಯೋಜನೆಗಳ ಹೆಸರು ಬದಲಿಸಿ ಆ ಯೋಜನೆಗಳು ಮೋದಿ ಸರ್ಕಾರವೇ ಮಾಡಿದ ಯೋಜನೆಗಳು ಎಂಬಂತೆ ಬಿಂಬಿಸಲು ಸಾವಿರಾರು ಕೋಟಿ ರೂಪಾಯಿ ಖಜಾನೆಯ ಹಣವನ್ನು ಪೋಲು ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. 8) ಮೋದಿ ಎಂದರೆ; 2014ರಿಂದ 2020 ಮಾರ್ಚ್‌ ವೇಳೆ ಕೊರೊನಾ ಭಯ ಮೂಡುವ ತನಕವೂ ಸಾವಿರಾರು ಕೋಟಿ ರೂಪಾಯಿ ಸರ್ಕಾರಿ ಹಣ ಪೋಲುಮಾಡಿ ವಿದೇಶ ಯಾತ್ರೆ ಮಾಡುತ್ತಾ, ಕೇವಲ ಅರವತ್ತು ತಿಂಗಳಲ್ಲಿ ನೂರಕ್ಕೂ ಹೆಚ್ಚು ದೇಶಗಳಿಗೆ ತೆರಳಿ, ವಿಚಿತ್ರ ವೇಷಭೂಷಣ ಮಾಡಿಕೊಂಡು ಅಲ್ಲಿನ ಪ್ರಧಾನಿಗಳನ್ನು, ಅಧ್ಯಕ್ಷರನ್ನು ತಬ್ಬಿಕೊಂಡು ಪೋಟೋ ಗೆ ಪೋಸು ಕೊಡುತ್ತಿದ್ದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) 9) ಮೋದಿ ಎಂದರೆ; ಸ್ವಾತಂತ್ರ್ಯ ನಂತರ ಕಳೆದ ಅರವತ್ತು ವರ್ಷಗಳ ಕಾಲ ಈ ದೇಶವನ್ನು ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ದೇಶದ ಪ್ರಾಕೃತಿಕ ವಿಕೋಪದ ಸಂಧರ್ಭದ ಬಳಕೆಯ ಉದ್ದೇಶದಿಂದ ಜತನವಾಗಿ ಕೂಡಿಟ್ಟ 'ಆರ್‌ಬಿಐ ರಿಸರ್ವ್ ಫಂಡ್' 1ಕೋಟಿಯ 76ಲಕ್ಷ ಕೋಟಿ ರೂಪಾಯಿಯನ್ನು ಕಾಂಗ್ರೆಸ್ ಹಾಗೂ ರಿಸರ್ವ್ ಬ್ಯಾಂಕ್ ನ ಗವರ್ನರ್‌ಗಳ ವಿರೋಧದ ನಡುವೆಯೂ ಕಿತ್ತುಕೊಂಡು ಕೊರೊನಾ ಆಪತ್ತಿನ ಕಾಲದಲ್ಲಿ ವಲಸೆ ಕಾರ್ಮಿಕರು ವಾಹನ ಸೌಲಭ್ಯ ಹಾಗೂ ಅನ್ನ, ನೀರು ಇಲ್ಲದೇ ಸಾಯುವಂತೆ ಮಾಡಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! 10) ಮೋದಿ ಎಂದರೆ; ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ರೈತರನ್ನು ಖಲಿಸ್ಥಾನಿಗಳೆಂದು ಕರೆದ, ದೇಶದಲ್ಲಿ ನಡೆಯುತ್ತಿರುವ ಹಲ್ಲೆ- ಕೊಲೆ- ಅತ್ಯಾಚಾರಗಳ ವಿರುದ್ಧ ಪ್ರಶಸ್ತಿ ವಾಪಸಿ ಚಳವಳಿ ನಡೆಸಿದ ಸಾಹಿತಿಗಳನ್ನು ಬುದ್ದಿಜೀವಿಗಳನ್ನು ಹಿರಿಯ ನಟರನ್ನು ಕವಿಗಳನ್ನು ಅರ್ಬನ್ ನಕ್ಸಲರು ಎಂದು ಕರೆದು ಕರಾಳ ಕಾಯ್ದೆಯಡಿ ಅವರನ್ನು ಜೈಲಿನಲ್ಲಿ ಬಂದಿಸಿಟ್ಟಿರುವ, ದೇಶದಲ್ಲಿ ಶಾಂತಿ ಸೌಹಾರ್ಧತೆ ಮೂಡಿಸಲು ಪ್ರಯತ್ನಿಸಿದ ವಿಧ್ಯಾರ್ಥಿಗಳನ್ನು ಪ್ರತ್ಯೇಕತಾವಾದಿಗಳು ಎಂದು ಪ್ರಚಾರ ಮಾಡಿದ, ಪ್ರಗತಿಪರ ಚಿಂತನೆಗಳನ್ನು ಪ್ರತಿಪಾದಿಸುವ ರಾಜಕೀಯ ನಾಯಕರನ್ನು ಮಾವೋವಾದಿಗಳು ಎಂದು ಕರೆದ, ಇತಿಹಾಸ ತಜ್ಞರನ್ನು- ಸಂಶೋಧಕರನ್ನು ದೇಶದ್ರೋಹಿಗಳು ಎಂದು ಅಪಾದಿಸಿದ ಸ್ವತಂತ್ರ ಭಾರತದ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! 11) ಮೋದಿ ಎಂದರೆ; ಈ ನಾಡಿನ ಮೂಲ ನಿವಾಸಿಗಳ ಪೌರತ್ವ ಕಿತ್ತುಕೊಂಡು, ಆ ಮೂಲಕ ಅವರ ರೇಷನ್ ಕಾರ್ಡ್, ಆದಾರ್ ಕಾರ್ಡ್, ಮತದಾರರ ಕಾರ್ಡ್, ಆಸ್ತಿ ಹಕ್ಕು ಕಿತ್ತುಕೊಂಡು ದ್ವಿತೀಯ ದರ್ಜೆಯ ನಾಗರಿಕರನ್ನಾಗಿಸುವ ಮೂಲಕ ಅವರಿಗೆ ವಿದ್ಯೆ, ಅಧಿಕಾರ, ಆಸ್ತಿಯ ಹಕ್ಕು ನಿರಾಕರಿಸುವ ಮೂಲಭೂತವಾದಿ ವೈದಿಕಶಾಹಿಗಳ ಸನಾತನ ಕಾನೂನಾದ ಮನುಸ್ಮೃತಿ ಯನ್ನು ಜಾರಿಗೆ ತಂದು ಗುಲಾಮಗಿರಿ ಪದ್ದತಿ ಹೇರುವ ಗುಪ್ತ ಕಾರ್ಯಸೂಚಿಯ ಭಾಗವಾಗಿ ಸಿಎಎ, ಎನ್‌ಆರ್‌ಸಿಗಳನ್ನು ಜಾರಿಗೊಳಿಸ ಹೊರಟಿರುವ ಮೊತ್ತ ಮೊದಲ ಪ್ರಧಾನಿ ನರೇಂದ್ರ ಮೋದಿಯವರು. ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.

Advertisement
Advertisement
Recent Posts
Advertisement