Advertisement

ನಿಜಕ್ಕೂ 'ಲವ್ ಜಿಹಾದ್' ಎಂಬುವುದಿದೆಯೇ? ಅಥವಾ ಇದು 'ಬ್ರಾಹ್ಮಣೀಯ ರಾಷ್ಟ್ರ ಸಂಸ್ಥಾಪನೆ'ಯ ಹಿಡೆನ್ ಅಜೆಂಡಾದ ಭಾಗವೇ?

Advertisement

ಬರಹ: ಶಿವಸುಂದರ್ (ಲೇಖಕರು ಹಿರಿಯ ಪತ್ರಕರ್ತರು, ಜನಪರ ಚಿಂತಕರು ಹಾಗೂ ಸಾಮಾಜಿಕ ಹೋರಾಟಗಾರರು) ಚಿತ್ರ ಕೃಪೆ: ಗೂಗಲ್ ಇಡೀ ಕರ್ನಾಟಕ ಅಕಾಲಿಕ ಮಳೆ , ಕೋವಿಡ್ ಸಂಕಶ್ಟ, ನಿರುದ್ಯೋಗ, ಅರೆ ಉದ್ಯೋಗಗಳು ಹಾಗೂ ಇದರ ಬಗ್ಗೆ ಸರ್ಕಾರದ ಕ್ರಿಮಿನಲ್ ನಿರ್ಲ್ಷಕ್ಷ್ಯದಿಂದಾಗಿ ತತ್ತರಿಸುತ್ತಿರುವಾಗ ಬಿಜೆಪಿ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಮತಾಮ್ತರ ನಿಷೇಧ ಕಾಯಿದೆಯ ಜೊತೆಗೆ ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ನಿಷೇಧಿಸುವ ಕಾನೂನನ್ನು ತರಲು ಮುಂದಾಗಿದೆ. ಇದರಲ್ಲಿ ಅಸಲೀ ಸಮಸ್ಯೆಗಳನ್ನು ನಿವಾರಿಸಲಾಗದ ಬಿಜೆಪಿ ಸರ್ಕಾರ ತನ್ನ ಬೇಜವಾಬ್ದಾರಿತನವನ್ನು ಮುಚ್ಚಿಕೊಳಲು ಮಾಡುತ್ತಿರುವ ಉಪಾಚಿiವೂ ಇದೆ. ಮುಸ್ಲಿಂ ವಿರೋಧಿ ಹಿಂದೂ-ಬ್ರಾಹ್ಮಣ್ಯ ರಾಜಕಾರಣದ ಅಪಾಯವೂ ಇದೆ. ಕಳೆದ ಸೆಪ್ಟೆಂಬರ್ ನಲ್ಲಿ ಉತ್ತರಪ್ರದೇಶದಲ್ಲಿ ಒಬ್ಬ ಮುಸ್ಲಿಂ ಮಹಿಳೆ ಸ್ವ ಇಚ್ಚೆಯಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಮದುವೆಯಾದಳು. ಆದರೆ ಮದುವೆಯಾಗಬೇಕೆಂಬ ಉದ್ದೇಶದಿಂದ ಮತಾಂತರಗೊಂಡಿದ್ದರಿಂದ ಈ ಮತಾಂತರ ಹಾಗೂ ಮದುವೆ ಎರಡೂ ಕಾನೂನು ಸಮ್ಮತವಲ್ಲ ಎಂದು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟಿನ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿತು. ಅದೇ ಹೈಕೋರ್ಟು ವಲಸೆ ಕಾರ್ಮಿಕರ ಕ್ಷೇಮಾಭಿವೃದ್ಧಿಯ ಬಗ್ಗೆ ಹತ್ತು ಹಲವು ಸೂಚನೆಗಳನ್ನು ಕೊಟ್ಟಿದ್ದರೂ ಕ್ಯಾರೇ ಎನ್ನದಿದ್ದ ಯೋಗಿ ಸರ್ಕಾರ ಕೂಡಲೇ, ನ್ಯಾಯಾಲಯದ ಈ ಅಭಿಪ್ರಾಯವನ್ನೇ ಸರ್ಕಾರಕ್ಕೆ ಕೊಟ್ಟ ಆದೇಶವೆಂದು ಸುಳ್ಳು ವ್ಯಾಖ್ಯಾನ ಮಾಡುತ್ತಾ ಮದುವೆಗಾಗಿ ನಡೆಯುವ ಮತಾಂತರ ಹಾಗೂ ಮದುವೆ ಎರಡನ್ನೂ ನಿಷೇಧಿಸುವ ಕಾನೂನು ತರಲು ಮುಂದಾಯಿತು. ಅದನ್ನೇ ಕಾಯುತ್ತಿದ್ದ ಇತರ ರಾಜ್ಯಗಳ ಬಿಜೆಪಿ ಸರ್ಕಾರಗಳು ಇದೇ ಆದೇಶವನ್ನು ಉಲ್ಲೇಖಿಸುತ್ತಾ ತಮ್ಮತಮ್ಮ ರಾಜ್ಯಗಳಲ್ಲೂ ಲವ್ ಜಿಹಾದ್ ಕಾನೂನನ್ನು ತರಲು ಈಗ ಮುಂದಾಗಿವೆ. ಆದರೆ ಹಿಂದೂತ್ವ ರಾಜಕಾರಣವನ್ನು ಜಾರಿಯಾಗಿಸುವಲ್ಲಿ ಉತ್ತರ ಪ್ರದೇಶಕ್ಕಿಂತ ತನ್ನ ಸರ್ಕಾರವೇ ಮುಂಚೂಣಿಯಲ್ಲಿದೆ ಎಂದು ಬೊಮ್ಮಾಯಿ ಸರ್ಕಾರ ಸಂಘಪರಿವಾರಕ್ಕೆ ಸಾಬೀತುಪಡಿಸುವ ಉಮೇದಿನಲ್ಲಿದೆ. ಆದರೆ ಕಳೆದ ವರ್ಷದ ನವಂಬರ್ 11 ರಂದು ಅದೇ ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವು ಈ ಬಗ್ಗೆ ಏಕಸದಸ್ಯ ಪೀಠದ ತೀರ್ಮಾನವು ನ್ಯಾಯ ಹಾಗೂ ಕಾನೂನು ಬಾಹಿರ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಏಕಸದಸ್ಯ ಪೀಠದ ತೀರ್ಮಾನವನ್ನು ರದ್ದುಗೊಳಿಸಿದೆ. ಹಾಗೂ ಸ್ವ ಇಚ್ಚೆಯಿಂದ ಯಾವ ಧರ್ಮಕ್ಕೇ ಬೇಕಾದರೂ ಮತಾಂತರವಾಗುವ ಹಾಗೂ ತನ್ನ ಇಷ್ಟದವರನ್ನು ಮದುವೆಯಾಗುವ ಹಕ್ಕು ಈ ದೇಶದ ಸಂವಿಧಾನ ಈ ದೇಶದ ಪ್ರಾಪ್ತ ವಯಸ್ಕರಿಗೆ ಕೊಡುತ್ತದೆ. ಆ ವೈಯಕ್ತಿಕ ಸ್ವಾತಂತ್ರ್ಯದಲ್ಲಿ ಮಧ್ಯಪ್ರವೇಶಿಸುವ ಯಾವ ಅಧಿಕಾರವೂ ಸರ್ಕಾರಕ್ಕಾಗಲೀ, ಸಮಾಜಕ್ಕಾಗಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಆದೇಶನೀಡಿದೆ. ಅಲಹಾಬಾದಿನ ದ್ವಿಸದಸ್ಯ ಪೀಠದ ಆದೇಶದ ಪೂರ್ಣಪಠ್ಯವನ್ನು ಆಸಕ್ತರು ಈ ಕೆಳಗಿನ ವೆಬ್ ವಿಳಾಸದಲ್ಲಿ ಓದಬಹುದು: ►►https://www.livelaw.in/pdf_upload/pdf_upload-384996.pdf ಆದರೂ ಅದರ ತದ್ರೂಪು ಮಸೂದೆಯನ್ನೇ ಕರ್ನಾಟಕದ ಬಿಜೆಪಿ ಸರ್ಕಾರವು ಜಾರಿ ಮಾಡುವ ಹುನ್ನಾರದಲ್ಲಿದೆ. ಅಂಥ ಮಸೂದೆ ವಿಧಾನ ಸಭೆಯಲ್ಲಿ ಬಿಜೆಪಿಗೆ ಬಹುಮತ ಇರುವುದರಿಂದ ಪಾಸಾಗುತ್ತದೆ. ಆದರೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಆದರೆ ಅದಕ್ಕೆ ಆ ಚಿಂತೆಯೇನೂ ಇಲ್ಲ. ಏಕೆಂದರೆ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮೆಜಾರಿಟಿ ಸಿಕ್ಕರೆ ನೇರವಾಗಿ, ಇಲ್ಲದಿದ್ದರೆ ಜೆಡಿಎಸ್ ಪಕ್ಷ ಗೋ ಹತ್ಯ ನಿಷೇಧ ಮಸೂದೆಗೆ ಕೊಟ್ಟಂಥ ಪರೋಕ್ಷ ಬೆಂಬಲದ ಮೂಲಕ ಜಾರಿ ಮಾಡಲಿದೆ. ಹೀಗಾಗಿ ಈ ಲವ್ ಜಿಹಾದ್ ಎಂಬ ಸಂಘಪರಿವಾರದ ಮಿಥ್ಯಾ ಕಥನದೈತಿಹಾಸವನ್ನು ಪರಿಶೀಲಿಸುವ ಅಗತ್ಯವಿದೆ. ಲವ್ ಜಿಹಾದ್ ಜನಕರು ಯಾರು? ಈ ದೇಶದ ಮುಸ್ಲಿಮರನ್ನು ಸದಾ ದುರುಳೀಕರಿಸಲು ಹಾಗೂ ತಮ್ಮ ಧರ್ಮ ಹಾಗೂ ಜಾತಿಗಳ ಮಹಿಳೆಯರನ್ನು ತಮ್ಮ ಅಂಕೆಯಲ್ಲಿರಿಸಿಕೊಳ್ಳಲು ಇಲ್ಲಸಲ್ಲದ ಕಥನಗಳನ್ನು ಹುಟ್ಟಿಹಾಕುವ ಸಂಘಪರಿವಾರದ ಹೊಸಸೃಷ್ಟಿಯೇ ಈ ಲವ್ ಜಿಹಾದ್ ಎಂಬ ಕಥನ. ಮುಸ್ಲಿಂ ಯುವಕರು ಅಮಾಯಕ ಹಿಂದೂ ಮಹಿಳೆಯರನ್ನು ಬೈಕ್ ಸವಾರಿ, ಸುವಾಸನೆಯ ಅತ್ತರು ಇತ್ಯಾದಿ ಅಮಿಷಗಳಿಂದ ಪಟಾಯಿಸಿ ಮತಾಂತರ ಮಾಡಿ ಮದುವೆಯಾಗುತ್ತಿದ್ದಾರೆ. ಇದಕ್ಕಾಗಿ ಗಲ್ಫ್ ರಾಷ್ಟ್ರಗಳ ಜಿಹಾದಿ ಸಂಘಟನೆಗಳಿಂದ ಕೋಟ್ಯಾಂತರ ರೂಪಾಯಿ ಹಣ ಹರಿದು ಬರುತ್ತಿದೆ. ಇದರ ಹಿಂದೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಅಂತರರಾಷ್ಟ್ರೀಯ ಸಂಚಿದೆ. ಆದ್ದರಿಂದ ಇದು ಲವ್ ಅಲ್ಲ. ಭಾರತದ ಮೇಲೆ ನಡೆಸುತ್ತಿರುವ ಲವ್ ಜಿಹಾದ್ ಆಗಿದೆ ಎಂಬುದು ಈ ಕಥನದ ಸಾರ . ಹೀಗಾಗಿ ಇದರ ಹಿಂದೆ ಕೇವಲ ಮುಸ್ಲಿಂ ಯುವಕರನ್ನೂ, ಮತ್ತು ಇಸ್ಲಾಮನ್ನೂ ದುರುಳೀಕರಿಸುವ ಹುನಾರಗಳು ಮಾತ್ರವಲ್ಲದೆ ಮಾತ್ರವಲ್ಲದೆ ಹಿಂದೂ ಯುವತಿಯರು ಸ್ವಂತ ತಿಳವಳಿಕೆ ಇಲ್ಲದ, ಚಂಚಲಚಿತ್ತರು ಎಂದು ಚಿತ್ರಿಸುವ ಮನುವಾದಿ ರಾಜಕೀಯವೂ ಎದ್ದುಕಾಣುತ್ತದೆ. ಕರ್ನಾಟಕದಲ್ಲಿ ಶ್ರೀರಂ ಸೇನಾ ಹಾಗೂ ಭಜರಂಗದಳಗಳು 2007-9ರಲಿ ಹುಟ್ಟುಹಾಕಿದ ಈ ಕಥನ ಜಗತ್ತಿನಾದ್ಯಂತ ವ್ಯಾಪಿಸಿ ನಂತರ ಸರ್ಕಾರ ಹಾಗೂ ನ್ಯಾಯಾಲಯಗಳ ಅಧಿಕೃತ ದಾಖಲೆಗಳಲ್ಲೂ ಸ್ಥಾನಗೌರವ ಪಡೆದುಕೊಂಡು ಮಾನ್ಯತೆ ಪಡೆದುಕೊಂಡುಬಿಟ್ಟಿತು. ಒಂದೆಡೆ ಶ್ರೀರಾಂ ಸೇನಾ ಕರ್ನಾಟಕದಲ್ಲಿ ಪ್ರತಿವರ್ಷ ಸಾವಿರಾರು ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ ಎಂದು ಪ್ರಚಾರ ಮಾಡಿದರೆ, ಕೇರಳದಲ್ಲಿ ಹಿಂದೂಜನಜಾಗೃತಿ (ನಮ್ಮ ಗೌರಿಯನ್ನು ಕೊಂದವರು ಬಹುಪಾಲು ಪಾತಕಿಗಳು ಈ ಸಂಘಟನೆಯ ಸಂಬಂಧಿಕರು) ಸಂಘಟನೆಯು ಕೇರಳದಲ್ಲಿ 30,000 ಹಿಂದೂ ಯುವತಿಯರು ಲವ್ ಜಿಹಾದಾಗಿಬಿಟ್ಟಿದ್ದಾರೆಂದು ಕೇರಳದಾದ್ಯಂತ ಕರಪತ್ರ ಹಾಗೂ ಪೋಸ್ಟರಗಳ ಕ್ಯಾಂಪೇನ್ ಮಾಡಿತು. ಲವ್ ಜಿಹಾದ್ ನಡೆಯುತ್ತಿದೆಯೇ? ವಾಸ್ತವದಲ್ಲಿ ಲವ್ ಜಿಹಾದ್ ಬಗ್ಗೆ 2009ರಿಂದ ಬಿಜೆಪಿ ಸರ್ಕಾರಗಳಿದ್ದ ರಾಜ್ಯಗಳನ್ನೂ ಒಳಗೊಂಡಂತೆ ದೇಶದ ವಿವಿಧ ರಾಜ್ಯಗಳ ಪೊಲೀಸರು, ಕೇಂದ್ರದ ಬಿಜೆಪಿ ಸರ್ಕಾರದಡಿ NIA ನಡೆಸಿದ ತನಿಖೆಗಳು ಹಾಗೂ ನ್ಯಾಯಲಯಗಳು ನಡೆಸಿದ ಎಲ್ಲಾ ವಿಚಾರಣೆಗಳು ಲವ್ ಜಿಹಾದ್ ಎಂಬ ಒಂದು ವಿದ್ಯಮಾನ ಈ ದೇಶದಲ್ಲಿ ಇಲ್ಲವೆಂದು ಸ್ಪಷ್ಟ ಮಾತುಗಳಲ್ಲಿ ಘೋಷಿಸಿವೆ. ಕೆಲವು ಮುಖ್ಯ ಉದಾಹರಣೆಗಳು: ಸಯನೈಡ್ ಮೋಹನ್ ಮತ್ತು ಶ್ರೀರಾಮ ಸೇನೆಯ ಲವ್ ಜಿಹಾದ್: 2007-9 ರಲ್ಲಿ ಮಂಗಳೂರು ಜಿಲ್ಲೆಯ 20-30 ಪ್ರಾಯದ ಹತ್ತಾರು ಮಹಿಳೆಯರು ಕಾಣೆಯಾಗುತ್ತಾ ಹೋದರು. ಆ ಸರಣಿಯಲ್ಲಿ 2009 ರ ಜೂನ್ ನಲ್ಲಿ ಬಂಟ್ವಾಳದ 30 ವರ್ಷ ಪ್ರಾಯದ ಅನಿತಾ ಮಲ್ಯ ಎಂಬ ಮಹಿಳೆಯು ಕಾಣೆಯಾದದ್ದು ಇಡೀ ಕರ್ನಾಟಕದಲ್ಲಿ ಸುದ್ದಿಯಾಯಿತು. ಅದೇ ಸಂದರ್ಭವನ್ನು ಬಳಸಿಕೊಂಡು ಶ್ರೀರಾಂ ಸೇನೆಯು ಕಾಣೆಯಾದ ಎಲ್ಲಾ ಹಿಂದೂ ಮಹಿಳೆಯರು ಲವ್ ಜಿಹಾದ್‌ಗೆ ಬಲಿಯಾಗಿದ್ದಾರೆಂದು ಹುಯಿಲೆಬ್ಬಿಸಿತು. ಆಗ ಅಧಿಕಾರದಲ್ಲಿದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೂಡಲೇ ಸಿಐಡಿ ತನಿಖೆಗೆ ಆದೇಶಿಸಿತು. ಲವ್ ಜಿಹಾದ್ ಸಾಬೀತುಪಡಿಸಲು ಚುರುಕಾಗಿ ತನಿಖೆಗೆ ಇಳಿದ ಪೊಲೀಸರಿಗೆ ಸಿಕ್ಕಿದ್ದು ಜಿಹಾದಿಗಳಲ್ಲ. ಬದಲಿಗೆ ಮೋಹನ್ ಕುಮಾರ್ ಎಂಬ ಸೀರಿಯಲ್ ಮತ್ತು ಸಯನೈಡ್ ಕಿಲ್ಲರ್. ಈತ 2007-9ರ ಅವಧಿಯಲ್ಲಿ 20-35 ಪ್ರಾಯದ ಈಡಿಗ, ಬಿಲ್ಲವ ಇನ್ನಿತರ ದಮನಿತ ಹಿಂದೂ ಜಾತಿಗಳಿಗೆ ಸೇರಿದ 19 ಕ್ಕೂ ಹೆಚ್ಚು ದುಡಿಯುವ ಮಹಿಳೆಯರನ್ನು ಮದುವೆಯಾಗುವ ಆಮಿಷ ತೋರಿಸಿ ಕೊಂದಿದ್ದ. ನಂತರ ಅವರ ಬಳಿ ಇದ್ದ ಚಿನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ. ಆದರೆ ಆವರೆಗೆ ಹಿಂದೂ ಮಹಿಳೆಯರ ರಕ್ಷಣೆ, ಲವ್ ಜಿಹಾದ್ ಎಂದೆಲ್ಲಾ ವೀರಗಾಸೆ ಮಾಡುತ್ತಿದ್ದ ಹಿಂದೂ ವೀರರು, ದಿಢೀರ್ ಸುಮ್ಮನಾಗಿಬಿಟ್ಟರು! ಹಿಂದೂ ಧರ್ಮದೊಳಗೆ ದಮನಿತ ಜಾತಿಗಳಿಗೆ ಸೇರಿದ ಆ ಬಡ ಮಹಿಳೆಯರಿಗೆ ಪ್ರಾಪ್ತ ವಯಸ್ಸಾದರೂ ಏಕೆ ಮದುವೆಯಾಗುತ್ತಿಲ್ಲ? ಮದುವೆಯಾಗದ ಆ ಹೆಣ್ಣುಮಕ್ಕಳು ಮನೆ ಸಾಕುವ ಹೊಣೆ ಹೊತ್ತು ಕುಟುಂಬದಲ್ಲಿ ಹಾಗೂ ಹಿಂದೂ ಸಮಾಜದಲ್ಲಿ ಅನುಮಭವಿಸುತ್ತಿದ್ದ ಯಾತನೆಗಳೇನು? ಯಾವ ಹತಾಷೆ ಹಾಗೂ ಅಸಹಾಯಕತೆಗಳು ಅಥವಾ ಕನಸುಗಳು ಅವರನ್ನು ಸಯನೈಡ್ ಮೋಹನ್ ಗೆ ಬಲಿಮಾಡಿತು ಎಂಬ ಪ್ರಶ್ನೆಗಳು ಈ ಹಿಂದೂ ವೀರರಿಗೆ ಹುಟ್ಟಲೇ ಇಲ್ಲ. ಆ ಹಿಂದೂ ಹೆಣ್ಣುಮಕ್ಕಳು ಬಲಿಯಾದದ್ದು ಲವ್ ಜಿಹಾದಿಗಲ್ಲ..ಬದಲಿಗೆ ಬಡತನ ಮತ್ತು ಹಿಂದೂ ಧರ್ಮದ ಪಿತೃಸ್ವಾಮ್ಯ ವ್ಯವಸ್ಥೆಯ ಜಿಹಾದಿಗೆ.. ಕರ್ನಾಟಕದಲ್ಲಿ ಲವ್ ಇದೆ- ಜಿಹಾದ್ ಇಲ್ಲ - ಸಿಐಡಿ ವರದಿ 2009 ರಲ್ಲೇ ಚಾಮರಾಜನಗರದ ಸೆಲ್ಜಾರಾಜ್ ಎಂಬ ವಯಸ್ಕ ಕ್ರಿಸ್ಚಿಯನ್ ಮಹಿಳೆ ಸ್ವ ಇಚ್ಚೆಯಿಂದ ಕಣ್ಣೂರಿನ ಅಸ್ಗರ್ ಎಂಬ ಮುಸ್ಲಿಮ್ ಯುವಕನನ್ನು ಪ್ರೀತಿಸಿ ಮದುವೆಯಾದರು. ಸೆಲ್ಜಾ ಅವರ ಅಪ್ಪ ಕೊಟ್ಟ ದೂರಿನ ಮೇರೆಗೆ ಪೊಲೀಸರು ಅದನ್ನು ಲವ್ ಜಿಹಾದ್ ಪ್ರಕರಣವೆಂದು ನೊಂದಾಯಿಸಿಕೊಂಡರು. ವಿಷಯ ನ್ಯಾಯಾಲಯವನ್ನು ತಲುಪಿ ಕರ್ನಾಟಕ ಹೈಕೋರ್ಟು ವಿಷಯದ ತನಿಖೆ ನಡೆಸಲು ಸಿಐಡಿಗೆ ಆದೇಶಿಸಿದರು. ಬಿಜೆಪಿ ಸರ್ಕಾರದಡಿಯಿದ್ದ ಪೊಲೀಸರೇ ತನಿಖೆ ನಡೆಸಿ ಸೆಲ್ಜಾ ರಾಜ್-ಅಸ್ಗರ್ ಅವರದ್ದು ಸ್ವಚ್ಚಂದ ಪ್ರೇಮವಿವಾಹವೇ ವಿನಾ ಲವ್ ಜಿಹಾದೆಂಬುದೇನೂ ಇಲ್ಲವೆಂದು ವರದಿ ಕೊಟ್ಟಿರು. ಹೀಗಾಗಿ ಸೆಲ್ಜಾರಾಜ್-ಅಸ್ಗರ್ ದಂಪತಿಗಳ ವೈವಾಹಿಕ ಜೀವನಕ್ಕೆ ಹೈಕೋರ್ಟು ಅವಕಾಶ ನೀಡಿತು. ಆದರೂ ಹಿಂದೂ ಸಂಘಟನೆಗಳು ಆರೋಪಿಸುವಂತೆ ಕರ್ನಾಟಕದಲ್ಲಿ ಕಣ್ಮರೆಯಾಗುತ್ತಿರುವ ಮಹಿಳೆಯರು ಲವ್ ಜಿಹಾದ್ ಗೆ ಬಲಿಯಾಗುತ್ತಿದ್ದಾರೆಯೇ ಎಂದು ತನಿಖೆ ಮಾಡಿ ವರದಿ ಮಾಡಲು ಸಿಐಡಿಗೆ ಆದೇಶಿಸಿತು. ಅದರಂತೆ 2005-9 ರ ನಡುವೆ ನಾಪತ್ತೆಯಾದ ಮಹಿಳೆಯರ ತನಿಖೆಯನ್ನು ಕೈಗೊಂಡ ಸಿಐಡಿ ಅಂಥಾ 21,890 ಪ್ರಕರಣಗಳನ್ನು ಗುರುತಿಸಿತು. ಹಾಗೂ ಲವ್ ಜಿಹಾದ್ ಬಗ್ಗೆ ಹಿಂದೂ ಸಂಘಟನೆಗಳ ಬಳಿ ಇರುವ ಮಾಹಿತಿಗಳನ್ನು ಪಡೆದುಕೊಳ್ಳಲು ಮುಂದಾಯಿತು. ಆದರೆ ಸಿಐಡಿಯ ಪ್ರಕಾರ ಹಿಂದೂ ಸಂಘಟನೆಗಳು ಈ ಬಗ್ಗೆ ಯಾವ ಉಪಯುಕ್ತ ಮಾಹಿತಿಗಳನ್ನೂ ಕೊಡಲಿಲ್ಲ! ಸಿಐಡಿ ಕಲೆಹಾಕಿದ ಮಾಹಿತಿಯ ಪ್ರಕಾರ ನಾಪತ್ತೆಯಾದ ಪ್ರಕರಣಗಳಲ್ಲಿ 229 ಮಹಿಳೆಯರು ಮಾತ್ರ ಅಂತರ್ ಧರ್ಮೀಯ ಮದುವೆಯಾಗಿದ್ದರು. ಹಾಗೂ ಅದರಲ್ಲಿ 63 ಪ್ರಕರಣಗಳಲ್ಲಿ ಮಾತ್ರ ಮತಾಂತರವಾಗಿತ್ತು. ಆದರೆ ಹಿಂದೂ ಮಹಿಳೆಯೆರು ಮುಸ್ಲಿಂ ಪುರುಷರನ್ನು ಮದುವೆಯಾಗಿದ್ದಂತೆ, ಮುಸ್ಲಿಂ ಮಹಿಳೆಯರು ಹಿಂದೂ ಪುರುಷರನ್ನೂ ಹಾಗೂ ಕ್ರಿಶ್ಚಿಯನ್ ಮಹಿಳೆಯರು ಮುಸ್ಲಿಂ ಪುರುಷರನ್ನೂ ಮದುವೆಯಾದ ಉದಾಹರಣೆಗಳಿದ್ದವು. ಈ ಎಲ್ಲಾ ತನಿಖೆಗಳನ್ನು ಆಧರಿಸಿ 2009ರ ಡಿಸೆಂಬರ್‌ನಲ್ಲಿ ಕರ್ನಾಟಕ ಸಿಐಡಿಯು ಕರ್ನಾಟಕದಲ್ಲಿ ಲವ್ ಜಿಹಾದ್ ಪ್ರಕರಣಗಳು