Advertisement

ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?

Advertisement

ಬರಹ: - ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಸರ್ಕಾರಗಳು ಯಾವುದಾದರೂ ಸಂಘ ಸಂಸ್ಥೆಯನ್ನು ಏಕೆ ನಿಷೇಧಿಸುತ್ತವೆ? ಇತಿಹಾಸವು ತಿಳಿಸುವಂತೆ ಆಳುವ ವರ್ಗಗಳ ಅಸ್ಥಿತ್ವಕ್ಕೆ, ಅವರ ಹಿತಾಸಕ್ತಿಗೆ ಧಕ್ಕೆ ತರುವಷ್ಟು ಜನಚಳವಳಿಗಳು ತೀವ್ರಗತಿಯನ್ನು ಪಡೆದುಕೊಂಡಾಗ ಅಂಥಾ ಚಳವಳಿಗಳನ್ನು, ಸಂಘಟನೆಗಳನ್ನೂ, ಪಕ್ಷಗಳನ್ನೂ ಹಾಗೂ (2019ರಲ್ಲಿ ಯುಎಪಿಎ ಗೆ ಮೋದಿ ಸರ್ಕಾರ ತಿದ್ದುಪಡಿ ತಂದ ನಂತರ) ವ್ಯಕ್ತಿಗಳನ್ನೂ ಆಳುವ ಸರ್ಕಾರ ನಿಷೇಧಿಸುತ್ತದೆ. ಅದೇ ರೀತಿ ಸರ್ಕಾರ ಹಾಗೂ ಸರ್ಕಾರದ ಮೇಲೆ ನಿಯಂತ್ರಣ ಹೊಂದಿರುವ ಶಕ್ತಿಗಳು ಬಯಸದ ವಿದ್ಯಮಾನಗಳಿಂದಾಗಿ ಹಾಲಿ ಇರುವ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಒದಗುತ್ತಿದೆ ಎಂದು ಸರ್ಕಾರ ಭಾವಿಸಿದಾಗಲೂ ಸಂಘ-ಸಂಸ್ಥೆಗಳನ್ನು, ಅವರ ಸಿದ್ಧಾಂತಗಳ ಪ್ರಚಾರಗಳನ್ನು ನಿಷೇಧಿಸುತ್ತವೆ. ಆ ಸಂಸ್ಥೆಗಳ ಕಾರ್ಯಕರ್ತರನ್ನು ಹಲವು ವರ್ಷಗಳ ಕಾಲ ವಿಚಾರಣೆಯನ್ನು ಮಾಡದೆ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತವೆ ಆಥವಾ ನಕಲಿ ಎನ್‌ಕೌಂಟರ್‌ಗಳಲ್ಲಿ ಕೊಂದುಹಾಕುತ್ತವೆ. ಭೀಮಾ-ಕೊರೆಗಾಂವ್ ಪ್ರಕರಣ ಕಣ್ಣಮುಂದಿರುವ ಹಲವಾರು ನಿದರ್ಶನಗಳಲ್ಲಿ ಒಂದು. ಆದರೆ ಅಸ್ಥಿತ್ವದಲ್ಲಿರವ 'ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆ'ಯನ್ನು , ಆಳುವ ವರ್ಗಗಳನ್ನು ರಕ್ಷಿಸಲೆಂದೇ ಅವತರಿಸಿರುವ ಆರೆಸ್ಸೆಸ್ ಕೂಡಾ ಸ್ವಾತಂತ್ರ್ಯಾನಂತರದಲ್ಲಿ ಕೂಡಾ ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಹಾಗಿದ್ದಲ್ಲಿ ಈ ನಿಷೇಧವನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಮೂರೂ ಬಾರಿಯೂ ಅದನ್ನು ನಿಷೇಧಿಸಿದ್ದು ಅದರ ರಾಜಕೀಯ ವೈರಿ ಎಂದು ಹೇಳಲ್ಪಡುವ ಕಾಂಗ್ರೆಸ್ಸೇ. ಆದರೆ ಈ ಮೂರೂ ಸಂದರ್ಭಗಳನ್ನು ಗಮನಿಸಿದರೆ ಇತರ ಸರ್ಕಾರ ವಿರೋಧಿ ಸಂಘಟನೆಗಳಂತೆ ಆರೆಸ್ಸೆಸ್ ಕೂಡಾ "ನಿಷೇಧವಾಯಿತು" ಎಂದಾಗಲೀ, "ಕಾಂಗ್ರೆಸ್ ಆರೆಸ್ಸೆಸ್ಸನ್ನು ನಿಷೇಧಿಸಿತು" ಎಂದಾಗಲಿ ಹೇಳಲು ಸಾಧ್ಯವೇ ಇಲ್ಲ! ಅವೆಲ್ಲವೂ ಅಯಾ ಸಂದರ್ಭಗಳಲ್ಲಿ ಉಕ್ಕೇರಿದ ಜನವಿರೋಧದ ಒತ್ತಡಗಳಿಗೆ ಮಣಿದು ತೆಗೆದುಕೊಂಡ ತಾತ್ಕಾಲಿಕ ಅರೆಮನಸ್ಸಿನ ಕ್ರಮಗಳು ಮಾತ್ರ ಎಂಬುದು ಸ್ಪಷ್ಟವಾಗುತ್ತದೆ. ಹಾಗೆಯೇ ಕಾಂಗ್ರೆಸ್ ಆಗಲೀ, ಅದರ ಜೊತೆ ಅಧಿಕಾರ ಹಂಚಿಕೊಂಡಿದ್ದ ಇತರ ಯಾವುದೇ ಪಕ್ಷಗಳಾಗಲೀ ಆರೆಸ್ಸೆಸ್ ಮತ್ತದರ ಸಿದ್ಧಾಂತಗಳನ್ನು ಭಾರತೀಯ ಪ್ರಜಾತಂತ್ರಕ್ಕಿರುವ ಸವಾಲೆಂದು ಪರಿಗಣಿಸಿಯೇ ಇರಲಿಲ್ಲವೆಂಬುದೂ ಕೂಡಾ ಸ್ಪಷ್ಟವಾಗುತ್ತದೆ. ಹೀಗಾಗಿ ಆರೆಸ್ಸೆಸ್ ನಿಷೇಧವೆಂಬುದು ಭಾರತದ ರಾಜಕಾರಣದ ಮೂರು ಪ್ರಹಸನಗಳೆಂಬಂತೆಯೇ ಕಾಣುತ್ತವೆ. ಮೂರೂ ನಿಷೇಧಗಳ ಇತಿಹಾಸವನ್ನು ಸ್ವಲ್ಪ ವಿವರವಾಗಿ ನೋಡೋಣ.. ಆರೆಸ್ಸೆಸ್ ನಿಷೇಧ -1 (1948-48) ಬ್ರಾಹ್ಮಣಶಾಹಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದ ಸಕ್ರಿಯ ಕಾರ್ಯಕರ್ತನಾಗಿದ್ದ ನಾಥೂರಾಮ್ ಗೂಡ್ಸೆ ಎಂಬ ಸ್ವತಂತ್ರ ಭಾರತದ ಮೊಟ್ಟಮೊದಲ ಭಯೋತ್ಪಾದಕ 1948ರ ಜನವರಿ 30ರಂದು ಸಂಜೆ 5.30ರ ಸುಮಾರಿಗೆ ದೆಹಲಿಯಲ್ಲಿ ಗಾಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ. ಕೊಂದ ಕೈಗಳು ಆತನದ್ದಾಗಿದ್ದರೂ ಅದರ ಹಿಂದಿದ್ದ ಮೆದುಳು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾವೇ ಆಗಿತ್ತು. ತಾಂತ್ರಿಕವಾಗಿ ಗೋಡ್ಸೆ ಆರೆಸ್ಸೆಸ್ಸಿನ ಸದಸ್ಯ ಅಲ್ಲ ಎಂದು ಅರೆಸ್ಸೆಸ್ಸ್ ಆಗ ವಾದಿಸಿದರೂ ಈಗ ಸಂಘಪರಿವಾರದ ಎಲ್ಲಾ ಅಂಗಸಂಸ್ಥೆಗಳೂ ಈಗ ಅವನನ್ನು ತನ್ನ ಮಾರ್ಗದರ್ಶಿ ಎಂದೇ ಬಹಿರಂಗವಾಗಿ ಒಪ್ಪಿಕೊಳ್ಳುತ್ತಿವೆ. ಗಾಂಧಿಯನ್ನು ಕೊಂದ ನಂತರವಂತೂ ಆರೆಸ್ಸೆಸ್‌ನ ಎಲ್ಲ ಶಾಖೆಗಳಲ್ಲೂ ಸಿಹಿ ಹಂಚಿ ಸಮಾರಂಭಗಳನ್ನು ಏರ್ಪಡಿಸಲಾಗಿತ್ತು. ಹೀಗಾಗಿ 1949ರ ಫೆಬ್ರವರಿಯಲ್ಲಿ ಹಿಂದೂ ಮಹಾಸಭಾದ ಮುಖ್ಯಸ್ಥ ಸಾರ್ವರ್ಕರನ್ನು ಬಂಧಿಸಲಾಯಿತಲ್ಲದೇ ಆರೆಸ್ಸೆಸ್ಸನ್ನು ನಿಷೇಧಿಸಿ ಅದರ ಸರಸಂಘಚಾಲಕ ಗೋಳ್ವಾಲ್ಕರ್ ಅವರನ್ನೂ ಒಳಗೊಂಡಂತೆ ಹಲವಾರು ಆರೆಸ್ಸೆಸ್ ಕಾರ್ಯಕರ್ತರನ್ನು ಬಂಧಿಸಲಾಯಿತು. ಇದೇ ಗುಂಪು 1948ಕ್ಕೂ ಮುನ್ನ ಆರು ಬಾರಿ ಗಾಂಧಿಯವರ ಮೇಲೆ ಹತ್ಯಾ ಪ್ರಯತ್ನಗಳನ್ನು ನಡೆಸಿತ್ತು. ಸ್ವತಂತ್ರ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳ ಪ್ರಯತ್ನಕ್ಕೆ ಗಾಂಧಿ ಅಡ್ಡಿಯಾಗಿದ್ದದ್ದು ಅದಕ್ಕೆ ಪ್ರಮುಖ ಕಾರಣ. ಆದರೆ ಭಾರತವು ಒಂದು ಹಿಂದೂ ಬಹುಸಂಖ್ಯಾತ ರಾಷ್ರವಾಗಬೇಕೆಂಬ ಆಸೆ ಇದ್ದದ್ದು ಕೇವಲ ಆರೆಸ್ಸೆಸ್ಸಿಗೆ ಮಾತ್ರವಲ್ಲ. ಕಾಂಗ್ರೆಸ್ಸಿನಲ್ಲಿದ್ದ ಮದನ ಮೋಹನ ಮಾಳವೀಯರಂತ ನಾಯಕರಿಗೂ ಅದೇ ಆಸೆಯಿತ್ತು. ಆಗಿನ ಉಪಪ್ರಧಾನಿ ಮತ್ತು ಗೃಹಮಂತ್ರಿ ವಲ್ಲಭಭಾಯಿ ಪಟೇಲ್‌ರಂತವರಿಗೆ ಸ್ವತಂತ್ರ ಭಾರತದಲ್ಲಿ ಮುಸ್ಲಿಮರಿಗೆ" ಅವರ ಜಾಗವನ್ನು ತೋರಿಸಲು" ಸಹಾಯ ಮಾಡುವ ಆರೆಸ್ಸೆಸ್‌ನ ಸಿದ್ಧಾಂತ ಮತ್ತು ಸಂಘಟನೆಯ ಬಗ್ಗೆ ಆಳವಾದ ಮಮತೆಯೇ ಇತ್ತು. ವಾಸ್ತವವಾಗಿ ದೇಶ ವಿಭಜನೆಯ ನಂತರದಲ್ಲಿ ಭಾರತ ಸರ್ಕಾರವು ಹಿಂದೂ ರಕ್ಷಣೆಯ ಹೆಸರಲ್ಲಿ ಅಧಿಕೃತವಾಗಿ ಮತ್ತು ಅನಧಿಕೃತವಾಗಿ ಆರೆಸ್ಸೆಸ್ಸಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿತ್ತು. ಅಲ್ಲದೆ ಭಾರತದೊಡನೆ ವಿಲೀನಕ್ಕೆ ಒಪ್ಪಲು ಕಾಶ್ಮೀರದ ರಾಜನ ಮನ ಒಲಿಸುವಂತೆ ಗೋಳ್ವಾಲ್ಕರ್ ಅವರಿಗೆ ಪಟೇಲರು ಅಧಿಕೃತವಾಗಿಯೇ ಕೇಳಿಕೊಂಡಿದ್ದರು. ಹೀಗಾಗಿ ಆರೆಸ್ಸೆಸ್ಸಿನ ಹಿಂದೂತ್ವವಾದಿ ತೀವ್ರಗಾಮಿ ಚಟುವಟಿಕೆಗಳಿಗೆ ಸರ್ಕಾರದಲ್ಲಿ ಮತ್ತು ಕಾಂಗ್ರೆಸ್ಸಿನ ಒಂದು ವರ್ಗದಲ್ಲಿ ವಿಶೇಷ ಮಾನ್ಯತೆಯೇ ಇತ್ತು. ಈಗ ಆರೆಸ್ಸೆಸ್ಸಿಗರು ವಲ್ಲಭಭಾಯಿ ಪಟೇಲರನ್ನು ನೆಹರೂಗೆ ಪ್ರತಿನಾಯಕರಾಗಿ ಹಾಗೂ ತಮ್ಮ ಹಿಂದೂತ್ವ ರಾಜಕಾರಣದ ಐಕಾನ್ ಆಗಿ ಮಾಡಿಕೊಳ್ಳುತ್ತಿರುವುದು ಸುಮ್ಮನೇ ಏನಲ್ಲ. ಆದರೆ ಗಾಂಧಿ ಹತ್ಯೆಯ ನಂತರದಲ್ಲಿ ಕಾಂಗ್ರೆಸ್ ಸರ್ಕಾರ ಆರೆಸ್ಸೆಸನ್ನು ನಿಷೇಧಿಸದೆ ಗತ್ಯಂತರವಿರಲಿಲ್ಲ. ಆದರೆ ಆಗ ಭಾರತದ ಗೃಹಮಂತ್ರಿಯಾಗಿದ್ದದ್ದು ಆರೆಸ್ಸೆಸ್ ಬಗ್ಗೆ ವಿಶೇಷ ಮಮತೆಯಿದ್ದ ಪಟೇಲರೇ. ಆದರೂ ಆರೆಸ್ಸನ್ನು ನಿಷೇಧ ಮಾಡಿದ್ದು ಪಟೇಲರೇ ಆದ್ದರಿಂದ ಅವರು ಆರೆಸ್ಸೆಸ್ ವಿರೋಧಿಯಾಗಿದ್ದರು ಎಂಬ ವಾದವನ್ನು ಪ್ರಗತಿಪರರು ಮುಂದಿಡುತ್ತಿದ್ದಾರೆ. ಇದು ಸುಳ್ಳಲ್ಲ. ಆದರೆ ಪೂರ್ತಿ ನಿಜವೂ ಅಲ್ಲ. ಗಾಂಧಿ ಹತ್ಯೆಯು ಪಟೇಲರನ್ನು ಒಳಗೊಂಡಂತೆ ಎಲ್ಲಾ ಕಾಂಗ್ರೆಸ್ಸಿಗರನ್ನು ದಿಗ್ಭ್ರಾಂತಗೊಳಿಸಿದ್ದು ನಿಜವಾಗಿರಬಹುದು. ಆದರೆ ಅದರ ನೆಪದಲ್ಲಿ ಆರೆಸ್ಸೆಸ್‌ನ ಚಟುವಟಿಕೆಗಳ ಮೇಲೆ ಪರಿಣಾಮಕಾರಿ ನಿಷೇಧವನ್ನು ಹೇರುವುದು ಪಟೇಲರಿಗೂ, ಆಗಿನ ಮುಂಬೈ ಪ್ರಾಂತ್ಯದ ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದ ಮೊರಾರ್ಜಿ ದೇಸಾಯಿಯಂತವರಿಗೂ ಬಿಲ್‌ಕುಲ್ ಇಷ್ಟವಿರಲಿಲ್ಲ. ಹೀಗಾಗಿ ಆರೆಸ್ಸೆಸ್ ತನಗೊಂದು ಸಂವಿಧಾನವನ್ನು ಬರೆದುಕೊಂಡು ತನ್ನದು ರಾಜಕೀಯ ಸಂಘಟನೆಯಲ್ಲವೆಂದು ಸಾರಿದರೆ ಸಾಕು ನಿಷೇಧವನ್ನು ತೆಗೆಯಬಹುದೆಂದು ಸ್ವಯಂ ಪಟೇಲರೇ ಬಂಧನದಲ್ಲಿದ್ದ ಗೋಳ್ವಾಲ್ಕರ್ ಅವರೊಂದಿಗೆ ಮಾತುಕತೆ ಪ್ರಾರಂಭಿಸುತ್ತಾರೆ. ಈ ಮಾತುಕತೆಯ ಪ್ರಕ್ರಿಯೆಯಲ್ಲಿ ಗೋಳ್ವಾಲ್ಕರ್ ಅವರು 1948ರ ಸೆಪ್ಟೆಂಬರ್ 24ರಂದು ಪಟೇಲರಿಗೆ ಪತ್ರವೊಂದನ್ನು ಬರೆದು: "ತಾವು ತಮ್ಮ ಸರ್ಕಾರದ ಶಕ್ತಿಯೊಂದಿಗೆ ಹಾಗೂ ನಾವು ನಮ್ಮ ಸಂಘಟಿತ ಸಾಂಸ್ಕೃತಿಕ ಶಕ್ತಿಯೊಂದಿಗೆ ಜೊತೆಗೂಡಿ ಕೆಲಸ ಮಾಡಿದರೆ ನಮ್ಮ ಮುಂದಿರುವ ಕಮ್ಯುನಿಸ್ಟ್ ಪೀಡೆಯನ್ನು ನಿರ್ನಾಮ ಮಾಡಬಹುದು" ಎಂದು ಆಶ್ವಾಸನೆ ನೀಡುತ್ತಾರೆ. ಇದು ಕಾಂಗ್ರೆಸ್ಸಿನೊಳಗಿದ್ದ ಒಂದು ಪ್ರಭಾವಶಾಲಿ ಗುಂಪಿಗೂ ಹಾಗೂ ಆರೆಸ್ಸೆಸ್ಸಿಗೂ ಇದ್ದ ಸೈದ್ಧಾಂತಿಕ ಸಾಮೀಪ್ಯ. ಅದರಂತೆ ಆರೆಸ್ಸೆಸ್ ಭಾರತದ ಗೃಹ ಇಲಾಖೆಯು ಸೂಚಿಸಿದ ಯಾವ ಮಹತ್ತರ ಮಾರ್ಪಾಡುಗಳನ್ನು ಮಾಡಿಕೊಳ್ಳದೆ ಸಂವಿಧಾನವನ್ನು ರಚಿಸಿಕೊಳ್ಳುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು ಸರ್ಕಾರ ಅದರ ಮೇಲಿನ ನಿಷೇಧವನ್ನು ತೆಗೆಯುತ್ತದೆ! ನಂತರ 1949ರ ಅಕ್ಟೋಬರ್‌ನಲ್ಲಿ ನೆಹರೂ ವಿದೇಶ ಪ್ರವಾಸಕ್ಕೆ ತೆರಳಿದ್ದಾಗ ನಡೆದ ಕಾಂಗ್ರೆಸ್ಸಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕಾಂಗ್ರೆಸ್ಸಿನ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತರಾತುರಿಯಲ್ಲಿ ಪಟೇಲರು ಮಾಡಿಸುತ್ತಾರೆ. ಆದರೆ ನೆಹರೂ ಹಿಂತಿರುಗಿದ ನಂತರದ 1949ರ ನವಂಬರ್‌ನಲ್ಲಿ ನಡೆದ ಸಭೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಆರೆಸ್ಸೆಸ್ ಸದಸ್ಯತ್ವವನ್ನು ತೊರೆದರೇ ಮಾತ್ರ ಕಾಂಗ್ರೆಸ್ ಸದಸ್ಯರಾಗಬಹುದೆಂಬ ತೀರ್ಮಾನವನ್ನು ತೆಗೆದುಕೊಳ್ಳಲಾಗುತ್ತದೆ. ಹೆಚ್ಚಿನ ವಿವರಗಳಿಗೆ ಅಸಕ್ತರು ಪಟೇಲ್ ಮತ್ತು ಗೋಳ್ವಲ್ಕರ್ ನಡುವೆ ಆರೆಸ್ಸೆಸ್ ಮಧ್ಯವರ್ತಿ ಏಕನಾಥ್ ರಾನಡೆಯ ಮೂಲಕ ನಡೆದ ಪತ್ರ ವಿನಿಮಯಗಳನ್ನು ಗಮನಿಸಬಹುದು. ಅಥವಾ ಆರೆಸ್ಸೆಸ್ ಇತಿಹಾಸದ ಅಧಿಕೃತ ದಾಖಲೆಯೆಂದು ಆರೆಸ್ಸೆಸ್ ಹಾಗೂ ವಿದ್ವಾಂಸರೂ ಒಪ್ಪಿಕೊಳ್ಳುವ ವಾಲ್ಟರ್ ಆಂಡರ್ಸೆನ್ ಮತ್ತು ಶ್ರೀಧರ್ ದಾಮ್ಲೆ ಅವರು ಬರೆದಿರುವ Brotherhood In Saffron ಪುಸ್ತಕವನ್ನು ಗಮನಿಸಬಹುದು. ಅಥವಾ ಈ ವಿಷಯದ ಬಗ್ಗೆ ಸಂಕ್ಷಿಪ್ತ ಮಾಹಿತಿ ಕೊಡುವ ಈ ಲೇಖನವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು : ►►https://caravanmagazine.in/extract/gandhi-assassination-rss-vallabhbhai-golwalkar ಆರೆಸ್ಸೆಸ್ ನಿಷೇಧ -2 (1975-77) ಇಂದಿರಾ ಗಾಂಧಿಯವರು ದೇಶದ ಮೇಲೆ ತುರ್ತುಸ್ಥಿತಿಯನ್ನು ಹೇರಿದಾಗ ತಮ್ಮನ್ನು ವಿರೋಧಿಸುತ್ತಿದ್ದ ಎಲ್ಲಾ ವಿರೋಧಪಕ್ಷಗಳ ಮೇಲೆ ನಿಷೇಧ ಹೇರಿ ಸರ್ವಾಧಿಕಾರವನ್ನು ಜಾರಿ ಮಾಡಿದ್ದರು. ಆ ಸಮಯದಲ್ಲಿ ಇತರ ವಿರೋಧ ಪಕ್ಷಗಳು ಜೈಲುಪಾಲಾಗಿ ತಮ್ಮ ರಾಜಕೀಯ ಹಕ್ಕುಗಳನ್ನು ಕಳೆದುಕೊಂಡಿದ್ದು ನಿಜವಾದರೂ ತುರ್ತುಸ್ಥಿತಿಯ ಕ್ರೂರ ದಮನಕ್ಕೆ ಬಲಿಯಾದದ್ದು ರೈತಾಪಿ, ಕಾರ್ಮಿಕರು ಮತ್ತು ಎಡಪಂಥೀಯ ವಿದ್ಯಾರ್ಥಿಗಳು ಹಾಗೂ ನಾಯಕರು. ಇಂಥಾ ಸಾವಿರಾರು ಕಾರ್ಯಕರ್ತರು ದೇಶಾದ್ಯಂತ ಪೊಲೀಸರ ಗುಂಡಿಗೆ ಬಲಿಯಾದರು. ಇಂದಿರಾಗಾಂಧಿಯನ್ನು ವಿರೋಧಿಸಿದ ಕಾರಣಕ್ಕೆ ಆರೆಸ್ಸೆಸ್ ಕೂಡಾ ಆಗ ಎರಡನೇ ಬಾರಿಗೆ ನಿಷೇಧಕ್ಕೊಳಗಾಯಿತು. 