Advertisement

ನಾಗಾಲ್ಯಾಂಡಿನ ನೆತ್ತರು ಭಾರತದ ಕೈಗೆ ಮೆತ್ತಿಕೊಂಡಿದೆ!

Advertisement

ಮೊನ್ನೆ ನಾಗಾಲ್ಯಾಂಡಿನ ಗಡಿಹಳ್ಳಿಯಲ್ಲಿ ದಿನದ ಕೆಲಸ ಮುಗಿಸಿಕೊಂಡು ಹಿಂತಿರುಗುತ್ತಿದ್ದ ನಿರಾಯುಧ ನಾಗರಿಕರನ್ನು ಭಯೋತ್ಪಾದಕರೆಂದು ಶಂಕಿಸಿ ಭಾರತದ ಸೈನಿಕರು ಕೊಂದುಹಾಕಿದ್ದಾರೆ. ಇದರಿಂದ ಸಹಜವಾಗಿ ಸಿಟ್ಟಿಗೆದ್ದ ಗ್ರಾಮಸ್ಥರು ಸೇನಾ ಶಿಬಿರಕ್ಕೆ ಮುತ್ತಿಗೆ ಹಾಕಿದಾಗ ಮತ್ತೆ ಗೋಲಿಬಾರ್ ಮಾಡಿ ಇನ್ನಷ್ಟು ಅಮಾಯಕ ನಾಗರಿಕರನ್ನು ಸೈನಿಕರು ಕೊಂದುಹಾಕಿದ್ದಾರೆ. ಸತ್ತ ನಾಗರಿಕರು ಆಮಾಯಕ ಗ್ರಾಮಸ್ಥರೆಂದೂ, ಸೇನೆಯು ತಪ್ಪು ಮಾಡಿದೆಯೆಂದೂ ಭಾರತದ ಸೇನಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಕಾನೂನಿನ ಪ್ರಕಾರ ಕೋರ್ಟ್ ಮಾರ್ಷಲ್ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವುದಗಿ ನಿನ್ನೆಯ ಮಟ್ಟಿಗೆ ಭಾರತ ಸರ್ಕಾರವೂ ಹೇಳಿಕೆ ಇತ್ತಿದೆ. ನಾಗಾಲ್ಯಾಂದಿನ ಬಿಜೆಪಿ ಪಕ್ಷವೂ ಸೇನೆಯ ಮೇಲೆ ಕೆಂಡಕಾರಿದೆ. ನಾಳೆ ಇದೇ ಕಥೆಯೇ ಇರುತ್ತದೆಯೋ ಅಥವಾ ಸತ್ತವರೆಲ್ಲಾ ದಿಢೀರ್ ಭಯೋತ್ಪಾದಕರಾಗಿ ಮಾರ್ಪಾಡಾಗಿ ಕೊಂದ ಸೈನಿಕರೇ ಹೀರೋಗಳಾಗುತ್ತಾರೆಯೋ ಗೊತ್ತಿಲ್ಲ. ಏಕೆಂದರೆ ಈವರೆಗೆ ಈ ಸರ್ಕಾರ ತಾನು ಮಾಡಿದ ಯಾವುದೇ ತಪ್ಪನ್ನೂ ಒಪ್ಪಿಕೊಂಡಿಲ್ಲ. ಅಷ್ಟು ಮಾತ್ರವಲ್ಲ. ಮೋದಿ ಸರ್ಕಾರದ ಭದ್ರತಾ ಸಲಹೆಗಾರ ದೋವಲ್ ಮೊನ್ನೆ ತಾನೇ ದೇಶ ರಕ್ಷಣೆಗೆ ಸೈನ್ಯ ಮತ್ತು ಪೊಲೀಸರು ನಾಲ್ಕನೆ ಬಗೆಯ ಯುದ್ಧತಂತ್ರಗಳನ್ನು ಕಲಿಯಬೇಕು. ಈ ಯುದ್ಧದಲ್ಲಿ ಶತ್ರುಗಳು ನಾಗರಿಕ ಸಮಾಜದ ಸದಸ್ಯರೇ ಆಗಿರುತ್ತಾರೆಂದು ಘೋಶಿಸಿದ್ದಾರೆ. ಹೀಗಾಗಿ ಈಗ ಮೋದಿ ದೇಶವು ಭಾರತದ ಎಲ್ಲ್ಲಾ ನಾಗರಿಕರನ್ನು ಶತ್ರುಗಳೆಂದೇ ಅನುಮಾನಿಸಲಿದೆ. ಹೀಗಾಗಿ ಇನ್ನುಮುಂದೆ ಕಾಶ್ಮೀರ, ಈಶಾನ್ಯ ಭಾರತಗಳಲ್ಲಿ ಮಾತ್ರ ನಾಗರಿಕರ ಮೇಲೆ ಮೋದಿ ಸೇನೆ ನಡೆಸುತ್ತಿದ್ದ ಯುದ್ಧಗಳು ದೇಶಾದ್ಯಂತ ವಿಸ್ತರಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಸೇನಾಪಡೆಗಳ ಸ್ವೇಚ್ಚಾಚಾರಕ್ಕೆ ಅಧಿಕೃತ ಪರವಾನಗಿ-AFSPA ಅದೇನೇ ಇರಲಿ. ಭಾರತ ಸೇನೆ ನಾಗಾಲ್ಯಾಂಡಿನಲ್ಲಿ ಮೊನ್ನೆ ನಡೆಸಿದ ಈ ಹತ್ಯಾಕಾಂಡ ಅಕಸ್ಮಿಕವಾದದ್ದೂ ಅಲ್ಲ. ಅಪರೂಪದ್ದು ಅಲ್ಲ. ಏಕೆಂದರೆ ಈಶಾನ್ಯ ಭಾರತದ ಈ ಏಳು ರಾಜ್ಯಗಳಲ್ಲಿ ಮತ್ತು ಕಾಶ್ಮೀರದಲ್ಲಿ ಭಾರತದ ಸೇನೆಗೆ ಯಾರ ಮೇಲಾದರೂ ಭಯೋತ್ಪಾದಕ ಎಂದು ಅನುಮಾನ ಬಂದರೂ ಸಾಕು, ಬಂಧನ, ನ್ಯಾಯವಿಚಾರಣೆ, ನ್ಯಾಯಾಂಗದ ಮೇಲುಸ್ತುವಾರಿ ಯಾವುದೂ ಇಲ್ಲದೆ ಯಾರನ್ನು ಬೇಕಾದರೂ ಕೊಂದು ಹಾಕಬಹುದಾದ ವಿಶೇಷ ಅಧಿಕಾರವನ್ನು Armed Force Special Powers Act- AFSPA- ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ- ಅಲ್ಲಿ ಕೆಲಸ ಮಾಡುವ ಸೈನಿಕರಿಗೆ ಕೊಡುತ್ತದೆ. ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ದಮನಿಸಲು ಇಂಥಾ ವಸಾಹತುಶಾಹಿ, ದಮನಕಾರಿ ಕಾನೂನು ಜಾರಿಯಲ್ಲಿತ್ತು. ಆದರೆ ಅವೂ ಕೂಡ ಇಷ್ಟು ಭೀಕರವಾಗಿರಲಿಲ್ಲ. ಆದರೆ 20 ನೇ ಶತಮಾನದ ಇತಿಹಾಸವು ಎಂಥಾ ಕ್ರೂರ ವಶಾಹತುಶಾಹಿಗಳೂ ಕೂಡಾ ಅಧೀನವಾಗಿರಲು ಒಲ್ಲದ ಮತ್ತೊಂದು ರಾಷ್ಟ್ರೀಯತೆಗಳನ್ನು ಅಥವಾ ಜನಾಂಗಗಳನ್ನು ದಮನ ಮತ್ತು ದಬ್ಬಾಳಿಕೆಗಳ ಮೂಲಕ ಬಲವಂತದಿಂದ ಆಳಲು ಸಾಧ್ಯವಿಲ್ಲ ಎಂಬುದನ್ನು ರುಜುವಾತುಪಡಿಸುತ್ತದೆ. ಆದರೂ ಸ್ವತಂತ್ರ ಭಾರತದ ಭಾರತೀಯ ಸರ್ಕಾರ 1958ರಿಂದಲೂ ಈಶಾನ್ಯ ಭಾರತ ಮತ್ತು ಕಾಶ್ಮೀರಗಳಲ್ಲಿ ಜನರ ಪ್ರತಿಭಟೆನೆಯನ್ನು ಹತ್ತಿಕ್ಕಲು ಇಂಥಾ ಕ್ರೂರ ಕಾನೂನನ್ನು ಬಳಸುತ್ತಾ ಬಂದಿದೆ. ಕಳೆದ 63 ವರ್ಷಗಳಲ್ಲಿ ಈ AFSPA ಕಾಯಿದೆಯಿಂದಾಗಿ ಭಯೋತ್ಪಾದನೆಯನ್ನೂ ಹತ್ತಿಕ್ಕಲೂ ಅಗಿಲ್ಲ. ಭಾರತದ ಒಕ್ಕೂಟದಲ್ಲಿ ಸ್ವ ಇಚ್ಚೆಯಿಂದ ಪಾಲ್ಗೊಳ್ಳಲು ಅಲ್ಲಿನ ಜನರನ್ನು ಸಂಪೂರ್ಣವಾಗಿ ಒಪ್ಪಿಸಲೂ ಆಗಿಲ್ಲ. ಬದಲಿಗೆ ಸಾವಿರಾರು ಅಮಾಯಕ ನಾಗರಿಕರನ್ನು ಭಾರತ ಸೈನಿಕರು ಬಲಿತೆಗೆದುಕೊಳ್ಳುವುದೂ ತಪ್ಪಿಲ್ಲ. ಇದರಿಂದ ಅಲ್ಲಿಯ ಜನರು ಭಾರತದ ಬಗ್ಗೆ ಅಸಹನೆ ಮತ್ತು ಆಕ್ರೋಶವನ್ನು ಇನ್ನೂ ಹೆಚ್ಚಾಗಿ ಬೆಳೆಸಿಕೊಳ್ಳುತ್ತಿರುವುದನ್ನು ಬಿಟ್ಟರೆ ರಾಜಕೀಯವಾಗಿ ಇನ್ಯಾವ ಸಾಧನೆಯೂ ಆಗಿಲ್ಲ. ಮೊನ್ನೆ ನಾಗಾಲ್ಯಾಂದಿನ ಹಳ್ಳಿಯಲ್ಲಿ ನಡೆದ ಕಗ್ಗೊಲೆ ಈಶಾನ್ಯ ಭಾರತ ಹಾಗೂ ಕಾಶ್ಮೀರಗಳಲ್ಲಿ ಕಳೆದ 63 ವರ್ಷಗಳಿಂದ ದಿನನಿತ್ಯ ನಡೆಯುವ ವಿದ್ಯಮಾನಗಳಾಗಿಬಿಟ್ಟಿವೆ. ಆದರೆ ಇಂಥಾ ಒಂದು ಮೃಗೀಯತೆ ಒಂದು ನಾಗರಿಕ ಸಮಾಜಕ್ಕೆ ಮತ್ತು ಅದರಿಂದ ಆಯ್ಕೆಯಾಗುವ ಪ್ರಜಾತಾಂತ್ರಿಕ ಸರ್ಕಾರಕ್ಕೆ ಹೇಗೆ ಸಾಧ್ಯವಾಗುತ್ತದೆ? ಅದು ಸಾಧ್ಯವಾಗುವುದು ಒಂದು *ಸರ್ಕಾರಕ್ಕೆ ತನ್ನ ಜನರ ಜೊತೆಗೆ "ಬೇಟೆಗಾರ ಹಾಗೂ-ಬಲಿಪಶು" ಗಳಂಥ ಸಂಬಂಧಗಳಿದ್ದಾಗ ಮಾತ್ರ.* ಭಾರತೀಯರ ಬಗ್ಗೆ ಬಹುಪಾಲು ಬ್ರಿಟಿಷ್ ಅಧಿಕಾರಿಗಳು ಅದೇ ಧೋರಣೆ ತಳೆದಿದ್ದರು. ವಾಸ್ತವವಾಗಿ ಸ್ವಾತಂತ್ರ್ಯಾನಂತರದಲ್ಲಿ ಎಲ್ಲಾ ಪಕ್ಷಗಳ ಸರ್ಕಾರಗಳು ಕಾಶ್ಮೀರ ಹಾಗೂ ಈಶಾನ್ಯ ಭಾರತದೊಂದಿಗೆ ಒಂದು ವಸಾಹತುಶಾಹಿ ಧೋರಣೆಯೊಂದಿಗೇ ನಡೆದುಕೊಳ್ಳುತ್ತ ಬಂದಿದೆ. AFSPA- ಕಾಯಿದೆ ಮತ್ತು ಮೊನ್ನೆ ನಡೆದ ಹತ್ಯಾಕಾಂಡ ಅದಕ್ಕೆ ಮತ್ತೊಂದು ಪುರಾವೆ. ಭಾರತ ಸೇನೆಯ ಇಂಥಾ ಹತ್ತಾರು ಬರ್ಬರ ಹಾಗೂ ಅನಾಗರೀಕ ಕೃತ್ಯಗಳು ಹೊರಗೆ ಬರದಿರಲು ಕಾರಣ ಈ ಬರ್ಬರತೆಯು ಭಯೋತ್ಪಾದನೆ ನಿಗ್ರಹ ಹಾಗೂ ದೇಶ ರಕ್ಷಣೆ ಎನ್ನುವ ರಾಜಕೀಯ ಕವಚವನ್ನು ಹೊದ್ದಿರುತ್ತವೆ. ಮತ್ತು ಸೇನೆಯೂ ಸಹ ಇತರ ಸರ್ಕಾರೀ ಸಂಸ್ಥೆಗಳಂತೆ ಭ್ರಷ್ಟತೆ ಮತ್ತು ದುಷ್ಟತೆಗೆ ಈಡಾಗಬಹುದಾದ ಒಂದು ಪ್ರಭುತ್ವದ ಅಂಗವೆಂಬ ಸಹಜ ಗ್ರಹಿಕೆಯನ್ನೂ ಹುಸಿ ದೇಶಪ್ರೇಮದ ರಾಜಕಾರಣ ಮರೆಮಾಚುವುದರಿಂದ. ಈ ಹುಸಿ ರಾಷ್ಟ್ರವಾದಿ ರಾಜಕಾರಣವೇ ಸಂಘರ್ಷ ಪ್ರಾಂತ್ಯಗಳಲ್ಲಿ ದೇಶದ ಹೆಸರಿನಲ್ಲಿ ನಡೆಯುತ್ತಿರುವ ಬಂದೂಕಿನ ಸರ್ವಾಧಿಕಾರಕ್ಕೆ ಜನತೆಯ ಮೌನ ಸಮ್ಮತಿಯನ್ನು ರೂಢಿಸಿಕೊಟ್ಟಿದೆ. ಆದರೂ ಒಮ್ಮೊಮ್ಮೆ ಕೆಲವು ಪ್ರಾಮಾಣಿಕ ಸೇನಾಧಿಕಾರಿಗಳು ತಮ್ಮ ಪ್ರಾಣದ ಹಂಗು ತೊರೆದು ಇಂಥಾ ಕೊಳೆಯುತ್ತಿರುವ ವ್ಯವಸ್ಥೆಯನ್ನೂ ಬಯಲು ಮಾಡುವುದುಂಟು. ಹಾಗೆಯೇ ಕೆಲವು ಜನಪರ ಪತ್ರಕರ್ತರು ತಮ್ಮ ಭವಿಷ್ಯವನ್ನು ಹಾಗೂ ಬದುಕನ್ನು ಬಲಿಗೊಟ್ಟು ಅದನ್ನು ದೇಶದ ಮುಂದೆ ಬಿಚ್ಚುಡುವುದೂ ಉಂಟು. ನಾಗಾಲ್ಯಾಂದಿನಲ್ಲಿ ಮೊನ್ನೆ ನಡೆದ ಘಟನೆ ಇಂಥಾ ಒಂದು ಪ್ರಯತ್ನವನ್ನು ಹಾಗೂ ಈಶಾನ್ಯ ಭಾರತದಲ್ಲಿ ಸೇನೆ ನಡೆಸಿರುವ ಅತ್ಯಾಚಾರಗಳನ್ನು ಸೇನಾಧಿಕಾರಿಯೇ ಬಯಲು ಮಾಡಿದ ಪುಸ್ತಕವೊಂದನ್ನು ತಟ್ಟನೆ ನೆನೆಪಿಗೆ ತಂದಿತು. Blood on My hands - ಅನಾಮಧೇಯ ಅಧಿಕಾರಿಯೊಬ್ಬನ ಆತ್ಮನಿವೇದನೆ “Blood on My hands- Confession Of Staged Encounters”- *ನನ್ನ ಕೈಗೆ ಅಂಟಿದ ನೆತ್ತರು-* ಇದು ಈಶಾನ್ಯ ಭಾರತ ಮತ್ತು ಕಾಶ್ಮೀರಗಳಲ್ಲಿ ಕೌಂಟರ್-ಇನ್ಸರ್ಜೆನ್ಸಿ (ದಂಗೆ-ನಿಗ್ರಹ ಪ್ರತಿತಂತ್ರಗಳು) ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದ ಸೇನಾಧಿಕಾರಿಯೊಬ್ಬರ ಸುದೀರ್ಘ ತಪ್ಪೊಪ್ಪಿಗೆ ಹೇಳಿಕೆ. ದೇಶ ಭದ್ರತೆಯ ಹೆಸರಿನಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಗಣದ ಹಲವರು ಪ್ರಶಸ್ತಿ, ಬಡ್ತಿ ಮತ್ತು ಹಣದ ಬೆನ್ನುಹತ್ತಿ ವ್ಯವಸ್ಥಿತವಾಗಿ ನಡೆಸುತ್ತಿರುವ ಅಮಾಯಕರ ಕಗ್ಗೊಲೆ-ದರೋಡೆಗಳಿಗೆ ಸಾಕ್ಷಿಯಾಗಿದ್ದ ಭಾರತ ಸೇನೆಯ ಅನಾಮಧೇಯ ಅಧಿಕಾರಿಯೊಬ್ಬ ಈ ದೇಶದ ಅತ್ಯಂತ ಪ್ರತಿಷ್ಟಿತ ಪತ್ರಕರ್ತರೊಬ್ಬರ ಎದಿರು ಮಾಡಿಕೊಂಡ ಪಾಪನಿವೇದನೆ. ತನ್ನ ನಿವೇದನೆಯಲ್ಲಿ ಹೇಗೆ ಈ ಹಿಂಸಾಚಾರವು