ನಡೆದಿಲ್ಲವೆಂದು ಸ್ಪಷ್ಟವಾದ ವರದಿಯನ್ನು ಕೋರ್ಟಿಗೆ ಸಲ್ಲಿಸಿತು. ಇದನ್ನು ಆಧರಿಸಿ ಕರ್ನಾಟಕ ಹೈಕೋರ್ಟಿನ ದ್ವಿಸದಸ್ಯ ಪೀಠ 2013 ರಲ್ಲಿ ಕರ್ನಾಟಕದಲಿ ಲವ್ ಜಿಹಾದ್ ಪ್ರಕರಣಗಳಿಲ್ಲವೆಂದು ವಿಚಾರಣೆಯನ್ನು ಮುಕ್ತಾಯ ಮಾಡಿತು. ಸಿಐಡಿಯು ತನ್ನ ವರದಿಯಲ್ಲಿ ಹಿಂದೂ ಮಹಿಳೆಯರ ನಾಪತ್ತೆ ವಿದ್ಯಮಾನದಲ್ಲಿ ಲವ್ ಜಿಹಾದಿಗಿಂತ ಹೆಂಗಸರನ್ನು ವೇಶ್ಯಾವಾಟಿಕೆಗೆ ದೂಡುವ ಧರ್ಮಾತೀತ ದಲ್ಲಾಳಿ ಗುಂಪುಗಳ ಹಾವಳಿ ಹೆಚ್ಚು ಕಳವಳಕಾರಿ ಎಂದು ಗುರುತಿಸಿತ್ತು. ಆದರೆ ಇದನ್ನು ನಿಗ್ರಹಿಸಲು ಸರ್ಕಾರ ಕಠಿಣಕ್ರಮ ತೆಗೆದುಕೊಳ್ಳಬೇಕೆಂಬ ಯಾವ ಆಗ್ರಹಗಳನ್ನು ಈ ಸ್ವಘೋಷಿತ ಹಿಂದೂ ರಕ್ಷಕರು ಮಾಡಲೇ ಇಲ್ಲ. ಆಸಕ್ತರು ಕರ್ನಾಟಕ ಹೈಕೋರ್ಟಿನ ಆದೇಶವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: ►►http://judgmenthck.kar.nic.in/judgments/bitstream/123456789/907138/1/WPHC158-09-06-11-2013.pdf ಕೇರಳದಲ್ಲೂ ಲವ್ ಜಿಹಾದಿಲ್ಲ-ಹೈಕೋರ್ಟು ಅದೇ ಅವಧಿಯಲ್ಲಿ ಕೇರಳದಲ್ಲೂ ಹಿಂದು ಜನಜಾಗೃತಿ ಇನ್ನಿತ್ಯಾದಿ ಹಿಂದೂತ್ವವಾದಿ ಸಂಘಟನೆಗಳು ಕೇರಳದಲ್ಲಿ 30000ಕ್ಕೂ ಹೆಚ್ಚು ಹಿಂದೂ ಮಹಿಳೆಯರು ಲವ್ ಜಿಹಾದಿಗೆ ಬಲಿಯಾಗಿದ್ದಾರೆಂದು ಆಕ್ರಮಣಕಾರಿ ಪ್ರಚಾರ ಪ್ರಾರಂಭಿಸಿದ್ದರು. ಹೀಗಾಗಿ ಕೇರಳ ಹೈಕೋರ್ಟೂ ಸಹ ಈ ಬಗ್ಗೆ ತನಿಖೆಯನ್ನು ಮಾಡಲು ಕೇರಳದ ಪೊಲೀಸ್ ಮಹಾ ನಿರ್ದೇಶಕರಿಗೆ ಆದೇಶಿಸಿತು. ಅದರಂತೆ ಕೂಲಂಕಷವಾದ ತನಿಖೆ ಕೈಗೊಂಡ ಕೇರಳದ ಪೊಲೀಸರು ಕೇರಳದಲ್ಲೆಲ್ಲೂ ಯಾವುದೇ ಅಂತರರಾಷ್ಟ್ರೀಯ ಶಡ್ಯಂತ್ರದ ಭಾಗವಾಗಿ ಯಾವುದೇ ಮುಸ್ಲಿಂ ಸಂಘಟನೆಗಳು ವ್ಯವಸ್ಥಿತವಾಗಿ ಹಿಂದೂ ಮಹಿಳೆಯರನ್ನು ಲವ್ ಜಿಹಾದಿನ ಜಾಲದಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಪತ್ತೆಯಾಗಿಲ್ಲ ಎಂದು ವರದಿ ಕೊಟ್ಟರು. ಮಾತ್ರವಲ್ಲ. ಹಾಗೆ ಸುಳ್ಳು ಪ್ರಚಾರ ಮಾಡಿ ಸಮಾಜದ ಶಾಂತಿ ಭಂಗ ಮಾಡಿದ್ದಕ್ಕಾಗಿ ಹಿಂದೂ ಜನ ಜಾಗೃತಿ ಸಂಘಟೆನಯ ಮೇಲೆ ಎಫ಼್‌ಐಆರ್ ದಾಖಲಿಸಿದರು. ಈ ವರದಿಯನ್ನು ಆಧರಿಸಿ ಕೇರಳದ ಹೈಕೋರ್ಟು 2012 ರಲ್ಲಿ ಲವ್ ಜಿಹಾದ್ ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಿತು. ಅಖಿಲಾ ಎಂಬ ಹಾದಿಯಾ ಮತ್ತು ವ್ಯಕ್ತಿ ಸ್ವಾತಂತ್ರ್ಯಾ ಹೀಗೆ ಕೋರ್ಟುಗಳು ಮತ್ತು ಪೊಲಿಸ್ ತನಿಖೆಗಳು ಅಧಿಕೃತವಾಗಿ ಲವ್ ಜಿಹಾದನ್ನು ನಿರಾಕರಿಸಿದ ನಂತರ ಇದರ ಸುತ್ತಾ ಸ್ವಘೋಷಿತ ಹಿಂದೂ ರಕ್ಷಕರ ಹುಯಿಲೂ ಕಡಿಮೆಯಾಗಿತ್ತು. ಆದರೆ 2016 ರಲ್ಲಿ ಕೇರಳದಲ್ಲಿ ಅಖಿಲಾ ಎಂಬ 24 ವರ್ಷದ ಹಿಂದೂ ಯುವತಿ ಸ್ವ ಇಚ್ಚೆಯ ಮೇರೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ಹಾದಿಯಾ ಆದಳು. ಆ ನಂತರ ಮುಸ್ಲಿಂ ಯುವಕನನ್ನು ಮದುವೆಯಾದಳು. ಈ ಮದುವೆಯ ಬಗ್ಗೆ ಸಮ್ಮತಿ ಇರದ ಅವರ ತಂದೆ ಅಶೋಕನ್ ಇದು ಬಲವಂತದ ಮತಾಂತರ ಹಾಗೂ ಮದುವೆ ಎಂದು ದೂರಿತ್ತಿದ್ದರಿಂದ ಈ ಪ್ರಕರಣ ಹಿಂದೂ ಸಂಘಟನೆಗಳಿಗೆ ಆಹಾರವಾಯಿತು. ಪ್ರಕರಣವು ಹೈಕೋರ್ಟಿನ ಮೆಟ್ಟಿಲೇರಿ, ಕೇರಳ ಹೈಕೋರ್ಟು ಹಿಂದೆಮುಂದೆ ನೋಡದೆ ಇದೊಂದು ಲವ್ ಜಿಹಾದ್ ಪ್ರಕರಣವೆಂದು ಪರಿಗಣಿಸಿ ಸಾಂವಿಧಾನಿಕವಾಗಿ ತನ್ನಿಚ್ಚೆ ಬಂದವರನ್ನು ಮದುವೆಯಾಗುವ ವಯಸ್ಸು ಹಾಗೂ ಅಧಿಕಾರ ಹೊಂದಿದ್ದ ಹಾದಿಯಾಳ ನಿರ್ಧಾರವನ್ನು ಅಸಿಂಧುವೆಂದು ಘೋಷಿಸಿ ಮದುವೆಯನ್ನು ರದ್ದುಪಡಿಸಿತು. ಇದರ ವಿರುದ್ಧ ಹಾದಿಯಾಳ ಪತಿ ಸುಪ್ರೀಂ ಕೋರ್ಟಿನ ಮೆಟ್ಟಿಲೇರಿದರು. 2018 ರಲ್ಲಿ ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟಿನ ತ್ರಿಸದಸ್ಯ ಪೀಠ ತನ್ನ ಅಂತಿಮ ತೀರ್ಮಾನವನ್ನು ಘೋಷಿಸಿತು. ಅದು ಹೈಕೋರ್ಟಿನ ವಿಚಾರಣೆ ಹಾಗೂ ತೀರ್ಪಿನ ಬಗ್ಗೆ ತೀವ್ರವಾದ ಅಸಂತೋಷವನ್ನು ವ್ಯಕ್ತಪಡಿಸುತ್ತಾ ಅದರ ಆದೇಶವನ್ನು ರದ್ದುಗೊಳಿಸಿತು ಹಾಗೂ: " ಮದುವೆಯೆಂಬುದು ಒಬ್ಬ ವ್ಯಕ್ತಿಯ ಖಾಸಗಿ ವಿಷಯ. ಅವರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟ ವಿಷಯ. ಅದರಲ್ಲಿ ಮೂಗುತೂರಿಸುವ ಅಧಿಕಾರ ಪ್ರಭುತ್ವಕ್ಕಿಲ್ಲ. ವ್ಯಕ್ತಿಗಳ ಈ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸಬೇಕಿರುವುದು ಕೋರ್ಟುಗಳ ಕರ್ತವ್ಯ. ನಮ್ಮ ಸಮಾಜದ ಸ್ಥಿರತೆಯು ನಮ್ಮ ಸಮಾಜದ ಬಹುಸಂಸ್ಕೃತಿಯನ್ನೇ ಆಧರಿಸಿದೆ. ನಮ್ಮ ಸಂವಿಧಾನವು ಅದನ್ನು ರಕ್ಷಿಸುತ್ತದೆ." ಎಂದು ಸ್ಪಷ್ಟ ಮಾತುಗಳಲ್ಲಿ ಸ್ವ ಇಚ್ಚೆಯಿಂದ ತನಗಿಷ್ಟ ಬಂದ ಮತವನ್ನು ಆಚರಿಸುವ ಹಾಗೂ ಸ್ವ ಇಚ್ಚೆಯಿಂದ ತನಗೆ ಇಷ್ಟ್ ಬಂದವರನ್ನು ಮದುವೆಯಾಗುವ ಹಾದಿಯಾಳ ಹಕ್ಕನ್ನು ಮಾತ್ರವಲ್ಲದೆ. ಈ ದೇಶದ ಎಲ್ಲಾ ಜನರ ಹಕ್ಕನ್ನು ಎತ್ತಿಹಿಡಿಯಿತು. ಆಸಕ್ತರು ಆ ತೀರ್ಪಿನ ಪೂರ್ಣ ಪಠ್ಯವನ್ನು ಈ ವೆಬ್ ವಿಳಾಸದಲ್ಲಿ ಓದಬಹುದು: ►►https://main.sci.gov.in/supremecourt/2017/19702/19702_2017_Judgement_08-Mar-2018.pdf ಆದರೂ ಇಂಥಾ ಮದುವೆಗಳ ಹಿಂದೆ ಯಾವುದಾದರೂ ವ್ಯವಸ್ಥಿತ ಪಿತೂರಿಯಿದೆಯೇ ಎಂದು ತನಿಖೆ ಮಾಡುತ್ತಿದ್ದ NIA ಯು ತನ್ನ ತನಿಖೆಯನ್ನು ಮುಂದುವರೆಸಿ ಸುಪ್ರೀಂ ಕೋರ್ಟಿಗೆ ತನ್ನ ವರದಿಯನ್ನು ಸಲ್ಲಿಸಲುಕೂಡ ಆದೇಶಿಸಿತು. ಕೇಂದ್ರ ಬಿಜೆಪಿ ಸರ್ಕಾರದಡಿ ಇರುವ NIA ಯು ಕೂಡಾ ತನ್ನ ತನಿಖೆಯನ್ನು 2018 ರಲ್ಲಿ ಪೂರ್ಣಗೊಳಿಸಿತು. ಮತ್ತು ಲವ್ ಜಿಹಾದ್ ನಂತಹ ಯಾವ ವಿದ್ಯಮಾನವೂ ಇಲ್ಲವೆಂದು ವರದಿ ಮಾಡಿತು. ►►https://thewire.in/politics/nia-love-jihad-kerala-hadiya ಯೋಗಿ ಪೊಲೀಸರೂ ಲವ್ ಜಿಹಾದ್ ಇಲ್ಲವೆಂದರು! 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಬಿಜೆಪಿಯು ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ಭೂತವನ್ನು ಹುಟ್ಟುಹಾಕಿ ಜಾಟರ ಮತ್ತು ಮುಸ್ಲಿಮರ ನಡುವೆ ಕೋಮು ಧ್ರೂವೀಕರಣ ಸೃಷ್ಟಿಸುವಲಿ ಯಶಸ್ವಿಯಾಗಿತ್ತು. ಆ ನಂತರ 2017 ರ ರಾಜ್ಯದ ಶಾಸನಾ ಸಭಾ ಚುನಾವಣೆಯ ಸಂದರ್ಭದಲ್ಲಿ ಮತ್ತೊಮ್ಮೆ ಲವ್ ಜಿಹಾದ್ ಅಪಪ್ರಚಾರವನ್ನು ದೊಡ್ಡ ಮಟ್ಟದಲ್ಲಿ ಎಬ್ಬಿಸಿತು. ಹಾಗೂ ರೋಮಿಯೋ ಸ್ಕ್ವಾಡ್ ಇನ್ನಿತ್ಯಾದಿ ಗಿಮಿಕ್ಕುಗಳನ್ನು ಮಾಡಿತು. ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಲವ್ ಜಿಹಾದ್ ಪ್ರಕರಣಗಳ ಬಗ್ಗೆ ತನಿಖೆ ಮಾಡಲು ಒಂದು ವಿಶೆಷ ತನಿಖಾ ದಳವನ್ನೇ (SIT) ನೇಮಿಸಿತು. ಅದಕ್ಕೆ 14 ಪ್ರಮುಖ/ಪ್ರಖ್ಯಾತ ಪ್ರಕರಣಗಳನ್ನು ವಹಿಸಿಕೊಡಲಾಯಿತು. ತಮ್ಮದೇ ಮಾಧ್ಯಮಗಳಲಿದರ ಬಗ್ಗೆ ಮನಸ್ಸಿಗೆ ಬಂದಂತೆ ತಳಬುಡವಿಲ್ಲದ ಪ್ರಚಾರವನ್ನೂ ಮಾಡಿಸಿತು. ಆದರೆ ಉತ್ತರ ಪ್ರದೇಶದ ಪೊಲೀಸರು ಅದರ ಬಗ್ಗೆ ಹೋದ ವರ್ಷ ಪ್ರಾಥಮಿಕ ವರದಿ ನೀಡಿ ಮೊದಲ ಏಳು ಪ್ರಕರಣಗಳಲ್ಲಿ ಯಾವುದೇ ಲವ್ ಜಿಹಾದ್ ನಡೆದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಆಗ ಯೋಗಿಯ ಸಹಾಯಕ್ಕೆ ಬಂದಿದ್ದು ಅಲಹಾಬಾದ್ ಹೈಕೋರ್ಟಿನ ಮೇಲೆ ಉಲ್ಲೇಖಿಸಲಾದ ಏಕ ಸದಸ್ಯ ಪೀಠದ ತೀರ್ಪು. ಕೂಡಲೇ ಅದನ್ನು ಆಧರಿಸಿ ಯೋಗಿ ಸರ್ಕಾರ ಸುಗ್ರೀವಾಜ್ನೆ ತಂದಿತು. ಆದರೆ ಈಗಾಗಲೇ ಉಲ್ಲೇಖಿಸಿದಂತೆ ಯಾವ ಆದೇಶವನ್ನು ಆಧರಿಸಿ ಯೋಗಿ ಸರ್ಕಾರ ಕರಾಳ ಲವ್ ನಿಷೇಧ ಕಾನೂನು ತಂದಿತೋ ಆ ತೀರ್ಪನ್ನು ಅಲಹಾಬಾದ್ ಹೈಕೋರ್ಟಿನ ದ್ವಿಸದಸ್ಯ ಪೀಠವೇ ರದ್ದು ಪಡಿಸಿದೆ. ಅಷ್ಟು ಮಾತ್ರವಲ್ಲ. ಕಳೆದ ವರ್ಷವೇ ಯೋಗಿ ಪೊಲೀಸರೇ ಎಸ್‌ಐಟಿಗೆ ವಹಿಸಲಾದ ಯಾವುದೇ ಪ್ರಕರಣದಲ್ಲಿ ಲವ್ ಜಿಹಾದ್ ನಡೆದಿದೆಯೆಂಬುದಕ್ಕೆ ಪುರಾವೆಯಿಲ್ಲವೆಂದು ವರದಿ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ಪತ್ರಿಕಾವರದಿಯನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು: ►►https://scroll.in/latest/979287/love-jihad-cases-in-kanpur-sit-finds-no-proof-of-conspiracy-or-foreign-funding ಹೀಗೆ ಈವರೆಗೆ ಈ ದೇಶದಲ್ಲಿ ಲವ್ ಜಿಹಾದ್ ಎಂಬುದನ್ನು ಸಾಬೀತು ಮಾಡಬಲ್ಲ ಒಂದೇ ಒಂದು ಉದಾಹರಣೆ ಇಲ್ಲ. ಅದರ ಅರ್ಥ ಆಯಾ ಧರ್ಮದೊಳಗೆ ಬಲವಂತದ ಮದುವೆ ನಡೆಯುತ್ತಿಲವೆಂತಲ್ಲ. ಅದು ಎಲ್ಲಾ ಧರ್ಮಗಳ ಮಹಿಳೆಯರು ಎದುರಿಸುತ್ತಿರುವ ಶೋಷಣೆ. ಹಾಗೂ ಅದನ್ನು ತಡೆಯಲು ಈಗಾಗಲೇ ಹಲವು ಕಾನುನುಗಳಿವೆ. ಹೀಗಿದ್ದರೂ ಬಿಜೆಪಿಯು ಕೋವಿಡ್ ಸಂದರ್ಭದಲ್ಲಿ ಲವ್ ಜಿಹಾದ್ ಭೂತವನ್ನು ಬಡಿದೆಬ್ಬಿಸುತ್ತಿರುವುದೇತಕ್ಕೆ? ಒಂದು ದೇಶ- ಒಂದೇ ಧರ್ಮ, ಜನಾಂಗ;ಇದರ ಹಿಂದೆ ಎರಡು ಫ್ಯಾಸಿಸ್ಟ್ ಅಜೆಂಡಾಗಳಿವೆ. ಮೊದಲನೆಯದು