1975ರ ಜುಲೈನಲ್ಲಿ ನಿಷೇಧಕ್ಕೆ ಗುರಿಯಾದ ಆರೆಸ್ಸೆಸ್ಸಿನ ಆಗಿನ ಸರಸಂಘಚಾಲಕ ಬಾಳಾಸಾಹೇಬ್ ದೇವರಸ್ ಅವರು 1975ರ ಆಗಸ್ಟಿನಿಂದಲೇ ಇಂದಿರಾಗಾಂಧಿಯವರಿಗೆ ಪತ್ರವನ್ನು ಬರೆಯಲು ಪ್ರಾರಂಭಿಸಿ ಗಾಂಧಿಯವರ ಸರ್ವಾಧಿಕಾರಿ ಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಆರೆಸ್ಸೆಸ್ ಬಗ್ಗೆ ಸರ್ಕಾರಕ್ಕೆ ತಪ್ಪು ಅಭಿಪ್ರಾಯ ಇದೆಯೆಂದೂ, ತಾವು ಇಂದಿರಾಗಾಂಧಿಯವರ ಜೊತೆಗೆ ಹೆಜ್ಜೆ ಹಾಕಲು ಸಿದ್ಧವೆಂದು ಹೇಳುತ್ತಾ ಆರೆಸ್ಸೆಸ್ ಮೇಲಿನ ನಿಷೇಧವನ್ನು ಎತ್ತಿಹಾಕಲು ಗೋಗೆರೆಯಲು ಪ್ರಾರಂಭಿಸಿದರು. ಈ ರೀತಿ ಮೂರು ಪತ್ರಗಳನ್ನು ಬರೆದರೂ ಗಾಂಧಿಯವರಿಂದ ಯಾವ ಉತ್ತರವೂ ಬರದೇ ಹೋದಾಗ ಕಡು ಕಮ್ಯುನಿಸ್ಟ್ ವಿರೋಧಿಯೂ ಹಾಗೂ ಆರೆಸ್ಸೆಸ್‌ನ ಹಿತೈಷಿಯೂ ಮತ್ತು ಇಂದಿರಾಗಾಂಧಿಯವರ ಅಭಿಮಾನಿಯೂ ಆಗಿದ್ದ ವಿನೋಭಾ ಭಾವೆಯವರ ಮಧ್ಯಪ್ರವೇಶವನ್ನು ಆರೆಸ್ಸೆಸ್ ಕೋರಿತು. ಈ ಎಲ್ಲದರ ಪರಿಣಾಮವಾಗಿ ಆರೆಸ್ಸೆಸ್‌ನ ಮೇಲೆ ಅಧಿಕೃತವಾಗಿ ಬ್ಯಾನ್ ತೆಗೆಯದಿದ್ದರೂ ಆರೆಸ್ಸೆಸ್ ನ ಬಹುಪಾಲು ಕಾರ್ಯಕರ್ತರು ಮಾತ್ರ ಬಿಡುಗಡೆಯಾದರು. ಆರೆಸ್ಸೆಸ್‌ನ ಸರಸಂಘಚಾಲಕ ದೇವರಸ್ ಮತ್ತು ಇಂದಿರಾ ಗಾಂಧಿಯವರ ಈ ರಾಜಕೀಯ ಮೈತ್ರಿ 1980ರಲ್ಲಿ ಅವರು ಮತ್ತೆ ಪ್ರಧಾನಿಯಾದ ನಂತರವೂ ಮುಂದುವರೆಯಿತು. ಈ ಅವಧಿಯಲ್ಲಿ ಇಂದಿರಾಗಾಂಧಿ ಸರ್ಕಾರ ಪಂಜಾಬಿನಲ್ಲಿ ಸಿಖ್ ಉಗ್ರಗಾಮಿತ್ವವನ್ನು ಹತ್ತಿಕ್ಕುವ ಹೆಸರಲ್ಲಿ ತೆಗೆದುಕೊಂಡ ಎಲ್ಲಾ ಬರ್ಬರ ದಮನಕಾರಿ ಕ್ರಮಗಳನ್ನು ಆರೆಸ್ಸೆಸ್ ಬೆಂಬಲಿಸಿತಲ್ಲದೆ ಇಂದಿರಾಗಾಂಧಿಯವರ ಹತ್ಯೆಯಾದ ನಂತರದಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿ ಋಣ ತೀರಿಸಿಕೊಂಡಿತು. ಹೆಚ್ಚಿನ ವಿವರಗಳಿಗಾಗಿ ಆಸಕ್ತರು ದೇವರಸ್ ಅವರೇ ಬರೆದಿರುವ " ಹಿಂದೂ ಸಂಘಟನ್ ಔರ್ ಸತ್ತಾವಾದೀ ರಾಜನೀತಿ" ಪುಸ್ತಕವನ್ನು ಗಮನಿಸಬಹುದು. ಅಥವಾ ವಿದ್ವಾಂಸರಾದ ಕ್ರಿಸ್ಟೋಫೊ ಜಾಫರ್ಲೆ ಮತ್ತು ಪ್ರತಿನಾವ್ ಅನಿಲ್ ಅವರ ಇತೀಚಿನ ಪುಸ್ತಕ India's First Dictatorship: The Emergency, 1975-1977 ಪುಸ್ತಕವನ್ನು ಓದಬಹುದು. ಅಥವಾ ಅದರ ಸಂಕ್ಷಿಪ್ತ ಓದಿಗಾಗಿ ಕೆಳಗಿನ ವೆಬ್ ವಿಳಾಸದಲ್ಲಿರುವ ಈ ಲೇಖನವನ್ನೂ ಗಮನಿಸಬಹುದು: ►►https://www.rediff.com/news/special/christophe-jaffrelot-pratinav-anil-emergency-was-a-windfall-for-the-rss/20210625.htm ಆರೆಸ್ಸೆಸ್ ನಿಷೇಧ -3 (1992-93) 1992ರ ಡಿಸೆಂಬರ್ 6 ರಂದು ಆರೆಸ್ಸೆಸ್ ನ ಅಂಗಸಂಸ್ಥೆಗಳು ಹಾಡುಹಗಲೇ ಕಾನೂನು, ಸಂವಿಧಾನಗಳೆನ್ನೆಲ್ಲಾ ಗೇಲಿ ಮಾಡುತ್ತಾ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ ನಂತರದಲ್ಲಿ ಮೂರನೇ ಬಾರಿಗೆ ಆರೆಸ್ಸೆಸ್ ನಿಷೇಧಕ್ಕೊಗಾಯಿತು. ದೇಶಾದ್ಯಂತ ಕೋಮು ಸಾಮರಸ್ಯ ಕದಡಿದ, ಹಾಗೂ ಸಂವಿಧಾನ ಬದ್ಧ ಆಡಳಿತವನ್ನು ಯೋಜಿತವಾಗಿ ಧ್ವಂಸ ಮಾಡುವ ಆರೋಪಗಳು ಅವರ ಮೇಲಿತ್ತು. ಅದನ್ನು ಜಾರಿ ಮಾಡಲು ಸಂಚು, ಸಂಘಟನೆ ಮತ್ತು ಶಸ್ತ್ರಾಸ್ತ್ರ ಬಳಕೆ ಮಾಡಿದ್ದು ಮತ್ತೊಂದು ಆರೋಪ. ಇದನ್ನು ಸಾಬೀತು ಮಾಡಲು ಯಾವ ವಿಶೇಷ ಪುರಾವೆಗಳು ಬೇಕಿರಲಿಲ್ಲ. ಅವರು ಮಾಡಿದ ಭಾಷಣಗಳು ಮತ್ತು ಅವರು ಖುದ್ದಾಗಿ ಭಾಗವಹಿಸಿದ್ದನ್ನು ಸಾಬೀತು ಮಾಡುವ ಚಿತ್ರಗಳು ಹಾಗೂ ಪೊಲೀಸ್ ವರದಿಗಳೇ ಸಾಕಿತ್ತು. ಆರೆಸ್ಸೆಸ್ ಮೇಲಿನ ನಿಷೇಧವನ್ನು ವಿಚಾರಣೆ ಮಾಡಲು ನ್ಯಾಯಮೂರ್ತಿ ಪಿ.ಕೆ. ಬಾಹ್ರಿ ಅವರ ನೇತೃತ್ವದಲ್ಲಿ ಒಂದು ಟ್ರಿಬುನಲ್ ಅನ್ನು ಸ್ಥಾಪಿಸಲಾಯಿತು. ಅದು ಸತತವಾಗಿ ವಿಚಾರಣೆ ನಡೆಸಿ ನಿಷೇಧ ವಿಧಿಸಿದ ಕೇವಲ ಆರೇ ತಿಂಗಳಲ್ಲಿ ಆರೆಸ್ಸೆಸ್ಸನ್ನು ದೋಷ ಮುಕ್ತಗೊಳಿಸಿತು. ಕಾರಣ: ಆರೆಸ್ಸೆಸ್ಸನ್ನು ದೋಷಿಯೆಂದು ಪರಿಗಣಿಸುವ ಯಾವ ಪುರಾವೆಯನ್ನು ಸರ್ಕಾರ ಒದಗಿಸದೇ ಇದ್ದದ್ದು!! ಹಾಗೆಯೇ ನ್ಯಾಯಮೂರ್ತಿ ಕೆ. ರಾಮಮೂರ್ತಿ ಅವರ ಟ್ರಿಬ್ಯುನಲ್ ಸಹ 1995ರಲ್ಲಿ ವಿಶ್ವ ಹಿಂದೂ ಪರಿಷದ್ ಮೇಲೆ ಹಾಕಿದ್ದ ನಿರ್ಬಂಧವನ್ನು ಹಿಂತೆಗೆದುಕೊಂಡಿತು. ಕಾರಣ: ಕಾಂಗ್ರೆಸ್ ಸರ್ಕಾರ ನಿಷೇಧವನ್ನು ಮುಂದುವರೆಸಲು ಬೇಕಾದ ಪೂರಕ ಮಾಹಿತಿಯನ್ನು ಒದಗಿಸದಿದ್ದದ್ದು. ಆಸಕ್ತರು ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಗಮನಿಸಬಹುದು : ►►https://frontline.thehindu.com/politics/article30160463.ece ಇದು ಆರೆಸ್ಸೆಸ್ ನಿಷೇಧವೆಂಬ ರಾಜಕೀಯ ದಿವಾಳಿಕೋರತನದ ಹಾಗೂ ದುರಂತ ಪ್ರಹಸನಗಳ ಇತಿಹಾಸ.. ಮೃದು ಹಿಂದೂತ್ವದಿಂದ ಉಗ್ರ ಹಿಂದೂತ್ವವನ್ನು ಮಣಿಸಬಹುದೇ? ಇನ್ನು ಬಾಬ್ರಿ ಮಸೀದಿ ನಾಶದಲ್ಲಿ ಆದ್ವಾನಿ ಹಾಗೂ ಇನ್ನಿತರರ ಪರಿವಾರಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಿದ ಲಿಬರ್‌ಹಾನ್ ಮತ್ತು ನಾನಾವತಿ ಅಯೋಗಗಳ ವರದಿ ಕಾಂಗ್ರೆಸ್ ಕಾಲದಲ್ಲೇ ಡಸ್ಟ್‌ಬಿನ್ ಸೇರಿದ್ದವು. ಮೊದಲ ನಿಷೇಧದ ಸಂದರ್ಭದಲ್ಲಿ ಆರೆಸ್ಸೆಸ್‌ಗೆ ಅಲ್ಪಸ್ವಲ್ಪ ಅಳುಕಿತ್ತು. ಕಾಂಗ್ರೆಸ್ಸಿನಲ್ಲಿ ಕೆಲವರಲ್ಲಾದರೂ ಬಲವಾದ ಆರೆಸ್ಸೆಸ್ ವಿರೋಧವಿತ್ತು. ಆದರೆ ಎರಡನೇ ಬಾರಿ ಆರೆಸ್ಸಸ್ಸನ್ನು ನಿಷೇಧ ಮಾಡಿದ ಇಂದಿರಾ ಗಾಂಧಿಯವರೇ 1989ರಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದಮೇಲೆ ಭಾರತದ ರಾಜಕಾರಣದಲ್ಲಿ "ಹಿಂದೂ" ಮತ್ತು "ಭಾರತ ಆತಂಕದಲ್ಲಿದೆ" ಎಂಬ ರಾಜಕಾರಣವನ್ನು ಪ್ರಾರಂಭಿಸಿಬಿಟ್ಟರು! ಅದನ್ನೇ ಆ ನಂತರದಲ್ಲಿ ಆರೆಸ್ಸೆಸ್-ಬಿಜೆಪಿಗಳು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುತ್ತಿದ್ದಾರೆ. ಮೂರನೇ ನಿಷೇಧದ ವೇಳೆಗೆ ಆರೆಸ್ಸೆಸ್ ಸಂವಿಧಾನ ಹಾಗೂ ಸಮಾಜದ ಬಗ್ಗೆ ಯಾವುದೇ ಅಳುಕನ್ನು ಇಟ್ಟುಕೊಳ್ಳದೆ ಬಹಿರಂಗ ಆಕ್ರಮಣಕ್ಕಿಳಿದಿತ್ತು. ಆರೆಸ್ಸೆಸ್ ಬಗ್ಗೆ ಅಲ್ಪಸ್ವಲ್ಪ ವಿರೋಧವಿದ್ದ ಕಾಂಗ್ರೆಸ್ಸು ರೂಪಾಂತರಗೊಂಡು ಆರೆಸ್ಸೆಸ್ಸಿನ ಮೃದು ರೂಪವಾಗಿ ಬದಲಾಗಿತ್ತು. ಇದು ಕೇವಲ ಕಾಂಗ್ರೆಸ್ಸಿನ ಸಮಸ್ಯೆ ಅಲ್ಲ. ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಎಲ್ಲಾ ವಿರೋಧಪಕ್ಷಗಳ ಪರಿಸ್ಥಿತಿಯೂ ಹೌದು. ಬಾಬ್ರಿ ಮಸೀದಿಯ ಜಾಗದಲ್ಲಿ ರಾಮಮಂದಿರದ ಶಂಕುಸ್ಥಾಪನೆಯಾದ ದಿನವನ್ನು ಬಿಜೆಪಿ-ಆರೆಸ್ಸೆಸ್ ಎಲ್ಲೆಡೆ ವಿಜಯ ದಿನವೆಂದು ಆಚರಿಸಿದರೆ, ಕಾಂಗ್ರೆಸ್ ಎಲ್ಲಾ ಕಡೆ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದೆ! ಬಿಜೆಪಿಗಿಂತ ತಾನೇ ದೊಡ್ಡ ರಾಮಭಕ್ತ ಎಂದು ಸಾಬೀತು ಮಾಡುವ ಚುನಾವಣಾ ಉಮೇದಿನಲ್ಲಿ ಆರೆಸ್ಸೆಸ್-ಬಿಜೆಪಿ ಸೃಷ್ಟಿಸಿರುವ ಪ್ರಜಾತಂತ್ರ ವಿರೋಧಿ ಹಿಂದೂ ಓಟ್ ಬ್ಯಾಂಕ್ ರಾಜಕಾರಣಕ್ಕೆ ಪುಷ್ಟಿ ಒದಗಿಸುತ್ತಿದೆ. ಮತ್ತೊಂದು ಕಡೆ ಬ್ರಾಹ್ಮಣಶಾಹಿ ವಿರೋಧಿ ರಾಜಕಾರಣದ ಹೆಸರಿನಲ್ಲಿ ದಮನಿತ ಸಮುದಾಯದಲ್ಲಿ ಭರವಸೆ ಹುಟ್ಟಿಸಿದ್ದ ಬಿಎಸ್‌ಪಿಯ ಅಧಿನಾಯಕಿ ಮಾಯಾವತಿಯವರು ಬಿಜೆಪಿಗಿಂತ ಮೊದಲು ತಾವೇ ಭವ್ಯವಾದ ರಾಮಮಂದಿರವನ್ನು ಕಟ್ಟುವುದಾಗಿ ಹೇಳುತ್ತಾ ಅಯೋಧ್ಯೆಯಿಂದಲೇ ತ್ರಿಶೂಲ ಹಿಡಿದುಕೊಂಡು ಚುನಾವಣ ಪ್ರಚಾರ ಪ್ರಾರಂಭಿಸಿದ್ದಾರೆ. ಮೋದಿ ಸರ್ಕಾರ ಯುಎಪಿಎ ಕಾಯಿದೆಗೆ ಅತ್ಯಂತ ಜನವಿರೋಧಿ ತಿದ್ದುಪಡಿ ತಂದಾಗ ಅದನ್ನು ರಾಜ್ಯಸಭೆಯಲ್ಲಿ ಬೆಂಬಲಿಸಿದ್ದೂ ಕೂಡ ಬಿಎಸ್‌ಪಿಯೇ.. 