ಇಂದು ಬೃಹತ್ ಆರ್ಥಿಕ ವ್ಯವಹಾರ ವಾಗಿ ಪಟ್ಟಭದ್ರ ಹಿತಾಸಕ್ತಿಯಾಗಿ ಒಂದು ಮಾಫಿಯಾ ಆಗಿ ಬೆಳೆದುನಿಂತಿದೆ ಎಂಬ ಬಗ್ಗೆ ನೀಡುವ ಪುರಾವೆಗಳು ನಿಜವಾದ ದೇಶಭಕ್ತರು ಮತ್ತು ಪ್ರಜಾತಂತ್ರವಾದಿಗಳೆಲ್ಲರು ತಲ್ಲಣಿಸುವಂತೆ ಮಾಡುತ್ತದೆ. ಪ್ರಜಾಸತ್ತೆ ಕೊಳೆಯಲು ಶುರುವಾದಾಗ ಮಾತ್ರ ಸೇನೆಯಂಥ ಪ್ರಭುತ್ವ ಸಂಸ್ಥೆಗಳಿಂದ ಹೆಣದ ವಾಸನೆ ಬರಲು ಶುರುವಾಗುತ್ತದೆ. ಉದಾಹರಣೆಗೆ ಜನರಲ್ ದಲ್ಬೀರ್ ಸಿಂಗ್ ಅವರು ಹಲವು ವರ್ಷಗಳ ಹಿಂದೆ ಮಾಜಿ ಜನರಲ್ ವಿ.ಕೆ. ಸಿಂಗ್ ಅವರು ತಮ ಬಡ್ತಿಯನ್ನು ತಡೆಯಲೆಂದೇ ತಮ್ಮ ವಿರುದ್ಧ ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಒಂದನ್ನು ಸಲ್ಲಿಸಿದ್ದರು. ಮಾಧ್ಯಮಗಳು ಸೇನಾ ಜನರಲ್ ಅವರು ಹೇಳಿದ್ದನ್ನೇ ಸತ್ಯವೆಂದು ವರದಿ ಮಾಡುವ ಕಾರಕೂನ ವರದಿಗಾರಿಕೆಯಿಂದ ಹೊರಬಂದು ಸ್ವಲ ಸ್ವತಂತ್ರ ತನಿಖಾ ವೃತ್ತಿಪರತೆಯಿಂದ ಆ ಅಫಿಡವಿಟ್ಟಿನ ವಿವರಗಳನ್ನು ವರದಿ ಮಾಡಿದ್ದರೂ ಈ ಪುಸ್ತಕದಲ್ಲಿರುವ ಸತ್ಯದ ಝಲಕು ಎಲ್ಲಾ ವರದಿಗಾರರಿಗೂ ದಕ್ಕುತ್ತಿತ್ತು. ಜನರಲ್ ಸಾಹೇಬರ ಅಫಿಡವಿಟ್ಟು ಜನರಲ್ ದಲ್ಬೀರ್ ಸಿಂಗ್ ಅವರು ಈಶಾನ್ಯ ಭಾರತದ ದೀಮಾಪುರ್ ನ ಕಾರ್ಪ್-3 ರ ಜನರಲ್ - ಆಫಿಸರ್- ಕಮ್ಯಾಂಡಿಂಗ್ ಆಗಿದ್ದಾಗ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೇಜರ್ ರವಿ ಕಿರಣ್ ಅವರು ತಮ್ಮ ಸಹೋದ್ಯೋಗೀ ಸೇನಾಧಿಕಾರಿಗಳು ಮೂವರು ನಾಗರಿಕರನ್ನು ವಶದಲ್ಲಿಟ್ಟುಕೊಂಡು ವಿನಾಕಾರಣ ಕೊಂದುಹಾಕಿದ್ದಾರೆಂದೂ, ಮತ್ತದನ್ನು ಎನ್‌ಕೌಂಟರಿನಲ್ಲಿ ಮಿಲಿಟೆಂಟ್ ಗಳ ಹತ್ಯೆಯೆಂದು ಸುಳ್ಳು ವರದಿ ನೀಡಿದ್ದಾರೆಂದು ದಲ್ಬೀರ್ ಸಿಂಗ್ ಅವರಿಗೂ, ಪೂರ್ವ ವಿಭಾಗದ ಸೇನಾ ಮುಖ್ಯಸ್ಥರಿಗೂ ಮತ್ತು ಅಂದಿನ ಸೇನಾ ಜನರಲ್ ಆಗಿದ್ದ ವಿ.ಕೆ. ಸಿಂಗ್ ಅವರಿಗೂ ಪತ್ರ ಬರೆದಿದ್ದರು. ಎರಡು ವರ್ಷಗಳಾದರೂ ಅದರ ಬಗ್ಗೆ ಆ ತನಿಖೆಯೇ ನಡೆಯದಾದಾಗ ವಿಕೆ ಸಿಂಗ್ ಅವರು ದಲ್ಬೀರ್ ಸಿಂಗ್ ಅವರಿಗೆ ಕಾರಣ ಕೋರಿ ನೋಟಿಸ್ ಜಾರಿ ಮಾಡಿದ್ದಲ್ಲದೆ ಅವರನ್ನು ವಿಚಕ್ಷಣಾ ಪಟ್ಟಿಯಲ್ಲಿರಿಸಿದರು. ಜನರಲ್ ದಲ್ಬೀರ್ ಸಿಂಗ್ ಅವರು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫೀಡವಿಟ್ಟಿನಲ್ಲಿ ಇದೆಲ್ಲವೂ ತನ್ನ ಬಡ್ತಿಯನ್ನು ತಡೆಯಲು ಆಗಿನ ಜನರಲ್ ವಿ.ಕೆ. ಸಿಂಗ್ ಹೂಡಿದ ತಂತ್ರವೆಂದು ವಾದಿಸಿದ್ದಾರೆ. ಇದರಲ್ಲಿ ಯಾವ ಜನರಲ್ ಸರಿ ಯಾವ ಜನರಲ್ ತಪ್ಪೆಂದು ಕೋರ್ಟು ನಿರ್ಧರಿಸುತ್ತದೆ. ಆದರೆ ಅಮಾಯಕರ ಹತ್ಯೆ ಮಾಡಿ ಅದನ್ನು ಎನ್‌ಕೌಂಟರೆಂದು ತೋರಿಸಿದ ಸತ್ಯ ನಿರಾಕರಣೆಯಾಗಿಲ್ಲವೆಂಬುದು ನಾಗರಿಕ ಸಮಾಜಕ್ಕೆ ಅತಿಮುಖ್ಯವಾದದ್ದು. ಪ್ರಕರಣದಲ್ಲಿರುವ ಈ ಸತ್ಯವನ್ನು ಯಾವ ಮಾಧ್ಯಮಗಳು ಬಯಲಿಗೆಳಯಲು ಹಿಂಜರಿದಾಗ ಅದನ್ನು ಸಮಾಜದ ಎದುರು ಬಿಚ್ಚಿಟ್ಟಿದ್ದು ಕಳೆದ ಇಪ್ಪತ್ತು ವರ್ಷಗಳಿಂದ ಈಶಾನ್ಯ ಭಾರತದಲ್ಲಿ ರಾಷ್ಟ್ರೀಯ ಮಾಧ್ಯಮಗಳಿಗೆ ಪತ್ರಕರ್ತರಾಗಿ ಕೆಲಸ ಮಾಡಿರುವ ಕಿಷಾಲಯ್ ಭಟ್ಟಾಚಾರ್ಜಿ. ಅವರೇ ಈ Blood On My Handsನ ಲೇಖಕರು. ಮೂಲತಃ ಅಸ್ಸಾಮಿನವರಾದ ಕಿಷಾಲಯ್ ಭಟ್ಟಾಚಾರ್ಜಿ ಅವರು 18 ವರ್ಷಗಳ ಕಾಲ NDTV ಗೆ ಈಶಾನ್ಯ ಭಾರತದ ಪ್ರತಿನಿಧಿಯಾಗಿ ಕೆಲಸ ಮಾಡಿದವರು. ಅಷ್ಟು ಮಾತ್ರವಲ್ಲ, ತಮ್ಮ ವರದಿಗಳಿಗೆ 2006 ರಲ್ಲಿ ರಾಮನಾಥ ಗೊಯೆಂಕಾ ಪ್ರಶಸ್ತಿಯನ್ನು ಪಡೆದವರು. ಎಲ್ಲಕ್ಕಿಂತ ಹೆಚ್ಚಾಗಿ 2011 ರಿಂದ ದೇಶದ ರಕ್ಷಣಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೆಲಸ ಮಾಡುವ ಸ್ವಾಯತ್ತ ಸಂಸ್ಥೆಯಾದ Institute For Defence Studies and Analysis (IDSA) ನಲ್ಲಿ ಅಂತರಿಕಾ ಭದ್ರತೆ ವಿಷಯಗಳ ಅಧ್ಯಯನದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವವರು. ಇವೆಲ್ಲವೂ ಈ ಪುಸ್ತಕದಲ್ಲಿರುವ ಸಂಗತಿಗಳ ಅಧಿಕೃತತೆಯನ್ನು ಇನ್ನಷ್ಟು ಧ್ರುಢೀಕರಿಸುತ್ತದಷ್ಟೆ. ಹೀಗಾಗಿಯೇ ಈವರೆಗೆ ಈ ಪುಸ್ತಕದಲ್ಲಿ ಬಯಲಾಗಿರುವ ಸಂಗತಿಗಳನ್ನು ಸೇನೆಯಾಗಲೀ, ಸರ್ಕಾರವಾಗಲೀ, ಸ್ವಘೋಷಿತ ದೇಶಪ್ರೇಮೀ ಬ್ರಿಗೇಡಾಗಲೀ ಪ್ರಶ್ನಿಸುವ ಸಾಹಸಕ್ಕೆ ಕೈಹಾಕಿಲ್ಲ. ಬದಲಿಗೆ ಯೋಜಿತ ಮೌನದಿಂದ ಈ ಪುಸ್ತಕದ ಮಹತ್ವವನ್ನೇ ಬದಿಗೆ ಸರಿಸುವ ಪ್ರಯಾಸ ನಡೆದಿದೆ. ಎನ್ಕೌಂಟರ್ ಎಕಾನಮಿ ಹಿಂಸೆಯ ಸಹಕಾರವಿಲ್ಲದೆ ಸುಳ್ಳು ಮಾನ್ಯಗೊಳ್ಳುವುದಿಲ್ಲ, ಸುಳ್ಳು ಬೆನ್ನಿಗಿಲ್ಲದೆ ಹಿಂಸೆಯೂ ಮಾನ್ಯಗೊಳ್ಳುವುದಿಲ್ಲ. ಹಿಂಸೆ ಮತ್ತು ಸುಳ್ಳುಗಳ ಈ ರಾಜನೈತಿಕ ಸಹಕಾರದಲ್ಲಿ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ದೇಶ ರಕ್ಷಣೆಯ ಹೆಸರಿನಲ್ಲಿ ಒಂದು Conflict Economy ಯೇ ಸೃಷ್ಟಿಯಾಗಿದೆಯೆಂದು ಮತ್ತು ಅದು ದಂಗೆಯ ವಾತಾವರಣವಿಲ್ಲದಿದ್ದರೂ ಸರ್ಕಾರಿ ಪ್ರತಿದಂಗೆ ತಂತ್ರಗಳ ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಪಟ್ಟಭದ್ರ ಹಿತಾಸಕ್ತಿಗಳನ್ನು ಸೇನೆಯಲ್ಲೂ, ಆ ಸಮಾಜದಲ್ಲೂ ಸೃಷ್ಟಿಸಿದೆ ಎಂದು ಈ ಪುಸ್ತಕದಲ್ಲಿ ತಪ್ಪೊಪ್ಪಿಗೆ ಮಾಡಿಕೊಂಡಿರುವ ಅಧಿಕಾರಿ ಸ್ಪಷ್ಟಪ್ಡಿಸುತ್ತಾರೆ. ಪ್ರತಿದಂಗೆಗಾಗಿ ಕಾರ್ಯ ನಿಯೋಜನೆಗೊಳ್ಳುವ ಸೇನಾಪಡೆಗಳಿಗೆ ಮಿಲಿಟರಿ ಇಂಟೆಲಿಜೆನ್ಸ್ ವಿಭಾಗವು ತನ್ನ ಬಳಿ ಇರುವ ಆಯಾ ವಲಯದ ದಂಗೆಕೋರರ ಅಂದಾಜು ಸಂಖ್ಯೆ ಮತ್ತು ಪಟ್ಟಿಯನ್ನು ನೀಡಲಾಗುತ್ತದೆ. ಹಾಗೂ ಅವರ ಕಾರ್ಯಕ್ಷಮತೆಯನ್ನೂ ಎಷ್ಟು ಮಿಲಿಟೆಂಟ್‌ಗಳನ್ನು ಕೊಲ್ಲಲಾಗಿದೆ. ಶರಣಾಗಿಸಲಾಗಿದೆಯೆಂಬ ಸಂಖ್ಯೆಯಗಳ ಮೂಲಕ ಅಳೆಯಲಾಗುತ್ತದೆ. ಮತ್ತು ಪ್ರತಿ ಮಿಲಿಟೆಂಟ್ ಒಬ್ಬನ ಕೊಲೆಗೆ 5, ಶರಣಾಗತಿಗೆ 3 ಎಂಬಂತೆ ಅಂಕಗಳನ್ನು ನೀಡಲಾಗುತ್ತದೆ. ಒಬ್ಬ ಅಧಿಕಾರಿಗೆ ಮತ್ತು ಒಂದು ತುಕಡಿಗೆ ಪ್ರಶಸ್ತಿ, ಬಡ್ತಿ ಇತ್ಯಾದಿಗಳು ಸಿಕ್ಕಬೇಕೆಂದರೆ ಅಂದಾಜು 300 ಅಂಕಗಳು ಬೇಕಾಗುತ್ತವೆ ಎಂದು ಈ ಅನಾಮಧೇಯ ಅಧಿಕಾರಿ ಲೇಖಕರಿಗೆ ಮಾಹಿತಿ ನೀಡುತ್ತಾರೆ. ಪ್ರತಿ ವರ್ಷಕ್ಕೊಮ್ಮೆ ತುಕಡಿ ಮತ್ತು ಅಧಿಕಾರಿಗಳ ವಾರ್ಷಿಕ ಗುಪ್ತ ವರದಿ (ACR) ನೀಡಲಾಗುತ್ತದೆ. ಅದಕ್ಕೆ ಮುಂಚಿನ ದಿನಗಳಲ್ಲೇ ಈ ವಲಯದಲ್ಲಿ ಎನ್ಕೌಂಟರ್‌ಗಳ ಸಂಖ್ಯೆಯೂ ಹೆಚ್ಚುತ್ತದೆ. ಅಮಾಯಕರನ್ನು ಮಿಲಿಟೆಂಟ್‌ಗಳೆಂದು ತೋರಿಸಿ ಬಡ್ತಿ, ವಿದೇಶೀ ನಿಯೋಜನೆಗಳನ್ನು ಪಡೆಯಲಾಗುತ್ತದೆ. ಆದ್ದರಿಂದಲೇ ಸ್ವಾರ್ಥಕ್ಕೆ ಅಮಾಯಕರನ್ನು ಕೊಲ್ಲಲೊಪ್ಪದ ಅಧಿಕಾರಿಗಳ ಮೇಲೆ ಅಪಾರ ಮಾನಸಿಕ ಮತ್ತು ಔದ್ಯೋಗಿಕ ಒತ್ತಡಗಳನ್ನು ಸೃಷ್ಟಿಯಾಗುತ್ತವೆ. ಹೀಗೆ ಬೇಕೆಂದಾಗ ಎನ್ಕೌಂಟರ್ ಗೆ ಒಳಗಾಗಲು ಮಾನವ ಮಿಕಗಳನ್ನು ಸರಬರಾಜು ಮಾಡುವ ದೊಡ್ಡ ಮಾಫಿಯಾ ವನ್ನೇ ಸೇನಾಪಡೆಗಳು ಪೋಷಿಸುತ್ತಿವೆ ಎಂದು ಈ ಅಧಿಕಾರಿ ಪುರಾವೆಗಳೊಂದಿಗೆ ಹೇಳುತ್ತಾರೆ. STAGED ENCOUNTERS ಎಂಬ ಬರ್ಬರತೆ ಸೇನೆಯ ಪರಿಭಾಷೆಯಲ್ಲಿ ಮೂರು ಬಗೆಯ ಎನ್ಕೌಂಟರ್ಗಳಿವೆ. ಒಂದು ನಿಜವಾದ ಎನ್ಕೌಂಟರ್. ಇದರಲ್ಲಿ ಬಂದೂಕುಧಾರಿ ಸೇನಾಪಡೆಗಳಿಗೂ ಮತ್ತು ಬಂದೂಕುಧಾರಿ ಮಿಲಿಟೆಂಟ್‌ಗಳಿಗೂ ನಿಜವಾದ ಮುಖಾಮುಖಿ ಸಂಭವಿಸುತ್ತದೆ. ಇಂಥಾ ಮುಖಾಬಿಲೆಯಲ್ಲಿ ಸಾಮಾನ್ಯವಾಗಿ ಎರಡು ಕಡೆಯಲ್ಲೂ ಸಾವುನೋವುಗಳಾಗುತ್ತದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಎರಡು ಕಡೆಯಲ್ಲಿ ಸಾವುನೋವುಗಳದರೆ ಮಾತ್ರ ಅದು ನಿಜವಾದ ಎನ್ಕೌಂಟರ್. ಎರಡನೆಯದು ಸುಳ್ಳು ಎನ್ಕೌಂಟರ್. ಇದರಲ್ಲಿ ಸಾಯುವವನು ನಿಜವಾದ ಮಿಲಿಟೆಂಟೇ. ಆದರೆ ಆತ /ಆಕೆ ಸೆರೆಸಿಕ್ಕಾಗ ನಿರಾಯುಧರಾಗಿರುತ್ತಾರೆ. ಅಥವಾ ಶರಣಾಗಿರುತ್ತಾರೆ. ಅಗತ್ಯ ಬಿದ್ದಾಗ ಅವರನ್ನು ಸಾಯಿಸಿ ಅವರ ಬಳಿ ಬಂದೂಕು ಇರಿಸಿ ನಿಜ ಎನ್ಕೌಂಟರ್ ಎಂದು ಹೇಳಲಾಗುತ್ತದೆ. ಮೂರನೆಯದು ಮತ್ತು ಅತ್ಯಂತ ಬರ್ಬರವಾದದ್ದು. ತಮ್ಮ ತುಕಡಿಯ ಟಾರ್ಗೆಟ್ ಅನ್ನು ಪೂರ್ಣಗೊಳಿಸಲು ಅಮಾಯಕರನ್ನು ಹಿಡಿದು ಚಿತ್ರಹಿಂಸೆ ಮಾಡಿ ಕೊಂದುಹಾಕುವುದು. ಇದನ್ನು STAGED ENCOUNTER ಎಂದು ಹೇಳಲಾಗುತ್ತದೆ. ಇಂದು ಭಾರತದ Conflict Zone ಗಳಲ್ಲಿ ನಡೆಯುತ್ತಿರುವ ಶೇ. 