ತುರ್ತಿನದು- ಕೋವಿಡ್ ದಾಳಿಯ ಜೊತೆಗೆ ಮೋದಿ ಸರ್ಕಾರದ ಹಾಗೂ ಕರ್ನಾಟಕದಲ್ಲಿ ಅದರ ಉಗ್ರ ಅನುಯಾಯಿಯೇ ಆಗಿಬಿಟ್ಟಿರುವ ಬೊಮ್ಮಾಯಿ ಸರ್ಕಾರದ ದಾಳಿಯೂ ಸೇರಿ ದೇಶದ ಆರ್ಥಿಕತೆ ಇತಿಹಾಸದಲ್ಲೇ ಕಂಡರಿಯದ ಹಿಂದ್ಸರಿತವನ್ನು ಅನುಭವಿಸುತ್ತಿದೆ. ನಿರುದ್ಯೋಗ, ಕೃಷಿ ಬಿಕ್ಕಟ್ಟು, ಬೆಲೆ ಏರಿಕೆಗಳು ಇತಿಹಾಸದಲ್ಲೇ ಕಂಡರಿಯದ ಮಟ್ಟಕ್ಕೆ ಮುಟ್ಟಿವೆ. ಈ ಕಂಗಾಲಿನಿಂದ ಜನರನ್ನು ಪಾರು ಮಾಡಬೇಕೆಂದರೆ ಜನರ ಆಹಾರ, ಉದ್ಯೋಗ, ಹಾಗೂ ಆರೋಗ್ಯಕ್ಕಾಗಿ ಸರ್ಕಾರ ಹೆಚ್ಚು ವೆಚ್ಚ ಮಾಡಬೇಕು. ಆದರೆ ಕೋವಿಡ್ ಪ್ಯಾಕೇಜ್ ಎಂದು ಮೋದಿ ಸರ್ಕಾರ ಘೋಷಿಸಿದ ಹಣ ಮತ್ತು ಯೋಜನೆಗಳನ್ನು ಸಿಂಹಪಾಲು ಕಾರ್ಪೊರೇಟ್ ಕಂಪನಿಗಳಿಗೆ ಹರಿದಿದೆ. ಇವು ಈ ದೇಶದ ಬಹುಸಂಖ್ಯಾತ ಜನರನ್ನು ಹತಾಷೆಯಂಚಿಗೆ ದೂಡಿದೆ. ಈ ಹತಾಷೆ ಸರ್ಕಾರದ ವಿರುದ್ಧ ಆಕ್ರೋಶವಾಗದಂತೆ ಮಾಡಲು ಜನರನ್ನೇ ಒಡೆದಾಳುವ ತಂತ್ರ ಬಿಜೆಪಿ ಸರ್ಕಾರದ್ದು. ಜನರು ಉಳಲು ಭೂಮಿ ಬೇಕೆಂದರೆ ರಾಮ ಜನ್ಮ ಭೂಮಿಯನ್ನೂ ತೋರಿಸುತ್ತಿದೆ. ಕೃಷಿ ಅಪಾಯದಲ್ಲಿದೆ ಎಂದರೆ ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ಹಿಂದೂ ಜನರನ್ನು ವಂಚಿಸುತ್ತಿದೆ. ಅದರ ಭಾಗವಾಗಿಯೇ ಮತಾಂತರ ನಿಷೇಧ ಹಾಗೂ ಲವ್ ಜಿಹಾದ್ ವಿರೋಧಿ ಶಾಸನಗಳನ್ನು ಜಾರಿ ಮಾಡಲು ಹೊರಟಿದೆ. ಎರಡನೆಯದು ದೀರ್ಘಕಾಲಿನದ್ದು- ಅದು ಈ ದೇಶವನ್ನು ಹಿಂದೂ ರಾಷ್ಟ್ರ ಮಾಡುವ ಫ್ಯಾಸಿಸ್ಟ್ ಅಜೆಂಡಾದ ಭಾಗ. ಒಂದು ರಾಷ್ಟ್ರ- ಒಂದೇ ಧರ್ಮ ಹಾಗೂ ಜನಾಂಗ. ಹಿಟ್ಲರ್ ಕೂಡ ೧೯೩೫ರಲ್ಲಿ ಆರ್ಯನ್ ಪರಿಶುದ್ಧತೆಯನ್ನು ಉಳಿಸಿಕೊಂಡು ಜರ್ಮನಿಯ ಧಮನಿಯಲ್ಲಿರುವ ಬಹು ಸಂಸ್ಕೃತಿಯನ್ನು ತೊಡೆದುಹಾಕಲು ಭಾಗವಾಗಿ ಜರ್ಮನ್-ಯೆಹೂದಿ ಮದುವೆಗಳನ್ನು ನಿಷೇಧಿಸಿದ್ದ. ಮೋದಿ ಸರ್ಕಾರದ ಲವ್ ಜಿಹಾದ್ ನಿಷೇಧದ ಕಾನೂನುಗಳೂ ಕೂಡಾ ಹಿಂದೂ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಅಜೆಂಡಾದ ಭಾಗವಾಗಿದೆ. ಇದು ಕೇವಲ ಅಂತರ್ ಧರ್ಮೀಯ ವಿವಾಹ ನಿಷೇಧದಲ್ಲಿ ಮತ್ರ ಕೊನೆಗೊಳ್ಳದೆ ಅಂತರ್ ಜಾತೀಯ ಮದುವೆಯನ್ನು ನಿಷೇಧಿಸಿ ಮೇಲ್ಜಾತಿ ಪರಿಶುದ್ಧತೆಯನ್ನು ಉಳಿಸಿಕೊಳ್ಳುವ ಉದ್ದೇಶವನ್ನೂ ಒಳಗೊಂಡಿದೆ. ಈ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ದಮನಕ್ಕೊಳಗಾಗುವುದು ಹಿಂದೂ ಮಹಿಳೆಯರೇ ಆಗಿದ್ದಾರೆ. ಹೀಗಾಗಿ ಲವ್ ಜಿಹಾದ್ ಅಪಪ್ರಚಾರ ಕೇವಲ ಮುಸ್ಲಿಂ ದಮನವನ್ನು ಮಾತ್ರವಲ್ಲ ಹಿಂದೂ ಮಹಿಳೆಯರ ದಮನವನ್ನೂ ಉದ್ದೇಶಿಸಿರುವ ಬ್ರಾಹ್ಮಣೀಯ ರಾಷ್ಟ್ರ ಸಂಸ್ಥಾಪನೆಯ ಅಜೆಂಡಾದ ಭಾಗವಾಗಿದೆ. ಬೊಮ್ಮಾಯಿ ಸರ್ಕಾರ ಕಾರ್ಪೊರೇಟ್-ಬ್ರಾಹ್ಮಣ್ಯದ ಅಜೆಂಡಾಗಳ ಉಗ್ರ ಅನುಷ್ಠಾನಕ್ಕೆ ಮುಂದಾಗಿದೆ. ಕೃಪೆ: ವಾರ್ತಾಭಾರತಿ ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement