Advertisement

'ಅಂದಿನ ಭಾರತ: ಇಂದಿನ ಭಾರತ'

Advertisement

ಬರಹ: ಸನತ್ ಕುಮಾರ್ ಬೆಳಗಲಿ (ಲೇಖಕರು ಹಿರಿಯ ಅಂಕಣಕಾರರು ಹಾಗೂ ಸಾಮಾಜಿಕ ಚಿಂತಕರು) ಮಸೀದಿ ಕೆಡವಲು ಬಾಬಾಸಾಹೇಬರ ಪರಿನಿರ್ವಾಣದ ದಿನವನ್ನೇ ಆರಿಸಿಕೊಂಡವರು ದೇಶದ ಅಧಿಕಾರ ಸೂತ್ರ ಹಿಡಿದಿದ್ದಾರೆ. ಮಸೀದಿಯ ಗುಮ್ಮಟಗಳು ಉರುಳಿದಾಗ ಪ್ರಧಾನಿಯಾಗಿದ್ದ ಕಾಂಗ್ರೆಸ್ ನ ಪಿ.ವಿ.ನರಸಿಂಹರಾವ್ ಈಗಿಲ್ಲ. ಮಸೀದಿಯೊಂದಿಗೆ ತನಗೆ ಪ್ರಧಾನಿ ಪಟ್ಟ ನೀಡಿದ ಕಾಂಗ್ರೆಸ್ಸನ್ನೇ ಮುಗಿಸಿ ಅವರು ನಿರ್ಗಮಿಸಿದರು. ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈಗ ಲೋಕಸಭೆಯಲ್ಲಿ ಎರಡಂಕಿಗಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಾಗದೇ ಪರದಾಡುತ್ತಿದೆ. ಕೋಮುವಾದಿಗಳು ಅಯೋಧ್ಯೆಯ ಬಾಬರಿ ಮಸೀದಿಯನ್ನು ನೆಲಸಮಗಳಗೊಳಿಸಿ ಇಂದಿಗೆ ಬರೋಬ್ಬರಿ 30 ವರ್ಷಗಳು ಗತಿಸಿವೆ. ಈ ಮೂರು ದಶಕಗಳಲ್ಲಿ ಈ ಭಾರತ ಸಾಕಷ್ಟು ಅಹಿತಕರ ಬದಲಾವಣೆ ಕಂಡಿದೆ.ಆ ನಂತರ ಜನಿಸಿದ ಪೀಳಿಗೆಗೆ ಅಂದಿನ ಭಾರತದ ಅರಿವಿರಲು ಸಾಧ್ಯವಿಲ್ಲ. ಈಗ ನಾವು ನೋಡುತ್ತಿರುವ ಭಾರತಕ್ಕೂ ಹಿಂದಿನ ಭಾರತಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭಾರತವನ್ನು ಮನುವಾದಿ ಹಿಂದುರಾಷ್ಟ್ರವನ್ನಾಗಿ ಮಾಡಲು ಮುಖ್ಯ ಅಡ್ಡಿ ಯಾಗಿರುವ ಕಾಂಗ್ರೆಸ್ಸನ್ನು ಹೊಸಕಿ ಹಾಕಲು ಎಲ್ಲ ಶಕ್ತಿಗಳನ್ನು ಬಳಸಿಕೊಳ್ಳುತ್ತ ಬಂದವರು ಈಗ ಮಮತಾ ಬ್ಯಾನರ್ಜಿಗೆ ಸುಪಾರಿ ನೀಡಿದ್ದಾರೆ. ಆಕೆಯೂ ಕಾಂಗ್ರೆಸ್ ಸಹಿತ ಪ್ರತಿಪಕ್ಷ ಏಕತೆಗೆ ಅಡ್ಡಿಯಾಗಿದ್ದಾರೆ. ಆದರೆ ಭಾರತದ ಎಲ್ಲಾ ರಾಜ್ಯಗಳಲ್ಲಿ ,ಜಿಲ್ಲೆ ತಾಲ್ಲೂಕುಗಳಲ್ಲಿ ಎಲ್ಲ ಸಮುದಾಯಗಳ ಜನರನ್ನು ಒಳಗೊಂಡ ಪಕ್ಷ ಕಾಂಗ್ರೆಸ್ ಎಂಬುದು ವಾಸ್ತವ ಸಂಗತಿ‌. ಅಯೋಧ್ಯೆಯ ಬಾಬರಿ ಮಸೀದಿ ನೆಲಸಮದ ಘಟನೆ ಈಗ ಇತಿಹಾಸದ ಪುಟ ಸೇರಿದೆ. ಮಸೀದಿ ಕಡೆವಿದ ಜಾಗದಲ್ಲಿ ಮಂದಿರ ನಿರ್ಮಾಣಕ್ಕೆ ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದ ಸುದ್ಧಿ ಹಳೆಯದಾಗಿದೆ. ಹಿಂದು ಓಟ್ ಬ್ಯಾಂಕ್ ಗೆ ಹೆದರಿದ ಕಾಂಗ್ರೆಸ್ ಕೂಡ ಮಂದಿರ ನಿರ್ಮಾಣದ ಶಿಲಾನ್ಯಾಸದ ದಿನದಂದು ಸಂಭ್ರಮಿಸಿತು. ಆ ಮಟ್ಟಿಗೆ ವಾತಾವರಣ ಬದಲಾಗಿದೆ. ಬುದ್ದ ವಿಹಾರ ಮತ್ತು ಜೈನ ಬಸದಿಗಳನ್ನು ಕಡವಿ ಮಂದಿರಗಳನ್ನು ನಿರ್ಮಿಸಿದ ಚರಿತ್ರೆಯ ವಿಕೃತಿಯ ಬಗ್ಗೆ ಮೌನ ತಾಳುವ ಕೋಮುವಾದಿ ಶಕ್ತಿಗಳು ಅಯೋಧ್ಯೆಯ ಆ ಮಸೀದಿ ಹಿಂದೆ ಮಂದಿರವಾಗಿತ್ತೆಂದು ನೆಪ ಮುಂದೆ ಮಾಡಿ ಅದನ್ನು ಕೆಡವಿದ್ದು ಶ್ರೀ ರಾಮಚಂದ್ರನ ಮೇಲಿನ ಭಕ್ತಿಯಿಂದಲ್ಲ, ರಾಜಕೀಯ ಕಾರಣಗಳಿಗಾಗಿ ಅದನ್ನು ಕೆಡವಿ ರಾಜಕೀಯ ಬೇಳೆ ಬೇಯಿಸಿಕೊಂಡರು. ಬಾಬರಿ ಮಸೀದಿ ನೆಲಕ್ಕುರುಳಿದ 1992 ರ ಡಿಜಿಟಲ್ 6ರ ಆ ದಿನ ನಾನು ಬೆಂಗಳೂರಿನಲ್ಲಿದ್ದೆ. ಈ ಕರಾಳ ಘಟನೆ ನಡೆದ ಮಾರನೇ ದಿನ ಟೌನ್ ಹಾಲ್ ಎದುರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆ. ಅಂದು ಗಿರೀಶ ಕಾರ್ನಾಡ್, ಲಂಕೇಶ, ಶೂದ್ರ ಶ್ರೀನಿವಾಸ ಸೇರಿದಂತೆ ನಾವೆಲ್ಲ ಸಮಾನ ಮನಸ್ಕರು ಶಾಂತಿಯುತ ಮೌನ ಪ್ರತಿಭಟನೆ ನಡೆಸಿದರೆ, ನಮ್ಮ ಎದುರು ಗಾಯಕ ಸಿ‌.ಅಶ್ವತ್ಥ ಮತ್ತು ಅವರ ಬೆಂಬಲಿಗರು ಮಸೀದಿ ಕೆಡವಿದ್ದನ್ನು ಬೆಂಬಲಿಸಿ ಘೋಷಣೆ ಕೂಗುತ್ತಿದ್ದರು. ಆ ದಿನಗಳನ್ನು ನೆನೆಸಿಕೊಂಡರೆ ಮನಸ್ಸು ಭಾರವಾಗುತ್ತದೆ. ಹಿಂದುಳಿದ ಜನ ವರ್ಗಗಳಿಗೆ ಮೀಸಲು ನೀಡಲು ಹೊರಟ ವಿ.ಪಿ.ಸಿಂಗ್ ಅಧಿಕಾರ ಕಳೆದುಕೊಂಡರು. ಮಂಡಲ ಆಯೋಗದ ಫಲಾನುಭವಿ ವರ್ಗಗಳ ಯುವಕರು ಅದನ್ನು ವಿಫಲಗೊಳಿಸಲು ಮಸಲತ್ತು ನಡೆಸಿದ ಮನುವಾದಿ, ಕೋಮುವಾದಿ ಶಕ್ತಿಗಳ ಬೆಂಗಾವಲು ಪಡೆಗಳನ್ನು ಸೇರಿದ್ದು ಚರಿತ್ರೆಯ ವ್ಯಂಗ್ಯವಲ್ಲದೇ ಬೇರೇನೂ ಅಲ್ಲ. ಎಂಬತ್ತರ ದಶಕದ ಕೊನೆಯಲ್ಲಿ ವಿ.ಪಿ.ಸಿಂಗ್ ಪ್ರಧಾನಿಯಾಗಿದ್ದರು. ಆಗ ಅವರು ಧೂಳು ಹಿಡಿದುಕೊಂಡು ಬಿದ್ದಿದ್ದ ಮಂಡಲ ಆಯೋಗದ ವರದಿಯನ್ನು ಜಾರಿಗೆ ತರಲು ಮುಂದಾದರು. ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27ರಷ್ಟು ಮೀಸಲು ಒದಗಿಸುವ ಮಂಡಲ ವರದಿ ವಿರುದ್ಧ ಮೇಲ್ಜಾತಿ ,ಮೇಲ್ವರ್ಗಗಳ ಕುತಂತ್ರದಿಂದ ದೊಡ್ಡ ಆಂದೋಲನವೇ ನಡೆಯಿತು.ಮಂಡಲ ಆಯೋಗ ಜಾರಿ ವಿರುದ್ಧ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಕಮಂಡಲ ಅಸ್ತ್ರವನ್ನು ಪ್ರಯೋಗಿಸಿತು.ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಗುಜರಾತಿನ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಹೊರಟರು.ಈ ರಥಯಾತ್ರೆ ಹೊರಡುವಾಗ ಲೋಕಸಭೆಯಲ್ಲಿ ಕೇವಲ ಇಬ್ಬರು ಸದಸ್ಯರನ್ನು ಹೊಂದಿದ್ದ ಬಿಜೆಪಿ ರಥಯಾತ್ರೆಯ ನಂತರ ನಡೆದ ಚುನಾವಣೆಯಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಂಡಿತು. ಎಂಬತ್ತಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ನಂತರ ಭಾರತ ಸರ್ಕಾರದ ಅಧಿಕಾರ ಸೂತ್ರ ಹಿಡಿದುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಹಿಂದುತ್ವದ ಧಾರ್ಮಿಕ ಸ್ವರೂಪವನ್ನು ನೀಡಲಾಯಿತು. ಬರೀ ಅಷ್ಟು ನೀಡಿದರೆ ಸಾಲದು, ತಳ ಸಮುದಾಯಗಳ ಜನರನ್ನು ಬುಟ್ಟಿಗೆ ಹಾಕಿಕೊಳ್ಳಲು ಹಿಂದುತ್ವಕ್ಕೆ ಅಪಾಯ ಎಂಬ ಕಟ್ಟುಕಥೆಯ ಜಾಲವನ್ನು ಹೆಣೆಯಲಾಯಿತು. ಧರ್ಮದ ಹೆಸರಿನಲ್ಲಿ ವಿಭಿನ್ನ ಶ್ರೇಣಿಗೆ ಸೇರಿದ ಜನರನ್ನು ಒಟ್ಟುಗೂಡಿಸಲು ಹಿಂದು ಧರ್ಮ ಅಪಾಯದಲ್ಲಿದೆ‌ ಎಂದು ನಂಬಿಸಿ ಕಲ್ಪಿತ ಶತ್ರುಗಳನ್ನು ಸೃಷ್ಟಿ ಸಲಾಯಿತು.ಮುಸಲ್ಮಾನರು, ಕ್ರೈಸ್ತರು,ಕಮ್ಯುನಿಸ್ಟರು ಮತ್ತು ಅವರನ್ನು ಬೆಂಬಲಿಸುವ ಜಾತ್ಯತೀತ ಮನೋಭಾವದ ಎಲ್ಲರೂ ಹಿಂದು ಧರ್ಮದ ಶತ್ರುಗಳೆಂದು ತೋರಿಸಿ ಧರ್ಮದ ಹೆಸರಿನಲ್ಲಿ ಒಂದುಗೂಡಿಸಲು ನಾನಾ ಕುತಂತ್ರಗಳ ಜಾಲ ಹೆಣೆದಿರುವದು ಎಲ್ಲರಿಗೂ ತಿಳಿದ ಸಂಗತಿ. ಹೀಗೆ ಅಯೋಧ್ಯೆಯ ಮಸೀದಿ ನಿರ್ನಾಮ ಮತ್ತು ಮಂದಿರ ನಿರ್ಮಾಣ ವಿವಾದಗಳು ಅಂದುಕೊಂಡಷ್ಟು ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿ ವ್ಯಾಖ್ಯಾನಕ್ಕೆ ಸಿಗುವದಿಲ್ಲ. ಒಂದು ಸ್ಥಳೀಯ ಮಸೀದಿ ನಿರ್ನಾಮ ಬಹುತ್ವ ಭಾರತದ ಮುನ್ನಡೆಯ ಪಥವನ್ನೇ ಬದಲಿಸಿತು. ಇದು ಬರೀ ಸ್ಥಳೀಯ ಸಮಸ್ಯೆಯಾಗಿದ್ದರೆ, ಅಲ್ಲಿಗೆ ಮುಗಿಯುತ್ತಿತ್ತು. ಆದರೆ, ಮತ ನಿರಪೇಕ್ಷ ಭಾರತವನ್ನು ಮನುವಾದಿ ಹಿಂದುರಾಷ್ಟ್ರವನ್ನಾಗಿ ಬದಲಿಸಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಬೇರುಗಳನ್ನು ಬಲಗೊಳಿಸುವ ಅತ್ಯಂತ ನಜೂಕಾದ ಕುತಂತ್ರದ ಕಾರ್ಯ ಸೂಚಿ ಇದರ ಆಳದಲ್ಲಿ ಇರುವುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಲೇ ಇದೆ. ಈ ಮಸಲತ್ತುಗಳನ್ನು ನಡೆಸಿ ಒಕ್ಕೂಟ ಸರಕಾರದ ಅಧಿಕಾರವನ್ನೇನೋ ಹಿಡಿಯಲಾಯಿತು. ಆದರೆ ಭಾರತದಂಥ ವಿಭಿನ್ನ ಜನಸಮುದಾಯಗಳಿಂದ ಕೂಡಿದ ಹಲವಾರು ಭಾಷೆ, ಸಂಸ್ಕೃತಿ, ಗಳನ್ನು ಹೊಂದಿದ ಭೂ ಪ್ರದೇಶವನ್ನು ಆಳಲು ಬರೀ ಕಲ್ಪಿತ ಧರ್ಮವೊಂದೇ ಸಾಕಾಗುವದಿಲ್ಲ. ಜನರ ಆರ್ಥಿಕ, ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯಕ್ರಮ, ನೈಪುಣ್ಯ ಬೇಕಾಗುತ್ತದೆ. ಈಗ ಕೋಮು ಉನ್ಮಾದ ಕೆರಳಿಸಿ ಅಧಿಕಾರ ಹಿಡಿದು ಕೂತವರಿಗೆ ಅಂಥ ಯಾವುದೇ ಕಾರ್ಯಕ್ರಮವಿಲ್ಲ. ಅದಕ್ಕಾಗಿ ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಜಯಗಳಿಸಲು ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವುದು ಅವರಿಗೆ ಅನಿವಾರ್ಯವಾಗಿದೆ. ಅದಕ್ಕಾಗಿ ಮತಾಂತರ, ಗೋ ಹತ್ಯೆ ನಿಷೇಧ,ಲವ್ ಜಿಹಾದ್ ,ಪಾಕಿಸ್ತಾನ ಧ್ವಜ ಹಾರಾಟ, ನಾಗಬನ ಧ್ವಂಸ ದಂಥ ದುಷ್ಕ್ರತ್ಯಗಳಿಗೆ ಮೊರೆ ಹೋಗುವದು ಅವರಿಗೆ ಅನಿವಾರ್ಯವಾಗಿದೆ. ಬಹುಸಂಖ್ಯಾತರೆಂದು ನಂಬಿಸಲಾದ ಜನ ಸದಾ ಮತದ ಮತ್ತೇರಿಸಿಕೊಂಡಿರಬೇಕೆಂದು ಅವರು ಬಯಸುತ್ತಾರೆ‌. ದುಡಿಯುವ ದಲಿತ ಸಮುದಾಯಗಳಲ್ಲಿ ರಾಜಕೀಯ , ಸೈದ್ಧಾಂತಿಕ ಜಾಗೃತಿ ಮೂಡುವವರೆಗೆ ಭಾರತದ ಇಂದಿನ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆ ಸಾಧ್ಯವಿಲ್ಲ. ಆದರೆ ಭಾರತದ ಅದರಲ್ಲೂ ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನದ ರೈತ ಸಮುದಾಯ ಮಾತ್ರ ಇವರ ಮೋಸದ ಜಾಲಕ್ಕೆ ಬಲಿ ಬೀಳದೇ ಒಕ್ಕಟ್ಟಿನ ಸುದೀರ್ಘ ವಾದ ಹೋರಾಟವನ್ನು ನಡೆಸಿ ಇವರ ಮತಾಂಧತೆಯಿಂದ ಸಂಪಾದಿಸಿದ ಅಹಂಕಾರಕ್ಕೆ ಅಂಕುಶದಿಂದ ತಿವಿಯಿತು.ಇದರ ಪರಿಣಾಮವಾಗಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಸರ್ಕಾರ ವಾಪಸು ಪಡೆಯಬೇಕಾಯಿತು. ಆದರೂ ಮಸೀದಿ ಧ್ವಂಸದ ಮುಂಚಿನ ಭಾರತ ಹಾಗೂ ಆ ನಂತರದ ಭಾರತಗಳ ನಡುವೆ ಬಹುದೊಡ್ಡ ವ್ಯತ್ಯಾಸ ಎದ್ದು ಕಾಣುತ್ತದೆ. ಕಳೆದ ಮೂವತ್ತು ವರ್ಷಗಳಲ್ಲಿ ಜನಿಸಿದ ಹೊಸ ಪೀಳಿಗೆಯ ಯುವಕರ ಮೆದುಳಿಗೆ ಮುಸ್ಲಿಂ ದ್ವೇಷದ ವಿಷದ ಸೂಜಿ ಚುಚ್ಚುವ ದುಷ್ಟ ಕಾರ್ಯ ನಿರಂತರವಾಗಿ ನಡೆದಿದೆ.ಭಾರತದ ಬಹುತೇಕ ಊರುಗಳಲ್ಲಿ ಮನಸ್ಸುಗಳು ಒಡೆದಿವೆ.ಒಡೆದ ಮನಸುಗಳನ್ನು ಒಂದು ಗೂಡಿಸಿ ಹೊಸ ಕನಸುಗಳನ್ನು ಕಾಣುವ ದಿನಗಳು ಬರಲಿ ಎಂಬ ಸದಾಶಯದ ಧ್ವನಿಗಳಿಗೆ ಬಲ ಬರಬೇಕಾಗಿದೆ. ಬಹುತ್ವ ಭಾರತ ಕುವೆಂಪು ಬಯಸಿದ ಸರ್ವಜನಾಂಗದ ಸುಂದರ ತೋಟವಾಗಿ ಉಳಿಯಬೇಕೆಂದರೆ ಬಾಬಾಸಾಹೇಬರ ಸಂವಿಧಾನ ಸುರಕ್ಷಿತವಾಗಿ ಇರಬೇಕು. ಸಂವಿಧಾನವನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ. ಹೀಗೆ ಅಂದಿನ ಭಾರತ ಮತ್ತು ಇಂದಿನ ಭಾರತದ ಸಿಹಿ ಕಹಿ ನೆನಪುಗಳ ಜೊತೆಗೆ ಪ್ರೀತಿ,ವಿಶ್ವಾಸ, ಆತ್ಮೀಯತೆ, ಸಹಬಾಳ್ವೆಯಿಂದ ಕೂಡಿದ ಮುಂದಿನ ಭಾರತವನ್ನು ಕಟ್ಟುವ ಸವಾಲು ಹೊಸ ಪೀಳಿಗೆಯ ಮುಂದಿದೆ‌. ಈ ಭಾರತದ ಎಲ್ಲ ಸಮುದಾಯಗಳ ಯುವಕರು ಸ್ವೀಕರಿಸಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಕಾಪಾಡಿಕೊಳ್ಳುತ್ತಾರೆಂಬ ವಿಶ್ವಾಸವೇ ನಮ್ಮ ಮುಂದಿನ ಬೆಳಕಾಗಿದೆ. ನಮ್ಮ ಮನಸ್ಸು ಕಟ್ಟುವ ಕಾರ್ಯವನ್ನು ವಿಫಲಗೊಳಿಸಲು ಅವರು ನಾನಾ ಮಸಲತ್ತು ಮಾಡುತ್ತಿರುತ್ತಾರೆ. ಪೌಷ್ಟಿಕಾಂಶಗಳ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ ಕೊಡುವದನ್ನು ವಿರೋಧಿಸುವ ಹೊಸ ಅಸ್ತ್ರ ಅವರಿಗೆ ವರದಾನವಾಗಿ ಬಂದಿದೆ.ಕಲ್ಯಾಣ ಕರ್ನಾಟಕ ಭಾಗಕ್ಕೆ ಸೀಮಿತವಾದ ಈ ಯೋಜನೆಯನ್ನು ವಿರೋಧಿಸಲು ಕೆಲ ಮಠಾಧೀಶರು ಮತ್ತು ಸ್ವಾಮಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಆಹಾರದ ಹೆಸರಿನಲ್ಲಿ ಬಡವರನ್ನು ವಿಭಜಿಸಿ ಆಳುವ ಹುನ್ನಾರ ನಡದಿದೆ. (ಕೃಪೆ: ವಾರ್ತಾಭಾರತಿ) ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ಓದುಗರ ನಿರಂತರ ನೆರವು ಅಗತ್ಯ. 'ಕನ್ನಡ ಮೀಡಿಯಾ ಡಾಟ್ ಕಾಂ' ಗೆ ಆರ್ಥಿಕ ನೆರವು ನೀಡಲು ಈ ಕೆಳಗಿನ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ: ►► ನೀವು ಈ ಕೆಳಗಿನ ಲೇಖನಗಳನ್ನು ಓದಿಲ್ಲವೇ? ಅಗತ್ಯವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ. ►►BREAKING NEWS: ಕನ್ನಡ ಮೀಡಿಯಾ ಡಾಟ್ ಕಾಮ್ ಸುದ್ದಿ ಜಾಲತಾಣ ಉದ್ಘಾಟನೆ, ಲಾಂಛನ ಅನಾವರಣ: ವಿಡಿಯೋ. ►►ಎಳೆಮಕ್ಕಳ, ವಿದ್ಯಾರ್ಥಿಗಳ ಪ್ರಾಣಕ್ಕೆ ಮಾರಕವಾದ ಟೇಸ್ಟಿಂಗ್ ಪೌಡರ್ ಅನ್ನು ಸರ್ಕಾರ ಅದೇಕೆ ನಿಷೇಧಿಸುತ್ತಿಲ್ಲ? ►► ‘ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಭಾರತದಲ್ಲಿ ದಿಢೀರ್‌ ಜನಪ್ರಿಯರಾಗಲು ಇರುವ ಸರಳ ಮಾರ್ಗ ಯಾವುದು ಗೊತ್ತೇ? ►► ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►1992ರಲ್ಲಿ ರಾಮ ಮಂದಿರ ನಿರ್ಮಾಣದ ಹೆಸರಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಲ್ಪಟ್ಟ 1400 ಕೋಟಿ ರೂ. ಎಲ್ಲಿ ಹೋಯಿತು ಗೊತ್ತೇ? ವಿಡಿಯೋ ನೋಡಿ.! ►►ನೋಡ ನೋಡುತ್ತಿದ್ದಂತೆಯೇ ಸಮುದ್ರಕ್ಕೆ ಜಿಗಿದ ರಾಹುಲ್! ►►ಚಪ್ಪಾಳೆ, ಕ್ಯಾಂಡಲ್ ನಂತಹ ಮೌಢ್ಯಗಳ ನಡುವೆ ವ್ಯಾಕ್ಸಿನ್ ಗೆ ಸ್ಥಾನ ದೊರಕಿರುವುದು ವಿಜ್ಞಾನಕ್ಕೆ ಸಿಕ್ಕ ಜಯ! ►►ಕೋರೊನಾಗಿಂತಲೂ ಘೋರ ಮೋದಿ ಸರ್ಕಾರ! ಜನಸಾಮಾನ್ಯರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆಯೇ? ►►ರೈತರ ಮೇಲೆ ಮತ್ತೊಂದು ಆಕ್ರಮಣ; 2022 ರ ನಂತರ ರಸಗೊಬ್ಬರ ಸಬ್ಸಿಡಿ ರದ್ದಾಗಲಿದೆಯೇ? ►►‘ಕೋವಿಡ್ ಲಸಿಕಾ ಅಭಿಯಾನ’ವು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವ ಯೋಜನೆ: ವೈದ್ಯರು, ವಿಜ್ಞಾನಿಗಳ ವೇದಿಕೆ ಆರೋಪ. ►►‘ಕೋವಿಡ್ ಕೋಟ್ಯಾಧಿಪತಿಗಳು ಮತ್ತು ವ್ಯಾಕ್ಸಿನ್ ವರ್ಣಬೇಧ’: ಶಿವಸುಂದರ್ ರವರ ಲೇಖನ ►►ಬಹಿರಂಗವಾಯ್ತು ಪ್ರಧಾನಿ ಮೋದಿಯವರ ಅಸಲಿ ವಿದ್ಯಾರ್ಹತೆ… ಎಂಟಯರ್ ಪೊಲಿಟಿಕಲ್ ಸಾಯನ್ಸ್ ಸುಳ್ಳು! (ವಿಡಿಯೋ ನೋಡಿ) ►►‘ಸೋನಿಯಾ ಗಾಂಧಿಯವರ ಕುರಿತು ತಿರುಚಿದ ಫೋಟೋ ವೈರಲ್ ಮಾಡಿದ ಬಿಜೆಪಿ: ಅಸಲಿಯತ್ತೇನು ಗೊತ್ತೇ? ►►ಆಲೂ ಹಾಕಿದರೆ ಚಿನ್ನ ಬರುತ್ತದೆ; ಹಾಗೆ ಹೇಳಿದ್ದು ರಾಹುಲ್ ಅಲ್ಲ, ಮೋದಿ..! ►►ಕೊರೊನಾ ವ್ಯಾಕ್ಸಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸಿತ್ತೇ? ಇಲ್ಲಿದೆ ನೋಡಿ: ದಾವೆ ಹೂಡಬಹುದಾದ ವಿಡಿಯೋ ಸಾಕ್ಷಿ! ►►ಜನರು ಲಸಿಕೆ ಹಾಕಿಸಿಕೊಳ್ಳದಿರಲು ಕಾಂಗ್ರೆಸ್ ಅಪಪ್ರಚಾರ ಕಾರಣವಾದರೆ, ಸರ್ಕಾರ ಕೊಡಲುದ್ದೇಶಿಸಿದ್ದ ಆ ಲಸಿಕೆ ಈಗ ಎಲ್ಲಿದೆ? ►►ಕಾಂಗ್ರೆಸ್ ಲೆಟರ್ ಹೆಡ್ ಪೋರ್ಜರಿ ಮಾಡಿ ‘ಟೂಲ್‌ಕಿಟ್’ ಸಿದ್ದಪಡಿಸಿದ ಬಿಜೆಪಿ ಐ.ಟಿ ಸೆಲ್: ಪೋಲೀಸ್ ಅಯುಕ್ತರಿಗೆ ದೂರು ನೀಡಿದ ಕಾಂಗ್ರೆಸ್! ►►ಸುಪ್ರೀಂಕೋರ್ಟ್ ‘ಆಕ್ಸಿಜನ್ ಹಂಚಿಕೆಯ ಅಧಿಕಾರ’ವನ್ನು ಮೋದಿ ಸರ್ಕಾರದಿಂದ‌ ಕಿತ್ತು ತಜ್ಞರ ಕಾರ್ಯಪಡೆಗೆ ವಹಿಸಲು ಕಾರಣವೇನು ಗೊತ್ತೇ? ►►‘ಹ್ಯಾಕ್ ಆಗುವ ಇವಿಎಂ ಮೆಷಿನ್ ಈಗ ಸರಿಯಿದೆಯಾ ಕಾಂಗಿಗಳೇ?’ ಎನ್ನುವ ಬಿಜೆಪಿಗರು ಉತ್ತರಿಸಬೇಕಾದ ಪ್ರಶ್ನೆಗಳು. ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►'ಕೋವಿಡ್‌ ಸುನಾಮಿ ಬರಲಿದೆ. ಮುನ್ನೆಚ್ಚರಿಕೆ ವಹಿಸಿ’ ಎಂದು ರಾಹುಲ್‌ ಕಳೆದ ವರ್ಷವೇ ಸರ್ಕಾರವನ್ನು ಎಚ್ಚರಿಸಿದ್ದರು: ಆ ಕುರಿತಾದ ವಿಡಿಯೋ ವೈರಲ್! ►►‘ಪೋಲಿಯೋ ಮುಕ್ತ ಭಾರತ’ ಆದಾಗ ಈ ದೇಶದಲ್ಲಿ ಚಪ್ಪಾಳೆ ಹೊಡೆದಿರಲಿಲ್ಲ, ಕ್ಯಾಂಡಲ್ ಹಚ್ಚಿ ಕುಣಿದಾಡಿರಲಿಲ್ಲ. ►►ಛತ್ತೀಸ್‌ಘಡ- ಪುಲ್ವಾಮಾ ಮಾದರಿಯಲ್ಲಿ ನಕ್ಸಲ್ ದಾಳಿ, 22 ಯೋಧರ ಸಾವು: ಚುನಾವಣಾ ಸಮಯದಲ್ಲೇ ಅದೇಕೆ ಇಂತಹ ದಾಳಿಗಳು ನಡೆಯುತ್ತವೆ? ►►ನಾನು ಸುಳ್ಳು ಹೇಳಲು ಇಲ್ಲಿಗೆ ಬಂದಿಲ್ಲ. ಸುಳ್ಳು ಹೇಳಲು ನನ್ನ ಹೆಸರು ಮೋದಿ ಅಲ್ಲ. ನಾನು ರಾಹುಲ್ ►►ನನ್ನ ರಾಜೀವ್‌ರನ್ನು ನನಗೆ ಮರಳಿಸಿ ಇಲ್ಲವೇ ಅವರು ನಡೆದಾಡಿದ ಮಣ್ಣಲ್ಲಿ ಮಣ್ಣಾಗಲು ಬಿಡಿ ►►ಕಾಂಗ್ರೆಸ್ ಕಟ್ಟಿದ ಸಂಸ್ಥೆಗಳನ್ನು ಮಾರುತ್ತಿರುವವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ: ಪ್ರತಾಪ್‌ ಚಂದ್ರ ಶೆಟ್ಟಿ (ವಿಡಿಯೋ ನೋಡಿ) ►►ಖಾಸಗೀಕರಣದ ಹಿಂದಿನ‌ ಮೋದಿ ಸರ್ಕಾರದ ಅಸಲಿ ಮಸಲತ್ತೇನು ಗೊತ್ತೇ ►►ರಾವಣನ ಶ್ರೀಲಂಕಾದಲ್ಲಿ 51 ರೂ.ಗೆ ಹಾಗೂ ಸೀತೆಯ ನೇಪಾಳದಲ್ಲಿ 53ರೂ. ಗೆ ಸಿಗುವ ಪೆಟ್ರೋಲ್ ಶ್ರೀರಾಮನ ಭಾರತದಲ್ಲಿ 93 ರೂ. ಯಾಕೆ? ►► *ಸ್ವಯಂ ಘೋಷಿತ ರಾಷ್ಟ್ರೀಯವಾದಿ ಸಂಘಟನೆ ಆರೆಸ್ಸೆಸ್, ಸ್ವಾತಂತ್ರ್ಯಾ ನಂತರ ಬರೋಬ್ಬರಿ ಮೂರು ಬಾರಿ ನಿಷೇಧಕ್ಕೊಳಗಾಗಲು ಕಾರಣಗಳೇನು?* ►► *ನೋಟುಬ್ಯಾನ್ ಮಾಡಿದ ನಂತರ ಪ್ರಧಾನಿ ಮೋದಿಯವರು, ಟೋಕಿಯೋದಲ್ಲಿ ಭಾರತದ ಜನರನ್ನು ಗೇಲಿಮಾಡಿ ಮಾಡಿದ ಭಾಷಣದ ಅಪರೂಪದ ವಿಡಿಯೋ.* ►►ಸಂಘಿಬಾನಿಗಳ ಆಡಳಿತದಲ್ಲಿ ಸಂವಿಧಾನ ಬದಲಾಗುತ್ತಾ? ಬದಲಾದರೆ ಏನೇನಾಗುತ್ತೆ ? ಮಿಸ್ ಮಾಡ್ದೆ ಈ ಲೇಖನ ಓದಿ.. ವಿಡಿಯೋ ನೋಡಿ! ►►ಕೊರೋನಗಿಂತಲೂ ಮಾರಕವಾದ ಎಚ್1ಎನ್1 ವೈರಸನ್ನು ಗೆದ್ದಿದ್ದ ‘ವಿಶ್ವಗುರು ಭಾರತ’ದ ಬಗ್ಗೆ ನಿಮಗೆಷ್ಟು ಗೊತ್ತು? ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ಸ್ವಾತಂತ್ರ ಹೋರಾಟವನ್ನು ಹತ್ತಿಕ್ಕಲು ಬ್ರಿಟೀಷರು, ಸಾವರ್ಕರ್ ರನ್ನು ದಾಳವಾಗಿ ಬಳಸಿದ್ದರೇ? ►►9 ಜನ್ಮದಲ್ಲಿ ಸ್ವರ್ಗಸುಖ ಸಿಗುತ್ತದೆ ಎಂದು ಗೌರಿಯನ್ನು ಕೊಲೆ ಮಾಡಿದ್ದ ಹಂತಕರು.. ತಾಲೀಬಾನ್, ಐಸಿಸ್ ಗಿಂತಲೂ ಅಸಹ್ಯವಾದ ಸಿದ್ದಾಂತವೇ ಕೊಲೆಗೆ ಕಾರಣ ►►ಸ್ವತಂತ್ರ ಭಾರತದ ಇತಿಹಾಸದಲ್ಲಿ ದಾಖಲೆಯಾಗುಳಿವ ಮೋದಿ ಸಾಧನೆಗಳು: ಮೋದಿ ವಿರೋಧಿಗಳು ಮತ್ತು ಬೆಂಬಲಿಗರು ತಿಳಿದುಕೊಳ್ಳಲೇ ಬೇಕಾದ ನಗ್ನಸತ್ಯಗಳು! ►►ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಸಿಗಬೇಕಾದರೆ ಜೈಲಿಗೆ ಹೋಗಬೇಕು’ ಎಂದಿರುವ ಬಿಜೆಪಿ ನಾಯಕ ಸಿ.ಟಿ ರವಿಗೊಂದು ಬಹಿರಂಗ ಪತ್ರ ►►ಅಫ್ಘಾನಿಸ್ತಾನದ ಬೆಳವಣಿಗೆಗಳು ಸಾಬೀತುಪಡಿಸುತ್ತಿರುವುದು ಮೋದಿ ಸರ್ಕಾರದ ಸಿಎಎ ಕಾಯಿದೆಯ ದೂರದೃಷ್ಟಿಯನ್ನೋ ಅಥವಾ ಸಂಘೀಬಾನಿಗಳ ಧೂರ್ತತನವನ್ನೋ? ►►ಇಂದಿಗೆ ಎರಡು ವರ್ಷಗಳ ಹಿಂದೆ ನಡೆದ ಪುಲ್ವಾಮ ದಾಳಿ ಪೂರ್ವನಿರ್ಧರಿತವಾಗಿತ್ತೇ? ರಾಜಕೀಯ ಲಾಭಕ್ಕಾಗಿ 44 ಅಮಾಯಕ ಯೋಧರನ್ನು ಬಲಿಕೊಡಲಾಗಿತ್ತೇ? ►►ಭಾರತ, ತಾಲೀಬಾನ್ ಆಗುವ ಹಂತದಲ್ಲಿದೆಯೇ? ಭಾರತದೊಳಗಿನ ತಾಲೀಬಾನಿಗರು ಯಾರು? ಅಗತ್ಯವಾಗಿ ಓದಿ. ►►ವಿದ್ಯುತ್ ತಿದ್ದುಪಡಿ ಮಸೂದೆ- 2021; ಕಾರ್ಪೊರೇಟ್ ಲಾಭ ಪ್ರಖರ – ರೈತ, ಕಾರ್ಮಿಕ ಬದುಕು ಬರ್ಬರ! ►►ನೋಟು ಬ್ಯಾನ್ ನಿಂದ ಮೂರು ಲಕ್ಷ ಕಂಪೆನಿಗಳು ಬಂದ್ ಆದವು’ ಪ್ರಧಾನಿ ಮೋದಿಯವರು ಕೈತಟ್ಟಿ, ಹೆಮ್ಮೆಯಿಂದ ಹೇಳಿದ ಬಾಷಣದ ವಿಡಿಯೋ! ►►ನೆಹರೂ ಮೃತಪಟ್ಟು 57 ವರ್ಷಗಳ ನಂತರವೂ ಬಿಜೆಪಿಗರು ಅವರನ್ನು ವಿರೋಧಿಸಲು ಕಾರಣವೇನು ಗೊತ್ತೇ? ►►ಜಿಎಸ್‌ಟಿ ಕಟ್ಟಬೇಡಿ’- ದೇಶದ ವರ್ತಕರಿಗೆ ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ ಕರೆ! ►►ಬುರ್ಖಾ, ಜನಿವಾರ, ಮೂಲಭೂತವಾದ, ಕೋಮುವಾದ ಮತ್ತು ಸಮಾನತಾವಾದ ►►ಪತ್ರಕರ್ತರೇ ಎಚ್ಚರ: ಮೋದಿ ಸರ್ಕಾರದ ವೈಫಲ್ಯಗಳ ವಿರುದ್ದ ಬರೆದರೆ ಐಟಿ ದಾಳಿ ನಡೆಯಲಿದೆ ಹುಷಾರ್! ►►ಆರ್ ಎಸ್ ಎಸ್ ಸಿದ್ದಾಂತವನ್ನು ಒಪ್ಪುವವರು ಕಾಂಗ್ರೆಸ್ ಪಕ್ಷಕ್ಕೆ ಅಗತ್ಯ ಇಲ್ಲ. ಬಿಜೆಪಿಗೆ ಹೆದರುವವರು ಪಕ್ಷದಿಂದ ಹೊರಟು ಹೋಗಬಹುದು! ►►ಅಂಬೇಡ್ಕರ್ ಸಂವಿಧಾನದ ವಿರೋಧಿಗಳು ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದೇಶದ ಭವಿಷ್ಯಕ್ಕೆ ಬಹು ಅಪಾಯಕಾರಿ

Advertisement
Advertisement
Recent Posts
Advertisement