90 ರಷ್ಟು ಎನ್ಕೌಂಟರ್ ಗಳು ಈ ರೀತಿಯ STAGED ENCOUNTERS ಎಂದು ಅಧಿಕಾರಿ ಒಪ್ಪಿಕೊಳ್ಳುತ್ತಾರೆ. ಈ ಅಧಿಕಾರಿ ಕೊಟ್ಟ ಮಾಹಿತಿ ಸತ್ಯವೆಂದು ಸಾಬೀತುಪಡಿಸುವ ಮತ್ತೊಂದು ಸಂಗತಿಯನ್ನು ಲೇಖಕರು ಓದುಗರ ಗಮನಕ್ಕೆ ತರುತ್ತಾರೆ. ನ್ಯಾ. ಸಂತೋಷ್ ಹೆಗಡೆ ಸಮಿತಿಯ ವರದಿ 2013 ರಲ್ಲಿ ಮಣಿಪುರದ ನಾಗರಿಕ ಸಂಸ್ಥೆಯೊಂದು ರಾಜ್ಯದಲ್ಲಿ ನಡೆದ 1528 ಸುಳ್ಳು ಎನ್ಕೌಂಟರ್ ಪ್ರಕರಣಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಹಾಕುತ್ತದೆ. ಅದರಂತೆ ಭಾರತದ ಉನ್ನತ ನ್ಯಾಯಪೀಠ ಈ ಪ್ರಕರಣಗಳನ್ನು ಪರಿಶೀಲಿಸಿ ವರದಿ ಮಾಡಲು ಮಾಜಿ ನ್ಯಾಯಾಧೀಶರಾದ ಕರ್ನಾಟಕದ ಸಂತೋಷ್ ಹೆಗಡೆಯವರ ನೇತ್ರುತ್ವದಲ್ಲಿ ತ್ರಿಸದಸ್ಯ ಸಮಿತಿಯೊಂದನ್ನು ನೇಮಕ ಮಾಡುತ್ತದೆ. ಆ ಸಮಿತಿ ಮೊದಲ ಆರು ಪ್ರಕರಣಗಳನ್ನು ಪರಿಶೀಲಿಸಿ ಆರೂ ಪ್ರಕರಣಗಳೂ ಸುಳ್ಳು ಎನ್ಕೌಂಟರ್ ಎಂದು ವರದಿಕೊಟ್ಟಿರುವುದನ್ನು ಲೇಖಕರು ಓದುಗರ ಗಮನಕ್ಕೆ ತರುತ್ತಾರೆ. ಅವುಗಳ ವಿವರವನ್ನು ನೋಡಿದರೆ ಅವರೆಲ್ಲರೂ ದುಡಿದು ಬದುಕುತ್ತಿದ್ದ 12-70 ವಯಸ್ಸಿನ ಕೂಲಿಗಳು, ಯುವಕ/ಯುವತಿಯರು, ಗೃಹಸ್ಥರು, ಗೃಹಿಣಿಯರು, ವಕೀಲರು, ಉಪಾಧ್ಯಾಯರುಗಳಂಥ ನಾಗರಿಕ ಸಮಾಜದ ಅಮಾಯಕರು. ಒಂದು ಪ್ರಕರಣದಲ್ಲಂತೂ ಹಲವಾರು ವರ್ಷಗಳಿಂದ ರೈಲ್ವೇ ಸ್ಟೇಷನ್ನಿನನಲ್ಲಿ ಕುಷ್ಟರೋಗದಿಂದ ನರಳುತ್ತಾ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನೊಬ್ಬನನ್ನು ಅಪಹರಿಸಿ ಉತ್ತರ ಅಸ್ಸಾಮಿನ ಹಳ್ಳಿಯೊಂದರಲ್ಲಿ ಬೋಡೋ ಉಗ್ರಗಾಮಿಯೆಂದು ಕೊಂದು ಬಿಸಾಕಿದ ಹೃದಯವಿದ್ರಾವಕ ಸಂಗತಿಯನ್ನೂ ದಾಖಲಿಸಲಾಗಿದೆ. ಭಾರತದ ಸಾಮಾನ್ಯ ನಾಗರಿಕರು ಈ ರೀತಿ ಕೊಲೆ, ದರೋಡೆಗಳನ್ನು ಮಾಡಿದರೆ ಭಾರತದ ಅಪರಾಧ ಸಂಹಿತೆಯು 7 ವರ್ಷ ಕಾರಾಗೃಹ ಶಿಕ್ಷೆಯಿಂದ ಮೇಲ್ಪಟ್ಟು ಮರಣದಂದನೆಯವರೆಗೆ ಶಿಕ್ಷೆ ನೀಡುತ್ತದೆ. ಆದರೆ ಇದೇ ರೀತಿಯ ಮಹಾನ್ ಅಪರಾಧಗಳನ್ನು ಎಸಗುವ ಸೇನಾಪಡೆಗಳಿಗೆ ಈಶಾನ್ಯ ಭಾರತದಲ್ಲಿ ಮತ್ತು ಕಾಶ್ಮೀರದಲ್ಲಿ ಶೇ. 