2002ರಲ್ಲಿ ಗುಜರಾತಿನಲ್ಲಿ ಅರೆಸ್ಸೆಸ್ಸಿಗರು ಆಗಿನ ಮುಖ್ಯಮಂತ್ರಿ ಮೋದಿ ಬೆಂಬಲದೊಂದಿಗೆ ಇಡೀ ದೇಶವೇ ಬೆಚ್ಚಿಬೀಳುವಂತ ಮುಸ್ಲಿಂ ನರಮೇಧವನ್ನು ನಡೆಸಿದಾಗ ಮಾಯಾವತಿಯವರು ಮೋದಿಯನ್ನು ಸಮರ್ಥಿಸಿಕೊಂಡು ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು! ಇನ್ನು ಭ್ರಷ್ಟಾಚಾರ ವಿರೋಧದ ಹೆಸರಿನಲ್ಲಿ ಹಾಗೂ ದೆಹಲಿಗೆ ರಾಜ್ಯದ ಸ್ಥಾನಮಾನ ಕೊಡದೇ ದಮನ ಮಾಡುತ್ತಿರುವ ಮೋದಿ ಸರ್ಕಾರದ ಫೆಡರಲ್ ವಿರೋಧಿ ನೀತಿಯನ್ನು ವಿರೋಧಿಸುತ್ತಾ ಮಧ್ಯಮವರ್ಗಗಳ ಕಣ್ಮಣಿಯಾಗಿ ಬೆಳೆದು ಮೂರನೇ ಬಾರಿ ದೆಹಲಿ ಶಾಸನಸಭೆ ಗೆದ್ದುಕೊಂಡಿರುವ ಆಪ್ ಪಕ್ಷ ಫೆಡರಲ್ ತತ್ವವನ್ನು ಹಾಗೂ ಸಂಸದೀಯ ಪ್ರಜಾತಂತ್ರದ ಪದ್ಧತಿಗಳನ್ನೂ ಗಾಳಿಗೆ ತೂರಿ ಮೋದಿ ಸರ್ಕಾರ ಅತ್ಯಂತ ಸರ್ವಾಧಿಕಾರಿ ಧೋರಣೆಯಿಂದ ಕಾಶ್ಮೀರದ ವಿಶೆಷ ಸ್ಥಾನಮಾನದ ಜೊತೆಗೆ ರಜ್ಯದ ಸ್ಥಾನಮಾನವನ್ನು ಕಿತ್ತುಹಾಕಿದಾಗ ರಾಜ್ಯ ಸಭೆಯಲ್ಲಿ ಮೋದಿಯ ಬೆಂಬಲಕ್ಕೆ ನಿಂತಿತು. ಹಾಗೆಯೇ 2020ರ ಫ಼ೆಬ್ರವರಿಯಲ್ಲಿ ಗುಜರಾತಿನ ರೀತಿಯಲ್ಲೇ ಬಿಜೆಪಿ- ಆರೆಸ್ಸೆಸ್ಸಿಗರು ದೆಹಲಿಯಲ್ಲಿ ಮುಸ್ಲಿಮರನ್ನು ಗುರಿಮಾಡಿಕೊಂಡು ಭೀಭತ್ಸವನ್ನು ಸೃಷ್ಟಿಸುತ್ತಿದ್ದಾಗ ಹಿಂದೂ ಓಟ್ ಬ್ಯಾಂಕಿನ ರಾಜಕಾರಣಕ್ಕೆ ಕಟ್ಟುಬಿದ್ದು ಬಾಯಿಮುಚ್ಚಿಕೊಂಡಿತ್ತು. ಇನ್ನು ಎಡಪಕ್ಷಗಳು ಅಧಿಕಾರ ರಾಜಕಾರಣದ ರಾಜಿಪೈಪೋಟಿಯಲ್ಲಿ ತಮಗೇ ತಾವೇ ತಂದುಕೊಂಡಿರುವ ರಾಜಕೀಯ- ಸಂಘಟನಾತ್ಮಕ ನಿತ್ರಾಣ ಪರಿಸ್ಥಿತಿಯಲ್ಲಿ ಯಾವ ಹೊಸ ಭರವಸೆಗಳನ್ನೂ ಹುಟ್ಟಿಸುತ್ತಿಲ್ಲ. ದಾರಿಗಳೇ ಗುರಿಗಳಿಗೆ ಗೋರಿ ತೋಡುತ್ತಿರುವ ಕಾಲಘಟ್ಟವಿದು.. ಇದು ಸಂಸದೀಯ ವಿರೋಧ ಪಕ್ಷಗಳ ಸೈದ್ಧಾಂತಿಕ ಹಾಗೂ ರಾಜಕೀಯ ಪರಿಸ್ಥಿತಿ. ಇಂಥಾ ರಾಜಕಾರಣ, ಧೋರಣೆಗಳು ಸಮಾಜದಲ್ಲಿ ಫ್ಯಾಸಿಸಂ ಅನ್ನು ಸೋಲಿಸುವುದಿರಲಿ, ಚುನಾವಣೆಯಲ್ಲಿ ಬಿಜೆಪಿಯನ್ನಾದರೂ ಸೋಲಿಸಬಲ್ಲವೇ? ಇದ್ದಿದುದರಲ್ಲಿ ಜನಚಳವಳಿಗಳಾದ ಸಿಎಎ-ಎನ್‌ಅರ್‌ಸಿ ವಿರೋಧಿ ಹೋರಾಟ ಹಾಗೂ ವರ್ಷ ತಲುಪುತ್ತಿರುವ ರೈತ ಹೋರಾಟಗಳೆ ಫ್ಯಾಸಿಸಂ ನ ರಾಜಕೀಯ ಹಾಗೂ ಆರ್ಥಿಕ ಅಜೆಂಡಾಗಳಿಗೆ ಅಲ್ಪಸ್ವಲ್ಪವಾದರೂ ತಡೆಯುಡ್ಡುವಲ್ಲಿ ಸಫಲವಾಗಿವೆ. ಫ್ಯಾಸಿಸಂ ಅನ್ನು ತಡೆಯುವ ದಾರಿಯನ್ನು ಅವೇ ತೋರಿಸಿಕೊಡುತ್ತಿವೆ.. ಅಲ್ಲವೇ? ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►►ಇದನ್ನೂ ಓದಿ: BREAKING NEWS- ►► ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ?

Advertisement
Advertisement
Recent Posts
Advertisement