95 ಪ್ರಕರಣಗಳಲ್ಲಿ ಯಾವ ಶಿಕ್ಷೆಯೂ ಆಗುವುದಿಲ್ಲ. ಏಕೆಂದರೆ ಸೇನಾಪಡೆಗಳಿಗೆ ಈ ವಲಯದಲ್ಲಿ Armed Forces Special Powers Act (APSPA) ಯ ರಕ್ಷಣೆಯಿದೆ. ಅಲ್ಲದೆ ಇಂಥಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುವ ನಾಗರಿಕ ಸಮಾಜವನ್ನು ದೇಶದ್ರೋಹಿಗಳೆಂದು ಬಂಧಿಸುವ ಸುಮಾರು 16 ಕ್ಕೂ ಹೆಚ್ಚು ಕಾಯಿದೆಗಳನ್ನು ಕಳೆದ 70 ವರ್ಷಗಳಲ್ಲಿ ಜಾರಿಗೆ ತರಲಾಗಿದೆಯೆಂದು ಲೇಖಕರು ತಮ್ಮ ಅನುಬಂಧದಲ್ಲಿ ವಿವರಿಸುತ್ತಾರೆ. ಹೀಗಾಗಿ Armed Forces Special Powers Act (APSPA) ರದ್ದಾಗದ ಹೊರತು ಭಾರತವು ಒಂದು ನಾಗರಿಕ ಹಾಗೂ ಪ್ರಜಾತಾಂತ್ರಿಕ ರಾಷ್ಟ್ರ ಎಂದು ಹೇಳಿಕೊಳ್ಳುವುದು ದೊಡ್ಡ ಸೋಗಲಾಡಿತನವೇ ಆಗಿದೆ. ಎರಡನೇ ಯುದ್ಧದ ನಂತರ ಅಣುಬಾಂಬ್ ಹಾಕಿದ ಅಮೆರಿಕದ ಪೈಲಟ್ ಓಪನ್ ಹೈಮರ್ ತಾನು ಮಾಡಿದ ವಿನಾಶದಿಂದ ಅತ್ಯಂತ ಅಪರಾಧಿ ಮನೋಭಾವದಿಂದ ದುಃಖಿತನಾಗಿರುವಾಗಲೇ ಅಧಕ್ಷ ಟ್ರೂಮನ್ ಅವರನ್ನು ಭೇಟಿಯಾಗಿ "Mr. President, I have blood on my hands " ಎಂದು ಉದ್ಗರಿಸುತ್ತಾನೆ. ಈ ಪುಸ್ತಕ ಬರೆಯುವಾಗ ತನ್ನ ಮನಸ್ಸಿನಲ್ಲಿ ಇದೇ ಚಿತ್ರ ತಲೆಯಲ್ಲಿ ಓಡುತ್ತಿತ್ತು ಎಂದು ಲೇಖಕರು ಹೇಳುತ್ತಾರೆ. ಈ ಹಿಂಸಾಚಾರ ನಡೆಯುತ್ತಿರುವುದು ಸುಳ್ಳಿನ ಆಸರೆಯಲ್ಲಿ.... ಅದೊಂದು ಆರ್ಥಿಕತೆಯೇ ಆಗಿಬಿಟ್ಟಿರುವುದು ಹಿಂಸೆಯ ಬಲದಲ್ಲಿ.... ಈ ಹಿಂಸೆ ಮುಂದುವರೆದಿರುವುದು ಭಾರತೀಯ ಸಮಾಜದ ಮೌನದ ತಟಸ್ಥತೆಯಲ್ಲಿ.... ದೇಶಪ್ರೇಮವೆಂದರೆ ಅವಿಮರ್‍ಶಾತ್ಮಕವಾಗಿ ಸರ್ಕಾರವನ್ನು ಮತ್ತು ಪ್ರಭುತ್ವವನ್ನು ಒಪ್ಪಿಕೊಳ್ಳುವುದು ಎಂಬ ವಾದ ಅಬ್ಬರದಲ್ಲಿರುವ ಕನ್ನಡದ ಸಂದರ್ಭದಲ್ಲಿ ಸೇನೆಯೂ ಸಹ ಪ್ರಭುತ್ವದ ಒಂದು ಅಂಗ ಮತ್ತು ಅದರ ಅಪರಾಧಗಳನ್ನು ಸಹಿಸಿಕೊಳ್ಳುವುದೇ ನಿಜವಾದ ದೇಶದ್ರೋಹ ಎಂಬ ಗ್ರಹಿಕೆಯನ್ನು ಈ ಪುಸ್ತಕದ ಓದು ಕೊಡುತ್ತದೆ. ಹೀಗಾಗಿ ಹಿಂಸೆಯ ಚಕ್ರ ಮುರಿಯಬೇಕೆಂದರೆ ನಾಗರಿಕ ಸಮಾಜ ಮೌನ ಮುರಿಯಬೇಕು. ಹಿಂಸಾಚಾರದ ವಿರುದ್ಧ ಸುಳ್ಳುಗಳ ವಿರುದ್ಧ ಧ್ವನಿ ಎತ್ತಬೇಕು. ಅದೇ ನಿಜವಾದ ದೇಶಪ್ರೇಮ. ಇದೇ ಈ ಪುಸ್ತಕದ ಸಾರಾಂಶ-ಸಂದೇಶ. ಕಿಶಾಲಯ್ ಭಟ್ಟಾಚಾರ್ಯರ ಈ Blood on My hands- Confession Of Staged Encounters- ಪುಸ್ತಕವನ್ನು.. 'ನನ್ನ ಕೈಗೆ ಅಂಟಿದ ನೆತ್ತರು' ಎಂಬ ಶೀರ್ಷಿಕೆಯಲ್ಲಿ ಲೇಖಕ, ಪತ್ರಕರ್ತ ಗಿರೀಶ್ ತಾಳಿಕಟ್ಟೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಗೌರಿ ಲಂಕೇಶ್ ಪ್ರಕಾಶನ ಅದನ್ನು ಪ್ರಕಟಿಸಿದೆ. ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement